<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>HareRaama: Sri Sri Raghaveshwara Bharati Swamiji &#187; ರಾಮ</title>
	<atom:link href="http://hareraama.in/category/blog/raama-blog/feed/" rel="self" type="application/rss+xml" />
	<link>http://hareraama.in</link>
	<description>Homepage of Sri Sri Raghaveshwara Bharati Mahaswamiji</description>
	<lastBuildDate>Fri, 03 Feb 2012 12:38:09 +0000</lastBuildDate>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.org/?v=3.2.1</generator>
		<item>
		<title>ಬಹುಶ್ರುತಾಃ</title>
		<link>http://hareraama.in/blog/raama-blog/bahushrutaaha/</link>
		<comments>http://hareraama.in/blog/raama-blog/bahushrutaaha/#comments</comments>
		<pubDate>Wed, 02 Feb 2011 07:12:11 +0000</pubDate>
		<dc:creator>Sri Samsthana</dc:creator>
				<category><![CDATA[ರಾಮ]]></category>

		<guid isPermaLink="false">http://hareraama.in/?p=9979</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraama-blog%252Fbahushrutaaha%252F&title=%E0%B2%AC%E0%B2%B9%E0%B3%81%E0%B2%B6%E0%B3%8D%E0%B2%B0%E0%B3%81%E0%B2%A4%E0%B2%BE%E0%B2%83+&desc=%E0%B2%95%E0%B2%A3%E0%B3%8D%E0%B2%A3%E0%B3%81-+%E0%B2%95%E0%B2%BF%E0%B2%B5%E0%B2%BF%E0%B2%97%E0%B2%B3%E0%B2%BF%E0%B2%97%E0%B3%86+%E0%B2%86%E0%B2%B0%E0%B2%82%E0%B2%97%E0%B3%81%E0%B2%B2%E0%B2%B5%E0%B3%87+%E0%B2%85%E0%B2%82%E0%B2%A4%E0%B2%B0..%0D%0A%0D%0A%E0%B2%86%E0%B2%A6%E0%B2%B0%E0%B3%86+%E0%B2%95%E0%B2%BE%E0%B2%B0%E0%B3%8D%E0%B2%AF%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%AE%E0%B2%B9%E0%B2%A6%E0%B2%82%E0%B2%A4%E0%B2%B0..%21%0D%0A%0D%0A%E0%B2%95%E0%B2%A3%E0%B3%8D%E0%B2%A3%E0%B3%81%E0%B2%97%E0%B2%B3%E0%B3%81+%E0%B2%B8&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>ಕಣ್ಣು- ಕಿವಿಗಳಿಗೆ ಆರಂಗುಲವೇ ಅಂತರ..
ಆದರೆ ಕಾರ್ಯವಿಧಾನದಲ್ಲಿ ಮಹದಂತರ..!
ಕಣ್ಣುಗಳು ಸಮಕಾಲದಲ್ಲಿ ನಮ್ಮೆದುರು ನಡೆಯುತ್ತಿರುವುದನ್ನು ಮಾತ್ರವೇ ಕಾಣಬಲ್ಲವು..
ಕಿವಿಗಳು ??
ಎಂದೋ , ಎಲ್ಲಿಯೋ ನಡೆದದ್ದನ್ನು ಮತ್ತೆಂದೋ, ಮತ್ತೆಲ್ಲಿಯೋ ಕಾಣಬಲ್ಲವು !!
ಮುಂದೆಂದೋ ನಡೆಯುವುದನ್ನು ಇಂದೇ ನೋಡಬಲ್ಲವು !!
ಕಣ್ಣಿಗೆ ಒಂದು ಘಂಟೆಯ ಘಟನೆಯನ್ನು ಕಾಣಲು ಒಂದು ಘಂಟೆಯೇ ಬೇಕು..
ಕಿವಿಗೆ ಒಂದು ಜೀವನವಿಡೀ ನಡೆದ ಘಟನೆಗಳನ್ನು ತಿಳಿಯಲು ಹಲವು ಬಾರಿ ಒಂದು ಘಂಟೆಯೇ ಸಾಕು !!
ಕಣ್ಣಿನದು ತನ್ನನುಭವ ಮಾತ್ರ..
ಮತ್ತೊಬ್ಬರ ಅನುಭವವನ್ನು ತನ್ನದಾಗಿಸಿಕೊಳ್ಳಬೇಕೆಂದರೆ ಅದಕ್ಕೆ ಕಿವಿಯೇ ಬೇಕು !!
ಬೆಟ್ಟದಷ್ಟು ಅನುಭವವನ್ನು ಆ ಪುಟ್ಟ ಪುಟ್ಟ ರಂಧ್ರಗಳು ಅದು [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraama-blog%252Fbahushrutaaha%252F&title=%E0%B2%AC%E0%B2%B9%E0%B3%81%E0%B2%B6%E0%B3%8D%E0%B2%B0%E0%B3%81%E0%B2%A4%E0%B2%BE%E0%B2%83+&desc=%E0%B2%95%E0%B2%A3%E0%B3%8D%E0%B2%A3%E0%B3%81-+%E0%B2%95%E0%B2%BF%E0%B2%B5%E0%B2%BF%E0%B2%97%E0%B2%B3%E0%B2%BF%E0%B2%97%E0%B3%86+%E0%B2%86%E0%B2%B0%E0%B2%82%E0%B2%97%E0%B3%81%E0%B2%B2%E0%B2%B5%E0%B3%87+%E0%B2%85%E0%B2%82%E0%B2%A4%E0%B2%B0..%0D%0A%0D%0A%E0%B2%86%E0%B2%A6%E0%B2%B0%E0%B3%86+%E0%B2%95%E0%B2%BE%E0%B2%B0%E0%B3%8D%E0%B2%AF%E0%B2%B5%E0%B2%BF%E0%B2%A7%E0%B2%BE%E0%B2%A8%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%AE%E0%B2%B9%E0%B2%A6%E0%B2%82%E0%B2%A4%E0%B2%B0..%21%0D%0A%0D%0A%E0%B2%95%E0%B2%A3%E0%B3%8D%E0%B2%A3%E0%B3%81%E0%B2%97%E0%B2%B3%E0%B3%81+%E0%B2%B8&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>ಕಣ್ಣು- ಕಿವಿಗಳಿಗೆ ಆರಂಗುಲವೇ ಅಂತರ..</p>
<p>ಆದರೆ ಕಾರ್ಯವಿಧಾನದಲ್ಲಿ ಮಹದಂತರ..!</p>
<p>ಕಣ್ಣುಗಳು ಸಮಕಾಲದಲ್ಲಿ ನಮ್ಮೆದುರು ನಡೆಯುತ್ತಿರುವುದನ್ನು ಮಾತ್ರವೇ ಕಾಣಬಲ್ಲವು..</p>
<p>ಕಿವಿಗಳು ??</p>
<p>ಎಂದೋ , ಎಲ್ಲಿಯೋ ನಡೆದದ್ದನ್ನು ಮತ್ತೆಂದೋ, ಮತ್ತೆಲ್ಲಿಯೋ ಕಾಣಬಲ್ಲವು !!</p>
<p>ಮುಂದೆಂದೋ ನಡೆಯುವುದನ್ನು ಇಂದೇ ನೋಡಬಲ್ಲವು !!</p>
<p>ಕಣ್ಣಿಗೆ ಒಂದು ಘಂಟೆಯ ಘಟನೆಯನ್ನು ಕಾಣಲು ಒಂದು ಘಂಟೆಯೇ ಬೇಕು..</p>
<p>ಕಿವಿಗೆ ಒಂದು ಜೀವನವಿಡೀ ನಡೆದ ಘಟನೆಗಳನ್ನು ತಿಳಿಯಲು ಹಲವು ಬಾರಿ ಒಂದು ಘಂಟೆಯೇ ಸಾಕು !!</p>
<p>ಕಣ್ಣಿನದು ತನ್ನನುಭವ ಮಾತ್ರ..</p>
<p>ಮತ್ತೊಬ್ಬರ ಅನುಭವವನ್ನು ತನ್ನದಾಗಿಸಿಕೊಳ್ಳಬೇಕೆಂದರೆ ಅದಕ್ಕೆ ಕಿವಿಯೇ ಬೇಕು !!</p>
<p>ಬೆಟ್ಟದಷ್ಟು ಅನುಭವವನ್ನು ಆ ಪುಟ್ಟ ಪುಟ್ಟ ರಂಧ್ರಗಳು ಅದು ಹೇಗೆ ಮಿದುಳಿನೊಳಗಿಳಿಸುವವೋ? ಆಶ್ಚರ್ಯ !!</p>
<p>ದೇವರಿಂದ ದೇಹದಲ್ಲಿಯೇ ದತ್ತವಾದ ಅರಿವಿನ ಆ ಎರಡು ಹೆಬ್ಬಾಗಿಲುಗಳನ್ನು ತೆರೆದಿಡದಿದ್ದರೆ ಬದುಕು ವ್ಯರ್ಥ !!</p>
<p>ಎಲ್ಲವನ್ನೂ ಸ್ವಯಂ ಅನುಭವಿಸಿಯೇ ತಿಳಿದುಕೊಳ್ಳಲು ಸಾಧ್ಯವೇ ಇಲ್ಲ ! ಹಲವು ವಿಷಯಗಳಲ್ಲಿ ಅದು ಸಾಧುವೂ ಅಲ್ಲ..</p>
<p>ಅಲ್ಲಿ ನಮ್ಮ ನೆರವಿಗೆ ಬರುವವು ಕಿವಿಗಳು..</p>
<p>ನಮ್ಮ ಪೂರ್ವಜರು ಈಗಾಗಲೇ ಎಲ್ಲಿಯವರೆಗೆ ಕ್ರಮಿಸಿರುವರೋ ಅಲ್ಲಿಂದ ಮುಂದಲ್ಲವೇ ನಾವು ಕ್ರಮಿಸಬೇಕಿರುವುದು..?ಇಲ್ಲಿಯವರೆಗೆ ಲೋಕವು ನಡೆದು ಬಂದ ಹಾದಿಯ ಸಾರಸಂಗ್ರಹವನ್ನು ಕಿವಿಗಳಿಂದ ಒಳಗೊಂಡು, ಅದನ್ನು ಆಧರಿಸಿಯೇ ಮುಂದೆ ಸಾಗಬೇಕಲ್ಲವೇ..?</p>
<p>ಪೂರ್ವ ಪುರುಷರು ಪಟ್ಟ ಕಷ್ಟವನ್ನು ನಾವು ಪಡದೆಯೇ, ಅವರು ಪಡೆದ ಅನುಭವವನ್ನು ಮಾತ್ರ ನಾವು ಪಡೆಯಲು ನೆರವಾಗುವ ಕಿವಿಗಳು ಸೃಷ್ಟೀಶ್ವರನು ನಮಗಿತ್ತ ಅದ್ಭುತ ವರಗಳು !!</p>
<p>ವರವನ್ನು ಆತನೇನೋ ಇತ್ತಾಗಿದೆ, ನಾವು ಪಡೆದುಕೊಳ್ಳಬೇಕೆಂದರೆ&#8230;.</p>
<p>ಕೇಳಬೇಕು..</p>
<p>ಅಲ್ಪವನ್ನಲ್ಲ, ಬಹುವನ್ನು ಕೇಳಬೇಕು..</p>
<p>ಬಹುಕಾಲ ಕೇಳಬೇಕು..</p>
<p>ಬಹುಜನರಿಂದ ಕೇಳಬೇಕು..</p>
<p>ಬಹುವಿಷಯಗಳನ್ನು ಕೇಳಬೇಕು..</p>
<p>ಕೇಳುತ್ತಲೇ ಇರಬೇಕು..</p>
<p>ಇಂಥವರಿಗೆ &#8216; ಬಹುಶ್ರುತ &#8216; ರೆಂದು ಹೆಸರು..</p>
<p>ಹಾಗಿದ್ದರು ಅಯೋಧ್ಯೆಯ ರಾಜಪುರುಷರು&#8230;</p>
]]></content:encoded>
			<wfw:commentRss>http://hareraama.in/blog/raama-blog/bahushrutaaha/feed/</wfw:commentRss>
		<slash:comments>35</slash:comments>
		</item>
		<item>
		<title>ಮರೆವು ವಿಪತ್ತಿ, ಅರಿವೇ ಸಂಪತ್ತಿ..!</title>
		<link>http://hareraama.in/blog/%e0%b2%ae%e0%b2%b0%e0%b3%86%e0%b2%b5%e0%b3%81-%e0%b2%b5%e0%b2%bf%e0%b2%aa%e0%b2%a4%e0%b3%8d%e0%b2%a4%e0%b2%bf-%e0%b2%85%e0%b2%b0%e0%b2%bf%e0%b2%b5%e0%b3%87-%e0%b2%b8%e0%b2%82%e0%b2%aa%e0%b2%a4/</link>
		<comments>http://hareraama.in/blog/%e0%b2%ae%e0%b2%b0%e0%b3%86%e0%b2%b5%e0%b3%81-%e0%b2%b5%e0%b2%bf%e0%b2%aa%e0%b2%a4%e0%b3%8d%e0%b2%a4%e0%b2%bf-%e0%b2%85%e0%b2%b0%e0%b2%bf%e0%b2%b5%e0%b3%87-%e0%b2%b8%e0%b2%82%e0%b2%aa%e0%b2%a4/#comments</comments>
		<pubDate>Sun, 23 Jan 2011 02:23:57 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>
		<category><![CDATA[ashirvachana]]></category>
		<category><![CDATA[deepotsava]]></category>
		<category><![CDATA[gokarna]]></category>
		<category><![CDATA[Hare Rama]]></category>
		<category><![CDATA[program]]></category>
		<category><![CDATA[raghaveshwara]]></category>
		<category><![CDATA[ಮಾಧ್ಯಮ ವರದಿಗಳು]]></category>

		<guid isPermaLink="false">http://hareraama.in/?p=9841</guid>
		<description><![CDATA[&#124;&#124;ಹರೇ ರಾಮ&#124;&#124;
ರಾಜನೆಂದರೆ ರಾಜ್ಯದ ಆತ್ಮ..

ಮಂತ್ರಿಯೆಂದರೆ ರಾಜ್ಯದ ಬುದ್ಧಿ..

ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು...ಆದರೆ ಬುದ್ಧಿಯು ಸದಾ ಎಚ್ಚರವಾಗಿರಲೇಬೇಕು...ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?

ಮನನವೆಂದರೆ ಅರಿಯುವುದು..

ತ್ರಾಣವೆಂದರೆ ಪೊರೆಯುವುದು...

ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..

ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..

ಅರಿಯುವುದು ಮತ್ತು ಪೊರೆಯುವುದು...

ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..

ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?
]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252F%25E0%25B2%25AE%25E0%25B2%25B0%25E0%25B3%2586%25E0%25B2%25B5%25E0%25B3%2581-%25E0%25B2%25B5%25E0%25B2%25BF%25E0%25B2%25AA%25E0%25B2%25A4%25E0%25B3%258D%25E0%25B2%25A4%25E0%25B2%25BF-%25E0%25B2%2585%25E0%25B2%25B0%25E0%25B2%25BF%25E0%25B2%25B5%25E0%25B3%2587-%25E0%25B2%25B8%25E0%25B2%2582%25E0%25B2%25AA%25E0%25B2%25A4%252F&title=+%E0%B2%AE%E0%B2%B0%E0%B3%86%E0%B2%B5%E0%B3%81+%E0%B2%B5%E0%B2%BF%E0%B2%AA%E0%B2%A4%E0%B3%8D%E0%B2%A4%E0%B2%BF%2C+%E0%B2%85%E0%B2%B0%E0%B2%BF%E0%B2%B5%E0%B3%87+%E0%B2%B8%E0%B2%82%E0%B2%AA%E0%B2%A4%E0%B3%8D%E0%B2%A4%E0%B2%BF..%21+&desc=%7C%7C%E0%B2%B9%E0%B2%B0%E0%B3%87+%E0%B2%B0%E0%B2%BE%E0%B2%AE%7C%7C%0D%0A%E0%B2%B0%E0%B2%BE%E0%B2%9C%E0%B2%A8%E0%B3%86%E0%B2%82%E0%B2%A6%E0%B2%B0%E0%B3%86+%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%A6+%E0%B2%86%E0%B2%A4%E0%B3%8D%E0%B2%AE..%0D%0A%0D%0A%E0%B2%AE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%AF%E0%B3%86%E0%B2%82%E0%B2%A6%E0%B2%B0%E0%B3%86+%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%A6+%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF..%0D%0A%0D%0A%E0%B2%AF%E0%B2%BE%E0%B2%B5%E0%B3%81%E0%B2%A6%E0%B2%B0+%E0%B2%AA%E0%B2%B0%E0%B2%BF%E0%B2&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>||ಹರೇ ರಾಮ||<br />
ರಾಜನೆಂದರೆ ರಾಜ್ಯದ ಆತ್ಮ..</p>
<p>ಮಂತ್ರಿಯೆಂದರೆ ರಾಜ್ಯದ ಬುದ್ಧಿ..</p>
<p>ಯಾವುದರ ಪರಿವೆ ಇಲ್ಲದೆಯೂ ಆತ್ಮವು ಇರಬಹುದು&#8230;ಆದರೆ ಬುದ್ಧಿಯು ಸದಾ  ಎಚ್ಚರವಾಗಿರಲೇಬೇಕು&#8230;ಶರೀರದ, ಮನಸ್ಸಿನ,ಇಂದ್ರಿಯಗಳ,ಹೆಚ್ಚೇಕೆ ಬದುಕಿನ ಸಮಸ್ತ ಆಗು-ಹೋಗುಗಳನ್ನು ಗಮನಿಸುವ-ನಿಯಂತ್ರಿಸುವ ಹೊಣೆಗಾರಿಕೆ ಅದರದ್ದೇ ಅಲ್ಲವೇ..?</p>
<p>ಮನನವೆಂದರೆ ಅರಿಯುವುದು..</p>
<p>ತ್ರಾಣವೆಂದರೆ ಪೊರೆಯುವುದು&#8230;</p>
<p>ಮನನ-ತ್ರಾಣಗಳೆರಡೂ ಹುದುಗಿವೆ ಮಂತ್ರದಲ್ಲಿ..</p>
<p>ಮಂತ್ರವುಳ್ಳವನು ಮಂತ್ರಿಯೆಂದಾದಮೇಲೆ ಆತನಿಗೆ ಎರಡೇ ಮುಖ್ಯಕಾರ್ಯಗಳು..</p>
<p>ಅರಿಯುವುದು ಮತ್ತು ಪೊರೆಯುವುದು&#8230;</p>
<p>ಎಲ್ಲವನ್ನೂ ಅರಿಯುವ, ತನ್ಮೂಲಕ ಎಲ್ಲರನ್ನೂ ಪೊರೆಯುವ ಕರ್ತವ್ಯವವನದ್ದು..</p>
<p>ಅರಿವು ಪೊರೆಯುವಂತೆ ಮತ್ಯಾವುದು ತಾನೇ ಪೊರೆಯಲು ಸಾಧ್ಯ..?</p>
<p>ಆತ್ಮ- ಬುದ್ಧಿಗಳು ಎಲ್ಲರಲ್ಲಿಯೂ ಇವೆ. ಆದರೆ ಆತ್ಮ ಕೆಟ್ಟು ಕೆಟ್ಟವರಾರಿಲ್ಲ..ಬುದ್ಧಿ ಕೆಟ್ಟು ಕೆಟ್ಟವರುಂಟು..!</p>
<p>ಬಂಧನ -ಮೋಕ್ಷಗಳು ಬುದ್ಧಿಯಿಂದಲಾಗಿ, ಆತ್ಮದಿಂದಲಾಗಿಯಲ್ಲ..</p>
<p>ಒಳ್ಳೆಯವರು- ಕೆಟ್ಟವರೆನಿಸುವುದು ಒಳ್ಳೆಯ-ಕೆಟ್ಟ ಬುದ್ಧಿಗಳಿಂದಲಾಗಿ, ಆತ್ಮದಿಂದಲಾಗಿಯಲ್ಲ..</p>
<p>ವ್ಯಕ್ತಿಯ ಉನ್ನತಿ- ಅವನತಿಗಳಿಗೆ ಹೇಗೆ ಅವನ ಬುದ್ಧಿ ಕಾರಣವೋ ಹಾಗೆಯೇ ರಾಜ್ಯವೊಂದರ ಉನ್ನತಿ- ಅವನತಿಗಳಿಗೆ ಆ ರಾಜ್ಯದ ಮಂತ್ರಿಗಳೇ ಎದುರು ಕಾಣದ, ಆದರೆ ನೈಜವಾದ ಕಾರಣರು..</p>
<p>ಆದುದರಿಂದಲೇ ಇರಬೇಕು..ರಾಜನನ್ನು ೩೮ ಬಗೆಯಲ್ಲಿ ಬಣ್ಣಿಸಿದ ವಾಲ್ಮೀಕಿಗಳು ಮಂತ್ರಿಗಳನ್ನು ೫೧ ಬಗೆಯಲ್ಲಿ ಬಣ್ಣಿಸಿದರು !! ಏಕೆಂದರೆ ವ್ಯಕ್ತಿಯನ್ನು ಎಷ್ಟೇ ಬಣ್ಣಿಸಲಿ, ಕೊನೆಗೂ ಬಂದು ನಿಲ್ಲುವುದು &#8216;ಆತನಿಂದ ಯಾರಿಗೆ ಏನು ಲಾಭವಾಯಿತು?&#8217; ಎಂಬಲ್ಲಿಯೇ ಅಲ್ಲವೇ..!? ಹಾಗಲ್ಲದಿದ್ದರೆ &#8216; ಮಾಣಿ ಬಹಳ ಒಳ್ಳೆಯವನೇ, ಆದರೆ ತೋಟ ಮಾತ್ರ ಸಂಪೂರ್ಣ ಹಾಳು&#8217;  &#8216; Operation success, but patient is dead&#8217; ಎಂಬಂತಾದೀತು..</p>
<p>ಪರಿಣಾಮವೇ ಇಲ್ಲದ ಒಳ್ಳೆಯದನ್ನು ಕಟ್ಟಿಕೊಂಡು ಯಾರಿಗೇನು ?</p>
<p>ಚಂದನದ ಸಾರವನ್ನು ಸುಗಂಧದಲ್ಲಿ ಕಾಣುವಂತೆ, ಸಕ್ಕರೆಯ ಸಾರವನ್ನು ಸವಿಯಲ್ಲಿ ಕಾಣುವಂತೆ, ಸೂರ್ಯನ ಸಾರವನ್ನು ಬೆಳಕಲ್ಲಿ ಕಾಣುವಂತೆ, ರಾಜನ ಸಾರವನ್ನು ರಾಜ್ಯಭಾರದಲ್ಲಿ ಕಾಣಬೇಕು..! ರಾಜ್ಯಭಾರದ ಮೂರ್ತರೂಪರೇ ಮಂತ್ರಿಗಳು..ಆದುದರಿಂದಲೇ ಮಂತ್ರಿಗಳ ಬಗೆಗೆ ಇಷ್ಟೊಂದು ವಿವರಣೆ..ಮಂತ್ರಿಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡು ವಾಲ್ಮೀಕಿಗಳು ವರ್ಣಿಸಿದ್ದು ದಶರಥನ ರಾಜ್ಯಭಾರವನ್ನೇ..!!</p>
<p>ಸವಾಲು : &#8211;  &#8216; ಗುರು &#8216; ಏನೆಂಬುದನ್ನು ಒಂದೇ ಪದದಲ್ಲಿ ವ್ಯಾಖ್ಯಾನಿಸಿ..</p>
<p>ಜವಾಬು :- &#8216; ಶಿಷ್ಯ &#8216;</p>
<p>ಏಕೆಂದರೆ ಗುರುವಿನ ಗುರುತು- ಗುರುತ್ವಗಳು ಶಿಷ್ಯನಲ್ಲಿಯಲ್ಲವೇ ಪ್ರಕಟವಾಗುವುದು &#8211; ಅಳೆಯಲ್ಪಡುವುದು ..? ಹಾಗೆಯೇ ರಾಜನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ನೋಡಬೇಕಾದುದು ರಾಜ್ಯವನ್ನು, ಗಮನಿಸಬೇಕಾದುದು  &#8216; ರಾಜ್ಯಭಾರ &#8216; ವನ್ನು..!!</p>
<p>ದಶರಥನು ದೇಶವೆಂಬ ದೇಹದ ಹೃದಯವಾಗಿದ್ದರೆ, ಮಿದುಳಾಗಿದ್ದರು ಆತನ ಮಂತ್ರಿಗಳು..</p>
<p>ಮಿದುಳಿಗೆ ಅರಿವೇ ಅಲ್ಲವೇ ಮುಖ್ಯ ಕಾರ್ಯ..?</p>
<p>ಬುದ್ಧಿಗೆ ಅರಿವೇ ಸಿದ್ಧಿ, ಮರೆವು ವಿಪತ್ತಿ..!!</p>
<p>ದಶರಥನ ಮಂತ್ರಿಗಳು ಎಲ್ಲದರಲ್ಲಿಯೂ ಬಲ್ಲಿದರಾಗಿದ್ದರೆಂಬುದನ್ನು ( ಬಲ್ಲ + ಇದ = ಬಲ್ಲಿದ ) ಬಣ್ಣಿಸುವ ಋಷಿಪದಗಳನ್ನು ಒಮ್ಮೆ ಅವಲೋಕಿಸಿ..</p>
<p><strong>* || ಪ್ರಕೃತ್ಯಾ ಸಂಪದನ್ವಿತಾಃ  || ವಿದ್ಯಾವಿನೀತಾ ಃ ||<br />
</strong><br />
ಭೂಮಿಯಲ್ಲಿ ನೈಸರ್ಗಿಕವಾಗಿ ನೀರಿದ್ದರೆ, ಬಾವಿ ತೋಡಿದಾಗ ಅದು ಸರ್ವಜನೋಪಯೋಗಿಯಾಗಿ ಪ್ರಕಟಗೊಳ್ಳುತ್ತದೆ..ವ್ಯಕ್ತಿಯಲ್ಲಿ ನೈಸರ್ಗಿಕವಾಗಿ ಸಾಮರ್ಥ್ಯವಿದ್ದರೆ, ಸರಿಯಾದ ಶಿಕ್ಷಣ ನೀಡಿದಾಗ ಅದು ವಿಕಸಿತಗೊಂಡು, ವ್ಯಕ್ತಿಗೂ, ಸಮಾಜಕ್ಕೂ ಹಿತವಾಗುವಂತೆ ಪ್ರಕಟಗೊಳ್ಳುತ್ತದೆ.. ಸಾಮರ್ಥ್ಯವಿಲ್ಲದವನಿಗೆ ಶಿಕ್ಷಣ ನೀಡುವುದು ನೀರಿಲ್ಲದಲ್ಲಿ ಬಾವಿ ತೋಡಿದಂತೆಯೇ ಸರಿ..! ಸಾಮರ್ಥ್ಯವಿರುವವನಿಗೆ ಸರಿಯಾದ ಶಿಕ್ಷಣ ದೊರೆಯದಿದ್ದರೆ, ಭೂಮಿಯಲ್ಲಿ ನೀರಿದ್ದರೂ ಮೇಲೆತ್ತುವ ಮನುಷ್ಯಪ್ರಯತ್ನವಿಲ್ಲದಾಗ ಅದು ವ್ಯರ್ಥವಾಗಿ ಹೋಗುವಂತೆಯೇ ಸರಿ&#8230;.!</p>
<p>ರಾಜ್ಯರಕ್ಷಣೆಗೆ ಬೇಕಾದ ಜ್ಞಾನ &#8211; ಗುಣಸಂಪತ್ತನ್ನು ನೈಸರ್ಗಿಕವಾಗಿಯೇ ಹೊಂದಿರುವ ವ್ಯಕ್ತಿತ್ವಗಳನ್ನು ಅಯೋಧ್ಯೆಯ ಅರಮನೆಯು ಗುರುತಿಸಿತ್ತು.. ಅವರಿಗೆ ಸಮುಚಿತವಾದ ಶಿಕ್ಷಣವನ್ನು ನೀಡಿ, ಮಂತ್ರಿಪದದಲ್ಲಿ ಪ್ರತಿಷ್ಠಾಪಿಸಿತ್ತು..</p>
<p>ಶ್ರೇಷ್ಠವಾದ ಆಡಳಿತವೆಂದರೆ ಯೋಗ್ಯ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಯೋಗ್ಯವಾದ ಶಿಕ್ಷಣ- ಉಪಕರಣಗಳನ್ನು ನೀಡಿ, ಯೋಗ್ಯವಾದ ಪದವಿಯಲ್ಲಿ ನೆಲೆಗೊಳಿಸುವುದೇ ಅಲ್ಲವೇ..?</p>
]]></content:encoded>
			<wfw:commentRss>http://hareraama.in/blog/%e0%b2%ae%e0%b2%b0%e0%b3%86%e0%b2%b5%e0%b3%81-%e0%b2%b5%e0%b2%bf%e0%b2%aa%e0%b2%a4%e0%b3%8d%e0%b2%a4%e0%b2%bf-%e0%b2%85%e0%b2%b0%e0%b2%bf%e0%b2%b5%e0%b3%87-%e0%b2%b8%e0%b2%82%e0%b2%aa%e0%b2%a4/feed/</wfw:commentRss>
		<slash:comments>10</slash:comments>
		</item>
		<item>
		<title>ಆರ್ಥಿಕತೆ &#8211; ಸಾರ್ಥಕತೆ</title>
		<link>http://hareraama.in/blog/artikate-sartakate/</link>
		<comments>http://hareraama.in/blog/artikate-sartakate/#comments</comments>
		<pubDate>Thu, 30 Dec 2010 01:35:57 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=8959</guid>
		<description><![CDATA[ಬದುಕು ಸಮೃದ್ಧವಾಗಬೇಕು..
ಬದುಕು ಸಾರ್ಥಕವೂ ಆಗಬೇಕು..
ಬದುಕು ಸಮೃದ್ಧವಾಗಲು ತಾಯಿ ಲಕ್ಷ್ಮಿಯ ಕೃಪೆ ಬೇಕು..
ಬದುಕು ಸಾರ್ಥಕವಾಗಲು ತಂದೆ ನಾರಾಯಣನ ಕೃಪೆ ಬೇಕು..
ಲಕ್ಷ್ಮಿಯು ಅರ್ಥದ ರೂಪದಲ್ಲಿ ಹರಿಯುತ್ತಿದ್ದರೆ ಬದುಕಿಗೆ ಸಮೃದ್ಧಿ..
ನಾರಾಯಣನು ಧರ್ಮದ ರೂಪದಲ್ಲಿ ನೆಲೆ ನಿಂತರೆ ಬದುಕಿಗೆ ಸಾರ್ಥಕತೆ..
ಧರ್ಮವು ನೆಲೆ ನಿಲ್ಲಬೇಕೆಂದರೆ ಅರ್ಥವು ಸರಿಯಾದ ದಾರಿಯಲ್ಲಿ ಹರಿಯುತ್ತಲೇ ಇರಬೇಕು..
ಅರ್ಥವು ಧರ್ಮದ ದಾರಿಯಲ್ಲಿ ಒಳಹರಿದು ಬರಬೇಕು..
ಅರ್ಥವು ಧರ್ಮದ ದಾರಿಯಲ್ಲಿಯೇ ಹೊರಹರಿದು ಹೋಗಬೇಕು..
ಇದು ಅಯೋಧ್ಯೆಯ ಅರ್ಥ ನೀತಿ..]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fartikate-sartakate%252F&title=%E0%B2%86%E0%B2%B0%E0%B3%8D%E0%B2%A5%E0%B2%BF%E0%B2%95%E0%B2%A4%E0%B3%86+-+%E0%B2%B8%E0%B2%BE%E0%B2%B0%E0%B3%8D%E0%B2%A5%E0%B2%95%E0%B2%A4%E0%B3%86+&desc=%E0%B2%AC%E0%B2%A6%E0%B3%81%E0%B2%95%E0%B3%81+%E0%B2%B8%E0%B2%AE%E0%B3%83%E0%B2%A6%E0%B3%8D%E0%B2%A7%E0%B2%B5%E0%B2%BE%E0%B2%97%E0%B2%AC%E0%B3%87%E0%B2%95%E0%B3%81..%0D%0A%E0%B2%AC%E0%B2%A6%E0%B3%81%E0%B2%95%E0%B3%81+%E0%B2%B8%E0%B2%BE%E0%B2%B0%E0%B3%8D%E0%B2%A5%E0%B2%95%E0%B2%B5%E0%B3%82+%E0%B2%86%E0%B2%97%E0%B2%AC%E0%B3%87%E0%B2%95%E0%B3%81..%0D%0A%E0%B2%AC%E0%B2%A6%E0%B3%81%E0%B2%95%E0%B3%81+%E0%B2%B8%E0%B2%AE%E0%B3%83%E0%B2%A6%E0%B3%8D%E0%B2%A7%E0%B2%B5%E0%B2%BE%E0%B2%97%E0%B2%B2%E0%B3%81+%E0%B2%A4%E0%B2%BE%E0%B2%AF%E0%B2%BF+%E0%B2%B2%E0%B2%95%E0%B3%8D%E0%B2%B7%E0%B3%8D&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>ಬದುಕು ಸಮೃದ್ಧವಾಗಬೇಕು..<br />
ಬದುಕು ಸಾರ್ಥಕವೂ ಆಗಬೇಕು..<br />
ಬದುಕು ಸಮೃದ್ಧವಾಗಲು ತಾಯಿ ಲಕ್ಷ್ಮಿಯ ಕೃಪೆ ಬೇಕು..<br />
ಬದುಕು ಸಾರ್ಥಕವಾಗಲು ತಂದೆ ನಾರಾಯಣನ ಕೃಪೆ ಬೇಕು..<br />
ಲಕ್ಷ್ಮಿಯು ಅರ್ಥದ ರೂಪದಲ್ಲಿ ಹರಿಯುತ್ತಿದ್ದರೆ ಬದುಕಿಗೆ ಸಮೃದ್ಧಿ..<br />
ನಾರಾಯಣನು ಧರ್ಮದ ರೂಪದಲ್ಲಿ ನೆಲೆ ನಿಂತರೆ ಬದುಕಿಗೆ ಸಾರ್ಥಕತೆ..<br />
ಧರ್ಮವು ನೆಲೆ ನಿಲ್ಲಬೇಕೆಂದರೆ ಅರ್ಥವು ಸರಿಯಾದ ದಾರಿಯಲ್ಲಿ ಹರಿಯುತ್ತಲೇ ಇರಬೇಕು..<br />
ಅರ್ಥವು ಧರ್ಮದ ದಾರಿಯಲ್ಲಿ ಒಳಹರಿದು ಬರಬೇಕು..<br />
ಅರ್ಥವು ಧರ್ಮದ ದಾರಿಯಲ್ಲಿಯೇ ಹೊರಹರಿದು ಹೋಗಬೇಕು..<br />
ಇದು ಅಯೋಧ್ಯೆಯ ಅರ್ಥ ನೀತಿ..<br />
ಇದುವೇ ಭಾರತೀಯರ ಆದರ್ಶಬದುಕಿನ ಅರ್ಥನೀತಿ..</p>
<p>ನಾರಾಯಣನಿಲ್ಲದಲ್ಲಿ ಲಕ್ಷ್ಮಿ ಇರುವುದೆಂತು..?<br />
ಸಾರ್ಥಕತೆಯಿಲ್ಲದಲ್ಲಿ ಸಮೃದ್ಧಿ ಉಳಿಯುವುದೆಂತು..?<br />
ಆಕೆ ಭಾಗ್ಯದ ಲಕ್ಷ್ಮಿಯೇ ಆದರೆ ಸರಿಯಾದ ದಾರಿಯಲ್ಲಿಯೇ ಬರುತ್ತಾಳೆ..ಸರಿಯಾದ ದಾರಿಯಲ್ಲಿಯೇ ಹೋಗುತ್ತಾಳೆ..!<br />
&#8220;ಸನ್ಮಾರ್ಗದಲ್ಲಿ ಬರಲಿಲ್ಲ..ಸತ್ಕಾರ್ಯಕ್ಕೆ ವಿನಿಯೋಗವಾಗಲಿಲ್ಲ..ಆದರೂ ಲಕ್ಷ್ಮಿಯಿದ್ದಾಳೆ&#8221; ಎಂದರೆ ಅದು ಖಂಡಿತವಾಗಿಯೂ ಲಕ್ಷ್ಮಿಯಲ್ಲ..! ಲಕ್ಷ್ಮಿಯ ರೂಪದಲ್ಲಿ ನಮ್ಮೊಡನಿದ್ದು ನಮ್ಮ ಪತನಕ್ಕೆ ಹೊಂಚು ಹಾಕುತ್ತಿರುವ ಅಲಕ್ಷ್ಮಿಯದು..ನಮ್ಮ<strong> ಪೂರ್ವಪಾಪದ ಕನಕಮೃಗ ರೂಪವದು..!!<br />
</strong><br />
ಲಕ್ಷ್ಮಿಯ ಲಾಸ್ಯದಲ್ಲಿ ಪದವಿನ್ಯಾಸವೆರಡು ಬಗೆ..<br />
ಸಂಗ್ರಹವೊಂದು ಪದವಾದರೆ ಸದ್ವಿನಿಯೋಗವಿನ್ನೊಂದು ಪದ..<br />
ಸಂಗ್ರಹವು ಲಕ್ಷ್ಮಿಯ ಪದವಾದರೆ ಸದ್ವಿನಿಯೋಗವು ನಾರಾಯಣಪದ..<br />
ವ್ಯಕ್ತಿಯು ದುಡಿದು ಸಂಪಾದಿಸಬೇಕು..ಅದು ಲಕ್ಷ್ಮಿಯ ಲಾಸ್ಯ..!<br />
ವ್ಯಕ್ತಿಯು ದುಡಿದದ್ದನ್ನು ಕುಟುಂಬಕ್ಕೆ ಸಮರ್ಪಿಸಬೇಕು..ಅದು ನಾರಾಯಣನರ್ತನ&#8230;!!<br />
ವ್ಯಕ್ತಿಗಳ ದುಡಿಮೆಯಿಂದ ಕುಟುಂಬವು ಸಮೃದ್ಧವಾದರೆ ಅದು ಲಕ್ಷ್ಮಿಯ ಲಾಸ್ಯ..<br />
ಕುಟುಂಬವು ತನ್ನ ಸಮೃದ್ಧಿಯಲ್ಲಿ ಒಂದು ಪಾಲನ್ನು ನಾಡಿಗೆ ನೀಡಿದರೆ ಅದು ನಾರಾಯಣ ನರ್ತನ..<br />
ವ್ಯಕ್ತಿಯ ದುಡಿಮೆಯಲ್ಲಿ ಶಿಶುವಾಗಿ ಜನ್ಮತಾಳುವ ಲಕ್ಷ್ಮಿಯು ಕುಮಾರಿಯಾಗಿ ಕುಟುಂಬದಲ್ಲಿ ಬೆಳೆಯುತ್ತಾಳೆ..ಪ್ರೌಢೆಯಾಗಿ ನಾಡನ್ನೇ ವ್ಯಾಪಿಸುತ್ತಾಳೆ..<br />
&#8220;ನಾನು&#8221; ಎಂಬಲ್ಲಿ ಜನಿಸಿ, &#8220;ನಾವು&#8221; ಎಂಬಲ್ಲಿ ಬೆಳೆದು, &#8220;ನಾಡು&#8221; ಎಂಬಲ್ಲಿ ವಿಶ್ವರೂಪಿಣಿಯಾಗಿ ವ್ಯಾಪಿಸಬೇಕು ಆಕೆ..ಅದು ಅರ್ಥನೀತಿ..ಇದಕ್ಕೆ ಕರವೆಂದು ಹೆಸರು..<br />
ದುಡಿಯುವ, ನೀಡುವ ಕೋಟಿ ಕರಗಳು ಸೇರಿ ಒಂದು ರಾಜ್ಯವನ್ನು ನಡೆಸುವುದನ್ನಲ್ಲವೇ &#8220;ಕರ&#8221; ವೆಂದು ಕರೆಯುವುದು..?<br />
ಲಕ್ಷ್ಮಿಯ ಲೋಕಮಂಗಲಕರವಾದ &#8220;ಕರ&#8221;ವದು..<br />
ಈ ಹರಿವಿನಲ್ಲಿ ಎಲ್ಲಿಯೂ ತಡೆಯಿಲ್ಲದಂತೆ, ಲಕ್ಷ್ಮಿಯು ಒಂದೆಡೆಯಿಂದ ಇನ್ನೊಂದೆಡೆಗೆ ಹರಿಯುವಾಗ ಎಲ್ಲಿಯೂ, ಯಾರಿಗೂ ನೋವಾಗದಂತೆ ನೋಡಿಕೊಳ್ಳಬೇಕಾದದ್ದು ’ರಾಜ್ಯಭಾರಧಾರಿ’ಗಳ ಕರ್ತವ್ಯ..<br />
ಅಯೋಧ್ಯೆಯ ಅಮಾತ್ಯರ  ಅರ್ಥನೀತಿ ಈ ಬಗೆಯದು..ಅಮಾತ್ಯರು ಅಯೋಧ್ಯೆಯ ಕೋಶದಲ್ಲಿ &#8220;ಧನ&#8221;ವೆಂಬ ಲಕ್ಷ್ಮಿಯು ಸದಾ ತುಂಬಿ ಹರಿಯುತ್ತಿರುವಂತೆ ನೋಡಿಕೊಂಡರು..ಆದರೆ ಅದು ಪ್ರಜೆಗಳ ಮನೆ-ಮನಗಳಲ್ಲಿ &#8220;ಆನಂದ&#8221; ವೆಂಬ ನಾರಾಯಣನನ್ನು ಬರಿದು ಮಾಡಿಯಲ್ಲ..!!</p>
<p><strong>ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ |<br />
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೇ ||<br />
</strong><br />
ಅದೂ (ಪರಮಾತ್ಮನು) ಪೂರ್ಣ, ಇದೂ (ಜಗತ್ತು) ಪೂರ್ಣ, ಪೂರ್ಣದಿಂದ (ಪರಮಾತ್ಮನಿಂದ) ಪೂರ್ಣವು (ಜಗತ್ತು) ಹೊರಹೊಮ್ಮಿತು..ಪೂರ್ಣದಿಂದ (ಪರಮಾತ್ಮನಿಂದ) ಪೂರ್ಣವು (ಜಗತ್ತು) ಹೊರಬಂದ ಮೇಲೆಯೂ ಪೂರ್ಣವು (ಪರಮಾತ್ಮನು) ಪೂರ್ಣವಾಗಿಯೇ ಉಳಿಯಿತು&#8230;!! ಇದು ಪರಮಾರ್ಥನೀತಿ..</p>
<p>ಅದು (ಅಯೋಧ್ಯೆಯ ಪ್ರಜೆಗಳು) ಪೂರ್ಣ, ಇದು(ಅಯೋಧ್ಯೆಯ ಕೋಶವೂ)ಪೂರ್ಣ, ಪೂರ್ಣದಿಂದ(ಪ್ರಜೆಗಳಿಂದ) ಪೂರ್ಣವು(ಕೋಶವು) ಹೊರಹೊಮ್ಮಿತು..ಪೂರ್ಣದಿಂದ(ಪ್ರಜೆಗಳಿಂದ) ಪೂರ್ಣವು(ಸಮೃದ್ಧವಾದ ಕೋಶವು) ಹೊರಹೊಮ್ಮಿದ ಮೇಲೆಯೂ ಪೂರ್ಣವು(ಪ್ರಜಾವರ್ಗ) ಪೂರ್ಣವಾಗಿಯೇ ಉಳಿಯಿತು…!! ಇದು ಅರ್ಥನೀತಿ..!<br />
<strong><br />
&#8220;ಬ್ರಹ್ಮಕ್ಷತ್ರಮಹಿಂಸಂತಃ ತೇ ಕೋಶಂ ಸಮಪೂರಯನ್&#8221;</strong><br />
( ಕರಭಾರವನ್ನು ಹೇರಿ ಬ್ರಹ್ಮ-ಕ್ಷತ್ರಗಳನ್ನು ಪೀಡಿಸದೆಯೇ ಅವರು ಕೋಶವನ್ನು ತುಂಬಿದರು..)</p>
<p>ಮೇಲ್ನೋಟಕ್ಕೆ ಇದು ತಾರತಮ್ಯವೆಂದೆನಿಸುತ್ತದೆಯಲ್ಲವೇ..? ..<br />
ಮಾನವಶರೀರದ ಅಂಗವಾದ ಕರದಲ್ಲಿ ತಾರತಮ್ಯವಿರುವುದೇನೋ ಸರಿ..<br />
ರಾಜ್ಯಾಡಳಿತದ ಅಂಗವಾದ ಕರದಲ್ಲಿಯೂ ತಾರತಮ್ಯ ಮಾಡುವುದೇ..?</p>
<p>ಹೌದು,<br />
ತಾರತಮ್ಯವೇ ಹೌದು..<br />
ಆದರೆ ನಾವೆಂದುಕೊಂಡಂತೆ ಅಲ್ಲ..<br />
ಮತ್ತುಳಿದವರು ತಮ್ಮ ಬದುಕಿನ ಒಂದಂಶವನ್ನು ನಾಡಿಗೆ ನೀಡಿದರೆ ಬ್ರಹ್ಮ-ಕ್ಷತ್ರವರ್ಗಗಳು ಸಂಪೂರ್ಣವಾಗಿ ತಮ್ಮ ಬದುಕನ್ನೇ ಸಮರ್ಪಿಸುತ್ತಿದ್ದವು&#8230;.</p>
<p>ಸಮಾಜಕ್ಕಾಗಿಯೇ ಬದುಕುವ ವರ್ಗವೊಂದು- ಅದು ಬ್ರಹ್ಮವರ್ಗ..<br />
ಸಮಾಜಕ್ಕಾಗಿಯೇ ಸಾವನ್ನಪ್ಪುವ ವರ್ಗವಿನ್ನೊಂದು- ಅದು ಕ್ಷತ್ರವರ್ಗ..<br />
ಸಮಾಜದ ಅಂತರಂಗವನ್ನು ಅರಿವು-ಆನಂದಗಳಿಂದ ತುಂಬುವುದು ಬ್ರಹ್ಮವರ್ಗ..<br />
ಬಹಿರಂಗದಲ್ಲಿ ಬಂದೆರಗುವ ಆಪತ್ತುಗಳಿಂದ ಸಮಾಜವನ್ನು  ರಕ್ಷಿಸುವುದು ಕ್ಷತ್ರವರ್ಗ..<br />
ಆನೆ ಕೊಟ್ಟವರಿಂದ ಅಡಕೆ ಕೇಳುವುದೇ..?<br />
ಹಸುವನ್ನೇ ಸಮರ್ಪಿಸಿದವನಲ್ಲಿ ಹಗ್ಗಕ್ಕಾಗಿ ಗುದ್ದಾಡುವುದೆಂತು..?<br />
ಆದುದರಿಂದಲೇ ಅಯೋಧ್ಯೆಯಲ್ಲಿ, ಸಮಾಜಕ್ಕೆ ಸರ್ವಾಪ೯ಣೆ ಮಾಡಿಕೊಂಡ ಈ ಎರಡು ವರ್ಗಗಳ ಮೇಲೆ ಬಹುವಾದ &#8220;ಕರಭಾರ&#8221;ವಿರಲಿಲ್ಲ..!</p>
<p>ವೃದ್ಧಿಯೆಂಬ ಅರ್ಥದಲ್ಲಿರುವ &#8216;ಬೃಹಿ-ಮಹಿ&#8217;ಗಳೆಂಬ ಜೋಡಿಧಾತುಗಳಿಂದ ನಿರ್ಮಿತವಾಗಿದೆ ಬ್ರಹ್ಮಶಬ್ದ..<br />
ಬ್ರಹ್ಮವೆಂದರೆ ವೃದ್ಧಿ..<br />
ಯಾವುದು &#8216;ಬೃಹತ್&#8217; ಆಗಿ, &#8216;ಮಹತ್&#8217; ಆಗಿ, ವಿರಾಟ್ ವಿಶ್ವವಾಗಿ ಬೆಳೆದುನಿಂತಿತೋ ಆ ಪರಮಾತ್ಮನಿಗೇ ಬ್ರಹ್ಮವೆಂದು ಹೆಸರು..<br />
ಯಾರು ಅರಿವು-ಆನಂದಗಳ ರಾಶಿಯೇ ಆದ  ಆ &#8220;ಬ್ರಹ್ಮ&#8221;ವನ್ನು  ತಾವು ತಮ್ಮೊಳಗೇ ಕಂಡುಕೊಂಡು, ಸರ್ವಸಮಾಜಕ್ಕೆ ಪಸರಿಸಲು ತಮ್ಮ ಆಯುಸ್ಸಿನ ಸರ್ವಸ್ವವನ್ನೂ ಧಾರೆಯೆರೆದರೋ ಆ ಬಗೆಯ ಜನರಿಗೆ ’ಬ್ರಹ್ಮವರ್ಗ&#8217;ವೆಂದೇ ಹೆಸರು ಬಂದಿತು..!<br />
ಅವರು ತಮ್ಮ ಬಹುಮೂಲ್ಯವಾದ ಆಯುಸ್ಸನ್ನೇ-ತಪಸ್ಸನ್ನೇ ಕರವಾಗಿ ನಾಡಿಗೆ ನೀಡುತ್ತಿದ್ದರು..<br />
ಅವರ ಬದುಕೇ ನಾಡಿಗೆ ನೀಡಿದ ಕರ.. ಮಂಗಲಕರ..!</p>
<p>ಕ್ಷತವೆಂದರೆ ಆಘಾತ..ಸಮಾಜಕ್ಕೊದಗಿ ಬರುವ ಆಘಾತಗಳನ್ನು ಯಾರು ತಾವು ಸ್ವೀಕರಿಸಿ, ಸಮಾಜವನ್ನುಳಿಸುವರೋ ಆ ಬಗೆಯ ಜನರಿಗೆ &#8220;ಕ್ಷತ್ರವರ್ಗ’ ವೆಂದೇ ಹೆಸರು ಬಂದಿತು..<br />
ಇವರು ತಮ್ಮ ಅಮೂಲ್ಯವಾದ ಜೀವವನ್ನೇ ಕರವಾಗಿ ತೆರುವವರು..!<br />
ಸಾವು-ನೋವುಗಳನ್ನು ತಾವುಂಡು ಸಮಾಜವನ್ನು ನಲಿವಿನಲ್ಲಿಡುವ ಅಭಿನವವಿಷಕಂಠರು..!<br />
ಸಮಾಜಪುರುಷನಿಗೆ ಕವಚವಿದ್ದಂತೆ..<br />
ಸಮಾಜವೆಂಬ ತೋಟಕ್ಕೆ ಬೇಲಿಯಿದ್ದಂತೆ..<br />
ಸಮಾಜವೆಂಬ ನೇತ್ರಕ್ಕೆ ರೆಪ್ಪೆಯಿದ್ದಂತೆ..</p>
<p>ಹುಟ್ಟಿದ ಪ್ರತಿಯೊಂದು ಜೀವವೂ ಬಯಸುವುದಾದರೂ ಏನನ್ನು..?<br />
ಒಳಿತಾಗಬೇಕು..<br />
ಕೆಡುಕಾಗಬಾರದು..<br />
ಸಮಾಜಕ್ಕೆ ಒಳಿತಾಗುವಂತೆ ಮಾಡುವುದು ಬ್ರಹ್ಮವರ್ಗದ ಕರ್ತವ್ಯ..<br />
ಕೆಡುಕಾಗದಂತೆ ನೋಡಿಕೊಳ್ಳುವುದು ಕ್ಷತ್ರದ ಕರ್ತವ್ಯ..<br />
ಅಲಭ್ಯವಾದುದರ ಲಾಭವು ’ಯೋಗ&#8217;<br />
ಅದು ಬ್ರಹ್ಮವರ್ಗದ ಹೊಣೆ..<br />
ಲಬ್ಧವಾದುದರ ರಕ್ಷಣೆಯು &#8216;ಕ್ಷೇಮ&#8217;<br />
ಅದು ಕ್ಷತ್ರವರ್ಗದ ಹೊಣೆ..<br />
ಸಮಾಜದ &#8220;ಯೋಗಕ್ಷೇಮ&#8221;ದ ಹೊಣೆ ಹೊತ್ತ ಈ ವರ್ಗಗಳಿಂದ ಧನದ ರೂಪದಲ್ಲಿ ಕರದ ನಿರೀಕ್ಷೆಯಿರಲಿಲ್ಲ..<br />
ಸಮಾಜವನ್ನು ಬೆಳೆಸುವುದೇ &#8216;ಬ್ರಹ್ಮವರ್ಗ’ಕ್ಕೆ ಕರವಾಗಿತ್ತು..<br />
ಸಮಾಜವನ್ನು ಉಳಿಸುವುದೇ ’ಕ್ಷತ್ರವರ್ಗ&#8221;ಕ್ಕೆ ಕರವಾಗಿತ್ತು..</p>
<p>ಹೀಗೆ ಬ್ರಹ್ಮವರ್ಗವು ಆತ್ಮವನ್ನಿತ್ತು, ಕ್ಷತ್ರವರ್ಗವು ಜೀವವನ್ನೇ ತೆತ್ತು, ಮತ್ತುಳಿದ ಪ್ರಜೆಗಳು ಕರಗಳನ್ನೊಪ್ಪಿಸಿ ಅಯೋಧ್ಯೆಯ ಕೋಶ ತುಂಬಿತು..ಶೋಕ ತೊಲಗಿತು..!!</p>
]]></content:encoded>
			<wfw:commentRss>http://hareraama.in/blog/artikate-sartakate/feed/</wfw:commentRss>
		<slash:comments>24</slash:comments>
		</item>
		<item>
		<title>ಪ್ರೀತಿಯೊಡನೆ ನೀತಿ, ಇದು ಅಯೋಧ್ಯೆಯ ರೀತಿ..!</title>
		<link>http://hareraama.in/blog/preethiyodane_neethi_adu_ayodhye/</link>
		<comments>http://hareraama.in/blog/preethiyodane_neethi_adu_ayodhye/#comments</comments>
		<pubDate>Thu, 23 Dec 2010 16:45:37 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>

