<?xml version="1.0" encoding="UTF-8"?>
<rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>HareRaama: Sri Sri Raghaveshwara Bharati Swamiji &#187; ರಾಜ್ಯ</title>
	<atom:link href="http://hareraama.in/category/blog/raajya/feed/" rel="self" type="application/rss+xml" />
	<link>http://hareraama.in</link>
	<description>Homepage of Sri Sri Raghaveshwara Bharati Mahaswamiji</description>
	<lastBuildDate>Fri, 03 Feb 2012 12:38:09 +0000</lastBuildDate>
	<language>kn</language>
	<sy:updatePeriod>hourly</sy:updatePeriod>
	<sy:updateFrequency>1</sy:updateFrequency>
	<generator>http://wordpress.org/?v=3.2.1</generator>
		<item>
		<title>ಅಮ್ಮನಿತ್ತಳು ಅಮೃತಾನ್ನವನು..</title>
		<link>http://hareraama.in/blog/raajya/amma-amruta-anna/</link>
		<comments>http://hareraama.in/blog/raajya/amma-amruta-anna/#comments</comments>
		<pubDate>Mon, 11 Jul 2011 06:37:34 +0000</pubDate>
		<dc:creator>Sri Samsthana</dc:creator>
				<category><![CDATA[ರಾಜ್ಯ]]></category>
		<category><![CDATA[ಬ್ಲಾಗ್]]></category>
		<category><![CDATA[raghaveshwara]]></category>
		<category><![CDATA[vishwamitra]]></category>

		<guid isPermaLink="false">http://hareraama.in/?p=11751</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraajya%252Famma-amruta-anna%252F&title=%E0%B2%85%E0%B2%AE%E0%B3%8D%E0%B2%AE%E0%B2%A8%E0%B2%BF%E0%B2%A4%E0%B3%8D%E0%B2%A4%E0%B2%B3%E0%B3%81+%E0%B2%85%E0%B2%AE%E0%B3%83%E0%B2%A4%E0%B2%BE%E0%B2%A8%E0%B3%8D%E0%B2%A8%E0%B2%B5%E0%B2%A8%E0%B3%81..&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%95%E0%B3%8C%E0%B2%A4%E0%B3%81%E0%B2%95%E0%B2%A6%E0%B3%81%E0%B2%82%E0%B2%AC%E0%B2%BF+%E0%B2%B5%E0%B3%80%E0%B2%95%E0%B3%8D%E0%B2%B7%E0%B2%BF%E0%B2%B8%E0%B2%BF%E0%B2%AF%E0%B3%87+%E0%B2%B5%E0%B3%80%E0%B2%95%E0%B3%8D%E0%B2%B7%E0%B2%BF%E0%B2%B8%E0%B2%BF%E0%B2%A6%E0%B2%A8%E0%B3%81+%E0%B2%95%E0%B3%8C%E0%B2%B6%E0%B2%BF%E0%B2%95..%0D%0A%22%E0%B2%B6%E0%B3%82%E0%B2%A8%E0%B3%8D%E0%B2%AF%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%AA%E0%B3%82%E0%B2%B0%E0%B3%8D%E0%B2%A3%E0%B2%B5%E0%B3%81%E0%B2%A6%E0%B2%AF&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>&#124;&#124; ಹರೇರಾಮ &#124;&#124;
ಕೌತುಕದುಂಬಿ ವೀಕ್ಷಿಸಿಯೇ ವೀಕ್ಷಿಸಿದನು ಕೌಶಿಕ..
&#8220;ಶೂನ್ಯದಲ್ಲಿ ಪೂರ್ಣವುದಯಿಸಲುಂಟೇ ?
ಏನೊಂದೂ ಇಲ್ಲದಲ್ಲಿ ಬೇಕಾದುದೆಲ್ಲವೂ ಸಿಗುವಂತಾಗುವುದು ಸಾಧ್ಯವೇ ?
ಹರಿಗೋಲಿನಲ್ಲಿ ಸಾಗರ ತರಣ ಸಂಭವವೇ.. ?
ಆಶ್ರಮವು ಅರಸೊತ್ತಿಗೆಗೆ ಆತಿಥ್ಯ ಮಾಡಲು ಶಕ್ಯವೇ ?&#8221;
ವಸಿಷ್ಠರು ಅದಾವ ಭರವಸೆಯ ಮೇಲೆ &#8216;ಸಕಲ ಸೇನೆಯನ್ನೂ ಸತ್ಕರಿಸುವೆ&#8217;ನೆಂದರೆಂಬುದೇ ಅರ್ಥವಾಗಲಿಲ್ಲ ಕೌಶಿಕನಿಗೆ..
&#8220;ಬೆಟ್ಟ &#8211; ಕಣಿವೆಗಳ, ದಟ್ಟ ಕಾಡುಗಳ ಈ ಪರಿಸರದಲ್ಲಿ ಸಹಸ್ರ-ಸಹಸ್ರ ಸೈನಿಕರಿಗೆ ನಿಲ್ಲಲಾದರೂ ಸ್ಥಳವೆಲ್ಲಿ ?
ದೊಡ್ಡದೊಂದು ಮಡಕೆಯೂ ಇಲ್ಲದ, ಒಬ್ಬನೇ ಒಬ್ಬ ಬಾಣಸಿಗನೂ ಇಲ್ಲದ  ಆಶ್ರಮದಲ್ಲಿ ಸೇನಾಸತ್ಕಾರಕ್ಕೆ ಪರ್ಯಾಪ್ತವಾದ ಸಾಮಗ್ರಿಯೆಲ್ಲಿಂದ ಬಂದೀತು ?
ಸನ್ನಾಹವಾದರೂ ಹೇಗೆ [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraajya%252Famma-amruta-anna%252F&title=%E0%B2%85%E0%B2%AE%E0%B3%8D%E0%B2%AE%E0%B2%A8%E0%B2%BF%E0%B2%A4%E0%B3%8D%E0%B2%A4%E0%B2%B3%E0%B3%81+%E0%B2%85%E0%B2%AE%E0%B3%83%E0%B2%A4%E0%B2%BE%E0%B2%A8%E0%B3%8D%E0%B2%A8%E0%B2%B5%E0%B2%A8%E0%B3%81..&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%95%E0%B3%8C%E0%B2%A4%E0%B3%81%E0%B2%95%E0%B2%A6%E0%B3%81%E0%B2%82%E0%B2%AC%E0%B2%BF+%E0%B2%B5%E0%B3%80%E0%B2%95%E0%B3%8D%E0%B2%B7%E0%B2%BF%E0%B2%B8%E0%B2%BF%E0%B2%AF%E0%B3%87+%E0%B2%B5%E0%B3%80%E0%B2%95%E0%B3%8D%E0%B2%B7%E0%B2%BF%E0%B2%B8%E0%B2%BF%E0%B2%A6%E0%B2%A8%E0%B3%81+%E0%B2%95%E0%B3%8C%E0%B2%B6%E0%B2%BF%E0%B2%95..%0D%0A%22%E0%B2%B6%E0%B3%82%E0%B2%A8%E0%B3%8D%E0%B2%AF%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%AA%E0%B3%82%E0%B2%B0%E0%B3%8D%E0%B2%A3%E0%B2%B5%E0%B3%81%E0%B2%A6%E0%B2%AF&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;"><strong>|| ಹರೇರಾಮ ||</strong></p>
<p style="text-align: center;">ಕೌತುಕದುಂಬಿ ವೀಕ್ಷಿಸಿಯೇ ವೀಕ್ಷಿಸಿದನು ಕೌಶಿಕ..</p>
<p style="text-align: center;">&#8220;ಶೂನ್ಯದಲ್ಲಿ ಪೂರ್ಣವುದಯಿಸಲುಂಟೇ ?<br />
ಏನೊಂದೂ ಇಲ್ಲದಲ್ಲಿ ಬೇಕಾದುದೆಲ್ಲವೂ ಸಿಗುವಂತಾಗುವುದು ಸಾಧ್ಯವೇ ?<br />
ಹರಿಗೋಲಿನಲ್ಲಿ ಸಾಗರ ತರಣ ಸಂಭವವೇ.. ?<br />
ಆಶ್ರಮವು ಅರಸೊತ್ತಿಗೆಗೆ ಆತಿಥ್ಯ ಮಾಡಲು ಶಕ್ಯವೇ ?&#8221;</p>
<p style="text-align: center;">ವಸಿಷ್ಠರು ಅದಾವ ಭರವಸೆಯ ಮೇಲೆ &#8216;ಸಕಲ ಸೇನೆಯನ್ನೂ ಸತ್ಕರಿಸುವೆ&#8217;ನೆಂದರೆಂಬುದೇ ಅರ್ಥವಾಗಲಿಲ್ಲ ಕೌಶಿಕನಿಗೆ..<br />
&#8220;ಬೆಟ್ಟ &#8211; ಕಣಿವೆಗಳ, ದಟ್ಟ ಕಾಡುಗಳ ಈ ಪರಿಸರದಲ್ಲಿ ಸಹಸ್ರ-ಸಹಸ್ರ ಸೈನಿಕರಿಗೆ ನಿಲ್ಲಲಾದರೂ ಸ್ಥಳವೆಲ್ಲಿ ?<br />
ದೊಡ್ಡದೊಂದು ಮಡಕೆಯೂ ಇಲ್ಲದ, ಒಬ್ಬನೇ ಒಬ್ಬ ಬಾಣಸಿಗನೂ ಇಲ್ಲದ  ಆಶ್ರಮದಲ್ಲಿ ಸೇನಾಸತ್ಕಾರಕ್ಕೆ ಪರ್ಯಾಪ್ತವಾದ ಸಾಮಗ್ರಿಯೆಲ್ಲಿಂದ ಬಂದೀತು ?<br />
ಸನ್ನಾಹವಾದರೂ ಹೇಗೆ ನಡೆದೀತು ?&#8221;</p>
<p style="text-align: center;">ಆದರೆ ವಸಿಷ್ಠರ ಬಳಿ ಎರಡೇ ಎರಡು ಅಕ್ಷರದ ಒಂದು ಮಹಾ ಚಮತ್ಕಾರವಿದ್ದಿತು..<br />
ಅದು &#8220;<strong>ತಾಯಿ</strong>&#8221;<br />
ಅದು &#8220;<strong>ಗೋವು</strong>&#8221;<br />
ಅದು &#8220;<strong>ಧೇನು</strong>&#8221;<br />
<strong>ಬರಿಯ ಹಾಲು ಕೊಡುವ ಹಸುವಲ್ಲ, ಕೇಳಿದ್ದನ್ನು ಕೊಡುವ ಕಾಮಧೇನು..!</strong></p>
<p style="text-align: center;">ತಾಯಿಯೆಂದರೇ ತೃಪ್ತಿ..<br />
ತುತ್ತನ್ನಿತ್ತು ಹಸಿವಿನ ಕುತ್ತನ್ನು ದೂರ ಮಾಡುವವಳು&#8230;<br />
ಬದುಕಿನ ಮೊತ್ತ ಮೊದಲ ತುತ್ತನ್ನಿತ್ತವಳು..<br />
ಕರುಳ ಕುಡಿಯ ತೃಪ್ತಿಗಾಗಿ ತನ್ನ ದೇಹವನ್ನೇ ದ್ರವವಾಗಿ ಹರಿಸಿದವಳು&#8230;<br />
ತಾಯಿಯಿಲ್ಲದ-ತಾಯಿಯಿಂದಲ್ಲದ  ತುತ್ತೂ ತಬ್ಬಲಿಯೇ..<br />
ಇದು ಸಾಧಾರಣ ತಾಯಿಯ ಮಹಿಮೆ..<br />
ಗೋಮಾತೆಯಾದರೋ ತಾಯಿಯರ ತಾಯಿ &#8211; ಮಹಾತಾಯಿ, ತಾಯಿಗೂ ಹಾಲುಣಿಸುವವಳು..<br />
ಹೆಚ್ಚೇನು?<br />
ಭೂಮಾತೆಗೇ ಭೋಜನ ನೀಡುವವಳು&#8230;<br />
ಗೋಮಾತೆಯು ನೀಡುವ ಗೋಮಯ, ಗೋಮೂತ್ರಗಳನ್ನುಂಡಲ್ಲವೇ ಭೂಮಾತೆಯು ವಿಶ್ವಕ್ಕೆಲ್ಲಾ ಅನ್ನವನ್ನು ನೀಡುವುದು&#8230;?<br />
ವಿಶ್ವವನ್ನೇ ತರ್ಪಿಸುವವಳಿಗೆ ಸೇನಾಸಂತರ್ಪಣೆ ಒಂದು ಲೆಕ್ಕವೇ ?</p>
<p style="text-align: center;">ಗಗನದಲ್ಲಿ ಬೆಳಗುವ  ಸೂರ್ಯನ ಬೆಳಕು ಧರಣಿಯಲ್ಲಿ ಪ್ರತಿಬಿಂಬಿಸುವಂತೆ, ವಸಿಷ್ಠರ ಸತ್ಕಾರದ ಸತ್ಸಂಕಲ್ಪವು ಶಬಲೆಯಲ್ಲಿ ಪ್ರತಿಫಲಿಸಿತು..<br />
ರೈತನ ಹಸ್ತದಿಂದ ಬೀಜವನ್ನು ಸ್ವೀಕರಿಸಿ,ತನ್ನ ಸಾರ-ಸತ್ವಗಳನ್ನು ಅದಕ್ಕೆ ಸೇರಿಸಿ, ಹೆಮ್ಮರವಾಗಿ ಬೆಳೆಸುವ ಫಲವತಿಯಾದ ಭೂಮಿಯಂತೆ, ವಸಿಷ್ಠರ ಮನದಾಶಯವನ್ನು ಪರಿಗ್ರಹಿಸಿ ಅದಕ್ಕೆ ತನ್ನ ಮಮತೆ-ಮಹತಿಗಳನ್ನು ಬೆರೆಸಿ, ವಿಸ್ತರಿಸಿ, ವಿರಾಡ್ರೂಪವಾಗಿ ಪ್ರಕಟಿಸಿದಳು ವಿಶ್ವಜನನಿ..!</p>
<p style="text-align: center;">ನೋಡಲು ಬರಿಯ <strong>ದನ</strong>&#8230;<br />
ಆದರೆ ಅದರ ಮಮತೆಗೆ ಸೃಷ್ಟಿಯೆಲ್ಲ <strong>ಸ್ಪಂ-ದನ</strong> !!</p>
<p style="text-align: center;">ಸೈನ್ಯಸಂತರ್ಪಣೆಗೆ ಸಮುದ್ಯುಕ್ತಳಾದ ಶಬಲೆಯು ಒಮ್ಮೆ ತನ್ನ ದಕ್ಷಿಣಚರಣವನ್ನೆತ್ತಿ ಕೆಳಗಿರಿಸಿದಳು..<br />