		<guid isPermaLink="false">http://hareraama.in/?p=8788</guid>
		<description><![CDATA[ಬದುಕು ಮುಂದೆ ಸಾಗಬೇಕು..
ಆದರೆ ಅದು ಸರಿಯಾದ ದಾರಿಯಲ್ಲಿ ಮುಂದೆ ಸಾಗಬೇಕು..
ಬದುಕು ಮುಂದೆ ಸಾಗಲು ಬೇಕು "ಪ್ರೀತಿ"
ಅದು ಸರಿಯಾದ ದಾರಿಯಲ್ಲಿ ಸಾಗಲು ಬೇಕು "ನೀತಿ"
ಬದುಕು ಚಲಿಸಲು ಬೇಕು ’ಪ್ರೀತಿ" ಎಂಬ ಚಾಲನಾಶಕ್ತಿ..
ಅದು ನಿಜವಾದ ಲಕ್ಷ್ಯದೆಡೆಗೆ ಚಲಿಸಲು ಬೇಕು "ನೀತಿ ’ಎಂಬ ಚಾಲಕ..
ಶೂರ್ಪಣಖೆಗೆ ರಾಮನ ಕುರಿತು, ಅವಳ ಅಣ್ಣನಿಗೆ ಸೀತೆಯ ಕುರಿತು ಇದ್ದಿದ್ದು ಪ್ರೀತಿಯಲ್ಲ..ಏಕೆಂದರೆ ಅಲ್ಲಿ ನೀತಿಯಿರಲಿಲ್ಲ..
ನೀತಿಗೆ ಸಲ್ಲದ ಪ್ರೀತಿಯು ಪ್ರೀತಿಯೇ ಅಲ್ಲ..!!
]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fpreethiyodane_neethi_adu_ayodhye%252F&title=%E0%B2%AA%E0%B3%8D%E0%B2%B0%E0%B3%80%E0%B2%A4%E0%B2%BF%E0%B2%AF%E0%B3%8A%E0%B2%A1%E0%B2%A8%E0%B3%86+%E0%B2%A8%E0%B3%80%E0%B2%A4%E0%B2%BF%2C+%E0%B2%87%E0%B2%A6%E0%B3%81+%E0%B2%85%E0%B2%AF%E0%B3%8B%E0%B2%A7%E0%B3%8D%E0%B2%AF%E0%B3%86%E0%B2%AF+%E0%B2%B0%E0%B3%80%E0%B2%A4%E0%B2%BF..%21&desc=%E0%B2%AC%E0%B2%A6%E0%B3%81%E0%B2%95%E0%B3%81+%E0%B2%AE%E0%B3%81%E0%B2%82%E0%B2%A6%E0%B3%86+%E0%B2%B8%E0%B2%BE%E0%B2%97%E0%B2%AC%E0%B3%87%E0%B2%95%E0%B3%81..%0D%0A%E0%B2%86%E0%B2%A6%E0%B2%B0%E0%B3%86+%E0%B2%85%E0%B2%A6%E0%B3%81+%E0%B2%B8%E0%B2%B0%E0%B2%BF%E0%B2%AF%E0%B2%BE%E0%B2%A6+%E0%B2%A6%E0%B2%BE%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF+%E0%B2%AE%E0%B3%81%E0%B2%82%E0%B2%A6%E0%B3%86+%E0%B2%B8%E0%B2%BE%E0%B2%97%E0%B2%AC%E0%B3%87%E0%B2%95%E0%B3%81..%0D%0A%E0%B2%AC%E0%B2%A6%E0%B3%81%E0%B2%95%E0%B3%81+%E0%B2%AE%E0%B3%81%E0%B2%82%E0%B2%A6%E0%B3%86+&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>ಬದುಕು ಮುಂದೆ ಸಾಗಬೇಕು..<br />
ಆದರೆ ಅದು ಸರಿಯಾದ ದಾರಿಯಲ್ಲಿ ಮುಂದೆ ಸಾಗಬೇಕು..<br />
ಬದುಕು ಮುಂದೆ ಸಾಗಲು ಬೇಕು &#8220;ಪ್ರೀತಿ&#8221;<br />
ಅದು ಸರಿಯಾದ ದಾರಿಯಲ್ಲಿ ಸಾಗಲು ಬೇಕು &#8220;ನೀತಿ&#8221;<br />
ಬದುಕು ಚಲಿಸಲು ಬೇಕು ’ಪ್ರೀತಿ&#8221; ಎಂಬ ಚಾಲನಾಶಕ್ತಿ..<br />
ಅದು ನಿಜವಾದ ಲಕ್ಷ್ಯದೆಡೆಗೆ ಚಲಿಸಲು ಬೇಕು &#8220;ನೀತಿ ’ಎಂಬ ಚಾಲಕ..<br />
ಶೂರ್ಪಣಖೆಗೆ ರಾಮನ ಕುರಿತು, ಅವಳ ಅಣ್ಣನಿಗೆ ಸೀತೆಯ ಕುರಿತು ಇದ್ದಿದ್ದು ಪ್ರೀತಿಯಲ್ಲ..ಏಕೆಂದರೆ ಅಲ್ಲಿ ನೀತಿಯಿರಲಿಲ್ಲ..<br />
ನೀತಿಗೆ ಸಲ್ಲದ ಪ್ರೀತಿಯು ಪ್ರೀತಿಯೇ ಅಲ್ಲ..!!</p>
<p>ಆದುದರಿಂದಲೇ ವಾಲ್ಮೀಕಿಗಳು ನಾಡು- ನರೇಶರ ಬಗೆಗೆ ಕೋಸಲದ ಮಂತ್ರಿಗಳಿಗಿದ್ದ ಪ್ರೀತಿಯನ್ನು ವರ್ಣಿಸುವಾಗ ನೀತಿಯನ್ನು ಮರೆಯಲಿಲ್ಲ..!<br />
ಅಯೋಧ್ಯೆಯ ಮಂತ್ರಿಗಳ ನೀತಿಯ ಪರಿಯನ್ನು ಮುನಿನಯನಗಳ ಮೂಲಕ ನೋಡೋಣವೇ..?</p>
<p>*<strong><span style="color: #000000;"> ನೀತಿಮಂತಃ :</span><br />
</strong>ನೀತಿ ಶಬ್ದದ ನಿಷ್ಪತ್ತಿ &#8216;<strong><span style="color: #000000;">ಣೀಞ್ &#8211; ಪ್ರಾಪಣೇ</span>&#8216;</strong> ಎಂಬ ಧಾತುವಿನಿಂದ&#8230;<br />
ಪ್ರಾಪಣವೆಂದರೆ ತಲುಪಿಸುವುದು&#8230;<br />
ಭೂಲೋಕದಿಂದ ಭಾಲೋಕಕ್ಕೆ, &#8216;ಪಾಪದಿಂದ ಪಾದಕ್ಕೆ&#8217; ಅಸತ್ಯದಿಂದ ಸತ್ಯಕ್ಕೆ, ಕ್ಷೋಭೆಯಿಂದ ಶಾಂತಿಗೆ ಯಾವುದು ನಮ್ಮನ್ನು ತಲುಪಿಸುವುದೋ ಅದುವೇ ನೀತಿ..<br />
ಅದುವೇ ಸತ್ಪುರುಷರ ಬದುಕಿನ ರೀತಿ..<br />
ಅಮಾತ್ಯರು ಪ್ರೀತಿಮಂತರು ಮಾತ್ರವಲ್ಲ, ನೀತಿಮಂತರೂ ಆಗಿದ್ದರು..</p>
<p><span style="color: #000000;">* <strong>ಜಾಗ್ರತೋ ನಯಚಕ್ಷುಷಾ</strong> &#8211;</span><br />
ಬಾಹ್ಯನಯನಗಳು ನಿದ್ರಿಸಲಿ, ಚಿಂತೆಯಿಲ್ಲ..<br />
ನೀತಿನಯನವು ನಿದ್ರಿಸಿದರೆ ಭೀತಿ ತಪ್ಪಿದ್ದಲ್ಲ..!<br />
ಆದರೆ ಅಯೋಧ್ಯೆಯನ್ನೆಂದಿಗೂ ಭೀತಿ ಮುಟ್ಟಲು ಸಾಧ್ಯವಿರಲಿಲ್ಲ..<br />
ಏಕೆಂದರೆ ಸೂರ್ಯಸಿಂಹಾಸನದ ಸೇವಕರ ನೀತಿನೇತ್ರಗಳು ನರರ-ನರೇಂದ್ರನ ರಕ್ಷೆಯ ವಿಷಯದಲ್ಲಿ ಸದಾ ಜಾಗೃತವಾಗಿಯೇ ಇರುತ್ತಿದ್ದವು..<br />
ನೀತಿಯಿರುವಲ್ಲಿ ಭೀತಿಗೆ ಎಡೆಯೆಲ್ಲಿ..?</p>
<p><span style="color: #000000;"><strong>*ಕ್ರೋಧಾತ್ ಕಾಮಾರ್ಥಹೇತೋರ್ವಾ ನ ಬ್ರೂಯುರನೃತಂ ವಚಃ |</strong>|</span><br />
ಕಾಮಕ್ಕಾಗಿಯಾಗಲೀ, ಕ್ರೋಧದಿಂದಲಾಗಲೀ, ಲೋಭಕ್ಕೊಳಗಾಗಿಯಾಗಲೀ ಅವರು ಎಂದೂ ಸುಳ್ಳಾಡುತ್ತಿರಲಿಲ್ಲ..</p>
<p><strong><span style="color: #000000;">ತ್ರಿವಿಧಂ ನರಕಸ್ಯೇದಂ ದ್ವಾರಂ ನಾಶನಮಾತ್ಮನಃ|<br />
ಕಾಮಃ ಕ್ರೋಧಃ ತಥಾ ಲೋಭಃ ತಸ್ಮಾದೇತತ್ತ್ರಯಂ ತ್ಯಜೇತ್ ||<br />
- ಭಗವದ್ಗೀತೆ</span></strong><br />
(ಕಾಮ-ಕ್ರೋಧ-ಲೋಭಗಳು ನರಕದ ಮುಬ್ಬಗೆಯ ದ್ವಾರಗಳು..<br />
ನಮ್ಮೊಳಸೇರಿ ನಮ್ಮಾತ್ಮವನ್ನೇ ಹಾನಿಗೈಯುವವು..<br />
ನಾಶ-ನರಕಗಳಿಂದ ಬಚಾವಾಗಬಯಸುವವನು ಇವುಗಳಿಂದ ದೂರವೇ ಇರಬೇಕು..)</p>
<p>ಮನವೆಂಬ ಅಂತರಂಗ ಮತ್ತು ಮಾತೆಂಬ ಬಹಿರಂಗಗಳ ನಡುವೆ ಸಾಮರಸ್ಯ-ಸಹಚಾರಗಳಿದ್ದರೆ  ಅದುವೇ ’ಸತ್ಯ’<br />
ದೌರ್ಭಾಗ್ಯವಶಾತ್ ಅವುಗಳ ನಡುವೆ ವೈರಸ್ಯ-ವ್ಯಭಿಚಾರಗಳುಂಟಾದರೆ ಅದುವೇ ಮಿಥ್ಯೆ..<br />
ಒಂದು ಮನೆಯೊಳಗೆ ಬರುವ ಭಿನ್ನತೆಯೇ ಅದೆಷ್ಟು ಅಶಾಂತಿ- ಅನಾಹುತಗಳಿಗೆ ಕಾರಣವಾಗುತ್ತದೆ..!?<br />
ಹಾಗಿರುವಾಗ ಒಂದಾಗಿಯೇ ಇರಬೇಕಾದ ಮೈ-ಮಾತು- ಮನಗಳೊಳಗೇ ಭಿನ್ನತೆ ಬಂದರೆ ಬದುಕು ಭಗ್ನವಾಗದೇ ಇದ್ದೀತೇ..?<br />
ದೇಶವೆಂಬ ದೇಹಕ್ಕೆ ಮಂತ್ರಿಯೇ ಮನವಲ್ಲವೇ..?<br />
ಆತನೇ ಸುಳ್ಳಾಡಿದರೆ ದೇಶವೇ ಸುಳ್ಳಾಗುವುದಿಲ್ಲವೇ..!?<br />
ಒಮ್ಮೊಮ್ಮೆ ದುರ್ಲಾಭಗಳ ಲೋಭದಿಂದ, ಒಮ್ಮೊಮ್ಮೆ ನಿಷ್ಕಾರಣವಾದ ದ್ವೇಷದಿಂದ ಮಿಥ್ಯೆಗೆ ವಶವಾಗುವ ಇಂದಿನ ಮಂತ್ರಿಗಳಂತಿರಲಿಲ್ಲ ಅಂದಿನ ಅಯೋಧ್ಯೆಯ ಮಂತ್ರಿಗಳು..</p>
<p><strong><span style="color: #000000;">ದಂಡನೀತಿ&#8211;</span></strong><br />
ಭಾರತೀಯ ಸಂಸ್ಕೃತಿಯಲ್ಲಿ ದಂಡವೆಂಬುದು ಜೀವಹಿತೈಷಿತೆಯ, ಜೀವಕಾರುಣ್ಯದ ಪ್ರತೀಕ..!<br />
ಜೀವಹಿಂಸೆಯಲ್ಲವದು..!<br />
ಕೊಲೆಗಡುಕನು ಹರಿತವಾದ ಆಯುಧದಿಂದ ಶರೀರವನ್ನು ಭೇದಿಸುತ್ತಾನೆ..<br />
ಕೊಲ್ಲುವುದೇ ಉದ್ದೇಶವಲ್ಲಿ..!<br />
ವೈದ್ಯನೂ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹರಿತವಾದ ಆಯುಧದಿಂದ ಶರೀರವನ್ನು ಭೇದಿಸುತ್ತಾನೆ..<br />
ಬದುಕಿಸುವುದೇ ಉದ್ದೇಶವಲ್ಲಿ..!<br />
ಭಾರತೀಯದಂಡನೀತಿಯೆಂದರೆ ಅದೊಂದು ಬಗೆಯ ಜೀವಚಿಕಿತ್ಸೆ..<br />
ದೇಹದಲ್ಲಡಗಿದ ರೋಗದ ಗಡ್ಡೆಯನ್ನು ವೈದ್ಯನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವಂತೆ, ಜೀವದಲ್ಲಡಗಿದ ಪಾಪದ ಗಡ್ಡೆಯನ್ನು ದಂಡದ ಮೂಲಕ ತೆಗೆದು, ಜೀವವನ್ನು ಶುದ್ಧಗೊಳಿಸುವ, ಭವಿಷ್ಯವನ್ನು ಮಂಗಲಮಯಗೊಳಿಸುವ  ವೈಜ್ಞಾನಿಕ ಪ್ರಕ್ರಿಯೆಯದು..!<br />
ಆದುದರಿಂದಲೇ ಅಪರಾಧಿಯ ಮೇಲೆ ಕರುಣೆಯಿದ್ದರೆ ಆತನನ್ನು ದಂಡಿಸಲೇಬೇಕು..!!<br />
ರಾಜನ, ರಾಜಪ್ರತಿನಿಧಿಗಳ ಕರ್ತವ್ಯವದು ..<br />
ಹಾಗೆ ದಂಡಿಸದ ರಾಜನು ಅಪರಾಧಿಯ ಪಾಪದಲ್ಲಿ ತಾನೂ ಭಾಗಿಯಾಗುವನೆಂದು ಶಾಸ್ತ್ರಗಳು ಸಾರುತ್ತವೆ..!<br />
ಅಯೋಧ್ಯೆಯ ಮಂತ್ರಿಗಳನ್ನು &#8220;ಸುತೀಕ್ಷ್ಣ ದಂಡ&#8221;ರೆಂದು ವಾಲ್ಮೀಕಿಗಳು ಬಣ್ಣಿಸುತ್ತಾರೆ..<br />
ಜೀವಗಳ ವಿಷಯದಲ್ಲಿ ಅವರು ಸುಮಕೋಮಲರು..<br />
ಆದರೆ ಅಪರಾಧಗಳ ವಿಷಯದಲ್ಲಿ ವಜ್ರಕಠೋರರು..!!<br />
ಏಕೆಂದರೆ ಅಪರಾಧಗಳೇ ಪಾಪದ ಗಡ್ಡೆಗಳಾಗಿ ಒಳಸೇರಿ ಜೀವವನ್ನು  ಬಿಸುಡಿಸುತ್ತವೆ..ಜೀವದ ಉತ್ಕರ್ಷವನ್ನೇ ಹಾನಿಗೈಯುತ್ತವೆ..!!<br />
ಅಪರಾಧಿಗಳನ್ನವರು ದಂಡಿಸದಿರುತ್ತಿರಲಿಲ್ಲ..ಆದರೆ ಅವರ ದಂಡದಲ್ಲಿ ರೋಷ-ದ್ವೇಷಗಳಿರಲಿಲ್ಲ..ವಿವೇಕವಿತ್ತು..!</p>
<p><strong>ಸುತೀಕ್ಷ್ಣ ದಂಡಾಃ ಸಂಪ್ರೇಕ್ಶ್ಯ ಪುರುಷಸ್ಯ ಬಲಾಬಲಂ||</strong><br />
ದಂಡವೆಂಬುದು ಎಲ್ಲಾ ಅಪರಾಧಗಳಿಗೂ ಒಂದೇ ಆಗಲು ಸಾಧ್ಯವಿಲ್ಲ..<br />
ಹಾಗೆಯೇ ಅಪರಾಧವು ಒಂದೇ ಆದರೂ ಅಪರಾಧಿಗಳು ಬೇರೆ ಬೇರೆಯಾದಾಗ ದಂಡವೂ ಬೇರೆ ಬೇರೆಯೇ ಆಗಬೇಕಾಗುತ್ತದೆ..<br />
ಎಲ್ಲಾ ರೋಗಗಳಿಗೂ ಒಂದೇ ಚಿಕಿತ್ಸೆಯಲ್ಲ ..<br />
ರೋಗವೊಂದೇ ಆದರೂ ಬೇರೆ ಬೇರೆ ರೋಗಿಗಳಿಗೆ ಅವರ ಪ್ರಕೃತಿಯನ್ನನುಸರಿಸಿ ಬೇರೆ ಬೇರೆ ಚಿಕಿತ್ಸೆಯನ್ನೇ ನೀಡಬೇಕಾಗುತ್ತದೆ..!<br />
ದೊಡ್ಡವರಿಗೆ ಕೊಡುವ ಔಷಧವನ್ನು ಎಳೆಮಗುವಿಗೆ ನೀಡಿದರೆ ಔಷಧವೇ ಮೃತ್ಯುವಾಗಬಹುದಲ್ಲವೇ..?</p>
<p>ಕುಶಲ ಶಿಕ್ಷಕನೊಬ್ಬ ತರಗತಿಯ ಮಕ್ಕಳನ್ನು ಅವರ ಪ್ರಕೃತಿಯನ್ನನುಸರಿಸಿ ಬೇರೆ ಬೇರೆ ವಿಧದಲ್ಲಿ ತಿದ್ದುತ್ತಾನೆ..<br />
ಕೆಲವು ಮಕ್ಕಳಿಗೆ ತೀಕ್ಷ್ಣ ದೃಷ್ಟಿಯೇ ಸಾಕಾದೀತು..<br />
ಕೆಲವರಿಗೆ ಬೈಗುಳವೇ ಬೇಕಾದೀತು..!<br />
ಕೆಲವರು ಬೆತ್ತದ ಹೊರತು ದಾರಿಗೆ ಬರಲಾರರು..<br />
ಕೆಲವು ಸೂಕ್ಷ್ಮ ಸಂವೇದಿ ಮಕ್ಕಳಿಗೆ ಎಂದಿನಂತೆ ಮಾತಾಡದಿದ್ದರೆ ಸಾಕು, ಬೆತ್ತಕ್ಕಿಂತ ಹೆಚ್ಚು ಪರಿಣಾಮವನ್ನು ಅದುವೇ ಬೀರುತ್ತದೆ..</p>
<p>ಅಮಾತ್ಯರು ಅಪರಾಧಿಗಳನ್ನು ಕಂಡುಹಿಡಿದು ಕಠೋರವಾಗಿ ದಂಡಿಸುವುದು ಖಂಡಿತವಾಗಿದ್ದುದರಿಂದ ಅಯೋಧ್ಯೆಯಲ್ಲಿ ಅಪರಾಧಗಳಿಗೆ ಆಸ್ಪದವೇ ಇರಲಿಲ್ಲ..!<br />
ಆದರೆ ಅಪರಾಧಿಗಳ -ಅಪರಾಧದ ಬಲಾಬಲಗಳನ್ನು ಚೆನ್ನಾಗಿ ವಿವೇಚಿಸಿಯೇ ಅವರು ದಂಡನೆ ನೀಡುವುದರಿಂದಾಗಿ ಅಪರಾಧಿಗಳಿಗೂ ಅನ್ಯಾಯವಾಗುತ್ತಿರಲಿಲ್ಲ..!</p>
<p><span style="color: #000000;">*<strong> ಪ್ರಾಪ್ತಕಾಲಂ ತು ತೇ ದಂಡಂ ಧಾರಯೇಯುಃ ಸುತೇಷ್ವಪಿ |<br />
ಅಹಿತಂ ಚಾಪಿ ಪುರುಷಮ್  ನ ಹಿಂಸ್ಸುರವಿದೂಷಕಂ ||</strong></span><br />
ಹೆತ್ತ ಮಕ್ಕಳೇ ಆದರೂ ತಪ್ಪು ಮಾಡಿದರೆ ದಂಡಿಸದೇ ಬಿಡುತ್ತಿರಲಿಲ್ಲ..<br />
ತಮಗಾಗದವರೇ ಆದರೂ ತಪ್ಪಿಲ್ಲದಲ್ಲಿ ಖಂಡಿತವಾಗಿಯೂ ದಂಡಿಸುತ್ತಿರಲಿಲ್ಲ..</p>
<p><span style="color: #ff6600;"><strong><span style="color: #000000;">&#8220;</span><span style="color: #000000;">ಒಬ್ಬನೇ ಒಬ್ಬ ನಿರಪರಾಧಿಗೂ ಶಿಕ್ಷೆಯಾಗಬಾರದು, ಬೇಕಾದರೆ ನೂರು ಅಪರಾಧಿಗಳು ತಪ್ಪಿಸಿಕೊಳ್ಳಲಿ &#8220;</span></strong></span><br />
ಇದು ಇಂದಿನ ದಂಡತಜ್ಞರ ಘೋಷವಾಕ್ಯ..<br />
<strong> &#8220;ಒಬ್ಬನೇ ಒಬ್ಬ ಅಪರಾಧಿಯೂ ತಪ್ಪಿಸಿಕೊಳ್ಳಬಾರದು ..<br />
ಒಬ್ಬನೇ ಒಬ್ಬ ನಿರಪರಾಧಿಯೂ ದಂಡನೆಗೊಳಗಾಗಬಾರದು &#8220;</strong><br />
ಇದು ಅಯೋಧ್ಯೆಯ ಅಮಾತ್ಯರ ಧ್ಯೇಯವಾಕ್ಯ..<br />
ಅಪರಾಧಿಗಳನ್ನು ತಪ್ಪಿಸಿಕೊಳ್ಳಲು ಬಿಡುವುದು ನಿರಪರಾಧಿಯ ಪೀಡನೆಯಲ್ಲಿಯೇ ಪರ್ಯವಸಾನವಾಗುತ್ತದೆ..<br />
ರಾಜನಿಂದಲ್ಲವಾದರೂ ನಿರಂಕುಶರಾದ ದುರ್ಜನರಿಂದ ನಿರಪರಾಧಿಗಳು ಪೀಡನೆಗೆ ಒಳಗಾಗಿಯೇ ಒಳಗಾಗುತ್ತಾರೆ..!</p>
<p>ದಂಡಾಧಿಕಾರಿಯು ತನ್ನ ಕರ್ತವ್ಯವನ್ನು ನಿರ್ವಹಿಸುವಾಗ ರಾಗ-ದ್ವೇಷಗಳ ಪೂರ್ವಾಗ್ರಹಕ್ಕೆ ಒಳಗಾಗಲೇಬಾರದು..<br />
ಹಾಗೊಂದು ವೇಳೆ ಒಳಗಾದರೆ &#8220;ವ್ಯಾಮೋಹವಿರುವಲ್ಲಿ ಅಪರಾಧಿಗೂ ದಂಡನೆಯಿಲ್ಲ..ವಿರೋಧವಿರುವಲ್ಲಿ ನಿರಪರಾಧಿಗೂ ದಂಡನೆ&#8221;ಎಂಬಂತೆ ಆಗಿಬಿಡುತ್ತದೆ..!<br />
ಅಯೋಧ್ಯೆಯ ಅಮಾತ್ಯರು ದಂಡವನ್ನು ಧಾರಣೆ ಮಾಡುವಾಗ ಅವರಿಗೆ ಗೋಚರಿಸುತ್ತಿದ್ದುದು &#8220;ಅಪರಾಧ-ನಿರಪರಾಧಗಳು&#8221; ಮಾತ್ರ..!<br />
ವೈಯಕ್ತಿಕ ಸಂಬಂಧಗಳು ಆ ಸಮಯದಲ್ಲಿ ಅವರ ಹತ್ತಿರವೂ ಸುಳಿಯುತ್ತಿರಲಿಲ್ಲ..!!</p>
<p><strong>ಅದರೊಂದಿದೆ&#8230;<br />
ದಂಡವಿರುವುದು ಕೇವಲ ಶಿಕ್ಷೆಗಾಗಿಯಲ್ಲ, ರಕ್ಷೆಗಾಗಿ..!<br />
ಶಿಕ್ಷೆಗೆ ಶಿಕ್ಷೆಯೇ ಉದ್ದೇಶವಲ್ಲ..ರಕ್ಷೆಯದರ ಪರಮೋದ್ದೇಶ&#8230;<br />
ಶಿಕ್ಷೆಯಿರುವುದು ಶಿಷ್ಟರನ್ನು ದುಷ್ಟರಿಂದ ರಕ್ಷಿಸಲು..<br />
ಶಿಕ್ಷೆಯಿರುವುದು ದುಷ್ಟರನ್ನು ದುಷ್ಟತ್ವದಿಂದ ರಕ್ಷಿಸಲು- ಶಿಷ್ಟರನ್ನಾಗಿಸಲು..<br />
ಅಯೋಧ್ಯೆಯ ಮಂತ್ರಿಗಳು ಧರಿಸಿದ್ದ ದಂಡವು ಈ ಬಗೆಯದೆಂಬುದನ್ನು ಮುನಿಪದಗಳು ಬಣ್ಣಿಸಿದ ಪರಿಯಿದು..</strong></p>
<address><strong>ಶುಚೀನಾಂ ರಕ್ಷಿತಾರಶ್ಚ ನಿತ್ಯಂ ವಿಷಯವಾಸಿನಾಮ್ ||</strong></address>
<p><strong>ದುಷ್ಟರ ವಿಷಯದಲ್ಲಿ ಯಮನ ಮನ..<br />
ಶಿಷ್ಟರ ವಿಷಯದಲ್ಲಿ ಸುಮನಮನ..</strong></p>
<p><strong>ಧರ್ಮಕಂಟಕರಿಗೆ ಭಯಂಕರರು..<br />
ಧರ್ಮಶೀಲರಿಗೆ ಅಭಯಂಕರರು..</strong></p>
<p><strong>ತಪ್ಪು ಕಂಡಲ್ಲಿ ಬೆಂಕಿಯಾಗಿ, ಒಪ್ಪು ಕಂಡಲ್ಲಿ ಬೆಳಕಾಗಿ ಬಾಳಿದರವರು..ಆಳಿದರವರು.!</strong></p>
]]></content:encoded>
			<wfw:commentRss>http://hareraama.in/blog/preethiyodane_neethi_adu_ayodhye/feed/</wfw:commentRss>
		<slash:comments>9</slash:comments>
		</item>
		<item>
		<title>ರಾಮಾವತಾರದ ಮುನ್ನ ಪ್ರೇಮಾವತಾರ&#8230;.</title>
		<link>http://hareraama.in/blog/ramavatara-munna-premavatara/</link>
		<comments>http://hareraama.in/blog/ramavatara-munna-premavatara/#comments</comments>
		<pubDate>Thu, 16 Dec 2010 02:23:42 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>
		<category><![CDATA[bhava sangama]]></category>
		<category><![CDATA[deepotsava]]></category>
		<category><![CDATA[Hare Raama]]></category>
		<category><![CDATA[Harerama]]></category>
		<category><![CDATA[karnataka]]></category>
		<category><![CDATA[matha]]></category>
		<category><![CDATA[media]]></category>
		<category><![CDATA[ಮಾಧ್ಯಮ ವರದಿಗಳು]]></category>
		<category><![CDATA[ರಾಮಾವತಾರದ ಮುನ್ನ ಪ್ರೇಮಾವತಾರ...]]></category>

		<guid isPermaLink="false">http://hareraama.in/?p=8612</guid>
		<description><![CDATA[॥ಹರೇ ರಾಮ॥

ಪ್ರೀತಿ..ನೀತಿ..ರೀತಿ...ಪರಿಣತಿ..
ಅಯೋಧ್ಯೆಯ ಮಂತ್ರಿಗಳನ್ನು ನಾಲ್ಕೇ ಪದಗಳಲ್ಲಿ ಬಣ್ಣಿಸಬಹುದಾದರೆ ಅದು ಹೀಗೆ...!!

ಪ್ರೀತಿ - ಈಶನಲ್ಲಿ..
ಪ್ರೀತಿ - ದೇಶದಲ್ಲಿ..
ಪ್ರೀತಿ - ನರೇಶನಲ್ಲಿ..
ಪ್ರೀತಿ - ಪರಸ್ಪರರಲ್ಲಿ..
ಪ್ರೀತಿ - ಕರ್ತವ್ಯದಲ್ಲಿ..

ಆತ್ಮದ ಅಂತರಾಳದಲ್ಲಿ ಉದಯಿಸಿ ಬರುವ ಪ್ರೀತಿ..
ಅದು ಬಗೆ ಬಗೆಯಲ್ಲಿ ವ್ಯಕ್ತವಾಗಿ ಎಲ್ಲೆಡೆ ಪಸರಿಸುವ ರೀತಿ..]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Framavatara-munna-premavatara%252F&title=%E0%B2%B0%E0%B2%BE%E0%B2%AE%E0%B2%BE%E0%B2%B5%E0%B2%A4%E0%B2%BE%E0%B2%B0%E0%B2%A6+%E0%B2%AE%E0%B3%81%E0%B2%A8%E0%B3%8D%E0%B2%A8+%E0%B2%AA%E0%B3%8D%E0%B2%B0%E0%B3%87%E0%B2%AE%E0%B2%BE%E0%B2%B5%E0%B2%A4%E0%B2%BE%E0%B2%B0....&desc=%E0%A5%A5%E0%B2%B9%E0%B2%B0%E0%B3%87%C2%A0%E0%B2%B0%E0%B2%BE%E0%B2%AE%E0%A5%A5%0D%0A%0D%0A%E0%B2%AA%E0%B3%8D%E0%B2%B0%E0%B3%80%E0%B2%A4%E0%B2%BF..%E0%B2%A8%E0%B3%80%E0%B2%A4%E0%B2%BF..%E0%B2%B0%E0%B3%80%E0%B2%A4%E0%B2%BF...%E0%B2%AA%E0%B2%B0%E0%B2%BF%E0%B2%A3%E0%B2%A4%E0%B2%BF..%0D%0A%E0%B2%85%E0%B2%AF%E0%B3%8B%E0%B2%A7%E0%B3%8D%E0%B2%AF%E0%B3%86%E0%B2%AF+%E0%B2%AE%E0%B2%82%E0%B2%A4%E0%B3%8D%E0%B2%B0%E0%B2%BF%E0%B2%97%E0%B2%B3%E0%B2%A8%E0%B3%8D%E0%B2%A8%E0%B3%81+%E0%B2%A8%E0%B2%BE%E0%B2%B2%E0%B3%8D%E0%B2%95%E0%B3%87+%E0%B2%AA%E0%B2%A6%E0%B2%97%E0%B2%B3%E0%B2%B2%E0%B3%8D&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>॥ಹರೇ ರಾಮ॥</p>
<p>ಪ್ರೀತಿ..ನೀತಿ..ರೀತಿ&#8230;ಪರಿಣತಿ..<br />
ಅಯೋಧ್ಯೆಯ ಮಂತ್ರಿಗಳನ್ನು ನಾಲ್ಕೇ ಪದಗಳಲ್ಲಿ ಬಣ್ಣಿಸಬಹುದಾದರೆ ಅದು ಹೀಗೆ&#8230;!!</p>
<p>ಪ್ರೀತಿ &#8211; ಈಶನಲ್ಲಿ..<br />
ಪ್ರೀತಿ &#8211; ದೇಶದಲ್ಲಿ..<br />
ಪ್ರೀತಿ &#8211; ನರೇಶನಲ್ಲಿ..<br />
ಪ್ರೀತಿ &#8211; ಪರಸ್ಪರರಲ್ಲಿ..<br />
ಪ್ರೀತಿ &#8211; ಕರ್ತವ್ಯದಲ್ಲಿ..</p>
<p>ಆತ್ಮದ ಅಂತರಾಳದಲ್ಲಿ ಉದಯಿಸಿ ಬರುವ ಪ್ರೀತಿ..<br />
ಅದು ಬಗೆ ಬಗೆಯಲ್ಲಿ ವ್ಯಕ್ತವಾಗಿ ಎಲ್ಲೆಡೆ ಪಸರಿಸುವ ರೀತಿ..</p>
<p>ಲೋಕವು ಅಷ್ಟಾಗಿ ಗಮನಿಸದ ಈ ಎಲೆಮರೆಯ ಕಾಯಿಗಳ ಸಾಮರ್ಥ್ಯ-ಸೇವೆಗಳನ್ನು ಸೂಕ್ಷ್ಮದೃಷ್ಟಿಯಿಂದ ಗಮನಿಸಿ, ಬಣ್ಣಿಸುವ ಋಷಿಪದಗಳನ್ನು ಸಾವಧಾನವಾಗಿ ಗಮನಿಸಿ..</p>
<address><strong><span style="color: #ff6600;">*ನಿತ್ಯಂ ಪ್ರಿಯಹಿತೇ ರತಾಃ  :</span></strong><br />
ಸಾಮ್ರಾಜ್ಯದ &#8211; ಸಮ್ರಾಟನ &#8216;ಪ್ರಿಯ-ಹಿತ&#8217;ಗಳಲ್ಲಿ ಅವರು ನಿರತವೂ ನಿರತರಾಗಿದ್ದರು..</address>
<p>ಪ್ರಿಯ-ಹಿತಗಳು ಭುವಿಯ ಬದುಕಿನ ಎರಡು ಧ್ರುವಗಳು..<br />
ನಮಗೆ ಪ್ರಿಯವಾಗುವ ಹಲವು ಸಂಗತಿಗಳು ಜೀವನಕ್ಕೆ ಹಿತವಲ್ಲ..<br />
ಜೀವನಕ್ಕೆ ಹಿತವಾದ ಅದೆಷ್ಟೋ ಸಂಗತಿಗಳು ನಮಗೆ ಪ್ರಿಯವೆನಿಸುವುದೇ ಇಲ್ಲ..<br />
ನಮ್ಮ ಮೇಲೆ ಮಾಯೆಯ ಆಟ ಇಂದಿಗೂ ನಡೆಯುತ್ತಿದ್ದರೆ,ಅದಕ್ಕೆ ಪ್ರಧಾನ ಕಾರಣವೇ ಇದು..<br />
ನಮಗೆ ಹಿತವಾದುದೇ ಪ್ರಿಯವೆನಿಸತೊಡಗಿದರೆ ಮಾಯೆಯನ್ನು ಮೀರಿ ನಾವು ದೇವರೆತ್ತರಕ್ಕೆ ಬೆಳೆದುಬಿಡುವೆವಲ್ಲವೇ..!?</p>
<p>ಪ್ರಿಯ-ಹಿತಗಳು ಒಂದಾಗದಿರುವುದೇ ನಮ್ಮ ಸರ್ವಸಂಕಟಗಳ ಮೂಲ..!<br />
ಹಿತವು ಪ್ರಿಯವಾಗದಿರುವುದರಿಂದ ಸಂಪತ್ತುಗಳು ದೂರವಾದವು..!<br />
ಅಹಿತವು ಪ್ರಿಯವಾದಾಗ ಆಪತ್ತುಗಳು ಹತ್ತಿರವಾದವು..!<br />
ಸಕ್ಕರೆಕಾಯಿಲೆಯವನಿಗೆ ಸವಿಯು ಅಹಿತ, ಆದರದುವೇ ಪರಮಪ್ರಿಯ..!!<br />
ಔಷಧವು ಹಿತ, ಆದರದು ಅತ್ಯಂತ ಅಪ್ರಿಯ..!!</p>
<p>ಹಿತ-ಪ್ರಿಯಗಳೊಂದಾದ ಬದುಕು ಮುಕ್ತಿಗೆ ಸಮಾನ..!<br />
ಹಿತಪ್ರಿಯಗಳೊಂದಾದ ಸಾಮ್ರಾಜ್ಯ ಸ್ವರ್ಗಕ್ಕೆ ಮಿಗಿಲು..!<br />
ಆದರೆ ಇವೆರಡನ್ನೂ ಒಂದುಗೂಡಿಸುವುದು ಉತ್ತರ-ದಕ್ಷಿಣಗಳನ್ನು ಒಂದುಗೂಡಿಸುವಷ್ಟೇ &#8211; ಪ್ರಕೃತಿ-ಪರಮಾತ್ಮರನ್ನು ಒಂದುಗೂಡಿಸುವಷ್ಟೇ ಕಠಿಣ..<br />
ಒಂದು ಮನೆಯಲ್ಲಿ, ಹೆಚ್ಚೇಕೆ ? ಒಂದು ಮನದಲ್ಲಿ ಸಾಧಿಸಲು ಅಸಂಭವವೆನಿಸುವ ಈ ಕಾರ್ಯವನ್ನು ಒಂದು ರಾಜ್ಯದಲ್ಲಿ ಸಾಧಿಸಿದ್ದರು ಅಯೋಧ್ಯೆಯ ಅಮಾತ್ಯರು..!</p>
<p>ತನ್ನ ಕಾರ್ಯಸಾಧನೆಗಾಗಿ ಮತ್ತೊಬ್ಬನನ್ನು ಸಂತೋಷಪಡಿಸಬಯಸುವವನು &#8216;ಮಧುಪಾನ&#8217; ಮಾಡಿಸುತ್ತಾನೆ..<br />
ಇದು ಪ್ರಿಯ, ಆದರೆ ಹಿತವಲ್ಲ..<br />
ರೋಗಿಯೊಬ್ಬನನ್ನು ಆರೋಗ್ಯವಂತನನ್ನಾಗಿಸಲೆಳಸುವ ವೈದ್ಯನು ಕಹಿಯಾದ ಔಷಧವನ್ನು ಕುಡಿಸುತ್ತಾನೆ..<br />
ಇದು ಹಿತ, ಆದರೆ ಪ್ರಿಯವಲ್ಲ..<br />
ಮಗುವಿನ ಸಂತೋಷ- ಸ್ವಾಸ್ಥ್ಯಗಳೆರಡನ್ನೂ ಬಯಸುವ ತಾಯಿಯು ಔಷಧವನ್ನು ಜೇನಿನಲ್ಲಿ ಬೆರೆಸಿ ನೀಡುತ್ತಾಳೆ..<br />
ಇದು ಪ್ರಿಯ-ಹಿತಗಳ ಸಂಗಮ..</p>
<p>ಆಳುವವರ ಆದರ್ಶವಿದು..<br />
ಹಿತವುಂಟುಮಾಡುವೆನೆಂದು ಪ್ರಜೆಗಳನ್ನು ನೋಯಿಸಲೂಬಾರದು..<br />
ಸಂತೋಷಪಡಿಸುವ ಭರದಲ್ಲಿ ಅವರಿಗೆ ಅಂತಿಮವಾಗಿ ಅಹಿತವನ್ನೇ ಉಂಟುಮಾಡುವ ಉಪಕ್ರಮವನ್ನು ತೆಗೆದುಕೊಳ್ಳಲೂಬಾರದು..<br />
(ಅಧಿಕಾರವನ್ನು ಗಳಿಸಿಕೊಳ್ಳುವ, ಉಳಿಸಿಕೊಳ್ಳುವ, ಬೆಳೆಸಿಕೊಳ್ಳುವ, ಸ್ವಾರ್ಥ ಸಾಧನೆಗಾಗಿ ಜನರಿಗೆ ತತ್ಕಾಲಕ್ಕೆ ಪ್ರಿಯವಾಗುವ ಸಂಗತಿಗಳ ಸುರೆಯನ್ನು ಕುಡಿಸಿ ಶಾಶ್ವತವಾಗಿ ಕೇಡುಂಟುಮಾಡುವವರು ಇಂದಿನ ಮಂತ್ರಿಗಳು..)<br />
ಅಯೋಧ್ಯೆಯ ಮಂತ್ರಿಗಳು &#8220;ತಮ್ಮ ದೊರೆಗೆ, ದೇಶಕ್ಕೆ ಯಾವುದು ಪ್ರಿಯವಾದೀತು ? ಯಾವುದು ಹಿತವಾದೀತು ? ಯಾವುದು ಎರಡೂ ಆದೀತು..?&#8221; ಎಂಬುದನ್ನೇ ನಿತ್ಯವೂ ಚಿಂತಿಸುವವರಾಗಿದ್ದರು..<br />
ಅದನ್ನು ಸಾಧಿಸುವುದರಲ್ಲಿಯೇ ಆನಂದವನ್ನು ಕಾಣುವವರಾಗಿದ್ದರು..</p>
<address><strong><span style="color: #ff6600;">*ಸತತಂ ಪ್ರಿಯವಾದಿನಃ :</span></strong></address>
<p>ಪ್ರಿಯವಾದ ಸಂಗತಿಯನ್ನು ಪ್ರಿಯವಾಗುವಂತೆ ಹೇಳಬಲ್ಲವರು ಸಾಮಾನ್ಯರು..<br />
ಇಂಥವರಿಗೆ ದೇವರಿತ್ತ &#8216;ಮಾತು&#8217; ಸಾಧನ..<br />
ಪ್ರಿಯವನ್ನೂ ಅಪ್ರಿಯವಾಗುವಂತೆ ಹೇಳಿಬಿಡುವವರು ಅಧಮರು..<br />
ಇಂಥವರಿಗೆ ದೇವರಿತ್ತ &#8216;ಮಾತು&#8217; ಶಾಪ..!<br />
ಅಪ್ರಿಯವನ್ನೂ ಪ್ರಿಯವಾಗುವಂತೆ ಹೇಳುವ ಕಲೆ ಎಲ್ಲೋ ಕೆಲವರಿಗೆ ಮಾತ್ರವೇ ಸಿದ್ಧಿಸುವಂಥದು..<br />
ಇಂಥವರಿಗೆ ದೇವರಿತ್ತ &#8216;ಮಾತು&#8217; ವರ..!<br />
ತಮ್ಮ ಪ್ರಜೆಗಳನ್ನೂ, ಪ್ರಭುವನ್ನೂ ಬಹುವಾಗಿ ಪ್ರೀತಿಸುತ್ತಿದ್ದ ಅಷ್ಟಮಂತ್ರಿಗಳು ಎಲ್ಲಿಯೂ ಅವರಿಗೆ ನೋವಾಗದಂತೆ ಎಚ್ಚರ ವಹಿಸುತ್ತಿದ್ದರು..<br />
ಅಪ್ರಿಯಸತ್ಯಗಳನ್ನೂ ಪ್ರಿಯವಾಗುವಂತೆ ಹೇಳುವ ಮೂಲಕ ವಾಙ್ಮಯತಪಸ್ಸನ್ನೇ ಆಚರಿಸುತ್ತಿದ್ದರು..</p>
<address><strong><span style="color: #ff6600;">*ರಾಜಕೃತ್ಯೇಷು ನಿತ್ಯಶಃ ಅನುರಕ್ತಾಃ  :</span></strong></address>
<p>ಸರ್ವರೂ ಅವರವರ &#8216;ಕರ್ತವ್ಯ&#8217;ಗಳನ್ನು &#8216;ಕೃತ&#8217;ವಾಗಿಸಿದರೆ ಅದುವೇ ಅಲ್ಲವೇ &#8216;ಕೃತಯುಗ&#8217;..!?<br />
ಮತ್ತೆಲ್ಲಿ ಜಗತ್ತಿನಲ್ಲಿ ಸಮಸ್ಯೆ-ಸಂಕಟಗಳಿರಲು ಸಾಧ್ಯ..?<br />
ಆದರೆ ಹೆಚ್ಚಿನವರು ಮಾಡಬೇಕಾದುದೆಲ್ಲವನ್ನೂ ಮಾಡುವುದೇ ಇಲ್ಲ..<br />
ಮಾಡುವವರೂ ಅನೇಕರು &#8216;ಪ್ರೀತಿ&#8217;ಯಿಂದ ಮಾಡುವುದಿಲ್ಲ, ಪರಿಣಾಮಗಳ ಭೀತಿಯಿಂದ ಮಾಡುತ್ತಾರೆ..<br />
ಕರ್ತವ್ಯವನ್ನು ಪ್ರೀತಿಸುವವರು, ಆ ಪ್ರೀತಿಯನ್ನೇ ಕೃತಿಯಾಗಿಸುವವರು ಕೆಲವೇ ಕೆಲವರು..<br />
ಅಯೋಧ್ಯೆಯ ಮಂತ್ರಿಗಳಲ್ಲಿ ಅದನ್ನು ಕಂಡ ಋಷಿ ಉದ್ಗರಿಸಿದ್ದು ..<br />
&#8216;ಅನುರಕ್ತಾಃ ರಾಜಕೃತ್ಯೇಷು ನಿತ್ಯಶಃ&#8217;</p>
<address><strong><span style="color: #ff6600;">*ಪರಸ್ಪರಾನುರಕ್ತಾಃ  :</span></strong></address>
<p>ವ್ಯಕ್ತಿಗಳೇನಕವಾದಂತೆ ಮನಸ್ಸುಗಳೂ ಅನೇಕವಾಗುವುದು &#8216;ಪ್ರಕೃತಿ&#8217;<br />
ವಿಷಯವೊಂದರ ಕುರಿತಾಗಿ ಉಂಟಾಗುವ ವಿರೋಧವು ವ್ಯಕ್ತಿವಿರೋಧದಲ್ಲಿ ವಿಶ್ರಾಂತವಾಗುವುದು &#8216;ವಿಕೃತಿ&#8217;<br />
ಚರ್ಚೆಯಲ್ಲಿ ಹಲವಾಗುವ ಮನಗಳು ನಿರ್ಣಯದಲ್ಲಿ ಒಂದಾಗುವುದು &#8216; ಸಂಸ್ಕೃತಿ&#8217;<br />
ಈ ಸಂಸ್ಕೃತಿಯನ್ನು ಸಾಧ್ಯವಾಗಿಸುವುದು &#8216;ಪರಸ್ಪರಾನುರಕ್ತಿ&#8217;<br />
ಅನನ್ಯವಾದ ಅನ್ಯೋನ್ಯ ಪ್ರೀತಿಯು ದಶರಥನ ಅಷ್ಟ ಮಂತ್ರಿಗಳ ಅಷ್ಟಮನಗಳನ್ನು ಏಕಬುದ್ಧಿಯಲ್ಲಿ ಸಮ್ಮಿಲಿತಗೊಳಿಸಿತು..<br />
ರಾಜ್ಯಭಾರವನ್ನು ಸುಸೂತ್ರಗೊಳಿಸಿತು..</p>
<p>ಸಮಾನತೆಯು ಸಂಗಮಕ್ಕೆ ಹೇಗೆ ಕಾರಣವಾಗುತ್ತದೆಯೋ ಹಾಗೆಯೇ ಸಂಘರ್ಷಕ್ಕೂ ಕಾರಣವಾಗುವುದುಂಟು..<br />
ಬುದ್ಧಿವಂತರಲ್ಲಿ ಸ್ಪರ್ಧೆ..<br />
ಬಲವಂತರಲ್ಲಿ ಹೋರಾಟ..<br />
ರೂಪವಂತರಲ್ಲಿ ಅಸೂಯೆ..<br />
ಒಂದು ಗುಂಪಿನಲ್ಲಿ (ಜಾತಿ-ಕುಟುಂಬ-ಊರು)ನಾಯಕರಿಬ್ಬರು ಹುಟ್ಟಿದರೆ ಅಲ್ಲಿ ಸಂಘರ್ಷ ಕಟ್ಟಿಟ್ಟ ಬುತ್ತಿ..<br />
ಆದರೆ ಅಯೋಧ್ಯೆಯ ಮಂತ್ರಿಗಳು ಇದಕ್ಕೊಂದು ಅಪವಾದ..<br />
ಅವರ ನಡುವೆ ಸ್ಪರ್ಧೆ- ಸಂಘರ್ಷಗಳೇರ್ಪಡಲಿಲ್ಲ..<br />
ಬದಲಾಗಿ ಗಾಢವಾದ ಪರಸ್ಪರ ಪ್ರೀತಿಯೇರ್ಪಟ್ಟಿತು..<br />
(ತುಂಡು ಮಾಂಸಕ್ಕಾಗಿ ಕಚ್ಚಾಡುವ ನಾಯಿಗಳಂತೆ ಕ್ಷುಲ್ಲಕ ಲಾಭಕ್ಕಾಗಿ ನಿತ್ಯ ಕಿತ್ತಾಡುವ ಇಂದಿನ &#8220;ತಥಾಕಥಿತ ಮಂತ್ರಿಗಳು&#8221; ಶ್ರೀ ರಾಮಾಯಣದ ಈ ಭಾಗವನ್ನು ಒಮ್ಮೆ ಅವಲೋಕಿಸಬೇಕು.)</p>
<address><span style="color: #ff6600;"><strong>* ಸೌಹೃದೇಷು ಪರೀಕ್ಷಿತಾಃ  :</strong></span></address>
<p>ಬಲವಿದ್ದಲ್ಲಿ ಕಲಹವಿರುತ್ತದೆ..<br />
ಪ್ರೀತಿಯಿದ್ದಲ್ಲಿ ಪರೀಕ್ಷೆಯಿರುತ್ತದೆ..<br />
ಅದರಲ್ಲಿಯೂ ರಾಜನಾದವನು ಪರೀಕ್ಷಿಸದೇ ಯಾರನ್ನೂ ಪ್ರೀತಿಸಬಾರದು ..<br />
ಪ್ರೀತಿಸುವವರನ್ನೂ ಆಗಾಗ ಪರೀಕ್ಷಿಸದೇ ಇರಬಾರದು..<br />
ಪರೀಕ್ಷೆಗಳಿಗೆ ಅಳುಕಬೇಕಾಗಿಲ್ಲ..<br />
ಸಿದ್ಧತೆ ಸಮರ್ಪಕವಾಗಿದ್ದರೆ, ನಮ್ಮಲ್ಲಿ ಕೊರತೆಯಿಲ್ಲದಿದ್ದರೆ ಪರೀಕ್ಷೆಯೂ ಪದೋನ್ನತಿಯನ್ನೇ ತಂದುಕೊಡುತ್ತದೆ..<br />
ತನ್ನ ಮಂತ್ರಿಗಳ ಸೌಹೃದವೆಂಥದೆಂಬುದು ಗೊತ್ತಿದ್ದರೂ ದಶರಥನು ರಾಜಧರ್ಮದಂತೆ ಅವರನ್ನು ಹಲವು ಬಾರಿ ಪರೀಕ್ಷಿಸಿದನು..<br />
ಅವರೂ ಪ್ರತಿಯೊಂದು ಪರೀಕ್ಷೆಯಲ್ಲಿಯೂ ದೇಶ-ದೊರೆಗಳ ಹೃದಯದಲ್ಲಿ ಎತ್ತರೆತ್ತರ ಬೆಳೆದರು..</p>
<address><strong><span style="color: #ff6600;">* ಸ್ಮಿತಪೂರ್ವಾಭಿಭಾಷಿಣಃ  :</span></strong><br />
&#8220;ಮುಗುಳ್ನಗುವಿಲ್ಲದೆ ಮಾತಿಲ್ಲ&#8221;</address>
<p>ಬೀಜವು ಮೊಳಕೆಯೊಡೆದು ಮತ್ತೆ ಚಿಗುರುವಂತೆ..<br />
ಅಂತರಾಳದ ಆನಂದ ಬೀಜವು ಮೊದಲು ಮುಗುಳ್ನಗೆಯ ಮೊಳಕೆಯೊಡೆದು, ಮತ್ತೆ ಮಾತಿನ ಚಿಗುರಾಗುವಂತಿದ್ದರೆ ಅದೆಷ್ಟು ಸೊಗಸು..!</p>
<p>ನಾವು ಹಿಮಾಲಯವನ್ನು ತಲುಪುವ ಮೊದಲೇ ಹಿಮಾಲಯದ ತಂಪು ನಮ್ಮನ್ನು ತಲುಪುವಂತೆ, ರಾಮಾವತಾರವಾಗುವ ಮುನ್ನವೇ ಅಯೋಧ್ಯೆಯಲ್ಲಿ &#8220;ಪ್ರೇಮಾವತಾರ&#8221;ವಾಗಿದ್ದಿತು..!</p>
<p>॥ಹರೇ ರಾಮ॥</p>
]]></content:encoded>
			<wfw:commentRss>http://hareraama.in/blog/ramavatara-munna-premavatara/feed/</wfw:commentRss>
		<slash:comments>18</slash:comments>
		</item>
		<item>
		<title>ಅಲ್ಪವಿರಾಮ</title>
		<link>http://hareraama.in/blog/raama-blog/alpa-virama/</link>
		<comments>http://hareraama.in/blog/raama-blog/alpa-virama/#comments</comments>
		<pubDate>Thu, 25 Nov 2010 05:30:58 +0000</pubDate>
		<dc:creator>Sri Samsthana</dc:creator>
				<category><![CDATA[ರಾಮ]]></category>

		<guid isPermaLink="false">http://hareraama.in/?p=8206</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraama-blog%252Falpa-virama%252F&title=%E0%B2%85%E0%B2%B2%E0%B3%8D%E0%B2%AA%E0%B2%B5%E0%B2%BF%E0%B2%B0%E0%B2%BE%E0%B2%AE&desc=%E0%B2%85%E0%B2%A8%E0%B3%8D%E0%B2%AF%E0%B2%BE%E0%B2%A8%E0%B3%8D%E0%B2%AF+%E0%B2%95%E0%B2%BE%E0%B2%B0%E0%B2%A3%E0%B2%97%E0%B2%B3%E0%B2%BF%E0%B2%82%E0%B2%A6+%E0%B2%8E%E0%B2%B0%E0%B2%A1%E0%B3%81-%E0%B2%AE%E0%B3%82%E0%B2%B0%E0%B3%81+%E0%B2%B5%E0%B2%BE%E0%B2%B0%E0%B2%97%E0%B2%B3+%E0%B2%95%E0%B2%BE%E0%B2%B2+%27%E0%B2%B0%E0%B2%BE%E0%B2%AE%27+%E0%B2%AC%E0%B3%8D%E0%B2%B2%E0%B2%BE%E0%B2%97%E0%B3%8D+%E0%B2%B9%E0%B3%8A%E0%B2%B0%E0%B2%A4%E0%B2%B0%E0%B2%B2%E0%B3%81+%E0%B2%B8%E0%B2%BE%E0%B2%A7%E0%B3%8D%E0%B2%AF%E0%B2%B5%E0%B2%BE%E0%B2%97%E0%B3%81%E0%B2%A4%E0%B3%8D%E0%B2%A4%E0%B2%BF%E0%B2%B2&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>ಅನ್ಯಾನ್ಯ ಕಾರಣಗಳಿಂದ ಎರಡು-ಮೂರು ವಾರಗಳ ಕಾಲ &#8216;ರಾಮ&#8216; ಬ್ಲಾಗ್ ಹೊರತರಲು ಸಾಧ್ಯವಾಗುತ್ತಿಲ್ಲ..
ಈ ಸಮಯದಲ್ಲಿ ಶ್ರೀಮುಖದಲ್ಲಿ ಹೆಚ್ಚಿನ ಸಂವಹನವನ್ನು ನಿರೀಕ್ಷಿಸಿರಿ..
ಶೀಘ್ರದಲ್ಲಿ ರಾಮಕಥಾ ಪ್ರವಚನಮಾಲಿಕೆಯನ್ನು ಹಿಂದಿಯಲ್ಲಿ ನಿರೀಕ್ಷಿಸಿರಿ ..