ಗೋಮಾತೆಯ ಚರಣವು ಭೂಮಾತೆಯನ್ನು ಸೋಕುತ್ತಿದ್ದಂತೆಯೇ &#8211; ಸ್ಪರ್ಶಮಾಧ್ಯಮದಲ್ಲಿಯೇ ಆ ಮಹಾತಾಯಿಯರಿಬ್ಬರು ಅದೇನು ಮಾತನಾಡಿಕೊಂಡರೋ &#8211; ಕೌಶಿಕನ ಸೈನ್ಯವು ಪರಮಾಶ್ಚರ್ಯದಿಂದ ವೀಕ್ಷಿಸುತ್ತಿದ್ದಂತೆಯೇ ಹಳ್ಳ-ದಿಣ್ಣೆಗಳಿಂದ ಕೂಡಿದ್ದ, ವಿಸ್ತಾರವಾದ, ಆಶ್ರಮ ಪರಿಸರದ ನೆಲವೆಲ್ಲವೂ ಕ್ಷಣಮಾತ್ರದಲ್ಲಿ ಸಮತಲವಾಗಿ ಪರಿವರ್ತಿತವಾಗಿಹೋಯಿತು..!<br />
ಅಲ್ಲಿ ಕಲ್ಪವೃಕ್ಷವನ್ನು ಹೋಲುವ, ಬಗೆ ಬಗೆಯ ಶುಭ ವೃಕ್ಷಗಳು ಉಗಮಿಸಿದವು..<br />
ಅವುಗಳಲ್ಲಿ ಸೌಂದರ್ಯ-ಸೌರಭಗಳಿಂದೊಪ್ಪುವ ಸುಪುಷ್ಪಗಳು, ಸುಮಧುರ ಸುಫಲಗಳು ಕಾಣಿಸಿಕೊಂಡವು..<br />
ಮುದ ನೀಡುವ ಮೃದು-ಮಧುರಸ್ಪರ್ಶದ, ಕಣ್ತಣಿಸುವ, ಹಚ್ಚಹಸುರ ಹುಲ್ಲುಹಾಸುಗಳು ಅಲ್ಲಿ ಅನಾವರಣಗೊಂಡವು..<br />
ಮಧ್ಯಕೇಂದ್ರದಲ್ಲಿ ಭೂದೇವಿಯ ಬೈತಲೆಯಂತೆ ಕಂಗೊಳಿಸುವ, ಸುವಿಶಾಲ ರಾಜಮಾರ್ಗ..<br />
ಅಲ್ಲಿ ಚೆಲ್ಲಿದ ಚೆಲುಚೆಲುವಿನ ಹೂವುಗಳ ರಂಗು ರಂಗು..<br />
ಸಿಂಪಡಿಸಿದ ಸುಗಂಧಜಲದ ತಂಪು-ಕಂಪು..<br />
ಕೌಶಿಕನ ಒಡನಾಡಿಗಳ ವಿಶ್ರಾಂತಿಗಾಗಿ ಇಕ್ಕೆಲಗಳಲ್ಲಿ ಬೆಳ್ಳಿಬೆಟ್ಟಗಳ ಮಾಲಿಕೆಯನ್ನು ನೆನಪಿಸುವ ಸೌಧಗಳ ಪಂಕ್ತಿ..<br />
ಮಹಾಮಾರ್ಗದ ಪರ್ಯವಸಾನದಲ್ಲಿ ಬೆಳ್ಳಿಮೋಡದಂತೆಸೆವ, ರತ್ನಚಿತ್ರಿತವಾದ ರಾಜಭವನ..</p>
<p style="text-align: center;">ಮಾತು ಬಾರದವೂ ಮಾತೆಯ ಮಮತೆಗೆ ಹೊರತಾಗಲಿಲ್ಲ..<br />
ಅನತಿ ದೂರದಲ್ಲಿ ಅಶ್ವಗಳಿಗಾಗಿ ಅಶ್ವ ಶಾಲೆ, ಆನೆಗಳಿಗಾಗಿ ಗಜಶಾಲೆ, ಒಂಟೆ &#8211; ಹೇಸರಗತ್ತೆಗಳಿಗಾಗಿ ಪ್ರತ್ಯೇಕ ಲಾಯಗಳು..<br />
ನೋಡನೋಡುತ್ತಿದ್ದಂತೆಯೇ ಕೌಶಿಕನ ರಾಜಧಾನಿಯನ್ನೂ ಮೀರಿಸುವ, ಮೈಮನಗಳನ್ನು ಮರೆಸುವ ವೈಭವದ ಮಹಾನಗರಿಯೊಂದು ಅಲ್ಲಿ ವಿನಿರ್ಮಿತವಾಯಿತು..</p>
<p style="text-align: center;"><strong>ಚರಣಸ್ಪರ್ಶಮಾತ್ರದ ಚಮತ್ಕಾರವಿದು !!</strong></p>
<p style="text-align: center;">ಅಮೃತಲತೆಯಂತಿದ್ದ ತನ್ನ ಪುಚ್ಛವನ್ನೊಮ್ಮೆ ಆಕೆ ಬೀಸುತ್ತಿದ್ದಂತೆಯೇ ಅಲ್ಲಿ ಹಿಮಶೀತಲವಾದ ಮಾರುತವು ಮಂದ &#8211; ಮಂದವಾಗಿ ಬೀಸತೊಡಗಿತು..<br />
ಆ ಅಭೂತಪೂರ್ವ ಆತಿಥ್ಯದಲ್ಲಿ ಸಹಭಾಗಿಯಾಗಲು ಸೃಷ್ಟಿಯ ಸಕಲ ಸುಂದರ-ಸ್ವಾದಿಷ್ಠ ಸಂಗತಿಗಳನ್ನು ಆಹ್ವಾನಿಸುತ್ತಿರುವಳೋ ಎಂಬಂತೆ ಆಕೆ<br />
ಗೈದ &#8216;ಅಂಬಾ&#8217; ಧ್ವನಿಗೆ ಅಂಬರದಲ್ಲಿ ದೇವ ದುಂದುಭಿಗಳು ಮಾರ್ದನಿಗೈದವು..<br />
ಅವ್ಯಕ್ತಮಧುರವಾದ ಗಾಯನ-ವಾದನಗಳು ಹಿಂಬಾಲಿಸಿದವು ಅಂಬಾಧ್ವನಿ-ಅಂಬರಧ್ವನಿಗಳನ್ನು..<br />
ಶಬಲೆಯ ಶೃಂಗದ ಸನ್ನೆಗೆ ದಿವಿಯಿಂದ ದಿವ್ಯಸ್ತ್ರೀಯರ ದಂಡು-ದಂಡುಗಳೇ ಭುವಿಗಿಳಿದವು..</p>
<p style="text-align: center;">ದೇವ-ದೇವಿಯರು, ಗಂಧರ್ವಾಪ್ಸರೆಯರು, ಸಿದ್ಧ-ಚಾರಣರು, ಯಕ್ಷ-ವಿದ್ಯಾಧರರು, ದೇವರ್ಷಿ-ಬ್ರಹ್ಮರ್ಷಿಗಳು, ಕಾಮಧೇನು-ಕೌಶಿಕರ ಕೌತುಕಸಮಾಗಮವನ್ನು ವೀಕ್ಷಿಸಲು ನಭೋಮಂಡಲದಲ್ಲಿ ಸಮಾವೇಶಗೊಳ್ಳುತ್ತಿದ್ದಂತೆಯೇ&#8230;&#8230;</p>
<p style="text-align: center;">ಹೃದಯದಲ್ಲಿ ವಸಿಷ್ಠರನ್ನು ಧರಿಸಿ, ಅಚ್ಚೊತ್ತಿದ್ದ ಅಚ್ಚರಿಯೊಡನೆ ಅವಾಕ್ಕಾಗಿ ನಿಂತಿದ್ದ ಕೌಶಿಕನನ್ನೊಮ್ಮೆ ಕರುಣೆಯ ಕಣ್ತೆರೆದು ವೀಕ್ಷಿಸಿದಳು ವಿಶ್ವಜನನಿ&#8230;<br />
ಮರುಕ್ಷಣವೇ&#8230;..<br />
ಒಡಲಲ್ಲಿ ತುಂಬಿದ ವಾತ್ಸಲ್ಯವು ಒಳ ಹಿಡಿಸಲಾರದೇ ಹೊರ ತುಳುಕಿತು ಹಾಲಾಗಿ&#8230;<br />
ಇಳಿಯಿತು ಇಳೆಗೆ ಮೊದಮೊದಲು ಹನಿ-ಹನಿಯಾಗಿ &#8230;<br />
ಬರಬರುತ್ತಾ ಧಾರೆ- ಧಾರೆಯಾಗಿ &#8230; ತೊರೆಯಾಗಿ&#8230; ತೆರೆ-ತೆರೆಯಾಗಿ&#8230;<br />
ಕೊನೆಗೆ ನೊರೆ-ನೆರೆದು ಹರಿಯಿತು ಪ್ರತಿಗಂಗೆಯಾಗಿ&#8230;..</p>
<p style="text-align: center;">ಹಾಲು ಹೊಳೆಯಾಗಿ ಹರಿಯಿತು..<br />
ಜೇನು ಮಳೆಯಾಗಿ ಸುರಿಯಿತು&#8230;<br />
ಮೊಸರಿನ ಮಡುಗಳಾದವು&#8230;<br />
ಬೆಣ್ಣೆಯ ಬೆಟ್ಟಗಳೆದ್ದವು&#8230;<br />
ತುಪ್ಪದ ಕಾಲುವೆಗಳು ಹರಿದವು&#8230;<br />
ಕಬ್ಬಿನ ಹಾಲಿನ ಝರಿಗಳು ಧುಮ್ಮಿಕ್ಕಿದವು..<br />
ಆ ಕ್ಷೀರವಾಹಿನಿಯ ಕಿನಾರೆಯಲ್ಲಿ ಸಕ್ಕರೆಯೇ ಮರಳಾಯಿತು..</p>
<p style="text-align: center;">ಹಾಲಹೊಳೆಯಿಂದಲಾಗಿ ವಸಿಷ್ಠಾಶ್ರಮಕ್ಕೆ ವೈಕುಂಠದಕಳೆ ಬಂದಿತು..<br />
ಅಂತರವೊಂದೇ&#8230;<br />
ವೈಕುಂಠದ ಹಾಲಲ್ಲಿಹರಿವಿಲ್ಲ, ಇಲ್ಲಿ ಹರಿವಿತ್ತು..!<br />
ಬಿಳಿ ಬಿಳಿ ಬಣ್ಣದ, ಬಿಸಿ ಬಿಸಿ ಅನ್ನದ ಬೃಹದಾಕಾರದ ರಾಶಿಗಳನ್ನು ಕಂಡ ಸಿದ್ಧ &#8211; ಚಾರಣರು<br />
&#8216;ಇದೇನು ! ಕೈಲಾಸವೇ ಇಳಿದುಬಂತೇ ಇಲ್ಲಿಗೆ? ಎಂದು ಬೆರಗಾದರು..<br />
ಆದರೊಂದು ಭಿನ್ನತೆ..<br />
ವಿಶ್ವೇಶ್ವರನ ಕೈಲಾಸವು ತಂಪು ಚೆಲ್ಲಿದರೆ, ವಿಶ್ವಾಮಿತ್ರನಿಗಾಗಿ ನಿರ್ಮಿತವಾದ ಆ ಅನ್ನ(ಅಗ್ನಿ?)ಪರ್ವತವು ಬಿಸಿಯುಗುಳುತ್ತಿತ್ತು..!</p>
<p style="text-align: center;">ಶಬಲೆಯ ನಿಶ್ವಾಸದಿಂದ ಹೊರಹೊಮ್ಮಿತೊಂದು ಅನಿರ್ವಚನೀಯ ದಿವ್ಯಸುಗಂಧ&#8230;<br />
ಮೆಲ್ಲಮೆಲ್ಲನೆ ವಾತಾವರಣವನ್ನೆಲ್ಲಾ ವ್ಯಾಪಿಸುತ್ತ ಅದು ಕೌಶಿಕಪರಿವಾರವನ್ನು ಘ್ರಾಣಸೌಖ್ಯದ ಅದ್ಯಾವುದೋ ಉತ್ತುಂಗಸ್ಥಿತಿಗೆ ಕರೆದೊಯ್ದಿತು..<br />
ಶಬಲೆಯು ಒಮ್ಮೆ ಮೈಕೊಡವುತ್ತಿದ್ದಂತೆಯೇ ಆಕೆಯ ರೋಮರಾಜಿಗಳಿಂದ ಅನಂತಸೇವಕ-ಸೇವಕಿಯರು ಹೊರಹೊಮ್ಮಿದರು..<br />
ಕೌಶಿಕನ ಒಬ್ಬೊಬ್ಬ ಸೈನಿಕನಿಗೆ ಎಂಟೆಂಟು &#8211; ಹತ್ತತ್ತು ಜನರಂತೆ ಉಪಚರಿಸತೊಡಗಿದರು..</p>
<p style="text-align: center;">ಗೋಮಾತೆಯ ಶ್ರೀಮುಖದಿಂದ ಸ್ರವಿಸಿತೊಂದು ಅಮೃತಬಿಂದು..<br />
ಪ್ರಣವನಾದವೊಂದರಿಂದಲೇ ಬಗೆಬಗೆಯ ಶಬ್ದಗಳು ಪ್ರಾದುರ್ಭವಿಸುವಂತೆ , ಪರಮಾತ್ಮ ಬಿಂದುವೊಂದರಿಂದಲೇ ಅನಂತಪ್ರಕಾರದ ಪ್ರಪಂಚವು ಪ್ರಕಟವಾಗುವಂತೆ,<br />
ಗೋಮುಖದಿಂದ ಹೊರಹೊಮ್ಮಿದ  ಲಾಲಾಬಿಂದುವೊಂದರಿಂದಲೇ ನೂರು-ಸಾವಿರಬಗೆಯ ಭಕ್ಷ್ಯ &#8211; ಭೋಜ್ಯಗಳು, ಲೇಹ್ಯ &#8211; ಚೋಷ್ಯಗಳು, ಖಾದ್ಯಗಳು ಆವಿರ್ಭಾವಗೊಂಡವು..</p>
<p style="text-align: center;">ಉತ್ತಮೋತ್ತಮವಾದ ಸ್ವಾದ-ಸುಗಂಧಗಳು ಉತ್ತಮೋತ್ತಮವಾದ ಭಕ್ಷ್ಯಗಳಲ್ಲಿ ..<br />
ಉತ್ತಮೋತ್ತಮವಾದ ಭಕ್ಷ್ಯಗಳು ಹೇಮ-ರತ್ನವಿಭೂಷಿತವಾದ, ಶಿಲ್ಪಚಿತ್ರಿತವಾದ ಉತ್ತಮೋತ್ತಮ ಪಾತ್ರಗಳಲ್ಲಿ..<br />
ಉತ್ತಮೋತ್ತಮವಾದ ಪಾತ್ರಗಳು ಅತಿಶಯಿತ ಲಾವಣ್ಯದ ಸ್ವರ್ಗದ ವರನಾರಿಯರ ಕಮನೀಯ ಕರಕಮಲಗಳಲ್ಲಿ..<br />
ಉನ್ಮಾದವೇ ಆವರಿಸಿತು ಸಕಲರನ್ನೂ..</p>
<p style="text-align: center;">ಸಾಮಾನ್ಯ ತಾಯಿಯು ಮಗುವಿಗೆ ಚಂದ್ರನನ್ನು ತೋರಿಸಿ, ಇಂದ್ರಲೋಕದ ಕಥೆ ಹೇಳಿ ಭೂಮಿಯ ತುತ್ತನ್ನು ಮಗುವಿಗೆ ಉಣಬಡಿಸುವುದುಂಟು..<br />
ಆದರೆ ಮಾತೇ ಇಲ್ಲದ ಈ ಮಾತೆಯು ಇಂದ್ರಲೋಕವನ್ನೇ ಭುವಿಗಿಳಿಸಿದಳೆಂದರೆ,ಅಮೃತಾನ್ನವನ್ನೇ ಉಣಬಡಿಸಿದಳೆಂದರೆ ಅಚ್ಚರಿಯಾಗದಿರದೇ?</p>
<p style="text-align: center;">ಅಚ್ಚರಿಯಾಗಬೇಕಿಲ್ಲ..<br />
ಅನಂತ ಪ್ರೇಮದೊಡನೆ ಅಸದೃಶ ಮಹಿಮೆಯು ಸಮ್ಮಿಳಿತಗೊಂಡಲ್ಲಿ ಆಗುವುದು ಹೀಗೆಯೇ ..<br />
ಮಾತೆಯ ಮಮತೆಯ ಮಹತಿಯು ಮನಸ್ಸಿಗೆ ಬಂದವರಿಗೆ, ಮಹಿಮೆಯ ಮರ್ಮಗಳು ಅರಿವಾದವರಿಗೆ ಇದು ಅಚ್ಚರಿಯಲ್ಲ,ಸಹಜ..<br />
ಅತ್ಯಂತಸಹಜ..<br />
ಹಾಗಲ್ಲದಿದ್ದರೆ ಅಂತವಿಲ್ಲದ ಅಚ್ಚರಿ&#8230;<br />
ಕೌಶಿಕನಿಗೆ ತೀರದ ಅಚ್ಚರಿಯೆನಿಸಿದ ಶಬಲೆಯ ನವ ಸೃಷ್ಟಿಯು ವಸಿಷ್ಠರಿಗೆ ತೀರಾ ಸಹಜವೇ ಆಗಿತ್ತು..!</p>
<p style="text-align: center;">~*~*~*~</p>
<p style="text-align: left;"><strong><a href="http://hareraama.in/blog/raajya/ammanu-annavu-truptiyu/">&lt;&lt; ಅಮ್ಮನೂ &#8211; ಅನ್ನವೂ &#8211; ತೃಪ್ತಿಯೂ</a></strong></p>
]]></content:encoded>
			<wfw:commentRss>http://hareraama.in/blog/raajya/amma-amruta-anna/feed/</wfw:commentRss>
		<slash:comments>23</slash:comments>
		</item>
		<item>
		<title>ಅಮ್ಮನೂ &#8211; ಅನ್ನವೂ &#8211; ತೃಪ್ತಿಯೂ..</title>
		<link>http://hareraama.in/blog/raajya/ammanu-annavu-truptiyu/</link>
		<comments>http://hareraama.in/blog/raajya/ammanu-annavu-truptiyu/#comments</comments>
		<pubDate>Wed, 29 Jun 2011 00:30:14 +0000</pubDate>
		<dc:creator>Sri Samsthana</dc:creator>
				<category><![CDATA[ರಾಜ್ಯ]]></category>
		<category><![CDATA[anna]]></category>
		<category><![CDATA[bharati]]></category>
		<category><![CDATA[brahma]]></category>
		<category><![CDATA[devaru]]></category>
		<category><![CDATA[raghaveshwara]]></category>
		<category><![CDATA[sri]]></category>
		<category><![CDATA[vasistha]]></category>
		<category><![CDATA[vishwamitra]]></category>