]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraama-blog%252Falpa-virama%252F&title=%E0%B2%85%E0%B2%B2%E0%B3%8D%E0%B2%AA%E0%B2%B5%E0%B2%BF%E0%B2%B0%E0%B2%BE%E0%B2%AE&desc=%E0%B2%85%E0%B2%A8%E0%B3%8D%E0%B2%AF%E0%B2%BE%E0%B2%A8%E0%B3%8D%E0%B2%AF+%E0%B2%95%E0%B2%BE%E0%B2%B0%E0%B2%A3%E0%B2%97%E0%B2%B3%E0%B2%BF%E0%B2%82%E0%B2%A6+%E0%B2%8E%E0%B2%B0%E0%B2%A1%E0%B3%81-%E0%B2%AE%E0%B3%82%E0%B2%B0%E0%B3%81+%E0%B2%B5%E0%B2%BE%E0%B2%B0%E0%B2%97%E0%B2%B3+%E0%B2%95%E0%B2%BE%E0%B2%B2+%27%E0%B2%B0%E0%B2%BE%E0%B2%AE%27+%E0%B2%AC%E0%B3%8D%E0%B2%B2%E0%B2%BE%E0%B2%97%E0%B3%8D+%E0%B2%B9%E0%B3%8A%E0%B2%B0%E0%B2%A4%E0%B2%B0%E0%B2%B2%E0%B3%81+%E0%B2%B8%E0%B2%BE%E0%B2%A7%E0%B3%8D%E0%B2%AF%E0%B2%B5%E0%B2%BE%E0%B2%97%E0%B3%81%E0%B2%A4%E0%B3%8D%E0%B2%A4%E0%B2%BF%E0%B2%B2&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;">ಅನ್ಯಾನ್ಯ ಕಾರಣಗಳಿಂದ ಎರಡು-ಮೂರು ವಾರಗಳ ಕಾಲ &#8216;<strong>ರಾಮ</strong>&#8216; ಬ್ಲಾಗ್ ಹೊರತರಲು ಸಾಧ್ಯವಾಗುತ್ತಿಲ್ಲ..</p>
<div style="text-align: center;">ಈ ಸಮಯದಲ್ಲಿ <strong><a href="http://hareraama.in/category/articles/srimukha/">ಶ್ರೀಮುಖ</a></strong>ದಲ್ಲಿ ಹೆಚ್ಚಿನ ಸಂವಹನವನ್ನು ನಿರೀಕ್ಷಿಸಿರಿ..</div>
<p style="text-align: center;">ಶೀಘ್ರದಲ್ಲಿ ರಾಮಕಥಾ <strong><a href="http://hareraama.in/category/videos-audios/audio/">ಪ್ರವಚನ</a></strong>ಮಾಲಿಕೆಯನ್ನು ಹಿಂದಿಯಲ್ಲಿ ನಿರೀಕ್ಷಿಸಿರಿ ..</p>
<p style="text-align: center;">
]]></content:encoded>
			<wfw:commentRss>http://hareraama.in/blog/raama-blog/alpa-virama/feed/</wfw:commentRss>
		<slash:comments>10</slash:comments>
		</item>
		<item>
		<title>ಎಂಟು ಒಂದಾಯಿತು..ಕೊನೆಯೇ ಮೊದಲಾಯಿತು&#8230;!!</title>
		<link>http://hareraama.in/blog/raama-blog/entu-ondaayitu-koneye-modalaayitu/</link>
		<comments>http://hareraama.in/blog/raama-blog/entu-ondaayitu-koneye-modalaayitu/#comments</comments>
		<pubDate>Thu, 18 Nov 2010 13:50:36 +0000</pubDate>
		<dc:creator>Sri Samsthana</dc:creator>
				<category><![CDATA[ರಾಮ]]></category>

		<guid isPermaLink="false">http://hareraama.in/?p=8148</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraama-blog%252Fentu-ondaayitu-koneye-modalaayitu%252F&title=%E0%B2%8E%E0%B2%82%E0%B2%9F%E0%B3%81+%E0%B2%92%E0%B2%82%E0%B2%A6%E0%B2%BE%E0%B2%AF%E0%B2%BF%E0%B2%A4%E0%B3%81..%E0%B2%95%E0%B3%8A%E0%B2%A8%E0%B3%86%E0%B2%AF%E0%B3%87+%E0%B2%AE%E0%B3%8A%E0%B2%A6%E0%B2%B2%E0%B2%BE%E0%B2%AF%E0%B2%BF%E0%B2%A4%E0%B3%81...%21%21&desc=%7C%7C+%E0%B2%B9%E0%B2%B0%E0%B3%87+%E0%B2%B0%E0%B2%BE%E0%B2%AE+%7C%7C%0D%0A%0D%0A%E0%B2%A6%E0%B3%80%E0%B2%AA+%E0%B2%AC%E0%B3%86%E0%B2%B3%E0%B2%97%E0%B2%AC%E0%B3%87%E0%B2%95%E0%B3%81..%0D%0A%E0%B2%A6%E0%B3%80%E0%B2%AA+%E0%B2%AC%E0%B3%86%E0%B2%B3%E0%B2%97%E0%B2%AC%E0%B3%87%E0%B2%95%E0%B3%86%E0%B2%82%E0%B2%A6%E0%B2%B0%E0%B3%86+%E0%B2%AC%E0%B2%A4%E0%B3%8D%E0%B2%A4%E0%B2%BF%E0%B2%97%E0%B2%B3%E0%B3%81+%E0%B2%89%E0%B2%B0%E0%B2%BF%E0%B2%AF%E0%B2%AC%E0%B3%87%E0%B2%95%E0%B3%81..%0D%0A%E0%B2%A6%E0%B3%80%E0%B2%AA%E0%B2%B5%E0%B3%81+%E0%B2%A6%E0%B3%80%E0%B2%B0%E0%B3%8D%E0%B2%98%E0%B2&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>&#124;&#124; ಹರೇ ರಾಮ &#124;&#124;
ದೀಪ ಬೆಳಗಬೇಕು..
ದೀಪ ಬೆಳಗಬೇಕೆಂದರೆ ಬತ್ತಿಗಳು ಉರಿಯಬೇಕು..
ದೀಪವು ದೀರ್ಘಕಾಲ ಬೆಳಗಬೇಕೆಂದರೆ ಎಣ್ಣೆಯು ಸದ್ದಿಲ್ಲದೆಯೇ ಆತ್ಮಾರ್ಪಣೆ ಮಾಡಿಕೊಳ್ಳಬೇಕು..
ತಾನು ಆರಿ ದೀಪವನ್ನು ಉರಿಸಬೇಕು&#8230;
ತನ್ನ ಆಯುಸ್ಸನ್ನು ಜ್ಯೋತಿಗೆ ಧಾರೆಯೆರೆಯಬೇಕು..
ದೀಪದ ಧವಲಪ್ರಭೆಗಾಗಿ ದೀಪಪಾತ್ರವು ತನ್ನ ಮೈಯೆಲ್ಲವನ್ನೂ ಮಸಿಯಾಗಿಸಿಕೊಳ್ಳಬೇಕು..
ದೀಪವು ಪ್ರಜ್ವಲಿಸಿ ಪ್ರಕಟಗೊಂಡರೆ ಇವು ಕಂಡೂ ಕಾಣಿಸದವು..!!
ತಾವು ಮರೆಯಲ್ಲಿ ನಿಂತು ಸಕಲ ಕೈಂಕರ್ಯವನ್ನೂ ನಡೆಸಿ ದೀಪವನ್ನು ಮೆರೆಸಿದವು..
ದಶರಥನೆಂಬ ದೀಪವು ದೇದೀಪ್ಯಮಾನವಾಗಿ ಧರೆಯನ್ನು ಬೆಳಗಲು ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಆ ಕಾರಣಪುರುಷರನ್ನು &#8211; ತ್ಯಾಗಜೀವಿಗಳನ್ನು &#8211; ಎಲೆಮರೆಯ ಕಾಯಿಗಳನ್ನು ಇಲ್ಲಿ ಉಲ್ಲೇಖಿಸದಿರಲು ಸಾಧ್ಯವೇ ಇಲ್ಲ..!
ಅವರೇ [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraama-blog%252Fentu-ondaayitu-koneye-modalaayitu%252F&title=%E0%B2%8E%E0%B2%82%E0%B2%9F%E0%B3%81+%E0%B2%92%E0%B2%82%E0%B2%A6%E0%B2%BE%E0%B2%AF%E0%B2%BF%E0%B2%A4%E0%B3%81..%E0%B2%95%E0%B3%8A%E0%B2%A8%E0%B3%86%E0%B2%AF%E0%B3%87+%E0%B2%AE%E0%B3%8A%E0%B2%A6%E0%B2%B2%E0%B2%BE%E0%B2%AF%E0%B2%BF%E0%B2%A4%E0%B3%81...%21%21&desc=%7C%7C+%E0%B2%B9%E0%B2%B0%E0%B3%87+%E0%B2%B0%E0%B2%BE%E0%B2%AE+%7C%7C%0D%0A%0D%0A%E0%B2%A6%E0%B3%80%E0%B2%AA+%E0%B2%AC%E0%B3%86%E0%B2%B3%E0%B2%97%E0%B2%AC%E0%B3%87%E0%B2%95%E0%B3%81..%0D%0A%E0%B2%A6%E0%B3%80%E0%B2%AA+%E0%B2%AC%E0%B3%86%E0%B2%B3%E0%B2%97%E0%B2%AC%E0%B3%87%E0%B2%95%E0%B3%86%E0%B2%82%E0%B2%A6%E0%B2%B0%E0%B3%86+%E0%B2%AC%E0%B2%A4%E0%B3%8D%E0%B2%A4%E0%B2%BF%E0%B2%97%E0%B2%B3%E0%B3%81+%E0%B2%89%E0%B2%B0%E0%B2%BF%E0%B2%AF%E0%B2%AC%E0%B3%87%E0%B2%95%E0%B3%81..%0D%0A%E0%B2%A6%E0%B3%80%E0%B2%AA%E0%B2%B5%E0%B3%81+%E0%B2%A6%E0%B3%80%E0%B2%B0%E0%B3%8D%E0%B2%98%E0%B2&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p><strong>|| ಹರೇ ರಾಮ ||</strong></p>
<p>ದೀಪ ಬೆಳಗಬೇಕು..<br />
ದೀಪ ಬೆಳಗಬೇಕೆಂದರೆ ಬತ್ತಿಗಳು ಉರಿಯಬೇಕು..<br />
ದೀಪವು ದೀರ್ಘಕಾಲ ಬೆಳಗಬೇಕೆಂದರೆ ಎಣ್ಣೆಯು ಸದ್ದಿಲ್ಲದೆಯೇ ಆತ್ಮಾರ್ಪಣೆ ಮಾಡಿಕೊಳ್ಳಬೇಕು..<br />
ತಾನು ಆರಿ ದೀಪವನ್ನು ಉರಿಸಬೇಕು&#8230;<br />
ತನ್ನ ಆಯುಸ್ಸನ್ನು ಜ್ಯೋತಿಗೆ ಧಾರೆಯೆರೆಯಬೇಕು..<br />
ದೀಪದ ಧವಲಪ್ರಭೆಗಾಗಿ ದೀಪಪಾತ್ರವು ತನ್ನ ಮೈಯೆಲ್ಲವನ್ನೂ ಮಸಿಯಾಗಿಸಿಕೊಳ್ಳಬೇಕು..<br />
ದೀಪವು ಪ್ರಜ್ವಲಿಸಿ ಪ್ರಕಟಗೊಂಡರೆ ಇವು ಕಂಡೂ ಕಾಣಿಸದವು..!!<br />
ತಾವು ಮರೆಯಲ್ಲಿ ನಿಂತು ಸಕಲ ಕೈಂಕರ್ಯವನ್ನೂ ನಡೆಸಿ ದೀಪವನ್ನು ಮೆರೆಸಿದವು..<br />
ದಶರಥನೆಂಬ ದೀಪವು ದೇದೀಪ್ಯಮಾನವಾಗಿ ಧರೆಯನ್ನು ಬೆಳಗಲು ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಆ ಕಾರಣಪುರುಷರನ್ನು &#8211; ತ್ಯಾಗಜೀವಿಗಳನ್ನು &#8211; ಎಲೆಮರೆಯ ಕಾಯಿಗಳನ್ನು ಇಲ್ಲಿ ಉಲ್ಲೇಖಿಸದಿರಲು ಸಾಧ್ಯವೇ ಇಲ್ಲ..!<br />
ಅವರೇ ವೀರದಶರಥನ ವಿವೇಕೀ ಮಂತ್ರಿಗಳು..!</p>
<p>’<strong>ಮಂತ್ರಿಣಃ ಸಪ್ತ ವಾಷ್ಟೌ ವಾ ಪ್ರಕುರ್ವೀತ ಪರೀಕ್ಷಿತಾನ್</strong> ’<br />
&#8220;ಏಳು ಅಥವಾ ಎಂಟು ಸುಯೋಗ್ಯ ವ್ಯಕ್ತಿಗಳನ್ನು ಚೆನ್ನಾಗಿ ಪರೀಕ್ಷಿಸಿ ಮಂತ್ರಿಗಳನ್ನಾಗಿ ನೇಮಿಸಿಕೊಳ್ಳಬೇಕು&#8221;.. ಇದು ಮನುವಚನ..<br />
ಅದರಂತೆ ದಶರಥನ ಆಸ್ಥಾನದಲ್ಲಿ ಎಂಟು ಮಂತ್ರಿಗಳು..<br />
೧. <strong>ಧೃಷ್ಟಿ</strong><br />
೨. <strong>ಜಯಂತ</strong><br />
೩. <strong>ವಿಜಯ</strong><br />
೪. <strong>ಸಿದ್ಧಾರ್ಥ</strong><br />
೫. <strong>ಅರ್ಥಸಾಧಕ</strong><br />
೬. <strong>ಅಶೋಕ</strong><br />
೭. <strong>ಮಂತ್ರಪಾಲ</strong><br />
ಎಂಟನೆಯವನೇ ಸಾರಥ್ಯ- ಸಾಚಿವ್ಯಗಳನ್ನು ಜೊತೆಜೊತೆಗೇ ನಿರ್ವಹಿಸುತ್ತಿದ್ದ ’<strong>ಸುಮಂತ್ರ</strong>’..</p>
<p>ಶ್ರಮ-ವಿಶ್ರಮಗಳ ಪರಿವಿಲ್ಲದೆಯೇ, ಅನವರತವಾಗಿ ಧರಿತ್ರಿಯ ಭಾರವೆಲ್ಲವನ್ನೂ ಹೊರುವ ಅಷ್ಟದಿಗ್ಗಜಗಳನ್ನು ನೆನಪಿಸುವಂತಿದ್ದರು ಸಾಕೇತ ಸಾಮ್ರಾಜ್ಯದ ಸರ್ವಭಾರವನ್ನೂ ಹೊತ್ತು ನಡೆಸುತ್ತಿದ್ದ ದಶರಥನ ಅಷ್ಟ ಸಚಿವರು..<br />
ಮಂತ್ರಿಗಳಂಥವರಿದ್ದರೆ ’<strong>ದಶರಥ ರಾಜ್ಯ</strong>’ವೇನು,”<strong>ರಾಮರಾಜ್ಯ</strong>’ವೂ ಅಸುಕರವಲ್ಲ..!!</p>
<p>ಯೋಗ್ಯತೆ-ಯೋಗಗಳು ಜೊತೆಗಿರುವುದೇ ಸೊಗಸು..<br />
ಯೋಗ್ಯತೆಯಿದ್ದು ಯೋಗವಿಲ್ಲದಿದ್ದರೆ ಅದು ಅತೃಪ್ತಿ..<br />
ಯೋಗ್ಯತೆಯಿಲ್ಲದೆಯೇ ಬರುವ ಯೋಗ , ಅದು ನೆಮ್ಮದಿಯ ವಿಯೋಗ..!!<br />
ಅದು ಸಂಪತ್ತಿನ ವೇಷ ತೊಟ್ಟು ಬರುವ ಆಪತ್ತು..!!<br />
ಅದು ವ್ಯಕ್ತಿಗೆ ವಿನಾಶ&#8230; ಸಮಾಜಕ್ಕೆ ಕೇಡು..!!<br />
ಯೇನ ಕೇನ ಪ್ರಕಾರೇಣ ಖುರ್ಚಿಯನ್ನಾಶ್ರಯಿಸಬಯಸುವವರರಿಯದ ಸತ್ಯವಿದು..!!<br />
ಯೋಗ್ಯತೆಯೇ ಯೋಗವಾಗಿ ಪರಿಣಮಿಸಿದರೆ.. ಆತ್ಮಕಲ್ಯಾಣ.. ಲೋಕಕಲ್ಯಾಣ ಒಟ್ಟೊಟ್ಟಿಗೇ..!!<br />
ದಶರಥನ ಮಂತ್ರಿಗಳ ಯೋಗ್ಯತೆಯು ಕೋಸಲದ ಶುಭಯೋಗವಾಗಿ ಪರಿಣಮಿಸಿತು&#8230;<br />
ಆಯಾ ಪಾತ್ರಕ್ಕೆ ಬೇಕಾದ ವೇಷಭೂಷಣಗಳೊಂದಿಗೆ ಸಜ್ಜಾಗಿಯೇ ನಟನೊಬ್ಬ ರಂಗವನ್ನೇರುವಂತೆ, ಸಚಿವತ್ವಕ್ಕೆ ಬೇಕಾದ ಸಕಲ ಅರ್ಹತೆಗಳನ್ನೂ ಸಾಧನೆ ಮಾಡಿಯೇ ಆ ಸ್ಥಾನವನ್ನೇರಿದ್ದರವರು..</p>
<p>ಪ್ರಾಮಾಣಿಕತೆಯೇ ದುರ್ಲಭ..<br />
ಪ್ರಾಮಾಣಿಕರೆಲ್ಲ ಸಮರ್ಥರಲ್ಲ..<br />
ಪ್ರಾಮಾಣಿಕತೆ &#8211; ಸಾಮರ್ಥ್ಯಗಳೆರಡೂ ಇದ್ದವರು ವಿಧೇಯರಲ್ಲ..<br />
ಮೂರೂ ಕೂಡಿದರೆ ಪೂರ್ವ ಸುಕೃತವದು..<br />
ಅಂಥ ಸೇವಕರನ್ನು ಪಡೆಯಲು ಸ್ವಾಮಿಯೇ ಪುಣ್ಯ ಮಾಡಿರಬೇಕು..!!<br />
ಧನ್ಯ ದಶರಥ..!<br />
ಆತನ ಮಂತ್ರಿಗಳಂಥವರು&#8230;!</p>
<p>ಮಂತ್ರಿಯೆಂದರೆ ಮಂತ್ರಕ್ಕೊದಗುವವನು..<br />
ಮಂತ್ರವೆಂದರೆ ರಾಜ್ಯಹಿತದ ಗುಪ್ತಸಮಾಲೋಚನೆ..<br />
ಹಲವು ಪರಿಣತರ ಹಲವು ಬಗೆಯ ಚಿಂತನೆಗಳು ಹೊರಸೂಸಿ, ಕಲೆತು, ಮಥನವೇರ್ಪಟ್ಟು, ಹೊರಹೊಮ್ಮುವ ಸಮೀಚೀನವಾದ ನಿರ್ಣಯವದು..<br />
ವಸ್ತುವೊಂದನ್ನು ಸಮಗ್ರವಾಗಿ ತಿಳಿಯಲು ಒಂದು ದೃಷ್ಟಿ ಪರ್ಯಾಪ್ತವಲ್ಲ..<br />
ಹಿಂದೆ&#8230;.. ಮುಂದೆ&#8230;<br />
ಆಚೆ&#8230;.. ಈಚೆ&#8230;.<br />
ಮೇಲೆ&#8230;&#8230; ಕೆಳಗೆ&#8230;&#8230;<br />
ಒಳಗೆ&#8230;.. ಹೊರಗೆ&#8230;&#8230;.<br />
ಹೀಗೆ ಬಗೆ ಬಗೆಯ ನೋಟಗಳು ಕಲೆತು ಒಂದು ನೋಟವಾದಾಗಲೇ ವಸ್ತುವಿನ ಸಮಗ್ರದರ್ಶನವಾಗುವುದು..<br />
ಹಲವು ನದಿಗಳು ಸ್ವತಂತ್ರವಾದ ಅಸ್ತಿತ್ವದೊಡನೆ &#8211; ವ್ಯಕ್ತಿತ್ವದೊಡನೆ ಹರಿಯುತ್ತವೆ..<br />
ಕೊನೆಯಲ್ಲಿ ಸಾಗರದೊಡನೆ ಸಂಗಮಗೊಳ್ಳುತ್ತವೆ..<br />
ಸಮರಸವಾಗುತ್ತವೆ.. ಏಕರಸವಾಗುತ್ತವೆ..<br />
ಹಾಗೆಯೇ ಮಂತ್ರಾಲೋಚನೆಯಲ್ಲಿ ಹಲವರ ಹಲವು ಸ್ವತಂತ್ರ ಚಿಂತನೆಗಳು ಹರಿಯಬೇಕು..<br />
ಕೊನೆಗೊಂದು ಮಹಾನಿರ್ಣಯದಲ್ಲಿ ಸಮರಸವಾಗಿ ಸಮನ್ವಿತವಾಗಬೇಕು&#8230;</p>
<p>ಕಾಲಿಡುವಲ್ಲಿ ಮೊದಲು ಕಣ್ಣಿಡಬೇಕಲ್ಲವೇ..?<br />
’<strong>ದೃಷ್ಟಿಪೂತಂ ನ್ಯಸೇತ್ ಪಾದಂ</strong>’..<br />
ಕಣ್ಣೆಡವಿದರೆ ಮತ್ತೆ ಕಾಲೆಡುವುವುದು ಸ್ವಾಭಾವಿಕವಲ್ಲವೇ..?<br />
ಚೆನ್ನಾಗಿ ನೋಡಿಕೊಳ್ಳಬೇಕಾದುದನ್ನು ಮೊದಲು ಚೆನ್ನಾಗಿ ನೋಡಬೇಕಲ್ಲವೇ..?<br />
ಆ ಮುನ್ನೋಟವೇ &#8211; ಯಾವುದೇ ಕಾರ್ಯದ ಪೂರ್ವಾವಲೋಕನವೇ ’<strong>ಮಂತ್ರ</strong>’ ಅಥವಾ <strong>ಮಂತ್ರಾಲೋಚನೆ</strong>..</p>
<p><strong>ರಾಜ್ಯಭಾರಕ್ಕೆ</strong> <strong>ಮಂತ್ರವೇ</strong> <strong>ಮೂಲಾಧಾರ</strong>..</p>
<p>ಮಂತ್ರದ ಪರಿಚಯ ಬೇಕೇ..?<br />
ಮಂತ್ರಾಲೋಚನೆಯ ಪ್ರಾರಂಭ &#8211; ಪ್ರಯೋಗ &#8211; ಪರಿಣಾಮಗಳ ಬಗೆಗೆ ತಿಳಿದುಕೊಳ್ಳಬೇಕೆ..?<br />
ದಶರಥನ ಮಂತ್ರಿಗಳ ನಾಮಧೇಯಗಳನ್ನು ಒಮ್ಮೆ ಕೊನೆಯಿಂದ ಮೊದಲವರೆಗೆ ಅವಲೋಕಿಸಿದರೆ ಸಾಕು..!!</p>
<p>ಮಂತ್ರಗಳೆರಡು ಬಗೆ, &#8216;<strong>ಸುಮಂತ್ರ-ದುರ್ಮಂತ್ರ</strong>&#8216; ಎಂಬುದಾಗಿ..<br />
ತಪ್ಪು ಸಲಹೆಗಳು, ತಪ್ಪುದಾರಿಯಲ್ಲಿ ನಡೆಯುವ ಸಂವಾದ, ತತ್ಫಲವಾದ ತಪ್ಪು ನಿರ್ಣಯಗಳಿಂದ ಕೂಡಿದ ಮಂತ್ರಾಲೋಚನೆಯು ’ದುರ್ಮಂತ್ರ’..<br />
ಸೂಕ್ತ ಸಲಹೆಗಳು, ಸಮುಚಿತ ಸಂವಾದ, ಸಮರ್ಪಕ ನಿರ್ಣಯಗಳಿಂದ ಕೂಡಿದ ಮಂತ್ರಾಲೋಚನೆಯು ’ಸುಮಂತ್ರ’..</p>
<p>’<strong>ಷಟ್ಕರ್ಣೋ ಭಿದ್ಯತೇ ಮಂತ್ರಃ</strong>’..<br />
ಇಬ್ಬರ ನಡುವೆ ನಡೆಯುವ ಸಂಭಾಷಣೆಯು ಆರು ಕಿವಿಗಳನ್ನು , ಎಂದರೆ ಮೂರನೆಯ ವ್ಯಕ್ತಿಯನ್ನು ತಲುಪಲೇಬಾರದು..<br />
ತಲುಪಬಾರದಲ್ಲಿ ವಿಷಯಗಳು ತಲುಪಿದರೆ ಮೂಲಘಾತವೇ ಆದೀತು..!<br />
ಆದುದರಿಂದಲೇ ’ಸುಮಂತ್ರ’ ಎಷ್ಟು ಮುಖ್ಯವೋ, ಮಂತ್ರಾಲೋಚನೆಯ ಗೌಪ್ಯಪಾಲನೆಯೂ ಅಷ್ಟೇ ಮುಖ್ಯ..<br />
ಅದುವೇ ’<strong>ಮಂತ್ರಪಾಲ</strong>’</p>
<p>ಸಮಸ್ಯೆಗಳು ಬಂದು ಮುಸುಕಿದಾಗ, ಪರಿಹಾರ ತೋರದಾದಾಗ  ಶೋಕವು  ಮನುಷ್ಯನನ್ನು ಬಾಧಿಸುವುದುಂಟು..<br />
ಮುಂದೇನು ಮಾಡಬೇಕೆಂಬುದೇ ತಿಳಿಯದ ದಿಙ್ಮೂಢಾವಸ್ಥೆಯು ಆವರಿಸುವುದುಂಟು..<br />
ಆಗ ನಮ್ಮ ನೆರವಿಗೆ ಬರುವುದೇ ’ಮಂತ್ರ’<br />
ಆಪ್ತಸಮಾಲೋಚನೆಯಿಂದ ಮುಂದಿನ ದಾರಿ ನಮಗೆ ಸುಜ್ಞಾತವಾಗಬೇಕು..<br />
ಆದರೆ ಬೇರೆಯವರಿಗೆ ನಮ್ಮ ಮುಂದಿನ ಹೆಜ್ಜೆಯೇನೆಂಬುದು ಅಜ್ಞಾತವಾಗಿಯೇ ಇರಬೇಕು..<br />
ಹಾಗಾದಾಗ &#8211; ಸಮಾಲೋಚನೆಯ ’<strong>ಸುಮಂತ್ರಾವಸ್ಥೆ</strong>’ ಮತ್ತು ಗೌಪ್ಯ ರಕ್ಷಣೆಯ ’<strong>ಮಂತ್ರಪಾಲಾವಸ್ಥೆ</strong>’ಯ ನಂತರ ಮನಸ್ಸಿಗೆ ಬರುವ ನಿರಾಳ ಸ್ಥಿತಿಯೇ &#8211; ಕಾರ್ಯಧೈರ್ಯವೇ &#8216;<strong>ಅಶೋಕ</strong>&#8216;</p>
<p>ಮುಂದಿನದು ಅತ್ಯಂತ ಮುಖ್ಯವಾದ ಘಟ್ಟ..<br />
ಕಾರ್ಯಸಾಧನೆ&#8230;<br />
ಅಂತರಂಗದಲ್ಲಿ ಅನಾವರಣಗೊಂಡ ಯೋಜನೆಗಳೆಲ್ಲವೂ ಬಹಿರಂಗದಲ್ಲಿ ಒಂದಿನಿತೂ ವ್ಯತ್ಯಯವಿಲ್ಲದಂತೆ ಕ್ರಿಯಾನ್ವಯಗೊಳ್ಳಬೇಕು&#8230;<br />
’ವಿಚಾರ’ವು ’ಆಚಾರ’ಕ್ಕೆ ಬರಬೇಕು..<br />
ಅದು ’<strong>ಅರ್ಥಸಾಧಕ</strong>’..</p>
<p>ಮತ್ತೆ ಬರುವುದು ’ಕಾರ್ಯಸಿದ್ಧಿ’ಯ ಅವಸ್ಥೆ..<br />
ಯೋಜನೆ (ಪ್ಲಾನ್) ಸಮರ್ಪಕವಾಗಿದ್ದಾಗ, ಕ್ರಿಯಾನ್ವಯನ(ಎಕ್ಸಿಕ್ಯೂಷನ್)ದಲ್ಲಿ ತಪ್ಪುತಡೆಗಳಿಲ್ಲದಾಗ, ಬಂದೇಬರುವ ಸುಫಲವು ’<strong>ಸಿದ್ಧಾರ್ಥಾವಸ್ಥೆ</strong>’..</p>
<p>ಕಾರ್ಯಸಿದ್ಧಿಯ ಫಲವಾಗಿ ಉಂಟಾಗುವ ಪರಮೋತ್ಕರ್ಷವು ’<strong>ವಿಜಯ</strong>’..</p>
<p>ವಿಜಯವು ಮತ್ತೆ ಮತ್ತೆ ಪುನರಾವರ್ತನೆಯಾಗುತ್ತಿದ್ದರೆ ಅದು ’<strong>ಜಯಂತ</strong>’..<br />
ಬದುಕೆಂಬುದು ಪ್ರತಿಕ್ಷಣದ ಸವಾಲು..<br />
ಸಮುದ್ರದ ತೆರೆಗಳಿಗೆ ಹೇಗೆ ಸಮಾಪ್ತಿಯೆಂಬುದಿಲ್ಲವೋ ಹಾಗೆಯೇ ಜೀವನದ ಸಂಗ್ರಾಮಗಳಿಗೆ  ಸಮಾರೋಪವೆಂಬುದಿಲ್ಲ..<br />
ಮೇಲೆ ಹೇಳಿದ ವಿಧಾನಗಳಿಂದ ಬದುಕಿನಲ್ಲಿ ಮತ್ತೆ ಮತ್ತೆ ಬರುವ ಸವಾಲುಗಳನ್ನು ಮತ್ತೆ ಮತ್ತೆ ಮೀರಿ ನಿಲ್ಲುವ ಯಶೋಮಾಲಿಕೆಯ ಅವಸ್ಥೆಯೇ ’<strong>ಜಯಂತ</strong>’..</p>
<p>ಇವೆಲ್ಲವುಗಳ ಪರಿಪೂರ್ಣತೆಯು ’<strong>ಧೃಷ್ಟಿ</strong>’ಯಲ್ಲಿ..<br />
ಧೃಷ್ಟಿಯೆಂದರೆ ಪ್ರಾಗಲ್ಭ್ಯ &#8211; ಪರಿಪೂರ್ಣತೆ &#8230;<br />
ಕಾರ್ಯಪರಂಪರೆಯನ್ನೇ ಸಾಧನೆ ಮಾಡಿದ ಆತ್ಮವಿಶ್ವಾಸ..<br />
ಮೂಜಗವೇ ಇದಿರಾದರೂ ಗೆಲ್ಲುವೆನೆಂಬ ಧೈರ್ಯ..<br />
ಸಕಲ ಜಗತ್ತಿನ ಮಧ್ಯೆ ಸ್ವಾಭಿಮಾನದಿಂದ ತಲೆಯೆತ್ತಿ ನಡೆಯುವ ಪ್ರಗಲ್ಭ ಸ್ಥಿತಿ..!!<br />
<strong> </strong></p>
<p><strong>ಎಂಟಲ್ಲ&#8230;ಒಂದು..!</strong><br />
ಅಯೋಧ್ಯೆಯ ಸಚಿವರು ಎಂಟಾದರೂ ಎಂಟಲ್ಲ..<br />
ಒಂದೇ ವಿಕಾಸದ ಎಂಟು ಮೆಟ್ಟಿಲುಗಳು..<br />
<strong>ಕೊನೆಯು ಕೊನೆಯಲ್ಲ&#8230; ಅದುವೇ ಮೊದಲು..!!</strong></p>
<p>ಕೊನೆಯವನಾದ ಸುಮಂತ್ರನೇ ಮೊದಲಿಗನಾಗುವ ಚಿಂತನೆಯ ಈ ಪರಿಯನ್ನು ಅವಲೋಕಿಸಿದರೆ ಸಾಮಾನ್ಯರ ಹೋರಾಟವು ಎಲ್ಲಿ ಕೊನೆಗೊಳ್ಳುವುದೋ ಅಲ್ಲಿಯೇ ಈ ಸಾಧಕರ ಹೋರಾಟದ ಆರಂಭವೆಂಬುದು ಸ್ಫುಟವಾಗುವುದಿಲ್ಲವೇ..?</p>
<p>ದಶರಥನು ಅಯೋಧ್ಯೆಯ ಶಿರದಂತಿದ್ದರೆ.. ಶಿರದೊಳಗಿನ ಮಿದುಳಿನಂತಿದ್ದ ಆತನ ಮಂತ್ರಿಗಳ ಸಾಮರ್ಥ್ಯ ಕರ್ತವ್ಯಪರಾಯಣತೆಗಳಿಂದಾಗಿ-<br />
ಅವನಿಯ ಅಗಣಿತ ರಾಷ್ಟ್ರ ನಗರಗಳ ನಡುವೆ ಶಿರವೆತ್ತಿ ನಿಂತವು <strong>ಅಯೋಧ್ಯೆ- ಕೋಸಲಗಳು</strong>..!!</p>
<p style="text-align: center;">
<p style="text-align: center;"><strong>|| ಹರೇ ರಾಮ ||</strong></p>
]]></content:encoded>
			<wfw:commentRss>http://hareraama.in/blog/raama-blog/entu-ondaayitu-koneye-modalaayitu/feed/</wfw:commentRss>
		<slash:comments>30</slash:comments>
		</item>
		<item>
		<title>ದಶರಥರಾಜ್ಯ</title>
		<link>http://hareraama.in/blog/dasharatha-rajya/</link>
		<comments>http://hareraama.in/blog/dasharatha-rajya/#comments</comments>
		<pubDate>Thu, 11 Nov 2010 01:30:20 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>
		<category><![CDATA[sri]]></category>