		<guid isPermaLink="false">http://hareraama.in/?p=11593</guid>
		<description><![CDATA[ಅನ್ನವೆಲ್ಲಿ? ದೇವರೆಲ್ಲಿ?
ಅನ್ನವು ದೇವರಾಗುವುದಾದರೂ ಹೇಗೆ?
ಒಮ್ಮೆ ಕಣ್ಮುಚ್ಚಿ ದೇವರ ಲಕ್ಷಣಗಳನ್ನುನೆನಪಿಸಿಕೊಳ್ಳಿ..]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fraajya%252Fammanu-annavu-truptiyu%252F&title=%E0%B2%85%E0%B2%AE%E0%B3%8D%E0%B2%AE%E0%B2%A8%E0%B3%82+-+%E0%B2%85%E0%B2%A8%E0%B3%8D%E0%B2%A8%E0%B2%B5%E0%B3%82+-+%E0%B2%A4%E0%B3%83%E0%B2%AA%E0%B3%8D%E0%B2%A4%E0%B2%BF%E0%B2%AF%E0%B3%82..&desc=%7C%7C+%E0%B2%B9%E0%B2%B0%E0%B3%87+%E0%B2%B0%E0%B2%BE%E0%B2%AE+%7C%7C%0D%0A%27%E0%B2%85%E0%B2%A8%E0%B3%8D%E0%B2%A8%E0%B2%82+%E0%B2%AC%E0%B3%8D%E0%B2%B0%E0%B2%B9%E0%B3%8D%E0%B2%AE%27%0D%0A%E0%B2%85%E0%B2%A8%E0%B3%8D%E0%B2%A8%E0%B2%B5%E0%B3%87+%E0%B2%AD%E0%B2%97%E0%B2%B5%E0%B2%82%E0%B2%A4%E0%B2%A8%E0%B3%86%E0%B2%82%E0%B2%A6%E0%B2%BF%E0%B2%A4%E0%B3%81+%E0%B2%89%E0%B2%AA%E0%B2%A8%E0%B2%BF%E0%B2%B7%E0%B2%A4%E0%B3%8D%E0%B2%A4%E0%B3%81..%0D%0A%E0%B2%85%E0%B2%A8%E0%B3%8D%E0%B2%A8%E0%B2%B5%E0%B3%86%E0%B2%B2%E0%B3%8D%E0%B2%B2%E0%B2%BF%3F+%E0%B2%A6%E0%B3%87%E0%B2%B5%E0%B2%B0%E0%B3%86%E0&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;">|| ಹರೇ ರಾಮ ||</p>
<p style="text-align: center;">&#8216;<strong>ಅನ್ನಂ ಬ್ರಹ್ಮ</strong>&#8216;<br />
ಅನ್ನವೇ ಭಗವಂತನೆಂದಿತು ಉಪನಿಷತ್ತು..</p>
<p style="text-align: center;">ಅನ್ನವೆಲ್ಲಿ? ದೇವರೆಲ್ಲಿ?<br />
ಅನ್ನವು ದೇವರಾಗುವುದಾದರೂ ಹೇಗೆ?<br />
ಒಮ್ಮೆ ಕಣ್ಮುಚ್ಚಿ ದೇವರ ಲಕ್ಷಣಗಳನ್ನು ನೆನಪಿಸಿಕೊಳ್ಳಿ..<br />
ಈಗ ಕಣ್ತೆರೆದು <strong>ಅನ್ನವನ್ನು ನೋಡಿ</strong>..<br />
ಸಾಮಾನ್ಯ ಮೇಧೆಗೂ ಸುಲಭವಾಗಿಯೇ ನಿಲುಕುವಂತೆಯೇ ದೇವರು ಅನ್ನದ ರೂಪದಲ್ಲಿ ಅವತರಿಸುವುದನ್ನು ಗಮನಿಸಿದಿರಾ?</p>
<p style="text-align: center;">ಬದುಕು ಇರುವುದು ದೇವರಿಂದಾಗಿ..<br />
ಅನ್ನವಿಲ್ಲದೇ ಬದುಕಿಲ್ಲ..<br />
ದೇವರಿಂದ ಕ್ಲೇಶನಿವಾರಣೆ..<br />
ಹಸಿವೆಂಬ ನಿತ್ಯಕ್ಲೇಶದ ನಿತ್ಯನಿವಾರಣೆ ಅನ್ನದಿಂದ..<br />
ದೇವರು ಆನಂದಸ್ವರೂಪ..<br />
ಅನ್ನವುಣುವಾಗ ಆನಂದಿಸದ ಜೀವಗಳುಂಟೇ?<br />
ದೇವರು ಲಭಿಸಿದಲ್ಲಿಗೆ ಪೂರ್ಣತೃಪ್ತಿ..<br />
ಅನ್ನ ನೀಡುವುದು ನಿತ್ಯತೃಪ್ತಿ..<br />
ದೇವರು ನಮ್ಮ ಅಂತರ್ಯಾಮಿ..<br />
ಅನ್ನವು ನೆಲೆಗೊಳ್ಳುವುದು ನಮ್ಮ ಅಂತರಾಳದಲ್ಲಿಯೇ !<br />
<strong>ದೇವರಿಂದ ಶಕ್ತಿ&#8230;<br />
ಅನ್ನದಿಂದ ಪುಷ್ಟಿ&#8230;</strong></p>
<p style="text-align: center;">ದೇವರಿಗೂ ನಮಗೂ ಅಂತಿಮವಾಗಿ ಸಂಭವಿಸಬೇಕಾಗಿರುವುದು &#8216;<strong>ಅದ್ವೈತ</strong>&#8216;<br />
ನಮ್ಮೊಳ ಹೊಕ್ಕು,ನಮ್ಮ ರಸ-ರಕ್ತ-ಮಾಂಸಗಳಲ್ಲಿ ಹಾಸುಹೊಕ್ಕಾಗಿ ಬೆರೆತು,ಕೊನೆಗೆ ನಾವೇ ಆಗಿಬಿಡುವ ಅನ್ನಕ್ಕೂ-ನಮಗೂ &#8216;<strong>ನಿತ್ಯಾದ್ವೈತ</strong>&#8216;</p>
<p style="text-align: center;">ಅನ್ನದಿಂದಲೇ ಜನನ, ಅನ್ನದಿಂದಲೇ ಜೀವನ, ಅನ್ನದಿಂದಲೇ ಮರಣ&#8230;<br />
ಅನ್ನದಿಂದಲೇ ಭಾವ, ಅನ್ನದಿಂದಲೇ ಬವಣೆ..<br />
ಅನ್ನದಿಂದಲೇ ಭೋಗ, ಅನ್ನದಿಂದಲೇ ರೋಗ, ಅನ್ನದಿಂದಲೇ ಯೋಗ&#8230;<br />
ಅನ್ನದಿಂದಲೇ ಸಕಲವೂ&#8230;<br />
ಅನ್ನದಿಂದಲೇ ಬಂದ ಬಂಧ ತೊಲಗುವುದೂ ಅನ್ನದಿಂದಲೇ&#8230;<br />
ಪರಮಾತ್ಮನಂತೆ ಸರ್ವರ ಅಂತರ್ಯಾಮೀ..ಆನಂದದಾಯೀ..ಅದ್ವೈತಪರ್ಯವಸಾಯೀ..<strong><br />
ಆದುದರಿಂದಲೇ  &#8216;ಅನ್ನಂ ಬ್ರಹ್ಮ&#8217;</strong></p>
<p style="text-align: center;">ಜೀವ-ಜೀವನಗಳ ನಡುವಿನ ನಿತ್ಯಸೇತುವಾದ ಈ ಅನ್ನಬ್ರಹ್ಮವೇ ವಸಿಷ್ಠ-ಕೌಶಿಕರ ನಡುವಿನ ಸರಸ-ಸಮರ-ಸಮರಸಗಳ ಮಹಾಘಟನೆಗೆ ಮೂಲಕಾರಣ..<br />
ಕೌಶಿಕನಿಗೆ ದೇವರನ್ನು ತೋರಬಯಸಿದ ಮಹಾಗುರು ವಸಿಷ್ಠರು ಮೊದಲ ಮಾಧ್ಯಮವಾಗಿ ಆರಿಸಿದ್ದು ಅನ್ನವನ್ನೇ..<br />
ಹಾಗಲ್ಲದಿದ್ದರೆ ಬೇಡ-ಬೇಡವೆಂದರೂ ಬಿಡದೆ, ಬಲಸಮೇತನಾದ ಭೂಪಾಲನಿಗೆ ಆಶ್ರಮದಲ್ಲಿ,ಅರಮನೆಯನ್ನು ಮೀರಿದ ಆತಿಥ್ಯವನ್ನೆಸಗುವ ಸಡಗರವಾದರೂ ಏಕೆ ವಸಿಷ್ಠರಿಗೆ ! ?</p>
<p style="text-align: center;">ಕೇಳಿದರೂ ಕೊಡದವರುಂಟು..<br />
ಕೇಳಿದರೆ ಕೊಡುವವರುಂಟು..<br />
ಕೇಳದಿದ್ದರೂ ಕೊಡುವವರುಂಟೇ..?<br />
<strong>ಅದಕ್ಕೆ ಬೇಕು ಅಮ್ಮನ ಹೃದಯ..</strong></p>
<p style="text-align: center;">ಮುದ್ದು ಮಗುವಿಗೆ ಹಾಲುಣಿಸುವ ವಿಷಯದಲ್ಲಿ ಅದು ಬಾಯ್ದೆರೆದು ಬೇಡಬೇಕೆಂದು ಎಲ್ಲಿಯಾದರೂ ನಿರೀಕ್ಷಿಸುವಳೇ ಜನನಿ..?<br />
ತಾಯಿಹೃದಯ ವಸಿಷ್ಠರದು..<br />
ಏನೂ ಕೇಳದ ಕೌಶಿಕನಿಗೆ ಎಂದೂ ಕಾಣದ ಸಂಗತಿಯೊಂದನ್ನು ತೋರಬಯಸಿದರವರು&#8230;<br />
ಮತ್ತೆಲ್ಲಿಯೂ ಸಿಗಲಾರದ ಸಂತೋಷವನ್ನು ನೀಡಬಯಸಿದರವರು..<br />
ಆಶ್ರಮಕ್ಕೆ ಬಂದ ಅತಿಥಿಯನ್ನು ಬರಿಗೈಯಲ್ಲಿ ಕಳುಹಿಸಬಾರದೆಂದು ವಸಿಷ್ಠರೆಂದುಕೊಂಡರೆ ಅದು ಸರಿಯೇ..<br />
<strong>ಆದರೆ ಚಕ್ರವರ್ತಿಗೆ ಆಶ್ರಮವಾಸಿಯೇನು ಕೊಟ್ಟಾನು..?<br />
</strong>ಕೊಡಲು ಕೌಶಿಕನ ಬಳಿ ಇಲ್ಲದುದಾದರೂ ಏನು..?</p>
<p style="text-align: center;">ಹೌದು..<br />
ಕೌಶಿಕನ ಬಳಿ ಎಲ್ಲವೂ ಇತ್ತು..<br />
ಇಲ್ಲದುದೊಂದೇ&#8230;.ಅದು ತೃಪ್ತಿ..<br />
ಇದ್ದುದರಲ್ಲಿ ತೃಪ್ತಿಯಿಲ್ಲದುದರಿಂದಲೇ ಅಲ್ಲವೇ ಅವನು ಜೈತ್ರಯಾತ್ರೆಗೆ ತೊಡಗಿದ್ದು..<br />
ತೃಪ್ತಿ ಚಿನ್ನಕ್ಕೆ ಬಲು ದೂರ, ಆದರೆ ಅನ್ನಕ್ಕೆ ಅತ್ಯಂತ ಹತ್ತಿರ..<br />
&#8216;ಇಷ್ಟು ಸಿಕ್ಕರೆ ಮತ್ತಷ್ಟು ಬೇಕೆಂಬಾಸೆ&#8217; ಇದು ಚಿನ್ನದ ಕಥೆ..<br />
ಆದರೆ ಅನ್ನ ಹಾಗಲ್ಲ, ಅದೆಂಥಾ ಆಸೆಬುರುಕನನ್ನಾದರೂ ಸಾಕೆನಿಸಿಯೇ ಸಿದ್ಧ..<br />
ಅನ್ನವಿತ್ತು ಯಾರನ್ನೂ ತೃಪ್ತಿ ಪಡಿಸಬಹುದು&#8230;<br />
ಚಿನ್ನ ತೆತ್ತು ಯಾರನ್ನೂ ತೃಪ್ತಿ ಪಡಿಸಲಾಗದು..<br />
ಅನ್ನ-ತೃಪ್ತಿಗಳು ನಿತ್ಯಸಂಗಾತಿಗಳು..<br />
ಅನ್ನಪುರುಷನ ಆಗಮನವಾದರೆ ಆತನ ಹಿಂದೆ ಮೆಲ್ಲಮೆಲ್ಲನೆ ಬಂದೇ ಬರುವಳು ತೃಪ್ತಿಸುಂದರಿ..ಇದು ಸಿದ್ಧ..<br />
<strong> ಆದರೆ ಅನ್ನಪುರುಷನನ್ನು ಕರೆತರುವವರಾರು..?<br />
ಅದು &#8216;ಅಮ್ಮ&#8217;<br />
</strong></p>
<p style="text-align: center;">ಅಮ್ಮನಿಂದ ಅನ್ನ, ಅನ್ನದಿಂದ ತೃಪ್ತಿ..<br />
ಕ್ರಮವಾಗಿ ಹೃದಯ ತುಂಬುವ, ಹೊಟ್ಟೆ ತಣಿಸುವ, ಮೈಯೆಲ್ಲ ವ್ಯಾಪಿಸುವ ದೇವರ ಮೂರು ರೂಪಗಳಿವು..!<br />
ಹೌದು,<br />
<strong> ಅನ್ನವು ದೇವರು..</strong><br />
ಜೊತೆಗೆ ಅನ್ನವೀಯುವ ತೃಪ್ತಿಯೂ ದೇವರು, ಅನ್ನವನ್ನೀಯುವ ಅಮ್ಮನೂ ದೇವರು..</p>
<p style="text-align: center;">ತಾಯಿಯೇ ದೇವರು ~~ <strong>&#8216;ಮಾತೃದೇವೋ ಭವ&#8217;</strong><br />
ತಾಯಿಯ ಕೈತುತ್ತೂ ದೇವರ ರೂಪವೇ..! ~~<strong>&#8216;ಅನ್ನಂ ಬ್ರಹ್ಮ&#8217;</strong><br />
ಆ ತುತ್ತು ತರುವ ತೃಪ್ತಿಯೂ ದೇವರೇ ಹೌದು~~<strong>&#8216;ಆನಂದಂ ಬ್ರಹ್ಮ&#8217;</strong></p>
<p style="text-align: center;">ಕೌಶಿಕನಿಗೆ ದೇವರನ್ನೇ ಸಾಕ್ಷಾತ್ಕಾರ ಮಾಡಿಸಬಯಸಿದ್ದರು ವಸಿಷ್ಠರು..<br />
ಅಮ್ಮ-ಅನ್ನ-ತೃಪ್ತಿಗಳೆಂಬ ಮೂರು ಅಮೃತಬಿಂದುಗಳು ಸೇರಿ ಸಂಭವಿಸಿದ ದೈವೀತ್ರಿಕೋಣವನ್ನೇ ಉಡುಗೊರೆಯಾಗಿ ದೊರೆಗೆ ನೀಡಬಯಸಿದ್ದರು ವಸಿಷ್ಠರು&#8230;<br />
ಮಾತೃತ್ವದ ಮೂರ್ತರೂಪವೇ ಆದ ಕಾಮಧೇನುವಿನ ಮೂಲಕವಾಗಿ ಅನ್ನಪೂರ್ಣೇಶ್ವರಿಯ ವಿಸ್ಮಯ-ವಿಶ್ವರೂಪವನ್ನೇ ಕೌಶಿಕನ ಮುಂದೆ ತೆರೆದಿಡಬಯಸಿದ್ದರು ವಸಿಷ್ಠರು&#8230;<br />
ಕೌಶಿಕನಿಗೆ ಪೂರ್ಣತೃಪ್ತಿಯ ಪರಮಾತ್ಮನ ಪಾಠವನ್ನು ನಿತ್ಯತೃಪ್ತಿಯ ಅನ್ನದಿಂದ ಪ್ರಾರಂಭಿಸಿದ್ದರು ಮಹಾಗುರು ವಸಿಷ್ಠರು..<br />
ಮಹಾಗುರುವಿನ ಆಶಯ-ಆಶೀರ್ವಾದಗಳನ್ನು ಹೃದಯದಲ್ಲಿ ಧರಿಸಿ ಆ ಮಹಾಸಂತರ್ಪಣೆಗಾಗಿ, ಮೃಷ್ಟಾನ್ನದ ಹೊಳೆಯನ್ನೇ ಹರಿಸಲು ಸಿದ್ಧಳಾದ ಶಬಲೆಯು, ಸೂರ್ಯನು ಕಿರಣಜಾಲದ ಮೂಲಕವಾಗಿ ಸಂಗ್ರಹಿಸಿ, ತನ್ನೊಳಗೆ ನಿಕ್ಷಿಪ್ತಗೊಳಿಸಿದ ಜೀವಜಲವನ್ನು ಜೀವಜಾಲದ ಮೇಲೆ ಅಭಿವರ್ಷಿಸಲು ಸನ್ನದ್ಧಗೊಂಡ ಮೇಘಮಾಲಿಕೆಯಂತೆಯೇ ಶೋಭಿಸಿದಳು..</p>
<p style="text-align: right;">~( ಸಶೇಷ)</p>
]]></content:encoded>
			<wfw:commentRss>http://hareraama.in/blog/raajya/ammanu-annavu-truptiyu/feed/</wfw:commentRss>
		<slash:comments>22</slash:comments>
		</item>
		<item>
		<title>ಸತ್ಕಾರದ ಸನ್ನಾಹ</title>
		<link>http://hareraama.in/blog/satkarada-sannaha/</link>
		<comments>http://hareraama.in/blog/satkarada-sannaha/#comments</comments>
		<pubDate>Tue, 25 Jan 2011 00:31:13 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[Bharathi]]></category>
		<category><![CDATA[Hare Raama]]></category>
		<category><![CDATA[Hare Rama]]></category>
		<category><![CDATA[karnataka]]></category>
		<category><![CDATA[Mobile Theme]]></category>
		<category><![CDATA[raghaveshwara]]></category>
		<category><![CDATA[ramachandrapura]]></category>
		<category><![CDATA[ಸತ್ಕಾರದ ಸನ್ನಾಹ]]></category>

		<guid isPermaLink="false">http://hareraama.in/?p=9872</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fsatkarada-sannaha%252F&title=+%E0%B2%B8%E0%B2%A4%E0%B3%8D%E0%B2%95%E0%B2%BE%E0%B2%B0%E0%B2%A6+%E0%B2%B8%E0%B2%A8%E0%B3%8D%E0%B2%A8%E0%B2%BE%E0%B2%B9&desc=%E0%B2%AA%E0%B2%BE%E0%B2%A4%E0%B2%BE%E0%B2%B2%E0%B2%B5%E0%B2%A8%E0%B3%8D%E0%B2%A8%E0%B3%82+%E0%B2%AA%E0%B3%81%E0%B2%A8%E0%B3%80%E0%B2%A4%E0%B2%97%E0%B3%8A%E0%B2%B3%E0%B2%BF%E0%B2%B8%E0%B3%81%E0%B2%B5+%E0%B2%AA%E0%B2%BE%E0%B2%A6%E0%B2%97%E0%B2%B3%E0%B3%81..%21%0D%0A%E0%B2%A6%E0%B3%87%E0%B2%B5%E0%B2%B2%E0%B3%8B%E0%B2%95%E0%B2%B5%E0%B2%A8%E0%B3%8D%E0%B2%A8%E0%B3%87+%E0%B2%AE%E0%B3%87%E0%B2%B2%E0%B3%86%E0%B2%A4%E0%B3%8D%E0%B2%A4%E0%B3%81%E0%B2%B5+%E0%B2%B6%E0%B3%83%E0%B2%82%E0%B2%97%E0%B2%97%E0%B2%B3%E0%B3%81..%21%0D%0A%E0%B2%B5%E0%B2%BE%E0%B2%A4%E0%B3%8D%E0%B2%B8%E0%B2%B2%E0%B3%8D&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>ಪಾತಾಲವನ್ನೂ ಪುನೀತಗೊಳಿಸುವ ಪಾದಗಳು..!
ದೇವಲೋಕವನ್ನೇ ಮೇಲೆತ್ತುವ ಶೃಂಗಗಳು..!
ವಾತ್ಸಲ್ಯದ ಸಾ(ಗ)ರವನ್ನೇ ತುಂಬಿಕೊಂಡಿರುವ ಕೆಚ್ಚಲು..!
ಸೂರ್ಯ- ಚಂದ್ರರಿಗೇ ಬೆಳಕೀವ ಕಣ್ಣುಗಳು..!
ಹುಂಭಾರವದಲ್ಲಿ ಪ್ರತಿಧ್ವನಿಸುವ ವೇದಗಳು..!
ಪ್ರಪಂಚದಲ್ಲಿರಬಹುದಾದ ಪವಿತ್ರತೆಯೆಲ್ಲವೂ ರಾಶೀಭವಿಸಿದ ಶರೀರ..!
ಬೇಡಿದ್ದನ್ನು ಮಾತ್ರವೇನು-ಬಯಸಿದ್ದನ್ನೆಲ್ಲ ಕೊಡುವ ಕಾಮಧೇನುವವಳು..
ಬಯಕೆಗಳನ್ನು &#8216;ವಶ&#8217;ದಲ್ಲಿರಿಸಿಕೊಂಡು &#8216;ವಶಿ&#8217;ಗಳೆನಿಸಿಕೊಳ್ಳುವವರಲ್ಲಿ ಶ್ರೇಷ್ಠರಾದ &#8216;ವಶಿಷ್ಠ&#8217;ರಿಗೆ ಒಲಿದು ಬಂದವಳು..
ಸೂರ್ಯನ ಸೆಳೆತಕ್ಕೆ ಒಳಗಾಗಿ, ಸತತವೂ ಆತನ ಸುತ್ತಲೇ ಸುತ್ತುವ, ಎಂದೂ ಆತನ ಪ್ರಭಾವಲಯವನ್ನು ಬಿಟ್ಟು ದೂರ ಹೋಗದ ಧರಣಿಯಂತೆ,
ತೇಜೋರಾಶಿಯೇ ಆದ, ವಸಿಷ್ಠರ ಪ್ರೀತಿಯ ಸೆಳೆತಕ್ಕೆ,ಆ ಗುರುಶ್ರೇಷ್ಠನ ಗುರುತ್ವಾಕರ್ಷಣೆಗೆ ಒಳಗಾಗಿ,&#8217;ಎಂದೂ ದೂರವಾಗಲಾರೆ&#8217;ನೆಂಬ ಭಾವದಲ್ಲಿ ಅವರ ಸನ್ನಿಧಿಯಲ್ಲಿಯೇ ನೆಲೆ ನಿಂತವಳು..!!
ಹಾಲಿಗೆ ಅಮೃತವನ್ನು ಸೇರಿಸಿದಂತೆ, ಮೊದಲೇ ಪವಿತ್ರವಾದ [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fsatkarada-sannaha%252F&title=+%E0%B2%B8%E0%B2%A4%E0%B3%8D%E0%B2%95%E0%B2%BE%E0%B2%B0%E0%B2%A6+%E0%B2%B8%E0%B2%A8%E0%B3%8D%E0%B2%A8%E0%B2%BE%E0%B2%B9&desc=%E0%B2%AA%E0%B2%BE%E0%B2%A4%E0%B2%BE%E0%B2%B2%E0%B2%B5%E0%B2%A8%E0%B3%8D%E0%B2%A8%E0%B3%82+%E0%B2%AA%E0%B3%81%E0%B2%A8%E0%B3%80%E0%B2%A4%E0%B2%97%E0%B3%8A%E0%B2%B3%E0%B2%BF%E0%B2%B8%E0%B3%81%E0%B2%B5+%E0%B2%AA%E0%B2%BE%E0%B2%A6%E0%B2%97%E0%B2%B3%E0%B3%81..%21%0D%0A%E0%B2%A6%E0%B3%87%E0%B2%B5%E0%B2%B2%E0%B3%8B%E0%B2%95%E0%B2%B5%E0%B2%A8%E0%B3%8D%E0%B2%A8%E0%B3%87+%E0%B2%AE%E0%B3%87%E0%B2%B2%E0%B3%86%E0%B2%A4%E0%B3%8D%E0%B2%A4%E0%B3%81%E0%B2%B5+%E0%B2%B6%E0%B3%83%E0%B2%82%E0%B2%97%E0%B2%97%E0%B2%B3%E0%B3%81..%21%0D%0A%E0%B2%B5%E0%B2%BE%E0%B2%A4%E0%B3%8D%E0%B2%B8%E0%B2%B2%E0%B3%8D&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>ಪಾತಾಲವನ್ನೂ ಪುನೀತಗೊಳಿಸುವ ಪಾದಗಳು..!<br />
ದೇವಲೋಕವನ್ನೇ ಮೇಲೆತ್ತುವ ಶೃಂಗಗಳು..!<br />
ವಾತ್ಸಲ್ಯದ ಸಾ(ಗ)ರವನ್ನೇ ತುಂಬಿಕೊಂಡಿರುವ ಕೆಚ್ಚಲು..!<br />
ಸೂರ್ಯ- ಚಂದ್ರರಿಗೇ ಬೆಳಕೀವ ಕಣ್ಣುಗಳು..!<br />
ಹುಂಭಾರವದಲ್ಲಿ ಪ್ರತಿಧ್ವನಿಸುವ ವೇದಗಳು..!<br />
ಪ್ರಪಂಚದಲ್ಲಿರಬಹುದಾದ ಪವಿತ್ರತೆಯೆಲ್ಲವೂ ರಾಶೀಭವಿಸಿದ ಶರೀರ..!<br />
ಬೇಡಿದ್ದನ್ನು ಮಾತ್ರವೇನು-ಬಯಸಿದ್ದನ್ನೆಲ್ಲ ಕೊಡುವ ಕಾಮಧೇನುವವಳು..<br />
ಬಯಕೆಗಳನ್ನು &#8216;ವಶ&#8217;ದಲ್ಲಿರಿಸಿಕೊಂಡು &#8216;ವಶಿ&#8217;ಗಳೆನಿಸಿಕೊಳ್ಳುವವರಲ್ಲಿ ಶ್ರೇಷ್ಠರಾದ &#8216;ವಶಿಷ್ಠ&#8217;ರಿಗೆ ಒಲಿದು ಬಂದವಳು..<br />
ಸೂರ್ಯನ ಸೆಳೆತಕ್ಕೆ ಒಳಗಾಗಿ, ಸತತವೂ ಆತನ ಸುತ್ತಲೇ ಸುತ್ತುವ, ಎಂದೂ ಆತನ ಪ್ರಭಾವಲಯವನ್ನು ಬಿಟ್ಟು ದೂರ ಹೋಗದ ಧರಣಿಯಂತೆ,<br />
ತೇಜೋರಾಶಿಯೇ ಆದ, ವಸಿಷ್ಠರ ಪ್ರೀತಿಯ ಸೆಳೆತಕ್ಕೆ,ಆ ಗುರುಶ್ರೇಷ್ಠನ ಗುರುತ್ವಾಕರ್ಷಣೆಗೆ ಒಳಗಾಗಿ,&#8217;ಎಂದೂ ದೂರವಾಗಲಾರೆ&#8217;ನೆಂಬ ಭಾವದಲ್ಲಿ ಅವರ ಸನ್ನಿಧಿಯಲ್ಲಿಯೇ ನೆಲೆ ನಿಂತವಳು..!!</p>
<p>ಹಾಲಿಗೆ ಅಮೃತವನ್ನು ಸೇರಿಸಿದಂತೆ, ಮೊದಲೇ ಪವಿತ್ರವಾದ ವಸಿಷ್ಠಾಶ್ರಮವನ್ನು ತನ್ನ ಸಾನ್ನಿಧ್ಯಮಾತ್ರದಿಂದಲೇ ಮತ್ತಷ್ಟು ಪವಿತ್ರಗೊಳಿಸುತ್ತಾ,<br />
ಚಿನ್ನಕ್ಕೆ ಪುಟಕೊಟ್ಟಂತೆ, ಸಹಜಶುದ್ಧನಾದ ತನ್ನ ಕಂದನ ಪುಟ್ಟ ತನುವನ್ನು ಪರಮವಾತ್ಸಲ್ಯದಿಂದ ಮತ್ತೆ ಮತ್ತೆ ನೆಕ್ಕಿ ನೆಕ್ಕಿ,ಮತ್ತಷ್ಟು ಶುಚಿಗೊಳಿಸುತ್ತಿದ್ದ ಶಬಲೆಯ ಕಿವಿಗಳಲ್ಲಿ ಅನುರಣಿಸಿತು &#8216;ಏಹಿ ಏಹಿ ಶಬಲೇ&#8217; ಎನ್ನುವ ಪ್ರೇಮದೊಡೆಯನ ಕರೆ..<br />
ಶಬಲೆಗೆ ತನ್ನ ಕರುವೆಂತೋ ವಸಿಷ್ಠರ ಕರೆಯೂ ಅಂತೆಯೇ..!<br />
ಮುದ್ದು ಕರುವಿನಿಂದ ಮಮತೆಯ ಕರೆಯೆಡೆಗೆ ಧಾವಿಸಿದಳಾಕೆ..</p>
<p>ವಾತ್ಸಲ್ಯವನ್ನು ಹರಿಸುವುದರಲ್ಲಿ ಶಬಲೆಯ ಕೆಚ್ಚಲೊಡನೆ ಸ್ಪರ್ಧಿಸುವ ತನ್ನ ಅಮೃತಕರಗಳಿಂದ ಆಕೆಯ ಮೈದಡವಿ ನುಡಿದರು ವಸಿಷ್ಠರು..</p>
<p>&#8221; ಶಬಲೇ ! ಚಕ್ರವರ್ತಿಯಾದ ಕೌಶಿಕನನ್ನೂ, ಆತನ ಅನಂತ ಪರಿವಾರವನ್ನೂ ಸತ್ಕರಿಸಬಯಸಿದ್ದೇನೆ..ಜೀವರಾಶಿಗಳನ್ನು ತೃಪ್ತಿಪಡಿಸುವುದರಲ್ಲಿಯೇ ಪರಮತೃಪ್ತಿಯನ್ನು ಕಾಣುವವಳಲ್ಲವೇ ನೀನು ?ಜಗದ ಹಸಿವಿಗಿಂತ ನಿನ್ನ ಹಾಲು ದೊಡ್ಡದೆಂಬುದು ಇಂದು ಪ್ರಕಟವಾಗಲಿ..ಕೌಶಿಕನು ಇಂದು ನಿನ್ನ ಕರುವಾಗಲಿ..ಸಾಗರ ಸದೃಶವಾದ ಈ ಸೇನಾಸ್ತೋಮದಲ್ಲಿ ಯಾರು ಯಾರು ಯಾವ ಯಾವ ಬಗೆಯ ಭಕ್ಷ್ಯ- ಭೋಜ್ಯಗಳನ್ನು, ಲೇಹ್ಯ-ಚೋಷ್ಯಗಳನ್ನು, ಖಾದ್ಯ-ಪೇಯಗಳನ್ನು ಬಯಸುವರೋ, ಅದೆಲ್ಲವನ್ನೂ ಅವರವರಿಗೆ ಶಾಶ್ವತ ತೃಪ್ತಿಯಾಗುವಷ್ಟು ಉಣಬಡಿಸಬೇಕು ನೀನು..<br />
ಕೇವಲ ಕ್ಷೀರವನ್ನಲ್ಲ,ಕಾಮನೆಗಳನ್ನೇ ವರ್ಷಿಸಬೇಕು ನೀನಿಂದು..! &#8221;</p>
<p>&#8216;ಬೇಕೇ?&#8217; ಎಂಬಂತೆ ಮುನಿಯ ಮೊಗವನ್ನೊಮ್ಮೆ ವೀಕ್ಷಿಸಿದಳು ಶಬಲೆ..<br />
&#8216;ನನಗಾಗಿ&#8217; ಒಂದೇ ಪದದಲ್ಲಿ ಉತ್ತರಿಸಿದರು ವಸಿಷ್ಠರು..<br />
ವಸಿಷ್ಠರಿಗಾಗಿಯೆಂದಾದರೆ ಕ್ಷೀರಧಾರೆಯೇನು, ಜೀವಧಾರೆಯನ್ನೇ ಹರಿಸಬಲ್ಲ ಶಬಲೆಯು ಸಿದ್ಧಳಾದಳು, ಕಂಡು ಕೇಳರಿಯದ ಕೌತುಕದ ಲೋಕವೊಂದಕ್ಕೆ ಕೌಶಿಕನನ್ನು ಕರೆದೊಯ್ಯಲು..</p>
<p><strong>ಟಿಪ್ಪಣಿ :-<br />
ಆಹಾರಗಳಲ್ಲಿ ಆರು ಬಗೆ..<br />
ಆಹಾರಂ ಷಡ್ವಿಧಂ ಚೂಷ್ಯಮ್ ಪೇಯಂ ಲೇಹ್ಯಂ ತಥೈವ ಚ | ಭೋಜ್ಯಂ ಭಕ್ಷ್ಯಂ ತಥಾ ಚರ್ವ್ಯಂ ಗುರು ವಿದ್ಯಾತ್ ಯಥೋತ್ತರಂ ||</strong></p>
<p><strong>ಆಹಾರವು ಚೂಷ್ಯ, ಪೇಯ, ಲೇಹ್ಯ, ಭೋಜ್ಯ, ಭಕ್ಷ್ಯ, ಚರ್ವ್ಯ ಎಂಬುದಾಗಿ ಆರು ವಿಧ..<br />
ಇವುಗಳಲ್ಲಿ ಮುಂದು-ಮುಂದಿನವು ಹಿಂದು-ಹಿಂದಿನದಕ್ಕಿಂತ ಗುರುಸ್ವಭಾವದವು..<br />
ಚೂಷ್ಯ=ಹೀರಿ ಕುಡಿಯುವ ರಸವುಳ್ಳ ಆಹಾರವಸ್ತು, ಕಬ್ಬು,ಮೊದಲಾದವು..<br />
ಪೇಯ=ನೀರು,ಪಾನಕ, ಮೊದಲಾದ ಕುಡಿಯುವ ವಸ್ತುಗಳು.<br />
ಲೇಹ್ಯ=ನಾಲಗೆಯಿಂದ ನೆಕ್ಕಿ ರಸಾಸ್ವಾದನೆ ಮಾಡುವ ಆಹಾರ, ಚಟ್ನಿ,ಉಪ್ಪಿನಕಾಯಿ ಮೊದಲಾದವು.<br />
ಭೋಜ್ಯ=ಊಟಮಾಡುವ ಅನ್ನ ಮೊದಲಾದ ಆಹಾರವಸ್ತುಗಳು.ಇದಕ್ಕೆ ಖಾದ್ಯ ಎನ್ನುವ ರೂಢಿಯು ಇದೆ.<br />
ಭಕ್ಷ್ಯ=ತಿಂಡಿತಿನಿಸು ಮೊದಲಾದ ಆಹಾರ ಭಕ್ಷ್ಯ, ಗಟ್ಟಿಯಾದ ಆಹಾರವಸ್ತು.. ಸಿಹಿತಿಂಡಿ, ರೊಟ್ಟಿ, ಕಡುಬು ಮೊದಲಾದವು..<br />
ಚರ್ವ್ಯ=ಹಲ್ಲಿನಿಂದ ಜಗಿದು ತಿನ್ನುವ ಆಹಾರವಸ್ತುಗಳು.. ಅವಲಕ್ಕಿ, ಪುರಿ, ಹುರಿಗಡಲೆ ಮೊದಲಾದವುಗಳು..<br />
</strong></p>
]]></content:encoded>
			<wfw:commentRss>http://hareraama.in/blog/satkarada-sannaha/feed/</wfw:commentRss>
		<slash:comments>25</slash:comments>
		</item>
		<item>
		<title>ಶಬಲೆ ಬಂದಳು..!</title>
		<link>http://hareraama.in/blog/shabale-bandalu/</link>
		<comments>http://hareraama.in/blog/shabale-bandalu/#comments</comments>
		<pubDate>Sun, 19 Dec 2010 05:55:35 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[bharati]]></category>
		<category><![CDATA[chaturmasya]]></category>
		<category><![CDATA[gokarna]]></category>
		<category><![CDATA[Hare Rama]]></category>
		<category><![CDATA[ಶಬಲೆ ಬಂದಳು..! ಈ ಆಶ್ರಮದ ಜೀವಾಳ ..?]]></category>