		<guid isPermaLink="false">http://hareraama.in/?p=8058</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fdasharatha-rajya%252F&title=%E0%B2%A6%E0%B2%B6%E0%B2%B0%E0%B2%A5%E0%B2%B0%E0%B2%BE%E0%B2%9C%E0%B3%8D%E0%B2%AF&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%95%E0%B3%86%E0%B2%B2%E0%B2%B5%E0%B2%B0%E0%B2%A8%E0%B3%8D%E0%B2%A8%E0%B3%81+%E0%B2%B9%E0%B2%B2%E0%B2%B5%E0%B3%81+%E0%B2%95%E0%B2%BE%E0%B2%B2+%E0%B2%AE%E0%B3%86%E0%B2%9A%E0%B3%8D%E0%B2%9A%E0%B2%BF%E0%B2%B8%E0%B2%AC%E0%B2%B9%E0%B3%81%E0%B2%A6%E0%B3%81..%0D%0A%E0%B2%B9%E0%B2%B2%E0%B2%B5%E0%B2%B0%E0%B2%A8%E0%B3%8D%E0%B2%A8%E0%B3%81+%E0%B2%95%E0%B3%86%E0%B2%B2%E0%B2%B5%E0%B3%81+%E0%B2%95%E0%B2%BE%E0%B2%B2+%E0%B2%AE%E0%B3%86%E0%B2%9A%E0%B3%8D%E0%B2%9A%E0%B2%BF%E0%B2%B8%E0%B2%AC%E0%B2%B9%E0%B3%81%E0%B2&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>&#124;&#124; ಹರೇರಾಮ &#124;&#124;
ಕೆಲವರನ್ನು ಹಲವು ಕಾಲ ಮೆಚ್ಚಿಸಬಹುದು..
ಹಲವರನ್ನು ಕೆಲವು ಕಾಲ ಮೆಚ್ಚಿಸಬಹುದು..
ಬಹುಜನರನ್ನು ಬಹುಕಾಲ ಮೆಚ್ಚಿಸುವುದು ಬಲು ಕಠಿಣದ ಮಾತು..
ಆದರೆ ದಶರಥನಿಗಿದು ಕಠಿಣವೆನಿಸಲೇ ಇಲ್ಲ..
ನೀರಿನಲ್ಲಿ ಬೆರೆಸಿದ ಸಕ್ಕರೆ ಬಿಂದು- ಬಿಂದುವನ್ನೂ ಬಿಡದೆ ವ್ಯಾಪಿಸುವಂತೆ ದಶರಥನ ರಾಜ್ಯಭಾರ ಕೌಶಲದ ಸವಿಫಲ ವ್ಯಕ್ತಿ-ವ್ಯಕ್ತಿಗಳನ್ನೂ ತಲುಪಿತು&#8230;
ಸೂರ್ಯನು ಒಂದು ಬಾರಿಗೆ ಭೂಮಿಯ ಒಂದು ಪಾರ್ಶ್ವವನ್ನು ಮಾತ್ರವೇ ಬೆಳಗುತ್ತಾನೆ..
ಆದರೆ ಆತನ ವಂಶದಲ್ಲಿ ಪ್ರಾದುರ್ಭವಿಸಿದ ದಶರಥನು ಭುವಿಯ ಬದುಕಿನ ಎರಡು ಪಾರ್ಶ್ವಗಳನ್ನೂ ಬೆಳಗಿದನು..
ಪುರ-ಜನಪದಗಳು ಭುವಿಯ ಬದುಕಿನ ಎರಡು ಪಾರ್ಶ್ವಗಳು..
ಪುರವೆಂದರೆ ನಗರ : ಅಲ್ಲಿ ವಾಸಿಸುವವರು &#8216;ಪೌರರು&#8216;
ಜನಪದವೆಂದರೆ ಹಳ್ಳಿಗಳು: [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fdasharatha-rajya%252F&title=%E0%B2%A6%E0%B2%B6%E0%B2%B0%E0%B2%A5%E0%B2%B0%E0%B2%BE%E0%B2%9C%E0%B3%8D%E0%B2%AF&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%95%E0%B3%86%E0%B2%B2%E0%B2%B5%E0%B2%B0%E0%B2%A8%E0%B3%8D%E0%B2%A8%E0%B3%81+%E0%B2%B9%E0%B2%B2%E0%B2%B5%E0%B3%81+%E0%B2%95%E0%B2%BE%E0%B2%B2+%E0%B2%AE%E0%B3%86%E0%B2%9A%E0%B3%8D%E0%B2%9A%E0%B2%BF%E0%B2%B8%E0%B2%AC%E0%B2%B9%E0%B3%81%E0%B2%A6%E0%B3%81..%0D%0A%E0%B2%B9%E0%B2%B2%E0%B2%B5%E0%B2%B0%E0%B2%A8%E0%B3%8D%E0%B2%A8%E0%B3%81+%E0%B2%95%E0%B3%86%E0%B2%B2%E0%B2%B5%E0%B3%81+%E0%B2%95%E0%B2%BE%E0%B2%B2+%E0%B2%AE%E0%B3%86%E0%B2%9A%E0%B3%8D%E0%B2%9A%E0%B2%BF%E0%B2%B8%E0%B2%AC%E0%B2%B9%E0%B3%81%E0%B2&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;"><strong>|| ಹರೇರಾಮ ||</strong></p>
<p style="text-align: center;">ಕೆಲವರನ್ನು ಹಲವು ಕಾಲ ಮೆಚ್ಚಿಸಬಹುದು..<br />
ಹಲವರನ್ನು ಕೆಲವು ಕಾಲ ಮೆಚ್ಚಿಸಬಹುದು..<br />
ಬಹುಜನರನ್ನು ಬಹುಕಾಲ ಮೆಚ್ಚಿಸುವುದು ಬಲು ಕಠಿಣದ ಮಾತು..<br />
ಆದರೆ ದಶರಥನಿಗಿದು ಕಠಿಣವೆನಿಸಲೇ ಇಲ್ಲ..<br />
ನೀರಿನಲ್ಲಿ ಬೆರೆಸಿದ ಸಕ್ಕರೆ ಬಿಂದು- ಬಿಂದುವನ್ನೂ ಬಿಡದೆ ವ್ಯಾಪಿಸುವಂತೆ ದಶರಥನ ರಾಜ್ಯಭಾರ ಕೌಶಲದ ಸವಿಫಲ ವ್ಯಕ್ತಿ-ವ್ಯಕ್ತಿಗಳನ್ನೂ ತಲುಪಿತು&#8230;</p>
<p style="text-align: center;">ಸೂರ್ಯನು ಒಂದು ಬಾರಿಗೆ ಭೂಮಿಯ ಒಂದು ಪಾರ್ಶ್ವವನ್ನು ಮಾತ್ರವೇ ಬೆಳಗುತ್ತಾನೆ..<br />
ಆದರೆ ಆತನ ವಂಶದಲ್ಲಿ ಪ್ರಾದುರ್ಭವಿಸಿದ ದಶರಥನು ಭುವಿಯ ಬದುಕಿನ ಎರಡು ಪಾರ್ಶ್ವಗಳನ್ನೂ ಬೆಳಗಿದನು..<br />
ಪುರ-ಜನಪದಗಳು ಭುವಿಯ ಬದುಕಿನ ಎರಡು ಪಾರ್ಶ್ವಗಳು..<br />
ಪುರವೆಂದರೆ ನಗರ : ಅಲ್ಲಿ ವಾಸಿಸುವವರು &#8216;<strong>ಪೌರರು</strong>&#8216;<br />
ಜನಪದವೆಂದರೆ ಹಳ್ಳಿಗಳು: ಅಲ್ಲಿ ಬದುಕುವವರು &#8216;<strong>ಜಾನಪದರು</strong>&#8216;<br />
ಈ ಎರಡೂ ಬಗೆಯ ಪ್ರಜೆಗಳೂ ದಶರಥನ ಆಳ್ವಿಕೆಯಲ್ಲಿ ಸಮಾನವಾಗಿ ಸುಖಿಸಿದರು..<br />
ಪರಿಣಾಮವಾಗಿ ದಶರಥನು &#8216; <strong>ಪೌರ- ಜಾನಪದಪ್ರಿಯ</strong>&#8216;ನೆನಿಸಿದನು..</p>
<p style="text-align: center;">ಗ್ರಾಮ ಜೀವನವು ಕಾನನ ಸುಮದಂತೆ..<br />
ಸಹಜ ಸೌಂದರ್ಯವದರದ್ದು..<br />
ನಗರ ಜೀವನವು ಸ್ವರ್ಣಾಭರಣದಂತೆ..<br />
ಸಂಸ್ಕಾರಜ ಸೌಂದರ್ಯವದರದ್ದು..<br />
ಪ್ರಕೃತಿಗೆ ಹಳ್ಳಿಗಳು ಹತ್ತಿರ..<br />
ನಗರಗಳು ಸಂಸ್ಕೃತಿಗೆ  ಸಮೀಪ..<br />
ಅದಾಗ ತಾನೇ ಜನಿಸಿದ ಶಿಶುವು &#8216;ನಿರಾಭರಣವಾಗಿದ್ದರೂ, ನಿರ್ವಸ್ತ್ರವಾಗಿದ್ದರೂ&#8217; ಅದೆಷ್ಟು ಸುಂದರ&#8230;!<br />
<strong> ಆ ಚೆಲುವು ಪ್ರಕೃತಿ..</strong><br />
ಅದೇ ಶಿಶುವು ತರುಣ-ತರುಣಿಯಾಗಿ ಬೆಳೆದಾಗಲೂ ಸುಂದರವೇ..<br />
ನಖ-ಶಿಖೆಗಳ ಒಪ್ಪ..<br />
ಬಟ್ಟೆ-ಬರೆಗಳ ಓರಣ..<br />
ತನುವೊಪ್ಪುವ ಆಭರಣ..<br />
<strong> ಆ ಚೆಲುವು ಸಂಸ್ಕೃತಿ..</strong><br />
ಬದುಕಿನ ಚೆಲುವಿಗೆ ಪ್ರಕೃತಿ-ಸಂಸ್ಕೃತಿಗಳೆರಡೂ ಬೇಕು..<br />
<strong>ಬೇಡದುದು &#8216;ವಿಕೃತಿ&#8217; ಮಾತ್ರ</strong>..<br />
ಪ್ರಕೃತಿ-ಸಂಸ್ಕೃತಿಗಳ ಸಾಮರಸ್ಯ ಕೆಟ್ಟರೆ ಅದುವೇ &#8216;ವಿಕೃತಿ&#8217;&#8230;</p>
<p style="text-align: center;">ದಶರಥ ಸಾಧಿಸಿದ್ದು ಪ್ರಕೃತಿ-ಸಂಸ್ಕೃತಿಗಳ ಸಾಮರಸ್ಯವನ್ನು..<br />
ಗ್ರಾಮ-ನಗರಗಳ ಸಮತೋಲನದ ಸಮರಸ-ಸಮಾಜ ಜೀವನವನ್ನು..</p>
<p style="text-align: center;"><strong>ರಾಜನೆಂದರೆ ರಾಜ್ಯದ ಕಣ್ಣು..</strong><br />
ಹಾಗೆಂದ ಮೇಲೆ ರಾಜನ ಕಣ್ಣು ಹೇಗಿರಬೇಕು..?<br />
ತನ್ನ ರಾಜ್ಯದ ಸಮಸ್ತ ಜೀವಗಳನ್ನೂ- ಸಮಸ್ತ ಪ್ರಕೃತಿಯನ್ನೂ-ಸಮಸ್ತ ವ್ಯವಸ್ಥೆಗಳನ್ನೂ ಚೆನ್ನಾಗಿ ನೋಡಿಕೊಳ್ಳುವುದು ರಾಜನ ಹೊಣೆ..<br />
ಯಾವುದನ್ನಾದರೂ ಚೆನ್ನಾಗಿ ನೋಡಿಕೊಳ್ಳಬೇಕೆಂದರೆ ಮೊದಲು ಚೆನ್ನಾಗಿ &#8216;ನೋಡಬೇಕಲ್ಲವೇ&#8217;..?</p>
<p style="text-align: center;">ಪ್ರತ್ಯಕ್ಷವನ್ನು ನೋಡಬಹುದು&#8230;.<br />
ಪರೋಕ್ಷವನ್ನು&#8230;?<br />
ಪರೋಕ್ಷವನ್ನು ನೋಡಲು ರಾಜನಾಗಬೇಕು &#8216;<strong>ಚಾರಚಕ್ಷು</strong>&#8216;..<br />
ವರ್ತಮಾನವನ್ನು ಬರಿಗಣ್ಣಿನಿಂದ ನೋಡಬಹುದು..<br />
ಭವಿಷ್ಯತ್ತನ್ನು&#8230;?<br />
ಭವಿಷ್ಯತ್ತನ್ನು ನೋಡಲು ರಾಜನಾಗಬೇಕು &#8216;<strong>ದೀರ್ಘಚಕ್ಷು</strong>&#8216;..</p>
<p style="text-align: center;">ತನ್ನ ವ್ಯವಸ್ಥೆಯಲ್ಲಿರಬಹುದಾದ ಕೊರತೆಗಳನ್ನು ರಾಜನು ಬರಿಗಣ್ಣಿನಿಂದ ನೋಡುವುದು ಬಲುಕಠಿಣ..<br />
ಏಕೆಂದರೆ ರಾಜನು ಎದುರು ಬರುವಾಗ ತಾನಾಗಿ ಕೊರತೆಗಳು ಮರೆಯಾಗಿರುತ್ತವೆ..<br />
ಸುವ್ಯವಸ್ಥೆ ಪ್ರಕಟವಾಗಿರುತ್ತದೆ..<br />
ಆದರೆ ರಾಜನು ಒಮ್ಮೆ ಮರೆಯಾಗುತ್ತಿದ್ದಂತೆ ಪುನಃ ಮೊದಲಿನ ಅವ್ಯವಸ್ಥೆಗಳೇ ಪ್ರಕಟವಾಗಿಬಿಡುತ್ತವೆ..<br />
<em> (ಇಂದೂ ಪ್ರಧಾನಮಂತ್ರಿಗಳೋ, ರಾಷ್ಟ್ರಪತಿಗಳೋ ಬರುವರೆಂದರೆ ಒಮ್ಮೆಲೇ ರಸ್ತೆಗಳೆಲ್ಲಾ ಸರಿಯಾಗಿಬಿಡುವಂತೆ..)</em></p>
<p style="text-align: center;">ಹಾಗೆಯೇ ಪ್ರಜೆಗಳ ಒಡಲಾಳದ ಧ್ವನಿಯನ್ನು ರಾಜನು ಬರಿಗಿವಿಯಿಂದ ಕೇಳಲೂ ಸಾಧ್ಯವಿಲ್ಲ..<br />
ರಾಜದರ್ಬಾರಿನ ವಾತಾವರಣದ ಪ್ರಖರತೆಗೆ ಆ ಧ್ವನಿಗಳು ನಡುಗಿ-ಅಡಗಿ ಅವ್ಯಕ್ತವಾಗಿಬಿಡಬಹುದು..<br />
ತಾನಾಗಿ ತಿಳಿಯದ ಈ ಬಗೆಯ ಸಂಗತಿಗಳನ್ನು ರಾಜನು ತಾನಾಗಿಯೇ ತಿಳಿದುಕೊಂಡು ಪ್ರತಿಕ್ರಿಯಿಸಬೇಕಾಗುತ್ತದೆ..</p>
<p style="text-align: center;">ದಶರಥನ ಬಳಿ ಸಮರ್ಥರಾದ &#8211; ವಿಶ್ವಸ್ತರಾದ ಚಾರರಿದ್ದರು..<br />
ಅವರನ್ನೇ ಕಣ್ಣಾಗಿಸಿಕೊಂಡು ರಾಜ್ಯದ ಮೂಲೆ-ಮೂಲೆಗಳನ್ನೂ ಆತ ನೋಡುತ್ತಿದ್ದನು..<br />
ಅವರನ್ನೇ ಕಿವಿಯಾಗಿಸಿಕೊಂಡು ಪ್ರಜೆಗಳ ಹೃದಯಧ್ವನಿಯನ್ನು ಆಲಿಸುತ್ತಿದ್ದನು..</p>
<p style="text-align: center;"><strong>&#8216;ದೀರ್ಘಂ ಪಶ್ಯತ, ಮಾ ಹ್ರಸ್ವಂ&#8217;</strong><br />
(ದೀರ್ಘದೃಷ್ಟಿಗಳಾಗಿ, ಹ್ರಸ್ವದೃಷ್ಟಿಗಳಾಗಬೇಡಿ..!<br />
ದೂರದೃಷ್ಟಿಗಳಾಗಿ, ಅಲ್ಪದೃಷ್ಟಿಗಳಾಗಬೇಡಿ..!)</p>
<p style="text-align: center;">ಜೀವಲೋಕಕ್ಕೆ ಭಗವಾನ್ ವಸಿಷ್ಠರ ಸಂದೇಶವಿದು..<br />
ದೀರ್ಘ ಭವಿಷ್ಯತ್ತನ್ನು ಅವಲೋಕಿಸದೇ ಕಾರ್ಯವೆಸಗುವವನು ಸದಾಕಾಲ ಕಟ್ಟಿದ್ದನ್ನು ಕೆಡವುದರಲ್ಲಿ, ಕೆಡವಿದ್ದನ್ನು ಕಟ್ಟುವುದರಲ್ಲಿ ಆಯುಸ್ಸನ್ನು ಕಳೆಯಬೇಕಾಗುತ್ತದೆ..<br />
ದೀರ್ಘದೃಷ್ಟಿಯಿಲ್ಲದವನು ಮಾಡಿದ ಕಾರ್ಯಗಳು, ಕಟ್ಟಿದ ಸಾಮ್ರಾಜ್ಯಗಳು ಕಾಲಬಾಧಿತವಾಗುತ್ತವೆ..<br />
ಭವಿಷ್ಯ್ತತ್ತಿನಲ್ಲಿ ಅಪ್ರಸ್ತುತವಾಗುತ್ತವೆ&#8230;</p>
<p style="text-align: center;"><strong>ಹರಸುವುದದೇನ ನೀ, ವರವದೇನೆಂದರಿವೆ<br />
ಸರಿಯಿಂದು ತೋರುವುದು ನಾಳೆ ಸರಿಯಿಹುದೇ ?<br />
ನಿರುಕಿಸುವುದೆಂತು ಚಿರಕಾಲದೊಳ್ಳಿತನಿಂದು<br />
ಅರಿವ ದೈವವೆ ಪೊರೆಗೆ-ಮಂಕುತಿಮ್ಮ ||</strong></p>
<p style="text-align: center;">ಇದು ಸಾಮಾನ್ಯ ದೃಷ್ಟಿಯ ಪಾಡು..<br />
ವಸಿಷ್ಠರ ಅನುಗ್ರಹ ದೃಷ್ಟಿಗೆ ಪಾತ್ರವಾದ ದಶರಥನ ದೃಷ್ಟಿಯು ದೀರ್ಘಕ್ಕೆ ವಿಸ್ತರಿಸಿತು..<br />
ದೂರಗಾಮಿಯಾಯಿತು..</p>
<p style="text-align: center;">ಇಂದಿನ ಕಾಲಕ್ಕೂ, ಮುಂದಿನ ಕಾಲಕ್ಕೂ, ಚಿರಕಾಲಕ್ಕೂ &#8216;ಯಾವುದು ಒಳ್ಳಿತು&#8217; ಎಂಬುದನ್ನು ನಿರುಕಿಸಬಲ್ಲವನಾಗಿದ್ದ ದಶರಥನನ್ನು ಬಲ್ಲವರು &#8216;<strong>ದೀರ್ಘಚಕ್ಷು</strong>&#8216;ವೆಂದು ಪ್ರಶಂಸಿಸಿದರು..</p>
<p style="text-align: center;">&#8216; ಎಲ್ಲರನ್ನೂ, ಎಲ್ಲವನ್ನೂ ಗೆಲ್ಲಬೇಕು&#8217; ಇದು ರಾಜಧರ್ಮ..<br />
ದಶರಥನು ತನ್ನ ಸ್ನೇಹ-ಸದ್ಗುಣಗಳಿದ ಹಲವರ ಮನಗೆದ್ದನು..<br />
ಸ್ನೇಹದ ಭಾಷೆ ಅರ್ಥವಾಗದ ಕೆಲವರನ್ನು ಬಲ-ಪರಾಕ್ರಮಗಳಿಂದ ಮಣಿಸಿ, ವಿನೀತ ಸಾಮಂತರನ್ನಾಗಿಸಿದನು..<br />
ಕೆಲವರನ್ನು ಭಾವಬಲದಿಂದ, ಇನ್ನು ಕೆಲವರನ್ನು ಬಾಹುಬಲದಿಂದ..<br />
ಕೆಲವರನ್ನು ಪ್ರೇಮದಿಂದ,ಇನ್ನು ಕೆಲವರನ್ನು ಸಂಗ್ರಾಮದಿಂದ..<br />
ವಶಪಡಿಸಿಕೊಂಡನು ರಾಜಾ ದಶರಥ..!</p>
<p style="text-align: center;">ಪರಿಣಾಮವಾಗಿ..<br />
&#8216;<strong>ಎಲ್ಲರೂ ಜೊತೆಯಲ್ಲಿ, ಇದಿರಾರೂ ಇಲ್ಲ&#8217;..<br />
&#8216;ಮಿತ್ರರುಂಟು, ಶತ್ರುಗಳಿಲ್ಲ&#8217;</strong><br />
ಎನ್ನುವ ಅತ್ಯಂತ ಹಿತಕರವಾದ ವಾತಾವರಣವು ಅಲ್ಲಿ ಸೃಷ್ಟಿಯಾಯಿತು..!</p>
<p style="text-align: center;">ತನ್ನ ಅಭಿನಯ-ನರ್ತನಗಳಿಂದ ರಂಗ ಮತ್ತು ಪ್ರೇಕ್ಷಕರ ಅಂತರಂಗಗಳೆರಡನ್ನೂ ಆಳುವನಲ್ಲವೇ ಮಹಾನಟನು..?<br />
ಘಂಟೆ-ಘಂಟೆಗಳ ಕಾಲ ತಮ್ಮ ಹೃದಯ-ನಯನಗಳನ್ನು ಆತನಿಗೆ ಸಮರ್ಪಿಸುವ ಸಹೃದಯರು ಪ್ರತಿಯಾಗಿ ಪಡೆಯುವುದಾದರೂ ಏನನ್ನು..?<br />
ತತ್ಕಾಲಕ್ಕೊಂದು <strong>&#8216;ಸಂತೋಷ&#8217;</strong><br />
ಜೀವಮಾನಕ್ಕೊಂದು<strong> &#8216;ಸಂದೇಶ&#8217;</strong><br />
ಪ್ರಿಯ-ಹಿತಗಳೆರಡನ್ನೂ ಹದವಾಗಿ ಒಂದರೊಳಗೊಂದನ್ನು ಬೆರೆಸಿ ನೀಡುವನವನು..<br />
ಸಂದೇಶವಿಲ್ಲದ ಸಂತೋಷ ಬದುಕಿನ ದಿಕ್ಕು ತಪ್ಪಿಸೀತು..!<br />
ಸಂತೋಷವಿಲ್ಲದ ಸಂದೇಶ ಬರಿಸಪ್ಪೆಯೆನಿಸೀತು..!</p>
<p style="text-align: center;">ತನ್ನ ಮುದ್ದು ಮಗುವಿಗಾಗಿ ಅಡುಗೆ ಸಿದ್ಧಪಡಿಸುವ ತಾಯಿಯು ಸ್ವಾದ-ಸ್ವಾಸ್ಥ್ಯಗಳೆರಡನ್ನೂ ಗಮನಿಸುವಳಲ್ಲವೇ ..?<br />
ಸ್ವಾದವಿಲ್ಲದಿದ್ದರೆ ಮಗು ಸ್ವೀಕರಿಸದಿದ್ದೀತು..<br />
ಸ್ವಾಸ್ಥ್ಯಕರವಲ್ಲದಿದ್ದರೆ ಸ್ವೀಕರಿಸಿಯೂ ಅನರ್ಥವಾದೀತು..!</p>
<p style="text-align: center;">ದಶರಥನ ರಾಜ್ಯಭಾರವಂತು..<br />
ಆತ <strong>ಪ್ರಜಾರಂಜಕ</strong>ನೂ ಅಹುದು..<br />
<strong> ಪ್ರಜಾಪಾಲಕ</strong>ನೂ ಅಹುದು..<br />
ಪ್ರಜೆಗಳನ್ನು ರಂಜಿಸುವಾಗ ಧರ್ಮವನ್ನು ಮರೆಯಲಿಲ್ಲ..<br />
ಪ್ರಜೆಗಳನ್ನು ಪಾಲಿಸುವಾಗ ಅವರ ಸಂತೋಷವನ್ನು ಅಲಕ್ಷಿಸಲಿಲ್ಲ..<br />
ಪ್ರಿಯ-ಹಿತಗಳೆರಡರ ಸಮನ್ವಯದ ಸಂತುಷ್ಟ-ಸತ್ಯನಿಷ್ಠ ಸಮಾಜವನ್ನು ಸಾಧಿಸಿದನಾತ..</p>
<p style="text-align: center;">
<div id="_mcePaste" style="text-align: center;">(ಯೇನ-ಕೇನ ಪ್ರಕಾರೇಣ ಜನರ ಮೆಚ್ಚಿಸಲೆಳಸುವ..</div>
<div id="_mcePaste" style="text-align: center;">ಪ್ರಕೃತದಲ್ಲಿ ಸುಖದ ಭ್ರಮೆಯನ್ನು ತೋರಿ, ಪರಿಣಾಮದಲ್ಲಿ ಸಮಾಜವನ್ನು ಘೋರವಿಪತ್ತಿಗೆ ದೂಡುವ ಇಂದಿನ ನಾಯಕರನ್ನು ನೆನೆಸಿಕೊಂಡರೆ&#8230;)</div>
<p style="text-align: center;">ಕಾಲಕಳೆದಂತೆ ಗುಣ-ಶೋಭೆಗಳೂ ಕಳೆಯುವುದುಂಟು..<br />
ವಸ್ತು ಹಳೆಯದಾಗುವುದುಂಟು..<br />
ಕಳಾಹೀನವಾಗುವುದುಂಟು..<br />
ಸ್ಥಿತ ವೈಭವವು ಗತವೈಭವವಾಗುವುದುಂಟು..</p>
<p style="text-align: center;">ಆದರೆ ಸೂರ್ಯ ಮಾಸಲುಂಟೇ..?<br />
ಲಕ್ಷ-ಕೋಟಿವರ್ಷಗಳು ಕಳೆದರೂ ಇಂದಿಗೂ ಕುಂದದ ಪ್ರಭೆಯಿಂದ ಲೋಕವನ್ನು ಬೆಳಗುವನವನು..<br />
ಅಂತೆಯೇ ಅವನ ವಂಶವೂ..</p>
<p style="text-align: center;">ಅಂದಿನ ಅಯೋಧ್ಯಾವಾಸಿಗಳದೇನು ಅದೃಷ್ಟವಂತರೋ..?<br />
ಮೊದಲ ಮಹಾರಾಜನಾದ ಮನುವು ಅದಾವ ಮಮತೆಯಿಂದ ಅಯೋಧ್ಯೆಯನ್ನು ಪಾಲಿಸಿದ್ದನೋ,<br />
ಮೂವತ್ತನಾಲ್ಕು ತಲೆಗಳ ನಂತರ ಸಿಂಹಾಸನದಲ್ಲಿ ಮಂಡಿಸಿದ್ದ ದಶರಥನೂ ಅದೇ ಮಮತೆಯಿಂದ-ಕುಶಲತೆಯಿಂದ ಅಯೋಧ್ಯೆಯನ್ನೂ-ಅಯೋಧ್ಯೆಯ ದ್ವಾರಾ ವಿಶ್ವವನ್ನೂ  ಪಾಲಿಸಿದನು..</p>
<p style="text-align: center;">ದಶರಥನು ಅನವರತವಾಗಿ ನೆರವೇರಿಸಿದ ಯಜ್ಞಗಳಿಂದ ಸುಪ್ರೀತರಾದ ದೇವತೆಗಳು ಸುರಿಸಿದ ಅಮೃತವೃಷ್ಟಿಯು ಭುವಿಯನ್ನು ತಂಪಾಗಿಟ್ಟಿತು..<br />
ಅಂತರಂಗದ ಒಳಮನೆಯಲ್ಲಿ ಅನವರತವಾಗಿ ಆತ ನಡೆಸಿದ ಆತ್ಮಸಾಧನೆಯ ಫಲವಾಗಿ ಜಾಗೃತಗೊಂಡು, ಸರ್ವೇಂದ್ರಿಯಗಳ ಮೂಲಕ ಹೊರಹೊಮ್ಮಿದ ಅಂತಸ್ಥ ಚೇತನದ ಕಿರಣಗಳು ಭುವಿಯನ್ನು ಬೆಳಗಿದವು..</p>
<p style="text-align: center;">ದಶರಥನ ಕೀರ್ತಿಲತೆಯು ಕ್ರಮಕ್ರಮವಾಗಿ ಪಾತಾಳದ ಆಳದಲ್ಲಿ ಬೇರು ಬಿಟ್ಟಿತು..<br />
ಭುವಿಯಗಲ ವಿಸ್ತರಿಸಿತು..<br />
ಮುಗಿಲು ಮುತ್ತಿಕ್ಕಿತು..<br />
ತ್ರಿಲೋಕ ವಿಖ್ಯಾತನೆನಿಸಿದನಾತ..!</p>
<p style="text-align: center;"><strong>ಸತ್ಯಸಂಧನಾಗಿ, ಧರ್ಮನಿಷ್ಠನಾಗಿ ದಶರಥನು ರಾಜ್ಯಭಾರವನ್ನು ನಡೆಸುತ್ತಿರಲು..<br />
ಅಯೋಧ್ಯೆಯು ಅಮರಾವತಿಯೊಡನೆ, ಕೋಸಲವು ಸ್ವರ್ಗದೊಡನೆ ಸ್ಪರ್ಧಿಸಿದವು..<br />
ದಶರಥನು ದೇವತೆಗಳ ದೊರೆಗೆ ಮಿಗಿಲೆನಿಸಿದನು..</strong></p>
<p style="text-align: right;"><em><br />
</em></p>
<p style="text-align: center;">
<p style="text-align: center;"><strong>|| ಹರೇರಾಮ ||</strong></p>
]]></content:encoded>
			<wfw:commentRss>http://hareraama.in/blog/dasharatha-rajya/feed/</wfw:commentRss>
		<slash:comments>59</slash:comments>
		</item>
		<item>
		<title>ವಿಶ್ವಕೊಳಿತಾಗಲಿ..ಆರಂಭ ತನ್ನಿಂದಲೇ!</title>
		<link>http://hareraama.in/blog/vishwa-olitagali-arambha-tanninda/</link>
		<comments>http://hareraama.in/blog/vishwa-olitagali-arambha-tanninda/#comments</comments>
		<pubDate>Thu, 04 Nov 2010 00:30:51 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಮ]]></category>
		<category><![CDATA[bharati]]></category>
		<category><![CDATA[raghaveshwara]]></category>
		<category><![CDATA[sri]]></category>