		<guid isPermaLink="false">http://hareraama.in/?p=8659</guid>
		<description><![CDATA[॥ಹರೇ ರಾಮ॥

ಕೆಲವೊಮ್ಮೆ ನಾವು ಸಾಮಾನ್ಯವೆಂದುಕೊಳ್ಳುವ ಘಟನೆಗಳು ಬದುಕಿನಲ್ಲಿ ಅಸಾಮಾನ್ಯವಾದ ಪರಿವರ್ತನೆಗಳನ್ನು ತಂದುಬಿಡುತ್ತವೆ...ದಿಗ್ವಿಜಯದ ಯಾತ್ರೆಯ ಮಾರ್ಗದಲ್ಲಿ ತಾನಾಗಿಯೇ ಪ್ರಾಪ್ತವಾದ ವಸಿಷ್ಠಾಶ್ರಮದ ಸಹಜ ಭೇಟಿಯು ತನ್ನ ಬದುಕಿನಲ್ಲಿ ಉಂಟುಮಾಡಬಹುದಾದ ಮಹತ್ತರ ಪರಿವರ್ತನೆಗಳನ್ನು ಕೌಶಿಕನು ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲ..ಬೇರೆಡೆಗೆ ಸಾಮಾನ್ಯವೆಂದು ಕರೆಸಿಕೊಳ್ಳುವ ಸಂಗತಿಗಳೂ ಇಲ್ಲಿ ವಿಶೇಷವಾಗಿಯೇ ತೋರತೊಡಗಿದವು ಆತನಿಗೆ..!
]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fshabale-bandalu%252F&title=+%E0%B2%B6%E0%B2%AC%E0%B2%B2%E0%B3%86+%E0%B2%AC%E0%B2%82%E0%B2%A6%E0%B2%B3%E0%B3%81..%21&desc=%E0%A5%A5%E0%B2%B9%E0%B2%B0%E0%B3%87%C2%A0%E0%B2%B0%E0%B2%BE%E0%B2%AE%E0%A5%A5%0D%0A%0D%0A%E0%B2%95%E0%B3%86%E0%B2%B2%E0%B2%B5%E0%B3%8A%E0%B2%AE%E0%B3%8D%E0%B2%AE%E0%B3%86+%E0%B2%A8%E0%B2%BE%E0%B2%B5%E0%B3%81+%E0%B2%B8%E0%B2%BE%E0%B2%AE%E0%B2%BE%E0%B2%A8%E0%B3%8D%E0%B2%AF%E0%B2%B5%E0%B3%86%E0%B2%82%E0%B2%A6%E0%B3%81%E0%B2%95%E0%B3%8A%E0%B2%B3%E0%B3%8D%E0%B2%B3%E0%B3%81%E0%B2%B5+%E0%B2%98%E0%B2%9F%E0%B2%A8%E0%B3%86%E0%B2%97%E0%B2%B3%E0%B3%81+%E0%B2%AC%E0%B2%A6%E0%B3%81%E0%B2%95%E0%B2%BF%E0%B2%A8%E0%B2%B2%E0%B3%8D%E0%B2%B2%E0%B2%BF+%E0%B2%85%E0%B2%B8%E0%B2%BE%E0%B2%AE%E0%B2%BE%E0%B2%A8&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p>॥ಹರೇ ರಾಮ॥</p>
<p>ಕೆಲವೊಮ್ಮೆ ನಾವು ಸಾಮಾನ್ಯವೆಂದುಕೊಳ್ಳುವ ಘಟನೆಗಳು ಬದುಕಿನಲ್ಲಿ ಅಸಾಮಾನ್ಯವಾದ ಪರಿವರ್ತನೆಗಳನ್ನು ತಂದುಬಿಡುತ್ತವೆ&#8230;ದಿಗ್ವಿಜಯದ ಯಾತ್ರೆಯ ಮಾರ್ಗದಲ್ಲಿ ತಾನಾಗಿಯೇ ಪ್ರಾಪ್ತವಾದ ವಸಿಷ್ಠಾಶ್ರಮದ ಸಹಜ ಭೇಟಿಯು ತನ್ನ ಬದುಕಿನಲ್ಲಿ ಉಂಟುಮಾಡಬಹುದಾದ ಮಹತ್ತರ ಪರಿವರ್ತನೆಗಳನ್ನು ಕೌಶಿಕನು ಕನಸು-ಮನಸಿನಲ್ಲಿಯೂ ಎಣಿಸಿರಲಿಲ್ಲ..ಬೇರೆಡೆಗೆ ಸಾಮಾನ್ಯವೆಂದು ಕರೆಸಿಕೊಳ್ಳುವ ಸಂಗತಿಗಳೂ ಇಲ್ಲಿ ವಿಶೇಷವಾಗಿಯೇ ತೋರತೊಡಗಿದವು ಆತನಿಗೆ..!</p>
<p>ಬ್ರಹ್ಮರ್ಷಿಯ ಅಪೂರ್ವ ದರ್ಶನ, ಆತ್ಮೀಯ ಕುಶಲಪ್ರಶ್ನೆಗಳ ವಿನಿಮಯದ ಬಳಿಕ ಸಹಜ ಸಂಭಾಷಣೆಯು ಆರಂಭವಾಯಿತು..<br />
&#8216;ಸಂಭಾಷಣೆಯೆಂಬುದು ಜೀವಗಳ ನಡುವೆ ನಡೆಯುವ ಭಾವವಿನಿಮಯ&#8217;<br />
&#8216;ಜೀವಗಳು ಒಂದನ್ನೊಂದು ಅರಿಯಲು-ಒಂದಕ್ಕೊಂದು ಬೆರೆಯಲು ದೇವನಿತ್ತ ಅಪೂರ್ವ ಸಾಧನವದು&#8217;</p>
<p>ಇತ್ತ ಕೌಶಿಕನು ವಸಿಷ್ಠರೊಡನೆ ಸಂಭಾಷಣೆ ನಡೆಸುತ್ತಿದ್ದಂತೆಯೇ ಅತ್ತ  ಕೌಶಿಕನೊಳಗಿನ ಬಿಂದುಚೇತನವು  ಆತನಿಗೆ ಗೊತ್ತೇ ಆಗದಂತೆ ವಸಿಷ್ಠರೊಳಗಿನ ಸಿಂಧುಚೇತನದೊಂದಿಗೆ ಬೆರೆತು ಸಂಭಾಷಣೆ ನಡೆಸತೊಡಗಿತು..ತನ್ನನ್ನು &#8216;ರಾಜಸ-ಬಂಧ&#8217; ಗಳಿಂದ&#8217;  &#8217;ರಾಜ್ಯ-ಸಂಬಂಧ&#8217;ಗಳಿಂದ ಬಿಡಿಸೆಂದು ಬೇಡಿತು&#8230;ನನ್ನನ್ನು ನಿನ್ನ ಹಾಗೆಯೇ ಮಾಡೆಂದಿತು&#8230;</p>
<p>ವಸಿಷ್ಠರೂ ಕೌಶಿಕನೊಳಗಿನ ಜೀವದ ದನಿಯನ್ನು ಆಲಿಸಿದರು&#8230; ಅರ್ಥೈಸಿದರು&#8230;ಆತನನ್ನು ವಿಶ್ವಚೇತನ-ವಿಶ್ವಾಮಿತ್ರನನ್ನಾಗಿಸಲು ಸಂಕಲ್ಪಿಸಿದರು..<br />
ದೈವವದಕ್ಕೆ &#8216;ತಥಾಸ್ತು&#8217; ಎಂದಿತು&#8230;ಕೌಶಿಕನ ಒಳಗೂ-ಹೊರಗೂ ಆ ಕುರಿತಾದ ಸಿದ್ಧತೆಗಳು ಅರಂಭವಾದವು&#8230;</p>
<p>ಇದ್ಯಾವುದರ ಪರಿವೆಯೇ ಇಲ್ಲದ ಕೌಶಿಕನು ವಸಿಷ್ಠರೊಡನೆ ಮಾತುಕಥೆ ನಡೆಸುತ್ತಲೇ ಇದ್ದನು&#8230;ಮಹಾಮೇರುಗಳೀರ್ವರು ಮಾತಿಗೆ ಕುಳಿತರೆ ಕಾಲ-ದೇಶಗಳು ಮರೆಯುವುದು, ಮರೆಯಾಗುವುದು ಸಹಜ&#8230;ಸ್ವಾಭಾವಿಕವಾದ ಕುಶಲಪ್ರಶ್ನೆಯು ಸುದೀರ್ಘ-ಸ್ವರಸ-ಸಂಭಾಷಣೆಯಾಗಿ ಮಾರ್ಪಟ್ಟಿತು..</p>
<p>ಹೇಳಿಕೇಳಿ ಮಿತಭಾಷಿಗಳಾದ ವಸಿಷ್ಠರು ಅದೇಕೆ ಕೌಶಿಕನೊಡನೆ ಸುದೀರ್ಘ ಸಂಭಾಷಣೆ ನಡೆಸಿದರೋ..?<br />
ಏನಿತ್ತೋ ಅವರ ಅಂತರಾಳದಲ್ಲಿ..?<br />
ಮಾತುಕಥೆಯಲ್ಲಿ ಪ್ರಸ್ತಾಪವಾಗುತ್ತಿದ್ದ ವಿಷಯಗಳು ಅವರಿಗೆ ವಿಷಯವೇ ಅಗಿರಲಿಲ್ಲ..! ಅವರ ದೃಷ್ಟಿ ವಿಶ್ವಾಮಿತ್ರನ -ವಿಶ್ವದ ಭವಿಷ್ಯದಲ್ಲಿ ನೆಟ್ಟಿತ್ತು&#8230;</p>
<p><span style="color: #ff6600;"><strong>ದ್ವೀಪಾದನ್ಯಸ್ಮಾದಪಿ ಮಧ್ಯಾದಪಿ ಜಲನಿಧೇ: ದಿಶೋಪ್ಯಂತಾತ್|<br />
ಆನೀಯ ಝಟಿತಿ ಘಟಯತಿ ವಿಧಿಃ ಅಭಿಮತಂ ಅಭಿಮುಖೀಭೂತ:||</strong></span><br />
ಯಾರು-ಯಾರನ್ನೋ ಎಲ್ಲಿಂದೆಲ್ಲಿಗೋ ಕರೆತಂದು, ಯಾರುಯಾರ ಜೊತೆಗೋ ಜೋಡಿಸಿ  ವಿಧಿ ಏನೇನೋ ಮಾಡುವನಂತೆ ..!!</p>
<p>ಎಲ್ಲಿಂದೆಲ್ಲಿಗೋ ಹೊರಟಿದ್ದ ಕೌಶಿಕನನ್ನು ಮಾರ್ಗಮಧ್ಯೆ  ವಿಧಿ ಸೆಳೆದು ತಂದು ವಸಿಷ್ಠರ ಮುಂದೆ ನಿಲ್ಲಿಸಿತ್ತು&#8230;<br />
ಸಮಾಗಮವು ಸಾಮೀಪ್ಯದಲ್ಲಿ..<br />
ಸಾಮೀಪ್ಯವು ಸಂಭಾಷಣೆಯಲ್ಲಿ&#8230;<br />
ಸಂಭಾಷಣೆಯು ಪರಸ್ಪರ ಸಂಪ್ರೀತಿಯಲ್ಲಿ<br />
ಸಂಪ್ರೀತಿಯು ಅತಿಶಯವಾದ ಸಂತೋಷದಲ್ಲಿ.. ಪರ್ಯವಸಾನಗೊಂಡಿತ್ತು..!!</p>
<p>ವಸಿಷ್ಠ-ಕೌಶಿಕರ ಮಧ್ಯೆ ಅತ್ತಿಂದಿತ್ತ-ಇತ್ತಿಂದತ್ತ ಹರಿದಾಡುತ್ತಿದ್ದ ಸಂತಸವು ಕೌಶಿಕನ ಸೇನೆಯೆಲ್ಲವನ್ನೂ ವ್ಯಾಪಿಸಹೊರಟಿರಬೇಕು..<br />
ವಸಿಷ್ಠರ ಮನದಲ್ಲಿ ಮೂಡಿತೊಂದು ಅಪೇಕ್ಷೆ..ಅಸಾಮಾನ್ಯರ ಮನದಲಿ ಅಸಾಮಾನ್ಯವಾದ ಅಪೇಕ್ಷೆಗಳೇ ಮೂಡುತ್ತವೆ..<br />
ವಸಿಷ್ಠರ ಬಯಕೆ &#8216;ಕೌಶಿಕನ ಸರ್ವಸೈನ್ಯದ ತೃಪ್ತಿ&#8217;<br />
ಕನಸು-ಕಲ್ಪನೆಗಳಿಗೂ ನಿಲುಕದ, ದೇವತೆಗಳಿಗೂ ದುರ್ಲಭವಾದ, ತೃಪ್ತಿಯ ನಿಜವಾದ ರೂಪವನ್ನು  ಪರಿಚಯಿಸಬಲ್ಲ ಆತಿಥ್ಯವೊಂದನ್ನು ಕೌಶಿಕನಿಗೂ, ಆತನೊಡನೆ ಬಂದ ಜನರಾಶಿಗೆ ನೀಡಬಯಸಿದ  ವಸಿಷ್ಠರು ಸಂಭಾಷಣೆಯ ಕೊನೆಯಲ್ಲಿ ಹೀಗೆಂದರು..</p>
<p>&#8220;ಹೇ ಕೌಶಿಕ ! ಉಣುವ ತೃಪ್ತಿಗಿಂತ ಉಣಿಸುವ ತೃಪ್ತಿ ಹಿರಿದೆನ್ನುವರು..<br />
ಬ್ರಹ್ಮಚರ್ಯ-ವಾನಪ್ರಸ್ಥ-ಸನ್ಯಾಸಗಳು ಉಣುವ ಆಶ್ರಮಗಳು..<br />
ಉಣಿಸುವ ಆಶ್ರಮವೆಂದರೆ ಅದು ಗೃಹಸ್ಥಾಶ್ರಮವೊಂದೇ..!<br />
ಅತಿಥಿ ಸತ್ಕಾರವೇ ಅಲ್ಲವೇ  ಈ ಆಶ್ರಮದ ಜೀವಾಳ ..?<br />
ಇಂದು ನಾನಿತ್ತ ಕಂದ-ಮೂಲ-ಫಲಗಳನ್ನುಂಡು ತೃಪ್ತನಾಗಿರುವೆ ನೀನು..<br />
ಆದರೆ ಉಣಿಸುವಲ್ಲಿ ನನಗಿನ್ನೂ ತೃಪ್ತಿಯಾಗಿಲ್ಲ&#8230;<br />
ನಿನ್ನ ತೃಪ್ತಿಯನ್ನು ನೂರ್ಮಡಿಗೊಳಿಸಿ, ತನ್ಮೂಲಕ ನನ್ನ ತೃಪ್ತಿಯನ್ನು ಸಾಸಿರಮಡಿಗೊಳಿಸಿಕೊಳ್ಳುವ ಹ೦ಬಲ ನನ್ನದು..<br />
ಆದುದರಿ೦ದ ಇತ್ತ ಕರೆ ನಿನ್ನ ಸೇನೆಯನ್ನು..<br />
ಹೇ ಮಹಾಬಲನೇ ! ನಿನ್ನ ಬಲವೆಲ್ಲವನ್ನೂ ಆತಿಥ್ಯದ ಮೂಲಕ ತೃಪ್ತಿಪಡಿಸಬೇಕು ನಾನಿಂದು&#8221;</p>
<p>ಮುನಿಯ ಮುಖದಲ್ಲಿ ನಗುವಿತ್ತು,ಆದರೆ ಮನದಲ್ಲಿ ಕರುಣವಿತ್ತು..!</p>
<p>ಅಚ್ಚರಿಗೊ೦ಡನು ಕೌಶಿಕ&#8230;<br />
ತನ್ನ ಅಸ೦ಖ್ಯೇಯವಾದ ಸೇನೆಯನ್ನು ಆಶ್ರಮವೊ೦ದು ತೃಪ್ತಿಪಡಿಸಬಲ್ಲುದೇ..?<br />
ಸಾಮಗ್ರಿಗಳೆಷ್ಟು ಬೇಕು..?<br />
ಸಮಯವೆಷ್ಟು ಬೇಕು..?<br />
ಸ್ಥಳವೆಷ್ಟು ಬೇಕು..?<br />
ಅಡುಗೆಯವರೆಷ್ಟು ಬೇಕು..?<br />
<strong>ಸಾಧ್ಯವೇ ಇಲ್ಲವೆನಿಸಿತು..!</strong><br />
ದೊಡ್ಡವರು! ಏನೋ ದೊಡ್ಡ ಮಾತಾಡಿ ಬಿಟ್ಟಿದ್ದಾರೆ..ಒಪ್ಪಿಕೊ೦ಡು ತಾನು ಅವರನ್ನು ಮುಜುಗರಕ್ಕೆ ಸಿಕ್ಕಿಸಬಾರದೆನಿಸಿತು..!<br />
ಮಾರ್ನುಡಿದನು ಕೌಶಿಕ&#8230;</p>
<p>&#8220;ಹೇ ಗುರುವರನೇ! ಪರಿಗ್ರಹಕ್ಕೂ ಒಂದು ಮಿತಿಯಿರಬೇಕಲ್ಲವೆ..?<br />
ಆಶ್ರಮವೊ೦ದು ಯಾವೆಲ್ಲ ಬಗೆಯ ಆತಿಥ್ಯಗಳನ್ನು ಮಾಡಬಹುದೋ, ಅವೆಲ್ಲವನ್ನು ನೀ ನೆರವೇರಿಸಿರುವೆ..<br />
ನಿನ್ನ ಪ್ರಿಯ ವಾಕ್ಯಗಳು ಕಿವಿದುಂಬಿವೆ, ಮನ ಬೆಳಗಿವೆ..<br />
ನಿನ್ನ ಸ೦ಸರ್ಗದಿ೦ದ ಪವಿತ್ರಗೊ೦ಡ ಆಶ್ರಮಜಲವು ಆಚಮನೀಯ-ಅಘ್ಯ೯-ಪಾದ್ಯಗಳ ರೂಪದಲ್ಲಿ ನನ್ನ ಮುಖ-ಹಸ್ತ-ಪಾದಗಳಲ್ಲಿ ಪವಿತ್ರತೆಯನ್ನು ತಂದಿವೆ..<br />
ಈ ದೇವಧರೆಯಲ್ಲಿ ಬೆಳೆದ ಕ೦ದ-ಮೂಲ ಫಲಗಳು ನನ್ನುದರದ ಜನ್ಮ-ಜನ್ಮಾ೦ತರದ ಹಸಿವನ್ನೇ ನೀಗಿವೆ..<br />
ಇವೆಲ್ಲಕ್ಕಿ೦ತ ಮಿಗಿಲಾದುದು &#8216;ಗುರುದರ್ಶನ&#8217; ವೆ೦ಬ ಆತಿಥ್ಯ..<br />
ಭಗವದ್ದರ್ಶನವು ನನ್ನ ಕಣ್ತು೦ಬಿದೆ&#8230; ಕಣ್ತೆರೆಸಿದೆ..<br />
ನನಗಿನ್ನೇನು ಬೇಕು..?<br />
ತಮ್ಮ ಅನುಗ್ರಹ ದೃಷ್ಟಿಯೊ೦ದಿದ್ದರೆ ಸಾಕೇ ಸಾಕು&#8221;</p>
<p>ಕೌಶಿಕನು ಬಯಸಿದ್ದು ವಸಿಷ್ಠರ ಪ್ರೀತಿ ತು೦ಬಿದ ನೋಟವನ್ನು ಮಾತ್ರ.. ಊಟವನ್ನಲ್ಲ..<br />
ಆದರೆ &#8216;ಅದಾಗಲೇ ವಸಿಷ್ಠರ ಅನುಗ್ರಹ ದೃಷ್ಟಿ ತನ್ನನಾವರಿಸಿದೆ, ತನ್ನೊಳಗಿನ ಕಲ್ಮಷ- ವಿಷವನ್ನು ಹೊರಹಾಕಲು ಸನ್ನಿವೇಶವನ್ನು ನಿರ್ಮಿಸುತ್ತಿದೆ&#8217;ಎಂಬುದರ ಅರಿವು ಕೌಶಿಕನಿಗಿರಲಿಲ್ಲ&#8230;</p>
<p>ಕೆಲಸಮಯ ನಡೆಯಿತಲ್ಲಿ ಸಮುದ್ರಮಥನ &#8230;<br />
ಸಂತರ್ಪಿಸುವೆನೆನುವ ಮುನಿ..<br />
ಬೇಡ..ಬೇಡವೆನುವ ದೊರೆ..<br />
ಬ್ರಾಹ್ಮದ ಅಮೃತವನ್ನು ಕೌಶಿಕನೊಳಗೆ ತುಂಬಲು ಕಾತರರಾಗಿದ್ದರು ವಸಿಷ್ಠರು ..<br />
ಬೆಳಕು ಒಳಗೆ ಬರುವೆನೆಂದರೆ ಕತ್ತಲೆಗೆ ಭಯವಾಗದೇ..?<br />
ವಸಿಷ್ಠರು ಕಾಮಧೇನುವಿನಿಂದ ಹರಿಸುವ &#8216;ಅಮೃತ-ಸತ್ತ್ವ&#8217; ಒಳಬಂದ ಮೇಲೆ ಇನ್ನು ರಜೋಗುಣ-ತಮೋಗುಣಗಳಿಗೆ ಉಳಿಗಾಲವುಂಟೇ..?ಕೌಶಿಕನೊಳಗೆ ಬಹುಕಾಲದಿಂದ ಹುದುಗಿ ಕುಳಿತಿದ್ದ  ರಜೋಗುಣವು &#8216;ಬೇಡ-ಬೇಡ&#8217; ವೆಂದು ಬಡಬಡಿಸಿತ್ತು ಆತನ ಮುಖದಿಂದ..</p>
<p>ಬೆಳಕಿನ ಮು೦ದೆ ಕತ್ತಲೆಯ ಆಟ ನಡೆಯುವುದಕ್ಕು೦ಟೇ?<br />
ಬ್ರಾಹ್ಮಬಲದ ಮು೦ದೆ ಕ್ಷಾತ್ರದ ರಜೋಗುಣವು ಬಾಗದಿರಲು೦ಟೆ..?<br />
ಔದಾರ್ಯಸಾಗರನ ಆಗ್ರಹದ ಮು೦ದೆ ಕೌಶಿಕನು ಕೊನೆಗೂ ತಲೆಬಾಗಲೇ ಬೇಕಾಯಿತು&#8230;</p>
<p>ಮಹಾಮುನಿಯ ಆತಿಥ್ಯದ ಪ್ರಸ್ತಾವನೆಯನ್ನು ಮಹಾರಾಜನು ಸ್ವೀಕರಿಸುತ್ತಿದ್ದಂತೆಯೇ ಎರಡು ಕರೆಗಳು ಆಶ್ರಮದ ಪರಿಸರದಲ್ಲಿ ಮಾರ್ಮೊಳಗಿದವು..<br />
ಕೌಶಿಕನು ಔತಣವುಣಲು ತನ್ನ ಮಹಾಸೇನೆಯನ್ನು ಕರೆದರೆ..<br />
ವಸಿಷ್ಠರು ಔತಣವನ್ನು ನೆರವೇರಿಸಲು ತಮ್ಮ &#8216;ಮಂಗಲಧೇನು&#8217;ವನ್ನು ಕರೆದರು..</p>
<p>ಒಂದು ಅಧಿಕಾರದ ಕರೆಯಾದರೆ ಇನ್ನೊದು ಪ್ರೀತಿಯ ಕರೆ..<br />
ಒಂದೆಡೆಯಿಂದ ಸಾಲು ಸಾಲಾಗಿ ಸಾವಿರ ಸಾವಿರ ಸೈನಿಕರು..!<br />
ಮತ್ತೊಂದೆಡೆಯಿಂದ &#8216;ಏಕಮೇವಾದ್ವಿತೀಯಳು&#8217; ಕಾಮಧೇನು..!<br />
ಅತ್ತ ಕೆಚ್ಚಿನ ರಾಶಿ..!<br />
ಇತ್ತ ಪ್ರೇಮದ ಮೂರ್ತಿ..!<br />
ರಕ್ತದ ಹೊಳೆಯನ್ನೇ ಹರಿಸುವುದು ಅವರಿಗೆ ಅಭ್ಯಾಸ..!<br />
ಹಾಲಿನ ಹೊಳೆಯನ್ನೇ ಸ್ರವಿಸುವುದು ಇವಳಿಗೆ ಸ್ವಭಾವ..!<br />
ಅಲ್ಲಿ ಕೌಶಿಕನು ಅನ್ನ-ವಸ್ತ್ರಗಳನ್ನಿತ್ತು ಸಾಕಿದ ಸೈನಿಕರು&#8230;<br />
ಇಲ್ಲಿ ಹಾಲನ್ನವಿತ್ತು ವಸಿಷ್ಠರನ್ನು ಪೋಷಿಸುವ ಮಮತಾಮಯೀ ಮಾತೆ..<br />
ಇವರು ಕೌಶಿಕ ’ಬಲ&#8217;ವೆನಿಸಿದವರು..<br />
ಆಕೆ ’ಅಬಲೆ&#8217; ಯಂತೆ ತೋರುವ &#8216;ಶಬಲೆ&#8217;</p>
<p>ಅತ್ತ ಕೌಶಿಕನ ಅಪ್ಪಣೆಯನ್ನು ಪಾಲಿಸಿದ ಆತನ ಸೇನೆ ಆಶ್ರಮದ ಪರಿಸರದಲ್ಲಿ ಉಪಸ್ಥಿತವಾಯಿತು..<br />
ಇತ್ತ ವಸಿಷ್ಠರು ವಾತ್ಸಲ್ಯವೇ ವಚನವಾದ ಸ್ವರದಲ್ಲಿ ಕರೆಯುತ್ತಿದ್ದಂತೆಯೇ&#8230;<br />
ಅದೋ..<br />
ಬಂದಳು&#8230;ಬಂದಳು..<br />
ಅನ್ನವರ್ಷಿಣೀ&#8230;<br />
ಅಮೃತವರ್ಷಿಣೀ&#8230;<br />
ಆನಂದವರ್ಷಿಣೀ&#8230;</p>
<p>॥ಹರೇ ರಾಮ॥</p>
]]></content:encoded>
			<wfw:commentRss>http://hareraama.in/blog/shabale-bandalu/feed/</wfw:commentRss>
		<slash:comments>15</slash:comments>
		</item>
		<item>
		<title>ರಾಮನಿಂದ ರಾಜ್ಯದವರೆಗೆ&#8230; ಗೋವಿನಿಂದ ಗಾಯತ್ರಿಯವರೆಗೆ&#8230;</title>
		<link>http://hareraama.in/blog/%e0%b2%b0%e0%b2%be%e0%b2%ae%e0%b2%a8%e0%b2%bf%e0%b2%82%e0%b2%a6-%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b5%e0%b2%b0%e0%b3%86%e0%b2%97%e0%b3%86-%e0%b2%97%e0%b3%8b%e0%b2%b5/</link>
		<comments>http://hareraama.in/blog/%e0%b2%b0%e0%b2%be%e0%b2%ae%e0%b2%a8%e0%b2%bf%e0%b2%82%e0%b2%a6-%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b5%e0%b2%b0%e0%b3%86%e0%b2%97%e0%b3%86-%e0%b2%97%e0%b3%8b%e0%b2%b5/#comments</comments>
		<pubDate>Sun, 08 Aug 2010 15:19:05 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=6406</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252F%25E0%25B2%25B0%25E0%25B2%25BE%25E0%25B2%25AE%25E0%25B2%25A8%25E0%25B2%25BF%25E0%25B2%2582%25E0%25B2%25A6-%25E0%25B2%25B0%25E0%25B2%25BE%25E0%25B2%259C%25E0%25B3%258D%25E0%25B2%25AF%25E0%25B2%25A6%25E0%25B2%25B5%25E0%25B2%25B0%25E0%25B3%2586%25E0%25B2%2597%25E0%25B3%2586-%25E0%25B2%2597%25E0%25B3%258B%25E0%25B2%25B5%252F&title=%E0%B2%B0%E0%B2%BE%E0%B2%AE%E0%B2%A8%E0%B2%BF%E0%B2%82%E0%B2%A6+%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%A6%E0%B2%B5%E0%B2%B0%E0%B3%86%E0%B2%97%E0%B3%86...+%E0%B2%97%E0%B3%8B%E0%B2%B5%E0%B2%BF%E0%B2%A8%E0%B2%BF%E0%B2%82%E0%B2%A6+%E0%B2%97%E0%B2%BE%E0%B2%AF%E0%B2%A4%E0%B3%8D%E0%B2%B0%E0%B2%BF%E0%B2%AF%E0%B2%B5%E0%B2%B0%E0%B3%86%E0%B2%97&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%0D%0A%E0%B2%AA%E0%B3%8D%E0%B2%B0%E0%B2%AF%E0%B2%BE%E0%B2%97%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%B6%E0%B3%81%E0%B2%AD%E0%B3%8D%E0%B2%B0%E0%B2%97%E0%B2%82%E0%B2%97%E0%B3%86%E0%B2%AF%E0%B3%8A%E0%B2%A1%E0%B2%A8%E0%B3%86+%E0%B2%B8%E0%B3%87%E0%B2%B0%E0%B3%81%E0%B2%B5+%E0%B2%B6%E0%B3%8D%E0%B2%AF%E0%B2%BE%E0%B2%AE%E0%B2%AF%E0%B2%AE%E0%B3%81%E0%B2%A8%E0%B3%86%E0%B2%AF%E0%B2%82%E0%B2%A4%E0%B3%86...%0D%0A%E0%B2%B8%E0%B2%82%E0%B2%A7%E0%B3%8D%E0%B2%AF%E0%B2%BE%E0%B2%B8%E0%B2%AE%E0%B2%AF%E0%B2%A6%E0%B2&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>&#124;&#124; ಹರೇರಾಮ &#124;&#124;

ಪ್ರಯಾಗದಲ್ಲಿ ಶುಭ್ರಗಂಗೆಯೊಡನೆ ಸೇರುವ ಶ್ಯಾಮಯಮುನೆಯಂತೆ&#8230;
ಸಂಧ್ಯಾಸಮಯದಲ್ಲಿ, ಬೆಳಗುವ ಬೆಳಕಿನೊಡನೆ ಬೆರೆಯುವ ಕಡುಗತ್ತಲೆಯಂತೆ&#8230;
ಕನ್ಯಾಕುಮಾರಿಯಲ್ಲಿ ಪೂರ್ವಸಾಗರದೊಡನೆ ಸಂಗಮಿಸುವ ಪಶ್ಚಿಮಸಾಗರದಂತೆ&#8230;
ಮಾಸಸಂಧಿಯಲ್ಲಿ ದಿವಾಕರನೊಡನೆ ಸಂಧಿಸುವ ನಿಶಾಕರನಂತೆ&#8230;
ಅನಂತಶಾಂತಿಯ ಆಶ್ರಮದ ಅಮೃತಪರಿಸರದಲ್ಲಿ ಬ್ರಹ್ಮತೇಜೋನಿಧಿಗಳಾದ ವಸಿಷ್ಠರೊಂದಿಗೆ ಸಂಗಮಿಸಿದನು ಶೌರ್ಯನಿಧಿಯಾದ ಕೌಶಿಕ&#8230;

ಉತ್ತರ ದಕ್ಷಿಣ ಧ್ರುವಗಳನ್ನು ನರರು ಸೇರಿಸಲುಂಟೇ&#8230;?
ಸಾಕ್ಷಾತ್ ವಿಧಿಯೇ ಏರ್ಪಡಿಸಿರಬೇಕು ಈ ಅಪೂರ್ವ ಸಂಯೋಗವನ್ನು&#8230;!
ಅದೆಷ್ಟು ವಿಭಿನ್ನತೆ ಇವರೀರ್ವರ ವ್ಯಕ್ತಿತ್ವಗಳಲ್ಲಿ…!?

ಒಬ್ಬ ಜಯಿಸುವವರಲ್ಲಿ ಶ್ರೇಷ್ಠ&#8230;
ಇನ್ನೊಬ್ಬನೋ ಜಪಿಸುವವರಲ್ಲಿ ಶ್ರೇಷ್ಠ..!

ಶಸ್ತ್ರಗಳಿಂದ ಶತ್ರುಗಳನ್ನು ಮೆಟ್ಟಿ ನಿಂತವನೊಬ್ಬ,..
ಶಾಸ್ತ್ರಗಳಿಂದ ಶತ್ರುತ್ವವನ್ನೇ ಮೀರಿ ನಿಂತವನಿನ್ನೊಬ್ಬ..!

ಬಾಹುಬಲದಿಂದ ಬಾಹ್ಯಪ್ರಪಂಚವನ್ನಾಳುವವನೊಬ್ಬ&#8230;
ಭಾವಬಲದಿಂದ ಅಂತ:ಪ್ರಪಂಚದಲ್ಲಿ ಬೆಳಗುವವನಿನ್ನೊಬ್ಬ..!

ಬಾಣಗಳಿಂದ ಲಕ್ಷ್ಯಗಳನ್ನು ಭೇದಿಸುವನೊಬ್ಬ&#8230;
ಧ್ಯಾನದಿಂದ ಪರಮಲಕ್ಷ್ಯವನ್ನೇ ತಲುಪಿಸುವನಿನ್ನೊಬ್ಬ&#8230;!

ರಾಜದಂಡದಿಂದ ಪಾತಕಿಗಳನ್ನು ದಂಡಿಸುವವನೊಬ್ಬ&#8230;
ಬ್ರಹ್ಮದಂಡದಿಂದ ಪತಿತರನ್ನುದ್ಧರಿಸುವವನಿನ್ನೊಬ್ಬ&#8230;!