		<guid isPermaLink="false">http://hareraama.in/?p=7997</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fvishwa-olitagali-arambha-tanninda%252F&title=%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8A%E0%B2%B3%E0%B2%BF%E0%B2%A4%E0%B2%BE%E0%B2%97%E0%B2%B2%E0%B2%BF..%E0%B2%86%E0%B2%B0%E0%B2%82%E0%B2%AD+%E0%B2%A4%E0%B2%A8%E0%B3%8D%E0%B2%A8%E0%B2%BF%E0%B2%82%E0%B2%A6%E0%B2%B2%E0%B3%87%21&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%22%E0%B2%89%E0%B2%A6%E0%B3%8D%E0%B2%A7%E0%B2%B0%E0%B2%BF%E0%B2%B8%E0%B3%81%E0%B2%B5%E0%B3%86%E0%B2%A8%E0%B3%81+%E0%B2%9C%E0%B2%97%E0%B2%B5%E0%B2%A8%E0%B3%86%E0%B2%A8%E0%B3%8D%E0%B2%A8%E0%B3%81%E0%B2%A4%E0%B2%BF%E0%B2%B9+%E0%B2%B8%E0%B2%96%E0%B2%A8%E0%B3%86+%E0%B2%A8%E0%B2%BF%E0%B2%A8%E0%B3%8D%E0%B2%A8%E0%B3%81%E0%B2%A6%E0%B3%8D%E0%B2%A7%E0%B2%BE%E0%B2%B0%E0%B2%B5%E0%B3%86%E0%B2%B7%E0%B3%8D%E0%B2%9F%E0%B2%BE%E0%B2%AF%E0%B3%8D%E0%B2%A4%E0%B3%8B+%3F%22%0D%0A%E0%B2%B2%E0%B3%8B%E0%B2%95%E0%B2%B5%E0%B2%A8%E0%B3%8D&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>&#124;&#124; ಹರೇರಾಮ &#124;&#124;
&#8220;ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೋ ?&#8221;
ಲೋಕವನ್ನು ಸುಧಾರಿಸಬಯಸುವವನು ಆ ಪ್ರಕ್ರಿಯೆಯನ್ನು ತನ್ನಿಂದಲೇ ಪ್ರಾರಂಭಿಸಬೇಕು..
ನಮ್ಮ ಪಾಲಿನ ಲೋಕದ ದ್ವಾರಗಳೆಂದರೆ ನಮ್ಮ ಶರೀರ-ಮನಸ್ಸುಗಳು ; ನಮ್ಮ ವ್ಯಕ್ತಿತ್ವ- ಬದುಕುಗಳು..
ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುವುದು, ನಮಗೆ ಸ್ಪಂದಿಸುವುದು ಇವುಗಳ ಮೂಲಕವಾಗಿಯೇ&#8230;!
ಇವುಗಳನ್ನು ಚೆನ್ನಾಗಿಟ್ಟುಕೊಳ್ಳದವನ ಪಾಲಿಗೆ ಜಗತ್ತು ಚೆನ್ನಾಗಿರಲು ಸಾಧ್ಯವೇ ಇಲ್ಲ..
ಮನೆ ಸುಧಾರಿಸಿದರೆ ಊರು ಸುಧಾರಿಸುವ ಪ್ರಯತ್ನಕ್ಕೆ ಶಕ್ತಿ ಬಂದೀತು..!
ಊರು ಸುಧಾರಿಸುವ ಪ್ರಯತ್ನ ಸಂಪೂರ್ಣ ಸಫಲವಾಗದಿದ್ದರೂ, ಕೊನೆಯ ಪಕ್ಷ ಊರಿನ ಒಂದಂಶವನ್ನು ಸುಧಾರಿಸಿದ ಸಾರ್ಥಕತೆಯುಳಿದೀತು..!
ಈ ಬಗೆಯ ಭಾವಗಳು ದಶರಥನ ಹೃದಯದಲ್ಲಿ ಮತ್ತೆ [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fvishwa-olitagali-arambha-tanninda%252F&title=%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8A%E0%B2%B3%E0%B2%BF%E0%B2%A4%E0%B2%BE%E0%B2%97%E0%B2%B2%E0%B2%BF..%E0%B2%86%E0%B2%B0%E0%B2%82%E0%B2%AD+%E0%B2%A4%E0%B2%A8%E0%B3%8D%E0%B2%A8%E0%B2%BF%E0%B2%82%E0%B2%A6%E0%B2%B2%E0%B3%87%21&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%22%E0%B2%89%E0%B2%A6%E0%B3%8D%E0%B2%A7%E0%B2%B0%E0%B2%BF%E0%B2%B8%E0%B3%81%E0%B2%B5%E0%B3%86%E0%B2%A8%E0%B3%81+%E0%B2%9C%E0%B2%97%E0%B2%B5%E0%B2%A8%E0%B3%86%E0%B2%A8%E0%B3%8D%E0%B2%A8%E0%B3%81%E0%B2%A4%E0%B2%BF%E0%B2%B9+%E0%B2%B8%E0%B2%96%E0%B2%A8%E0%B3%86+%E0%B2%A8%E0%B2%BF%E0%B2%A8%E0%B3%8D%E0%B2%A8%E0%B3%81%E0%B2%A6%E0%B3%8D%E0%B2%A7%E0%B2%BE%E0%B2%B0%E0%B2%B5%E0%B3%86%E0%B2%B7%E0%B3%8D%E0%B2%9F%E0%B2%BE%E0%B2%AF%E0%B3%8D%E0%B2%A4%E0%B3%8B+%3F%22%0D%0A%E0%B2%B2%E0%B3%8B%E0%B2%95%E0%B2%B5%E0%B2%A8%E0%B3%8D&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;">|| ಹರೇರಾಮ ||</p>
<p style="text-align: center;"><strong>&#8220;ಉದ್ಧರಿಸುವೆನು ಜಗವನೆನ್ನುತಿಹ ಸಖನೆ ನಿನ್ನುದ್ಧಾರವೆಷ್ಟಾಯ್ತೋ ?&#8221;</strong></p>
<p style="text-align: center;">ಲೋಕವನ್ನು ಸುಧಾರಿಸಬಯಸುವವನು ಆ ಪ್ರಕ್ರಿಯೆಯನ್ನು ತನ್ನಿಂದಲೇ ಪ್ರಾರಂಭಿಸಬೇಕು..<br />
ನಮ್ಮ ಪಾಲಿನ ಲೋಕದ ದ್ವಾರಗಳೆಂದರೆ ನಮ್ಮ ಶರೀರ-ಮನಸ್ಸುಗಳು ; ನಮ್ಮ ವ್ಯಕ್ತಿತ್ವ- ಬದುಕುಗಳು..<br />
ಜಗತ್ತು ನಮ್ಮ ಮುಂದೆ ತೆರೆದುಕೊಳ್ಳುವುದು, ನಮಗೆ ಸ್ಪಂದಿಸುವುದು ಇವುಗಳ ಮೂಲಕವಾಗಿಯೇ&#8230;!<br />
ಇವುಗಳನ್ನು ಚೆನ್ನಾಗಿಟ್ಟುಕೊಳ್ಳದವನ ಪಾಲಿಗೆ ಜಗತ್ತು ಚೆನ್ನಾಗಿರಲು ಸಾಧ್ಯವೇ ಇಲ್ಲ..<br />
ಮನೆ ಸುಧಾರಿಸಿದರೆ ಊರು ಸುಧಾರಿಸುವ ಪ್ರಯತ್ನಕ್ಕೆ ಶಕ್ತಿ ಬಂದೀತು..!<br />
ಊರು ಸುಧಾರಿಸುವ ಪ್ರಯತ್ನ ಸಂಪೂರ್ಣ ಸಫಲವಾಗದಿದ್ದರೂ, ಕೊನೆಯ ಪಕ್ಷ ಊರಿನ ಒಂದಂಶವನ್ನು ಸುಧಾರಿಸಿದ ಸಾರ್ಥಕತೆಯುಳಿದೀತು..!</p>
<p style="text-align: center;">ಈ ಬಗೆಯ ಭಾವಗಳು ದಶರಥನ ಹೃದಯದಲ್ಲಿ ಮತ್ತೆ ಮತ್ತೆ ಆಡಿರಬೇಕು..<br />
ತನ್ನ ರಾಜ್ಯದಲ್ಲಿ ತಾನೇನು ಕಾಣಬಯಸಿದನೋ ಅದನ್ನು ತನ್ನೊಳಗೆ ತಂದುಕೊಳ್ಳಲೆಳಸಿದನಾತ..<br />
ಪರಿಣಾಮವಾಗಿ ಆತನ ಸಹಜ ಸಾಮಥ್ಯ೯-ಸುಗುಣಗಳು ವಿಕಸಿತಗೊಂಡವು..<br />
&#8216;ಅಭ್ಯಾಸಜ&#8217;ವಾದವು ಅಭ್ಯಾಗತರಂತೆ ಬಂದು ಆತನ ವ್ಯಕ್ತಿತ್ವವನ್ನಲಂಕರಿಸಿದವು&#8230;</p>
<p style="text-align: center;"><strong>ಲಕ್ಷ ಜನರನ್ನು ಆಳಬಯಸುವವನು ಲಕ್ಷ ಜನರ ಸಾಮರ್ಥ್ಯ- ಕೌಶಲಗಳನ್ನು ಸ್ವತಃ ತಾನು ಹೊಂದಿರಬೇಕಾಗುತ್ತದೆ..</strong><br />
ಹಾಗಿಲ್ಲದಿದ್ದರೆ ಆಳುವವನು ಅಳುವವನಾಗಿಬಿಡುತ್ತಾನೆ..!<br />
ಕ್ಷತ್ರಿಯ ರಾಜನೊಬ್ಬನಲ್ಲಿ ಮುಖ್ಯವಾಗಿ ಇರಬೇಕಾದ ಗುಣವೇ &#8216;ಪರಾಕ್ರಮ&#8217;</p>
<p style="text-align: center;"><span style="color: #0000ff;">&#8220;ಏಕೋ ದಶಸಹಸ್ರಾಣಿ ಯೋಧಯೇದ್ಯಸ್ತು  ಧನ್ವಿನಾಂ |<br />
ಶಸ್ತ್ರಶಾಸ್ತ್ರಪ್ರವೀಣಶ್ಚ ಸ ವೈ ಪ್ರೋಕ್ತೋ ಮಹಾರಥಃ ||<br />
ಅಮಿತಾನ್ಯೋಧಯೇದ್ಯಸ್ತು ಸಂಪ್ರೋಕ್ತೋ ಅತಿರಥಃ ಸ್ಮೃತಃ |<br />
ರಥಸ್ತ್ವೇಕೆನ  ಯೋದ್ಧಾ ಸ್ಯಾತ್ ತನ್ನ್ಯೂನೋ ಅರ್ಧರಥಃ ಸ್ಮೃತಃ ||&#8221;</span></p>
<p style="text-align: center;">ತನ್ನನ್ನು, ತನ್ನ ರಥವನ್ನು, ಸಾರಥಿಯನ್ನು, ಕುದುರೆಗಳನ್ನೂ ರಕ್ಷಿಸಿಕೊಂಡು ಪ್ರತಿವೀರನೊಬ್ಬನೊಡನೆ ವೀರತೆಯಿಂದ ಹೋರಾಡಬಲ್ಲವನು &#8216;<strong>ರಥ&#8217;</strong>..<br />
ತನ್ನನ್ನು, ತನ್ನ ರಥವನ್ನು, ಸಾರಥಿಯನ್ನು, ಕುದುರೆಗಳನ್ನೂ ರಕ್ಷಿಸಿಕೊಂಡು ೧೦,೦೦೦ ರಥರೊಡನೆ ಕೆಚ್ಚೆದೆಯಿಂದ ಕಾದಾಡಬಲ್ಲವನು<strong> &#8216;ಮಹಾರಥ&#8217;</strong>..<br />
ತನ್ನನ್ನು, ತನ್ನ ರಥವನ್ನು, ಸಾರಥಿಯನ್ನು, ಕುದುರೆಗಳನ್ನೂ ರಕ್ಷಿಸಿಕೊಳ್ಳುತ್ತಾ, ರಣಾಂಗಣದಲ್ಲಿ ಅಸಂಖ್ಯ ಸಂಖ್ಯೆಯ ಮಹಾರಥರನ್ನು  ಏಕಾಂಗಿಯಾಗಿ ಹಿಮ್ಮೆಟ್ಟಿಸಬಲ್ಲ ಮಹಾವೀರನೇ <strong>&#8216;ಅತಿರಥ&#8217;</strong>..<br />
ಅಂದು ಭುವಿಯನ್ನಲಂಕರಿಸಿದ್ದ ಕ್ಷತ್ರಿಯವೀರರ ಮಧ್ಯದಲ್ಲಿ ತನ್ನ ಯುದ್ಧ ಕೌಶಲದಿಂದಲೇ &#8216;ಅತಿರಥ&#8217;ನೆನಿಸಿಕೊಂಡಿದ್ದನು <strong>ದಶರಥ</strong>..</p>
<p style="text-align: center;">(ಅಂದು ಯುದ್ಧದ ನಿರ್ಣಯವನ್ನು ಕೈಗೊಳ್ಳುತ್ತಿದ್ದ ನಾಯಕನು ಸ್ವಯಂ ಮುಂಚೂಣಿಯಲ್ಲಿ ನಿಂತು ಕಾದಾಡುತ್ತಿದ್ದ..<br />
ತನ್ನವರನ್ನು ರಕ್ಷಿಸುವಲ್ಲಿ ಅಗತ್ಯಬಿದ್ದರೆ ರಣದಲ್ಲಿ ಪ್ರಾಣವನ್ನೂ ನೀಡುತ್ತಿದ್ದ..<br />
<strong>ಇಂದಿನ ನಮ್ಮ ನಾಯಕರು</strong>&#8230;&#8230;??)</p>
<p style="text-align: center;">ದೇವರಲ್ಲಿ &#8216;ಸಂಪತ್ತು &#8211; ಸಾಮರ್ಥ್ಯಗಳನ್ನು ಕೊಡು&#8217; ಎಂದು ಬೇಡಿದರೆ ಸಾಲದು..<br />
&#8216;ನೀ ಕೊಟ್ಟದ್ದನ್ನು ಸದುಪಯೋಗ ಮಾಡುವ ಬುದ್ಧಿ-ಅವಕಾಶಗಳನ್ನು ಕೊಡು&#8217; ಎಂದೂ ಜೊತೆಯಲ್ಲಿ ಕೇಳಬೇಕು..<br />
ದೇವರ ವರವನ್ನು ಸದ್ವಿನಿಯೋಗ ಮಾಡದಿದ್ದರೆ ಅದು &#8216;ವ್ಯರ್ಥ&#8217;..<br />
ದುರ್ವಿನಿಯೋಗ ಮಾಡಿದರೆ ಅದು &#8216;ಅನರ್ಥ&#8217;..<br />
ಅಷ್ಟು ಮಾತ್ರವಲ್ಲ, ಕೊಟ್ಟವನ ಕೋಪಕ್ಕೂ ಗುರಿಯಾಗಬೇಕಾದೀತು..!</p>
<p style="text-align: center;">ಸರ್ವಶಕ್ತನು ತನಗಿತ್ತ ಶಕ್ತಿಯನ್ನು ಸಾರ್ಥಕಪಡಿಸಿದನು ದಶರಥ..<br />
ತನ್ನ ಬದುಕಿನುದ್ದಕ್ಕೂ ಸತ್ಯಕ್ಕಾಗಿಯೇ ಸಮರಗಳನ್ನು ನಡೆಸಿ &#8216;ಸತ್ಯಪರಾಕ್ರಮ&#8217;ನೆನಿಸಿದನವನು..<br />
ಪ್ರಖರ ಸೂರ್ಯನು ತನ್ನ ಪ್ರತಾಪದಿಂದ ಕತ್ತಲ ಕೂಟವನ್ನೇ ಧ್ವಂಸಗೊಳಿಸುವಂತೆ -<br />
ತನ್ನ ಪ್ರತಾಪದಿಂದ ಹಲವು ಲೋಕಕಂಟಕರನ್ನೂ, ಧರ್ಮಕಂಟಕರನ್ನೂ ಬಡಿದೋಡಿಸಿದ ದಶರಥನನ್ನು ಲೋಕವು &#8216;ಪ್ರತಾಪಹತಕಂಟಕ&#8217;ನೆಂದು ಕೊಂಡಾಡಿತು..<br />
ರಣಕಣದಲ್ಲಿ ಇದಿರಾದ ಯಾವ ಶತ್ರುವೂ ದಶರಥನಿಗೆ ಸರಿ-ಮಿಗಿಲೆನಿಸಲಿಲ್ಲ..<br />
ಜಯಸಿರಿಯು ಆತನನ್ನೆಂದೂ ತೊರೆಯಲೇ ಇಲ್ಲ..</p>
<p style="text-align: center;">ಬಾಹ್ಯಬಲವು ದೇಹವಾದರೆ ಅದರಲ್ಲಿ ಜೀವ ತುಂಬುವುದು ಆಂತರವಾದ ಜ್ಞಾನಬಲ..<br />
ಶಕ್ತಿಯಿದ್ದರೆ ಸಾಕೇ?<br />
ದಿಕ್ಕೂ ಬೇಡವೇ..?<br />
ವಾಯುವೇಗದಲ್ಲಿ ಓಡುವ ವಾಹನದಲ್ಲಿ ಕುಶಲ ಸಾರಥಿಯಿರಬೇಡವೇ..?<br />
ಸಕಲ ಸುಖ ಸಾಮಗ್ರಿಗಳಿದ್ದೂ ಅಲ್ಲಿ ಬೆಳಕೇ ಇಲ್ಲದಿದ್ದರೆ ಏನು ಪ್ರಯೋಜನ..?<br />
ಬದುಕೆಂಬ ಕೋಣೆಯಲ್ಲಿ ಬೆಳಕೇ ಅರಿವು..<br />
ಅದು ಧಾರಾಳವಾಗಿದ್ದಿತು ದಶರಥನಲ್ಲಿ..<br />
ವೇದ-ವೇದಾಂಗಗಳ, ಶಾಸ್ತ್ರ-ಪುರಾಣಗಳ, ಸಂಗೀತ-ಸಾಹಿತ್ಯಗಳ, ಬಗೆಬಗೆಯ ವಿದ್ಯೆ-ಕಲೆಗಳ ಸಾರವು ಸನ್ನಿಹಿತವಾಗಿದ್ದಿತು ಆತನ ಬುದ್ಧಿ-ಹೃದಯಗಳಲ್ಲಿ..<br />
ಆದುದರಿಂದಲೇ ಆತನ ಆಶ್ರಯದಲ್ಲಿ ವೀರವರರು-ವೇದವಿದರು ಬಹುಸಂಖ್ಯೆಯಲ್ಲಿ ಬೆಳೆದರು..<br />
ತನ್ನಲ್ಲಿ ತುಂಬಿ ತುಳುಕುವ ಬಲ -ಪರಾಕ್ರಮಗಳಿಂದ, ಜ್ಞಾನ -ವಿಜ್ಞಾನಗಳಿಂದ ಅವರೆಲ್ಲರಿಗೂ ಮೇಲ್ಪಂಕ್ತಿಯಾದನಾತ..</p>
<p style="text-align: center;">ಪೂರ್ಣತೆಯೆಂಬುದು ಬದುಕಿನ ಪರಮಗುರಿ..<br />
ಧರ್ಮವು ಪೂರ್ಣತೆಯೆಡೆಗೆ ನಮ್ಮನ್ನು ಕರೆದೊಯ್ಯುವ ದಾರಿ..<br />
ಜ್ಞಾನವು ಪೂರ್ಣತೆಯ ದಾರಿಯನ್ನು ಬೆಳಗುವ ಬೆಳಕು..<br />
<strong> ಮೂರೂ ಸೇರಿದರೆ ಬದುಕು &#8216;ಪ್ರಯಾಗ&#8217;..</strong><br />
<strong> ಹಾಗಿಲ್ಲದಿದ್ದರೆ ಅದು &#8230;&#8230;&#8230;.&#8217;ಪ್ರಯಾಸ&#8217;..</strong><br />
ಧರ್ಮದ ಮಾರ್ಗದಲ್ಲಿ&#8230;<br />
ಜ್ಞಾನದ ಬೆಳಕಿನಲ್ಲಿ..<br />
ಪೂರ್ಣತೆಯ ಗಮ್ಯದೆಡೆಗೆ ಮುನ್ನಡೆದಿತ್ತು ದಶರಥನ ಜೀವರಥ..!!</p>
<p style="text-align: center;">ಸರಿಯಾದ ದಾರಿಯೇ &#8216;ಧರ್ಮ&#8217;..<br />
ದಾರಿ ತಪ್ಪಿದರೆ ಅದು &#8216;ಅಧರ್ಮ&#8217;..<br />
ಇಂದ್ರಿಯಗಳೆಂಬ ಕುದುರೆಗಳು, ಮನವೆಂಬ ಸಾರಥಿ ದಾರಿ ತಪ್ಪದಂತೆ ಜಾಗೃತನಾಗಿ (ಅಧರ್ಮಂ ಪರಿವರ್ಜಯನ್) ಅವುಗಳ ಮೇಲೆ ನಿಯಂತ್ರಣ ಸಾಧಿಸಿದುದರಿಂದ ಬಲ್ಲವರು ಅವನನ್ನು &#8216;ವಿಜಿತೇಂದ್ರಿಯ, ವಶೀ&#8217; ಎಂದು ಕರೆದರು..</p>
<p style="text-align: center;">ದಶರಥನೋ &#8216; ಧರ್ಮರತ&#8217;<br />
ರತಿಯೆಂದರೆ ಆನಂದ..<br />
ಧರ್ಮದಲ್ಲಿ ಆನಂದವನ್ನು ಕಂಡವನು &#8216;ಧರ್ಮರತ&#8217;<br />
ಧರ್ಮದ ರುಚಿ ಗೊತ್ತಿಲ್ಲದವರಿಗೆ ಪ್ರಯಾಸದ ವಿಷಯ..<br />
ದಶರಥನಿಗೋ ಅದು ಪ್ರೀತಿಯ ವಿಷಯ..<br />
ಸಪ್ಪೆಯಲ್ಲ ಧರ್ಮವವನಿಗೆ..</p>
<p style="text-align: center;">ಪ್ರತಿಫಲನವು ಪ್ರೀತಿಯ ಸ್ವಭಾವ<br />
ಯಾವೆಡೆಗೆ ನಾವು ಪ್ರೀತಿಯನ್ನು ಹರಿಸುವೆವೋ, ಇಮ್ಮಡಿಯಾಗಿ ಅಲ್ಲಿಂದ ನಮ್ಮೆಡೆಗೆ ಅದು ತಿರುಗಿ ಬರುವುದರಲ್ಲಿ ಸಂಶಯವಿಲ್ಲ..<br />
ಯಾವ ಧರ್ಮದಲ್ಲಿ ದಶರಥನು &#8216;ರತ&#8217;ನಾಗಿದ್ದನೋ ಆ ಧರ್ಮವು ಆತನನ್ನು ಪರಿಪರಿಯಾಗಿ ಅನುಗ್ರಹಿಸಿತು..<br />
ಅರ್ಥ-ಕಾಮಗಳು ಧರ್ಮವೃಕ್ಷದ ಸುಪುಷ್ಪ-ಸುಫಲಗಳೇ ಅಲ್ಲವೇ..?<br />
ನಿಯಮದಿಂದ ಧರ್ಮವನ್ನು ಆರಾಧಿಸಿದ ದಶರಥನಿಗೆ ಸಂಪತ್ಸುಖಗಳು(ಅರ್ಥ-ಕಾಮಗಳು) ಒಲಿದು ಬಂದವು&#8230;</p>
<p style="text-align: center;">ಎಲ್ಲೆಡೆಯಿಂದ ತನ್ನೆಡೆಗೆ ಹರಿದು ಬರುವ ಜಲಧಾರೆಗಳನ್ನು ಸಾಗರವು ಪ್ರತಿಗ್ರಹಿಸುವಂತೆ,<br />
ಲೋಕದಿಂದ ತನ್ನೆಡೆಗೆ ಹರಿದು ಬಂದ ಸಂಪತ್ತುಗಳನ್ನು- ಸುವಸ್ತುಗಳನ್ನು ಸಂಗ್ರಹಿಸಿ ರಕ್ಷಿಸಿದನವನು..<br />
ಧನಪತಿ ಕುಬೇರನಿಗೂ, ತ್ರಿಲೋಕಪತಿ ಮಹೇಂದ್ರನಿಗೂ ಸಾಟಿಯೆನಿಸುವ ಕೋಶವು ಅವನದಾಯಿತು..<br />
<span style="color: #0000ff;"> &#8216; ಸಂಗ್ರಹೀ ನಾವಸೀದತಿ&#8217;</span><br />
<strong> ಸಂಗ್ರಹಿಗೆ ನಾಶವಿಲ್ಲ..</strong></p>
<p style="text-align: center;">ಆದರೊಂದು ಮಾತು..<br />
ಲೋಕದಿಂದ ನಮಗೆ ಸಂದಷ್ಟು ನಮ್ಮಿಂದ ಲೋಕಕ್ಕೆ ಸಲ್ಲದಿದ್ದರೆ ಬದುಕಿನ ಸಮತೋಲನ ತಪ್ಪುತ್ತದೆ..<br />
ಸದ್ವಿನಿಯೋಗವಾಗದ ಸಂಗ್ರಹ ಜೀವಕ್ಕೂ-ಜೀವನಕ್ಕೂ &#8216; ಭಾರ&#8217;ವಾದೀತು, ಬಾಧೆಯಾದೀತು..<br />
ತನ್ನಲ್ಲಿರುವ ಸಂಪತ್ತಿಗೆ ತಾನು &#8216;ಮಾಲಕ&#8217;ನಲ್ಲ, &#8216;ಪಾಲಕ&#8217; ಮಾತ್ರ ಎಂಬ ಅರಿವಿದ್ದ ದಶರಥನು ಬಿಚ್ಚುಮನಸ್ಸು-ಬಿಚ್ಚುಕೈಗಳಿಂದ ದಾನ-ಮಾನಗಳನ್ನು ನಡೆಸಿದನು..<br />
ಆದರೆ ಏನಾಶ್ಚರ್ಯ!<br />
<strong> ತೆಗೆದುಕೊಂಡವರು ತುಂಬಿಹೋದರು..ದಶರಥ ಬರಿದಾಗಲೇ ಇಲ್ಲ&#8230;!!</strong></p>
<p style="text-align: center;"><strong>|| ಹರೇರಾಮ ||</strong></p>
]]></content:encoded>
			<wfw:commentRss>http://hareraama.in/blog/vishwa-olitagali-arambha-tanninda/feed/</wfw:commentRss>
		<slash:comments>36</slash:comments>
		</item>
		<item>
		<title>ದಶರಥನೆಂದರೆ ದೇವರ ಆಯ್ಕೆ&#8230;!</title>
		<link>http://hareraama.in/blog/raama-blog/dasharathanemdare-devara-ayke/</link>
		<comments>http://hareraama.in/blog/raama-blog/dasharathanemdare-devara-ayke/#comments</comments>
		<pubDate>Thu, 28 Oct 2010 10:00:49 +0000</pubDate>
		<dc:creator>Sri Samsthana</dc:creator>
				<category><![CDATA[ರಾಮ]]></category>