ಒಬ್ಬನದು [...]]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252F%25E0%25B2%25B0%25E0%25B2%25BE%25E0%25B2%25AE%25E0%25B2%25A8%25E0%25B2%25BF%25E0%25B2%2582%25E0%25B2%25A6-%25E0%25B2%25B0%25E0%25B2%25BE%25E0%25B2%259C%25E0%25B3%258D%25E0%25B2%25AF%25E0%25B2%25A6%25E0%25B2%25B5%25E0%25B2%25B0%25E0%25B3%2586%25E0%25B2%2597%25E0%25B3%2586-%25E0%25B2%2597%25E0%25B3%258B%25E0%25B2%25B5%252F&title=%E0%B2%B0%E0%B2%BE%E0%B2%AE%E0%B2%A8%E0%B2%BF%E0%B2%82%E0%B2%A6+%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%A6%E0%B2%B5%E0%B2%B0%E0%B3%86%E0%B2%97%E0%B3%86...+%E0%B2%97%E0%B3%8B%E0%B2%B5%E0%B2%BF%E0%B2%A8%E0%B2%BF%E0%B2%82%E0%B2%A6+%E0%B2%97%E0%B2%BE%E0%B2%AF%E0%B2%A4%E0%B3%8D%E0%B2%B0%E0%B2%BF%E0%B2%AF%E0%B2%B5%E0%B2%B0%E0%B3%86%E0%B2%97&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%0D%0A%E0%B2%AA%E0%B3%8D%E0%B2%B0%E0%B2%AF%E0%B2%BE%E0%B2%97%E0%B2%A6%E0%B2%B2%E0%B3%8D%E0%B2%B2%E0%B2%BF+%E0%B2%B6%E0%B3%81%E0%B2%AD%E0%B3%8D%E0%B2%B0%E0%B2%97%E0%B2%82%E0%B2%97%E0%B3%86%E0%B2%AF%E0%B3%8A%E0%B2%A1%E0%B2%A8%E0%B3%86+%E0%B2%B8%E0%B3%87%E0%B2%B0%E0%B3%81%E0%B2%B5+%E0%B2%B6%E0%B3%8D%E0%B2%AF%E0%B2%BE%E0%B2%AE%E0%B2%AF%E0%B2%AE%E0%B3%81%E0%B2%A8%E0%B3%86%E0%B2%AF%E0%B2%82%E0%B2%A4%E0%B3%86...%0D%0A%E0%B2%B8%E0%B2%82%E0%B2%A7%E0%B3%8D%E0%B2%AF%E0%B2%BE%E0%B2%B8%E0%B2%AE%E0%B2%AF%E0%B2%A6%E0%B2&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;">|| ಹರೇರಾಮ ||</p>
<p style="text-align: center;">
<p style="text-align: center;">ಪ್ರಯಾಗದಲ್ಲಿ ಶುಭ್ರಗಂಗೆಯೊಡನೆ ಸೇರುವ ಶ್ಯಾಮಯಮುನೆಯಂತೆ&#8230;</p>
<p style="text-align: center;">ಸಂಧ್ಯಾಸಮಯದಲ್ಲಿ, ಬೆಳಗುವ ಬೆಳಕಿನೊಡನೆ ಬೆರೆಯುವ ಕಡುಗತ್ತಲೆಯಂತೆ&#8230;</p>
<p style="text-align: center;">ಕನ್ಯಾಕುಮಾರಿಯಲ್ಲಿ ಪೂರ್ವಸಾಗರದೊಡನೆ ಸಂಗಮಿಸುವ ಪಶ್ಚಿಮಸಾಗರದಂತೆ&#8230;</p>
<p style="text-align: center;">ಮಾಸಸಂಧಿಯಲ್ಲಿ ದಿವಾಕರನೊಡನೆ ಸಂಧಿಸುವ ನಿಶಾಕರನಂತೆ&#8230;</p>
<p style="text-align: center;">ಅನಂತಶಾಂತಿಯ ಆಶ್ರಮದ ಅಮೃತಪರಿಸರದಲ್ಲಿ ಬ್ರಹ್ಮತೇಜೋನಿಧಿಗಳಾದ ವಸಿಷ್ಠರೊಂದಿಗೆ ಸಂಗಮಿಸಿದನು ಶೌರ್ಯನಿಧಿಯಾದ ಕೌಶಿಕ&#8230;</p>
<p style="text-align: center;">
<p style="text-align: center;">ಉತ್ತರ ದಕ್ಷಿಣ ಧ್ರುವಗಳನ್ನು ನರರು ಸೇರಿಸಲುಂಟೇ&#8230;?</p>
<p style="text-align: center;">ಸಾಕ್ಷಾತ್ ವಿಧಿಯೇ ಏರ್ಪಡಿಸಿರಬೇಕು ಈ ಅಪೂರ್ವ ಸಂಯೋಗವನ್ನು&#8230;!</p>
<p style="text-align: center;">ಅದೆಷ್ಟು ವಿಭಿನ್ನತೆ ಇವರೀರ್ವರ ವ್ಯಕ್ತಿತ್ವಗಳಲ್ಲಿ…!?</p>
<p style="text-align: center;">
<p style="text-align: center;">ಒಬ್ಬ ಜಯಿಸುವವರಲ್ಲಿ ಶ್ರೇಷ್ಠ&#8230;</p>
<p style="text-align: center;">ಇನ್ನೊಬ್ಬನೋ ಜಪಿಸುವವರಲ್ಲಿ ಶ್ರೇಷ್ಠ..!</p>
<p style="text-align: center;">
<p style="text-align: center;">ಶಸ್ತ್ರಗಳಿಂದ ಶತ್ರುಗಳನ್ನು ಮೆಟ್ಟಿ ನಿಂತವನೊಬ್ಬ,..</p>
<p style="text-align: center;">ಶಾಸ್ತ್ರಗಳಿಂದ ಶತ್ರುತ್ವವನ್ನೇ ಮೀರಿ ನಿಂತವನಿನ್ನೊಬ್ಬ..!</p>
<p style="text-align: center;">
<p style="text-align: center;">ಬಾಹುಬಲದಿಂದ ಬಾಹ್ಯಪ್ರಪಂಚವನ್ನಾಳುವವನೊಬ್ಬ&#8230;</p>
<p style="text-align: center;">ಭಾವಬಲದಿಂದ ಅಂತ:ಪ್ರಪಂಚದಲ್ಲಿ ಬೆಳಗುವವನಿನ್ನೊಬ್ಬ..!</p>
<p style="text-align: center;">
<p style="text-align: center;">ಬಾಣಗಳಿಂದ ಲಕ್ಷ್ಯಗಳನ್ನು ಭೇದಿಸುವನೊಬ್ಬ&#8230;</p>
<p style="text-align: center;">ಧ್ಯಾನದಿಂದ ಪರಮಲಕ್ಷ್ಯವನ್ನೇ ತಲುಪಿಸುವನಿನ್ನೊಬ್ಬ&#8230;!</p>
<p style="text-align: center;">
<p style="text-align: center;">ರಾಜದಂಡದಿಂದ ಪಾತಕಿಗಳನ್ನು ದಂಡಿಸುವವನೊಬ್ಬ&#8230;</p>
<p style="text-align: center;">ಬ್ರಹ್ಮದಂಡದಿಂದ ಪತಿತರನ್ನುದ್ಧರಿಸುವವನಿನ್ನೊಬ್ಬ&#8230;!</p>
<p style="text-align: center;">
<p style="text-align: center;">ಒಬ್ಬನದು ಅರಮನೆ&#8230;</p>
<p style="text-align: center;">ಇನ್ನೊಬ್ಬನಿಗೆ ಅರಣ್ಯವೇ ಮನೆ!</p>
<p style="text-align: center;">
<p style="text-align: center;">ಒಬ್ಬನದು ಜೈತಯಾತ್ರೆಯಾದರೆ ಮೈತ್ರಯಾತ್ರೆ ಇನ್ನೊಬ್ಬನದು..!</p>
<p style="text-align: center;">
<p style="text-align: center;">ಒಬ್ಬನ ಶೋಭೆಗೆ ಕಾರಣ ಆಭೂಷಣವಾದರೆ ಇನ್ನೊಬ್ಬನಿಗೆ ಆತ್ಮವೇ ಆಭರಣ..!</p>
<p style="text-align: center;">
<p style="text-align: center;">ವಿಶ್ವದ ಯಾವುದೇ ಎರಡು ಮಹಾಶಕ್ತಿಗಳ ನಡುವೆ ಸಂಗಮವಾಗಲೀ, ಸಂಘರ್ಷವಾಗಲೀ ಏರ್ಪಟ್ಟಾಗ ಅದಕ್ಕೊಂದು  ಮಹಾಫಲವೇ ಇರಬೇಕಲ್ಲವೇ?</p>
<p style="text-align: center;">ವಿಧಿಚಿತ್ತವೇನಿತ್ತೋ?</p>
<p style="text-align: center;">ಬ್ರ್ರಹ್ಮ-ಕ್ಷತ್ರಗಳ ಮಹಾಮೇರುಗಳೆರಡು ವಸಿಷ್ಠ-ಕೌಶಿಕರ ರೂಪದಲ್ಲಿ ಸಂಧಿಸಿದವು ಅಲ್ಲಿ…</p>
<p style="text-align: center;">
<p style="text-align: center;">ಎತ್ತರದವರೆಲ್ಲ ಹತ್ತಿರದವರಲ್ಲ&#8230;</p>
<p style="text-align: center;">ಹತ್ತಿರದವರೆಲ್ಲ ಎತ್ತರದವರಾಗಿರಬೇಕಿಲ್ಲ&#8230;</p>
<p style="text-align: center;">ಎತ್ತರವಾಗಿದ್ದೂ ಹತ್ತಿರವಾಗುವವರು ಎಲ್ಲೋ ಭುವಿಗೊಬ್ಬರು…ಯುಗಕ್ಕೊಬ್ಬರು..!</p>
<p style="text-align: center;">
<p style="text-align: center;">ಎತ್ತರವನ್ನು ಕಂಡಾಗ ಕೌಶಿಕನಿಗೆ ವಸಿಷ್ಠರು ಸಾಕ್ಷಾತ್ ಪರಮಾತ್ಮನೇ ಎಂಬಂತೆ ತೋರಿಬಂದರು..</p>
<p style="text-align: center;">ಆದರೆ ಹತ್ತಿರವಾದಾಗ ಅವರು ತನ್ನಾತ್ಮವೇ ಎನ್ನಿಸುವಷ್ಟು ಆಪ್ತವಾದರು..!</p>
<p style="text-align: center;">
<p style="text-align: center;">ವಸಿಷ್ಠರ ಎತ್ತರ ಕೌಶಿಕನಲ್ಲಿ ವಿನಯವನ್ನು ಹುಟ್ಟುಹಾಕಿತು..</p>
<p style="text-align: center;">ಅವರ ಆಪ್ತತೆ ಕೌಶಿಕನಲ್ಲಿ ಪ್ರೀತಿಯನ್ನು ಮೂಡಿಸಿತು..</p>
<p style="text-align: center;">
<p style="text-align: center;">ಪ್ರೀತಿಯು ಆತನನ್ನು ಸಮೀಪಿಸುವಂತೆ ಮಾಡಿತು..</p>
<p style="text-align: center;">ವಿನಯವು ಆತನನ್ನು ಅವರ ಶ್ರೀಚರಣಗಳಲ್ಲಿ ಮಣಿಸಿತು..</p>
<p style="text-align: center;">
<p style="text-align: center;">
<p style="text-align: center;">ಆಚಾರ್ಯನೆಂದರೆ ಆತ್ಮಸಾಮ್ಯಾವಹನಲ್ಲವೇ?</p>
<p style="text-align: center;">ಬಳಿಸಾರುವ ಜೀವಗಳನ್ನು ಆತ ತನ್ನಂತೆಯೇ ಮಾಡುವುದು ನಿಶ್ಚಯವಲ್ಲವೇ?</p>
<p style="text-align: center;">ಪ್ರಣತಿಗೆ ಪ್ರತಿಕ್ರಿಯೆಯಾಗಿ ವಸಿಷ್ಠರಿತ್ತ ಆಶೀರ್ವಾದದ ಆಂತರ್ಯದಲ್ಲಿ ಸಮ್ರಾಟ್ ಕೌಶಿಕನು ತನ್ನಂತೆ &#8216;ಸ್ವರಾಟ್&#8217; ಆಗಲೆಂಬ ಆಶಯವಿದ್ದಿತು..</p>
<p style="text-align: center;">ರತ್ನಸಿಂಹಾಸನ ವಿರಾಜಿತನಾದ, ಮೃಷ್ಟಾನ್ನಭೋಜಿಯಾದ ಕೌಶಿಕನಿಗೆ ವಸಿಷ್ಠರಿತ್ತ ದರ್ಭಾಸನ, ಕಂದ-ಮೂಲ-ಫಲಗಳು, ಬದಲಾಗುವ ಭವಿಷ್ಯತ್ತಿನ ಅವ್ಯಕ್ತ ಸಂದೇಶವನ್ನು ನೀಡುವಂತಿದ್ದಿತು..</p>
<p style="text-align: center;">
<p style="text-align: center;">ಮತ್ತೆ ನಡೆಯಿತು ಮಹಾಮುನಿ ಮತ್ತು ಮಹಾರಾಜರ ನಡುವೆ ಕುಶಲಪ್ರಶ್ನೆಗಳ ವಿನಿಮಯ..</p>
<p style="text-align: center;">ಮಹೋನ್ನತ ವ್ಯಕ್ತಿತ್ವಗಳ ನಡುವೆ ನಡೆಯುವ ಕುಶಲಪ್ರಶ್ನೆಗಳು ಲೋಕಸಾಮಾನ್ಯರ ಬದುಕಿಗೆ ಆತ್ಮವಿಸ್ತರಣೆಯ ಕೈದೀವಿಗೆಗಳು..!</p>
<p style="text-align: center;">
<p style="text-align: center;">ಕೌಶಿಕನು ಪ್ರಶ್ನಿಸಿದ್ದು ತಪಸ್ಸು-ಅಗ್ನಿಹೋತ್ರಗಳ, ಶಿಷ್ಯ-ಶ್ರದ್ಧಾಳುಗಳ, ಗಿಡಮರಗಳ, ಮೃಗಪಕ್ಷಿಗಳ ಯೋಗಕ್ಷೇಮವನ್ನು..</p>
<p style="text-align: center;">
<p style="text-align: center;">ಮಹರ್ಷಿಯೊಬ್ಬರ ಆತ್ಮ ಅವರ ಶರೀರಕ್ಕಷ್ಟೇ ಸೀಮಿತವಾಗಿರಬಾರದು&#8230;</p>
<p style="text-align: center;">ಅದು ಶಿಷ್ಯರಲ್ಲಿ, ಮೃಗಪಕ್ಷಿಗಳಲ್ಲಿ, ಹೆಚ್ಚೇಕೆ ಗಿಡಮರಗಳಲ್ಲಿಯೂ ವಿಸ್ತರಿಸಿ ವ್ಯಾಪಿಸಿರಬೇಕು&#8230;</p>
<p style="text-align: center;">ಇವುಗಳಲ್ಲಿ ಎಲ್ಲಿ ನೋವಾದರೂ ತಾನು ನೋಯುವ, ಎಲ್ಲಿ ನಗುವಿದ್ದರೂ ತಾನು ನಲಿಯುವ ತಾದಾತ್ಮ್ಯ ಆತನಿಗಿರಬೇಕು &#8230;</p>
<p style="text-align: center;">ತನ್ನೊಡನಾಡಿಗಳಲ್ಲೆಲ್ಲ ತನ್ನನ್ನೇ ಕಾಣುವ ವಿಸ್ತೃತಾತ್ಮನಾಗಿರಬೇಕು ಆತ&#8230;</p>
<p style="text-align: center;">
<p style="text-align: center;">ಸರ್ವತ್ರ ಕುಶಲವೆಂದ ವಸಿಷ್ಠರು ಅಂತೆಯೇ ಕೌಶಿಕನ, ರಾಜ್ಯ-ಕೋಶಗಳ, ಸೈನ್ಯ-ಸಾಮಂತರ, ಪುತ್ರ-ಪೌತ್ರರ, ಮಂತ್ರಿ-ಮಿತ್ರರ, ಪರಿಜನ-ಪುರಜನರ ಕುಶಲ ವಿಚಾರಿಸಿದರು&#8230;</p>
<p style="text-align: center;">&#8216;ದೇಶವು ದೇಹವಾದರೆ, ರಾಜನೇ ಅದರ ಆತ್ಮ.. ಸೈನ್ಯ-ಕೋಶಗಳು, ಮಂತ್ರಿಗಳು, ಪ್ರಜೆಗಳೇ ಅದರ ಅಂಗಾಂಗಗಳು-ಇಂದ್ರಿಯಗಳು&#8217; ಎಂಬ ತತ್ತ್ವದ ಅಭಿವ್ಯಕ್ತಿ ವಸಿಷ್ಠರ ಕುಶಲ ಪ್ರಶ್ನೆಯಲ್ಲಿತ್ತು…!</p>
<p style="text-align: center;">
<p style="text-align: center;">ಮಹಾಪುರುಷರು ಕುಶಲವನ್ನು ಪ್ರಶ್ನಿಸುವ ಪರಿಯೇ ಬದುಕಿಗೆ ಇಷ್ಟು ದೊಡ್ಡ ಸಂದೇಶವನ್ನು ನೀಡುವುದಾದರೆ, ಅವರ ಬದುಕು ಇನ್ನೆಷ್ಟು ದೊಡ್ಡ ಸಂದೇಶವನ್ನು ಜೀವಿಗಳ ಜೀವನಕ್ಕೆ ನೀಡೀತು?</p>
<p style="text-align: center;">ವಸಿಷ್ಠ-ಕೌಶಿಕರ ಕುಶಲಸಂಭಾಷಣೆಯು ಜೀವಲೋಕದ ಕುಶಲಕ್ಕೇ ಕಾರಣವಾಗಬಹುದಾದ ಮಹತ್ತರಘಟನಾವಳಿಗಳನ್ನು ಅನಾವರಣಗೊಳಿಸಬಹುದೆಂಬುದನ್ನು ಯಾರು ತಾನೇ ಊಹಿಸಿದ್ದರು&#8230;!?</p>
<p style="text-align: center;">
<p style="text-align: center;">|| ಹರೇರಾಮ ||</p>
]]></content:encoded>
			<wfw:commentRss>http://hareraama.in/blog/%e0%b2%b0%e0%b2%be%e0%b2%ae%e0%b2%a8%e0%b2%bf%e0%b2%82%e0%b2%a6-%e0%b2%b0%e0%b2%be%e0%b2%9c%e0%b3%8d%e0%b2%af%e0%b2%a6%e0%b2%b5%e0%b2%b0%e0%b3%86%e0%b2%97%e0%b3%86-%e0%b2%97%e0%b3%8b%e0%b2%b5/feed/</wfw:commentRss>
		<slash:comments>20</slash:comments>
		</item>
		<item>
		<title>ಮೂರು ಮೆಟ್ಟಿಲುಗಳ ಮೀರಿ ಮೆರೆವನೋ ಗುರುಮೂರುತಿ&#8230;</title>
		<link>http://hareraama.in/blog/mooru-mettilugala-meeri-merevanao/</link>
		<comments>http://hareraama.in/blog/mooru-mettilugala-meeri-merevanao/#comments</comments>
		<pubDate>Sun, 01 Aug 2010 00:30:54 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[guru]]></category>
		<category><![CDATA[raghaveshwara]]></category>
		<category><![CDATA[ವಸಿಷ್ಠ]]></category>

		<guid isPermaLink="false">http://hareraama.in/?p=6174</guid>
		<description><![CDATA[ಮಾನವನ ಭ್ರಮೆಗಳು ಅನಂತ..
ಅವುಗಳಲ್ಲಿ ಬಹುದೊಡ್ಡದು 'ಪ್ರಕೃತಿಗೆ ಮಾತು ಬಾರದು' ಎಂದುಕೊಳ್ಳುವುದು..