		<guid isPermaLink="false">http://hareraama.in/?p=7947</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraama-blog%252Fdasharathanemdare-devara-ayke%252F&title=%E0%B2%A6%E0%B2%B6%E0%B2%B0%E0%B2%A5%E0%B2%A8%E0%B3%86%E0%B2%82%E0%B2%A6%E0%B2%B0%E0%B3%86+%E0%B2%A6%E0%B3%87%E0%B2%B5%E0%B2%B0+%E0%B2%86%E0%B2%AF%E0%B3%8D%E0%B2%95%E0%B3%86...%21&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%AC%E0%B3%87%E0%B2%B0%E0%B3%86%E0%B2%AF%E0%B2%BE%E0%B2%97%E0%B3%81%E0%B2%B5%E0%B3%81%E0%B2%A6%E0%B3%81+%E0%B2%B8%E0%B3%81%E0%B2%B2%E0%B2%AD%E2%80%A6%0D%0A%E0%B2%AC%E0%B3%86%E0%B2%B0%E0%B3%86%E0%B2%AF%E0%B3%81%E0%B2%B5%E0%B3%81%E0%B2%A6%E0%B3%81+%E0%B2%B8%E0%B3%81%E0%B2%B2%E0%B2%AD%E0%B2%B5%E0%B2%B2%E0%B3%8D%E0%B2%B2..%21%0D%0A%E0%B2%B5%E0%B2%BF%E0%B2%AD%E0%B2%95%E0%B3%8D%E0%B2%A4%E0%B2%BF+%E0%B2%B8%E0%B3%81%E0%B2%B2%E0%B2%AD..%0D%0A%E0%B2%AD%E0%B2%95%E0%B3%8D%E0%B2%A4%E0%B2%BF+%E0%B2%B8%E0%B3%81&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>&#124;&#124; ಹರೇರಾಮ &#124;&#124;
ಬೇರೆಯಾಗುವುದು ಸುಲಭ…
ಬೆರೆಯುವುದು ಸುಲಭವಲ್ಲ..!
ವಿಭಕ್ತಿ ಸುಲಭ..
ಭಕ್ತಿ ಸುಲಭವಲ್ಲ..
ಒಡೆಯಲು ಕ್ಷಣ…
ಕೂಡಿಸಲು..?
ವಿಶ್ವದ ಯಾವೆರಡು ವಸ್ತುಗಳು ಸೇರಬೇಕೆಂದರೂ ಅದು ಸುಲಭದ ಮಾತಲ್ಲ..
ಅದರಲ್ಲಿಯೂ ಹಿರಿದರಲ್ಲಿ ಹಿರಿದಾದ ವಸ್ತುಗಳೆರಡು ಸೇರಬೇಕೆಂದರೆ..?
ಕೂಡಿಸುವ ಕೊಂಡಿಯೊಂದು ನಡುವೆ ಬೇಕೇ ಬೇಕು..
ಜೀವನು ದೇವನೊಡನೆ ಸೇರಬೇಕೆಂದರೆ &#8216;ಗುರು&#8216;ವೆಂಬ ಕೊಂಡಿ ನಡುವೆ ಬೇಕೇ ಬೇಕಲ್ಲವೇ..?
ದೇವನೇ ಧರೆಗಿಳಿದು ಬಂದು ಜೀವಗಳೊಡನೆ ಬೆರೆಯಬೇಕೆಂದುಕೊಂಡರೆ..?
ವಿಶ್ವಚೇತನವೇ ವಿಶ್ವದಲ್ಲಿಳಿದು ಬಂದು ವಿಶ್ವದಲ್ಲಿಯೇ ಶ್ರೇಷ್ಠವಾದ &#8216;ಚೇತನದೀಪಮಾಲಿಕೆ&#8216;ಯೊಡನೆ ತನ್ನನ್ನು ತಾನು ಬೆಸೆದುಕೊಳ್ಳಬೇಕೆಂದುಕೊಂಡರೆ..
ಬೆಸೆಯುವ ಕೊಂಡಿ ಅದೆಂಥದಾಗಿರಬೇಕು..?
ಬ್ರಹ್ಮಾಂಡಮಂಡಲದಲ್ಲಿ ನಾರಾಯಣನಿಗಿಂತ ದೊಡ್ಡವರುಂಟೇ..?
ಭೂಮಂಡಲದಲ್ಲಿ ಸೂರ್ಯವಂಶಕ್ಕಿಂತ ದೊಡ್ಡ ವಂಶವುಂಟೇ..?
ಶ್ರೀಮನ್ನಾರಾಯಣನು ಶ್ರೀರಾಮನಾಗಿ ಬಂದು ಸೂರ್ಯವಂಶದೊಡನೆ ಸೇರಬಯಸಿದಾಗ ನಡುವೆ ಕೊಂಡಿಯಾದವನೇ &#8216;ರಾಜಾ [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraama-blog%252Fdasharathanemdare-devara-ayke%252F&title=%E0%B2%A6%E0%B2%B6%E0%B2%B0%E0%B2%A5%E0%B2%A8%E0%B3%86%E0%B2%82%E0%B2%A6%E0%B2%B0%E0%B3%86+%E0%B2%A6%E0%B3%87%E0%B2%B5%E0%B2%B0+%E0%B2%86%E0%B2%AF%E0%B3%8D%E0%B2%95%E0%B3%86...%21&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%AC%E0%B3%87%E0%B2%B0%E0%B3%86%E0%B2%AF%E0%B2%BE%E0%B2%97%E0%B3%81%E0%B2%B5%E0%B3%81%E0%B2%A6%E0%B3%81+%E0%B2%B8%E0%B3%81%E0%B2%B2%E0%B2%AD%E2%80%A6%0D%0A%E0%B2%AC%E0%B3%86%E0%B2%B0%E0%B3%86%E0%B2%AF%E0%B3%81%E0%B2%B5%E0%B3%81%E0%B2%A6%E0%B3%81+%E0%B2%B8%E0%B3%81%E0%B2%B2%E0%B2%AD%E0%B2%B5%E0%B2%B2%E0%B3%8D%E0%B2%B2..%21%0D%0A%E0%B2%B5%E0%B2%BF%E0%B2%AD%E0%B2%95%E0%B3%8D%E0%B2%A4%E0%B2%BF+%E0%B2%B8%E0%B3%81%E0%B2%B2%E0%B2%AD..%0D%0A%E0%B2%AD%E0%B2%95%E0%B3%8D%E0%B2%A4%E0%B2%BF+%E0%B2%B8%E0%B3%81&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;">|| ಹರೇರಾಮ ||</p>
<p style="text-align: center;">ಬೇರೆಯಾಗುವುದು ಸುಲಭ…<br />
ಬೆರೆಯುವುದು ಸುಲಭವಲ್ಲ..!</p>
<p style="text-align: center;">ವಿಭಕ್ತಿ ಸುಲಭ..<br />
ಭಕ್ತಿ ಸುಲಭವಲ್ಲ..</p>
<p style="text-align: center;">ಒಡೆಯಲು ಕ್ಷಣ…<br />
ಕೂಡಿಸಲು..?</p>
<p style="text-align: center;">ವಿಶ್ವದ ಯಾವೆರಡು ವಸ್ತುಗಳು ಸೇರಬೇಕೆಂದರೂ ಅದು ಸುಲಭದ ಮಾತಲ್ಲ..<br />
ಅದರಲ್ಲಿಯೂ ಹಿರಿದರಲ್ಲಿ ಹಿರಿದಾದ ವಸ್ತುಗಳೆರಡು ಸೇರಬೇಕೆಂದರೆ..?<br />
ಕೂಡಿಸುವ ಕೊಂಡಿಯೊಂದು ನಡುವೆ ಬೇಕೇ ಬೇಕು..<br />
ಜೀವನು ದೇವನೊಡನೆ ಸೇರಬೇಕೆಂದರೆ &#8216;<strong>ಗುರು</strong>&#8216;ವೆಂಬ ಕೊಂಡಿ ನಡುವೆ ಬೇಕೇ ಬೇಕಲ್ಲವೇ..?</p>
<p style="text-align: center;">ದೇವನೇ ಧರೆಗಿಳಿದು ಬಂದು ಜೀವಗಳೊಡನೆ ಬೆರೆಯಬೇಕೆಂದುಕೊಂಡರೆ..?<br />
ವಿಶ್ವಚೇತನವೇ ವಿಶ್ವದಲ್ಲಿಳಿದು ಬಂದು ವಿಶ್ವದಲ್ಲಿಯೇ ಶ್ರೇಷ್ಠವಾದ &#8216;<strong>ಚೇತನದೀಪಮಾಲಿಕೆ</strong>&#8216;ಯೊಡನೆ ತನ್ನನ್ನು ತಾನು ಬೆಸೆದುಕೊಳ್ಳಬೇಕೆಂದುಕೊಂಡರೆ..<br />
ಬೆಸೆಯುವ ಕೊಂಡಿ ಅದೆಂಥದಾಗಿರಬೇಕು..?</p>
<p style="text-align: center;">ಬ್ರಹ್ಮಾಂಡಮಂಡಲದಲ್ಲಿ ನಾರಾಯಣನಿಗಿಂತ ದೊಡ್ಡವರುಂಟೇ..?<br />
ಭೂಮಂಡಲದಲ್ಲಿ ಸೂರ್ಯವಂಶಕ್ಕಿಂತ ದೊಡ್ಡ ವಂಶವುಂಟೇ..?<br />
ಶ್ರೀಮನ್ನಾರಾಯಣನು ಶ್ರೀರಾಮನಾಗಿ ಬಂದು ಸೂರ್ಯವಂಶದೊಡನೆ ಸೇರಬಯಸಿದಾಗ ನಡುವೆ ಕೊಂಡಿಯಾದವನೇ &#8216;<strong>ರಾಜಾ ದಶರಥ</strong>&#8216;</p>
<p style="text-align: center;">ದೇವಸ್ಥಾನದಲ್ಲಿ ದೇವರು ಹೇಗೆ ಮುಖ್ಯವೋ, ದ್ವಾರವೂ ಹಾಗೆಯೇ..<br />
ದೇವರದೆಷ್ಟು ಭವ್ಯವಾಗಿದ್ದರೂ ದ್ವಾರವು ಸುಷ್ಟುವಾಗಿಲ್ಲದಿದ್ದರೆ ಆ ದೇವರು ಭಕ್ತರಿಗೆ ಪ್ರಕಟವಾಗುವುದಾದರೂ ಹೇಗೆ..?<br />
ದೇವರು ತೋರಬೇಕೆಂದರೆ ತೋರಿಸುವವರೂ ಬೇಕಲ್ಲವೆ..?</p>
<p style="text-align: center;">ದ್ವಾರವೆಂದರೆ ಅದುವೇ..!</p>
<p style="text-align: center;">ದೇವದೇವನು ಧರೆಗೆ ಬರಬೇಕೆಂದುಕೊಂಡಾಗ ದ್ವಾರವಾದವನು ದಶರಥ..!<br />
ಅವತರಿಸಬಯಸಿದ ಪರವಸ್ತು &#8216;ಎಲ್ಲಿ ಇಳಿಯಲಿ ?&#8217; ಎಂಬಂತೆ ಧರೆಯೆಲ್ಲವನ್ನೂ ಒಮ್ಮೆ ನಿರುಕಿಸಿತು..<br />
ಕೋಟಿ ಕೋಟಿ ಜೀವಗಳ ಮೇಲೆ ಹಾದುಹೋದ ಅದರ ದಿವ್ಯದೃಷ್ಟಿ &#8216;ಇವನೇ ತಕ್ಕವನು&#8217; ಎಂಬಂತೆ ನಿಂತಿದ್ದು ದಶರಥನ ಮೇಲೆ&#8230;<br />
<strong>ದಶರಥನೆಂದರೆ ದೇವರ ಆಯ್ಕೆ</strong>..!!</p>
<p style="text-align: center;">ಪೂರ್ಣದ ದ್ವಾರವಾಗಲೂ ಬೇಕು ಅರ್ಹತೆ…!</p>
<p style="text-align: center;">ದಶರಥನ ಅರ್ಹತೆ ಅರ್ಥವಾಗಬೇಕೆಂದರೆ ಆತನ ಹೆಸರಿನೊಳಗಿಳಿಯಬೇಕು..<br />
ದಶವೆಂಬ ಸಂಖ್ಯೆಯು ಪೂರ್ಣತೆಯ ಪ್ರತೀಕ..<br />
ಸತತವೂ ಪೂರ್ಣತೆಯೆಡೆಗೋಡುವ &#8216;<strong>ಮನೋರಥ</strong>&#8216;ವಾರದೋ ಅವನೇ &#8216;<strong>ದಶರಥ</strong>&#8216;..</p>
<p style="text-align: center;">ಪೂರ್ಣತೆಗಾಗಿ ತುಡಿದವನವನು, ದುಡಿದವನವನು..<br />
ಎಲ್ಲೆಲ್ಲೂ ಪೂರ್ಣತೆಯನ್ನೇ ಕಾಣಬಯಸಿದವನವನು..<br />
<strong>ಪೂರ್ಣತೆ</strong> &#8211; ತನ್ನಲ್ಲಿ&#8230;<br />
ತನ್ನ ಕುಟುಂಬದಲ್ಲಿ&#8230;<br />
ಮಂತ್ರಿಗಳಲ್ಲಿ &#8230;<br />
ಸೈನಿಕರಲ್ಲಿ&#8230;<br />
<strong>ಪೂರ್ಣತೆ</strong> &#8211; ತನ್ನ ಪ್ರಜೆಗಳಲ್ಲಿ&#8230;<br />
ಅಯೋಧ್ಯೆಯಲ್ಲಿ&#8230;<br />
ಕೋಸಲದಲ್ಲಿ&#8230;<br />
ಎಲ್ಲೆಲ್ಲಿಯೂ ಪೂರ್ಣತೆಯ ಹುಡುಕಾಟ &#8211; ಅದಕ್ಕಾಗಿಯೇ ಬಾಳಾಟ..!!</p>
<p style="text-align: center;"><strong>ಪೂರ್ಣವು ಉದಯಿಸುವುದು ಪೂರ್ಣತೆಗಾಗಿ ತುಡಿಯುವವನಲ್ಲಿಯೇ ಅಲ್ಲವೇ&#8230;?</strong></p>
<p style="text-align: center;">|| ಹರೇರಾಮ ||</p>
<p style="text-align: center;">
<p>ಟಿಪ್ಪಣಿ:<br />
&lt;ದ್ವಾರವು ಸುಷ್ಟುವಾಗಿಲ್ಲದಿದ್ದರೆ&gt;<br />
ಸುಷ್ಟು = ಸಾಧು, ಸಮೀಚೀನೆ</p>
]]></content:encoded>
			<wfw:commentRss>http://hareraama.in/blog/raama-blog/dasharathanemdare-devara-ayke/feed/</wfw:commentRss>
		<slash:comments>43</slash:comments>
		</item>
	</channel>
</rss>