ಆದರೆ, ಪ್ರಕೃತಿ ಎ೦ದೂ ಮೂಕವಲ್ಲ..
ಯಾವಾಗಲೂ, ಎಲ್ಲೆಲ್ಲೂ, ಪ್ರಕೃತಿಯು ಆಡುತ್ತಲೇ ಇರುವ ಮಾತುಗಳನ್ನು ಕೇಳಿಸಿಕೊಳ್ಳದ ನಾವೇ ಕಿವುಡರು..!
ನಮ್ಮೊಳಗಿನ ಕೊರತೆಯನ್ನು ಪ್ರಕೃತಿಯಲ್ಲಿ ಕಾಣುವ ಕುದೃಷ್ಟಿ ನಮ್ಮದು..
'ವಿಶ್ವ'ವನ್ನೇ 'ಶತ್ರು'ವೆಂದು ಕಲ್ಪಿಸಿಕೊಂಡು ಎಲ್ಲರ ಮೇಲೂ ದಂಡೆತ್ತಿ ಹೋದ ರಾಜಾ ಕೌಶಿಕನು - ಜೈತ್ರಯಾತ್ರೆಯಲ್ಲಿ ಮುಂದುವರೆಯುತ್ತಾ…ಮುಂದುವರೆಯುತ್ತಾ ಋಷ್ಯಾಶ್ರಮದ ದಿವ್ಯಸ್ಥಳವೊಂದನ್ನು ಪ್ರವೇಶಿಸಿದಾಗ,
ಆತನ ಅಂತರಾತ್ಮದ ಅನುಭವಕ್ಕೆ ಬಂದಿತು ಈ ಸತ್ಯ..]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fmooru-mettilugala-meeri-merevanao%252F&title=%E0%B2%AE%E0%B3%82%E0%B2%B0%E0%B3%81+%E0%B2%AE%E0%B3%86%E0%B2%9F%E0%B3%8D%E0%B2%9F%E0%B2%BF%E0%B2%B2%E0%B3%81%E0%B2%97%E0%B2%B3+%E0%B2%AE%E0%B3%80%E0%B2%B0%E0%B2%BF+%E0%B2%AE%E0%B3%86%E0%B2%B0%E0%B3%86%E0%B2%B5%E0%B2%A8%E0%B3%8B+%E0%B2%97%E0%B3%81%E0%B2%B0%E0%B3%81%E0%B2%AE%E0%B3%82%E0%B2%B0%E0%B3%81%E0%B2%A4%E0%B2%BF...&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%AE%E0%B2%BE%E0%B2%A8%E0%B2%B5%E0%B2%A8+%E0%B2%AD%E0%B3%8D%E0%B2%B0%E0%B2%AE%E0%B3%86%E0%B2%97%E0%B2%B3%E0%B3%81+%E0%B2%85%E0%B2%A8%E0%B2%82%E0%B2%A4..%0D%0A%E0%B2%85%E0%B2%B5%E0%B3%81%E0%B2%97%E0%B2%B3%E0%B2%B2%E0%B3%8D%E0%B2%B2%E0%B2%BF+%E0%B2%AC%E0%B2%B9%E0%B3%81%E0%B2%A6%E0%B3%8A%E0%B2%A1%E0%B3%8D%E0%B2%A1%E0%B2%A6%E0%B3%81+%27%E0%B2%AA%E0%B3%8D%E0%B2%B0%E0%B2%95%E0%B3%83%E0%B2%A4%E0%B2%BF%E0%B2%97%E0%B3%86+%E0%B2%AE%E0%B2%BE%E0%B2%A4%E0%B3%81+%E0%B2%AC%E0%B2%BE%E0%B2%B0%E0%B2%A6%E0%B3%81%27&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;"><strong>|| ಹರೇರಾಮ ||</strong></p>
<p>ಮಾನವನ ಭ್ರಮೆಗಳು ಅನಂತ..<br />
ಅವುಗಳಲ್ಲಿ ಬಹುದೊಡ್ಡದು &#8216;ಪ್ರಕೃತಿಗೆ ಮಾತು ಬಾರದು&#8217; ಎಂದುಕೊಳ್ಳುವುದು..<br />
ಆದರೆ, ಪ್ರಕೃತಿ ಎ೦ದೂ ಮೂಕವಲ್ಲ..<br />
ಯಾವಾಗಲೂ, ಎಲ್ಲೆಲ್ಲೂ, ಪ್ರಕೃತಿಯು ಆಡುತ್ತಲೇ ಇರುವ ಮಾತುಗಳನ್ನು ಕೇಳಿಸಿಕೊಳ್ಳದ ನಾವೇ ಕಿವುಡರು..!<br />
ನಮ್ಮೊಳಗಿನ ಕೊರತೆಯನ್ನು ಪ್ರಕೃತಿಯಲ್ಲಿ ಕಾಣುವ ಕುದೃಷ್ಟಿ ನಮ್ಮದು..</p>
<p>&#8216;ವಿಶ್ವ&#8217;ವನ್ನೇ &#8216;ಶತ್ರು&#8217;ವೆಂದು ಕಲ್ಪಿಸಿಕೊಂಡು ಎಲ್ಲರ ಮೇಲೂ ದಂಡೆತ್ತಿ ಹೋದ ರಾಜಾ ಕೌಶಿಕನು &#8211; ಜೈತ್ರಯಾತ್ರೆಯಲ್ಲಿ ಮುಂದುವರೆಯುತ್ತಾ…ಮುಂದುವರೆಯುತ್ತಾ ಋಷ್ಯಾಶ್ರಮದ ದಿವ್ಯಸ್ಥಳವೊಂದನ್ನು ಪ್ರವೇಶಿಸಿದಾಗ,<br />
ಆತನ ಅಂತರಾತ್ಮದ ಅನುಭವಕ್ಕೆ ಬಂದಿತು ಈ ಸತ್ಯ..<br />
ಅಕ್ಕ-ಪಕ್ಕದ ಮಕ್ಕಳೊಂದಿಗೆ ಜಗಳವಾಡಿ ಮನೆಗೆ ಬರುವ ತುಂಟ ಮಗುವಿಗೆ ಶಾಂತಿ-ಮೈತ್ರಿಗಳ ಪಾಠ ಹೇಳುವ ತಾಯಿಯಂತೆ ಪ್ರಕೃತಿಯೇ ಮಾತನಾಡಿತು ಆತನಲ್ಲಿ..!<br />
ಮಗುವಿನ ಕುರಿತಾದ ಮಾತೆಯ ಮಮತೆ ಆಕೆಯ ಕಂಗಳಲ್ಲಿ, ಕೈಗಳಲ್ಲಿ, ಮಾತುಗಳಲ್ಲಿ, ಎಲ್ಲೆಡೆಯಲ್ಲಿ ಹೊರಸೂಸುವಂತೆ&#8230;<br />
ಗಿರಿ-ನದಿಗಳು, ಗಗನ-ಮೇಘಗಳು, ಕಾಡು-ಮರ-ಬಳ್ಳಿಗಳು, ಪಕ್ಷಿ-ಮೃಗಗಳು..ಹೀಗೆ ಪ್ರಕೃತಿಯ ಒಂದೊಂದು ಅಂಗಗಳೂ ಬದುಕಿನ ಬದಲಾವಣೆಯ ಸಂದೇಶಗಳನ್ನು ಆತನಿಗೆ  ನೀಡತೊಡಗಿದವು..!</p>
<p>ಆಶ್ರಮದ ಹೋಮಧೂಮವನ್ನು ಹೊತ್ತು ತರುವ ಗಾಳಿ ಮಹಾರಾಜನ ಮೈದಡವಿ ಮಾತನಾಡಿಸಿತು..!<br />
&#8216;ಜೈತ್ರಯಾತ್ರೆ&#8217;ಯ ಬದಲು &#8216;ಮೈತ್ರಯಾತ್ರೆ&#8217;ಯನ್ನು ಮಾಡೆಂದಿತು..<br />
&#8216;ಸಂಚರಿಸು ಸಂಚರಿಸು..ಸರ್ವಲೋಕಗಳಲ್ಲಿಯೂ ಸಂಚರಿಸು..<br />
ಸತತವೂ ಕ್ರಿಯಾಶೀಲನಾಗಿರು, ಆದರೆ ಸ್ವಾರ್ಥಕ್ಕಾಗಿಯಲ್ಲ, ಲೋಕಹಿತಕ್ಕಾಗಿ..<br />
ನಾನು ಸತತವಾಗಿ ಸಂಚರಿಸುವೆನು. ಆದರೆ, ನಾನು ಸಂಚರಿಸಿದಲ್ಲೆಲ್ಲಾ<strong> ಜೀವಸಂಚಾರವಾಗುವುದು..ಜೀವ ಹಾನಿಯಲ್ಲವೆಂದಿತು</strong>&#8216;..</p>
<p>ಗಾಳಿಯಲ್ಲಿ ತೇಲಿ ಬರುವ ಮೋಡ ಮಾತಾಡಿತು..<br />
ಕೌಶಿಕನಿಗೆ <strong>ಕರಗು ಕರಗೆಂದಿತು</strong>..<br />
ಪ್ರಕೃತಿಯೊಂದಿಗೆ ಕೂಡಿ ಬಾಳಿ ಬೆಳೆದ ಬೆಳೆದ ಬ್ರಹ್ಮರ್ಷಿ ವಸಿಷ್ಠರು..<br />
&#8216;ಕರಗಿ ನಾನು ಮಳೆಯಾಗಿ ಇಳೆಗಿಳಿಯುವೆ..<br />
ಹೊಳೆಯಾಗಿ ಹರಿದು ಸಾಗರವ ಸೇರುವೆ..ಈ ದಾರಿ ನಿನಗೂ ಇಹುದು.<br />
ತೊರೆ ಕಾಠಿಣ್ಯವನ್ನು, ಭಾವ ಕರಗಿ ಜೀವನದಿಯಾಗಿ ಹರಿದು ಸೇರು ಆತ್ಮಸಾಗರವನ್ನೆಂದಿತು&#8217;</p>
<p>ಮೋಡವು ಮಳೆಯಾಗಿ, ಮಳೆಯು ಹೊಳೆಯಾಗಿ ನೀಡಿದ ನೀರುಂಡು ಹುಲುಸಾಗಿ ಬೆಳೆದ ಕಾಡು ಮಾತನಾಡಿತು..<br />
<strong>ಕೂಡಿ ಬಾಳೆಂದಿತು..</strong><br />
&#8216;ನೀನೊಬ್ಬ ಬೆಳೆದರೆ ಸಾಕೇ..?<br />
ನನ್ನ ಹಾಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಕೂಡಿ ಬೆಳೆಯಬೇಡವೇ..?<br />
ನೀ ಬೆಳೆಯಬೇಕು..ನೀ ಬೆಳೆಯುವಾಗ ನಿನ್ನೊಡನೆ ಸಾಧಕರ ಸಂಘವೇ ಬೆಳೆಯಬೇಕೆಂದಿತು..&#8217;</p>
<p>ಕಾಡಿನ ಕಿರೀಟದಂತಿದ್ದ ಮಹಾವೃಕ್ಷವೊಂದು ಮಾತನಾಡಿತು.<br />
&#8216;ಬಿಸಿಲು ನನಗಿರಲಿ, ನೆರಳು ನಿನಗಿರಲೆಂಬ ತ್ಯಾಗ-ಸೇವೆಗಳ ತತ್ವವನ್ನು ತಿಳಿಹೇಳಿತು..<br />
ಮಹಾಗುರುವೆಂಬ ಕಲ್ಪವೃಕ್ಷದ ಚರಣಚ್ಚಾಯೆಯಲ್ಲಿ ಆಶ್ರಯವನ್ನು ಪಡೆಯೆಂದಿತು..<br />
ಸಂಸಾರದ ತಾಪ-ಪಾಪಗಳನ್ನು ಕಳೆದು ಸುಖಿಸೆಂದಿತು&#8217;</p>
<p>&#8216;ಪಾದಪ&#8217;ದ ಪಾದಮೂಲದಲ್ಲಿ ಜನಿಸಿ ಕಾಂಡದ ಸುತ್ತೆಲ್ಲ ಬೆಳೆದು ಹೆಗಲ ಮೇಲೆ ತಲೆಯಿಟ್ಟು ವಿಶ್ರಮಿಸಿದ್ದ ಬಳ್ಳಿ ಹೀಗೆಂದಿತು.<br />
&#8216;ಬದುಕೆಂಬ ಬಳ್ಳಿಗೆ ಧ್ಯೇಯವೆಂಬ ವೃಕ್ಷದ ಆಸರೆ ಬೇಕೇಬೇಕು ಕೌಶಿಕಾ..!<br />
ನನ್ನಂತೆ ಧ್ಯೇಯವನ್ನು ಭದ್ರವಾಗಿ ಹಿಡಿದು ಬೆಳೆ ಆಗಸದೆಡೆಗೆಂದಿತು&#8217;</p>
<div id="attachment_6176" class="wp-caption alignright" style="width: 160px"><a class="highslide img_1" href="http://hareraama.in/wp-content/uploads/2010/08/VasisthaRushi.jpg" onclick="return hs.expand(this)"><img class="size-full wp-image-6176" title="VasisthaRushi" src="http://hareraama.in/wp-content/uploads/2010/08/VasisthaRushi.jpg" alt="" width="150" height="200" /></a><p class="wp-caption-text">ಪ್ರಕೃತಿಯೊಂದಿಗೆ ಕೂಡಿಬಾಳಿದ ಬೆಳೆಸಿದ ಬ್ರಹ್ಮರ್ಷಿ ವಸಿಷ್ಠರು..</p></div>
<p>ಬಳ್ಳಿಯಲ್ಲಿ ಬಳುಕುವ ಹೂವು ಕೌಶಿಕನ ಕೃತ್ರಿಮ ಸೌಂದರ್ಯವನ್ನು ನೋಡಿ ಕಿಲಕಿಲನೆ ನಕ್ಕಿತು..<br />
<strong>ಅರಳು ಅರಳೆಂದಿತು</strong>..<br />
&#8216;ಮಾಣಿಕ್ಯ-ಮುಕುಟಗಳ, ಪಟ್ಟೆ-ಪೀತಾಂಬರಗಳ ಸೊಬಗಿದು ನಿನದಲ್ಲವೆಂದಿತು..<br />
ಅರಳು ನೀ ಅರಳು..<br />
ನನ್ನಂತೆ ಅಂತರಾಳದಿಂದ ಅರಳು..<br />
ಅರಳಿದ ಆತ್ಮ ಸೌಂದರ್ಯವನ್ನು ಜಗಕ್ಕೆ ಚೆಲ್ಲೆಂದಿತು..&#8217;</p>
<p>ಕೋಟಿ ಕುಸುಮಗಳಿಗೆ,ಲಕ್ಷ ವೃಕ್ಷಗಳಿಗೆ, ನೂರು ಸಾವಿರ ಕಾಡುಗಳಿಗೆ ಆಶ್ರಯವಿತ್ತ ಗಂಭೀರ ಗಿರಿಪಂಕ್ತಿ ಮಾತನಾಡಿತು..<br />
<strong>ಅಚಲಧ್ಯಾನದಲ್ಲಿ ಮುಳುಗೆಂದಿತು</strong>..<br />
&#8216;ನಮ್ಮ ಎತ್ತರವ ನೋಡು..ನಮ್ಮ ಬಿತ್ತರವ ನೋಡು..ನಮ್ಮ ಗೌರವವ (ತೂಕ) ನೋಡು..!<br />
ಇವು ಪ್ರಾಪ್ತವಾದುದು ಅಚಲತೆಯಿಂದ…<br />
ಚಂಚಲತೆಯಿಂದಲ್ಲ..<br />
ಸ್ಥೂಲದಿಂದ ಆರಂಭಿಸಿ ಬರುಬರುತ್ತಾ ಸೂಕ್ಷ್ಮವಾಗುವ ನಮ್ಮ ಆಕೃತಿಯನ್ನು ನೋಡು.<br />
ಅದರಂತೆ ನೀನಾಗು..ಸ್ಥೂಲದಿಂದ ಪರಮ ಸೂಕ್ಷ್ಮದೆಡೆಗೆ ನೀ ಸಾಗು..<br />
ನಿನ್ನ ನೀ ಗೆದ್ದರೆ ಜಗವ ಗೆಲ್ಲದಿದ್ದರೂ ಗೆದ್ದಂತೆ..<br />
ನಿನ್ನ ನೀ ಗೆಲ್ಲದಿರೆ ಜಗವ ಗೆದ್ದೂ ಸೋಲುವೆಯೆಂದಿತು&#8217;</p>
<p>ಎಲ್ಲವೂ ತನ್ನೊಳಗಿದ್ದರೂ ತಾನು ಯಾವುದನ್ನೂ ಮುಟ್ಟದ ಗಗನ ಮಾತಾಡಿತು..<br />
<strong>ನಿರ್ಲಿಪ್ತನಾಗೆಂದಿತು</strong>..<br />
&#8216;ಮಿಂಚು-ಮಳೆಗಳು ನನ್ನೊಳಗಿವೆ.ಆದರೆ ಮಿಂಚಿನಿ೦ದ ಸುಡದ, ಮಳೆಯಲ್ಲಿ ತೋಯದ ನನ್ನ ವ್ಯಕ್ತಿತ್ವವನ್ನುನೋಡು..<br />
ನಡೆಯುವುದೆಲ್ಲವೂ ನನ್ನೊಳಗೇ ನಡೆದರೂ ಯಾವುದರಿ೦ದಲೂ ವಿಕಾರಗೊಳ್ಳದ ಎಲ್ಲಿಯೂ ಚಲಿಸದ ನನ್ನ ಸ್ವಭಾವನ್ನಾದರೂ ನೋಡು,<br />
ಎಲ್ಲೆಲ್ಲಿಯೂ ಇದ್ದರೂ ಎಲ್ಲಿಯೂ ಕಾಣದ ನನ್ನ ಹಾಗೆ ನೀನಿರಬೇಕು.<br />
ಇದ್ದೂ ಇರದ೦ತಿರಬೇಕೆಂದಿತು&#8217;</p>
<p>ಮೃಗಗಳು ಮಾತಾಡಿದವು..<br />
&#8216;<strong>ನಿರ್ವೈರನಾಗೆಂದವು</strong>..<br />
ಮಹರ್ಷಿಯ ಸಂಗದಿಂದಾಗಿ ಜನ್ಮ ಸಹಜವಾದ ಕ್ರೌರ್ಯ-ವೈರಗಳನ್ನು ತೊರೆದ, ಪ್ರೇಮ-ದಯೆಗಳನ್ನು ತಳೆದ ನಮ್ಮನ್ನು ನೋಡಿ ಕಲಿಯೆಂದವು&#8217;</p>
<p>ಹಕ್ಕಿಗಳು ಮಾತಾಡಿದವು..<br />
<strong>ಮರುಹುಟ್ಟು ತಾಳೆಂದವು</strong>..<br />
&#8216;ನಾವಾಗಲೇ ಮೊಟ್ಟೆಯನ್ನು ಒಡೆದು ಹೊರಬಂದಾಯಿತು.ಇನ್ನೂ ನೀನೇಕೆ ಅಜ್ನಾನದ ಮೊಟ್ಟೆಯಲ್ಲಿಯೇ ಕುಳಿತುಕೊಂಡಿರುವೆ?<br />
ತಡವಿನ್ನೇಕೆ ? ಭೇದಿಸು ಅಜ್ನಾನದ ಆವರಣವನ್ನು..ಕಾಣು ಆತ್ಮಸೂರ್ಯನನ್ನು..<br />
ಕಾಣು ಜಗವನ್ನು ಹೊಸ ದೃಷ್ಟಿಯಿಂದ..<strong>ಅಧ್ಯಾತ್ಮದ ಆಗಸದಿ &#8216;ಹಾರುವವ&#8217;ನಾಗೆಂದಿತು</strong>..!</p>
<p>ಅದಾಗ ತಾನೇ ಬಿರಿಯುವ ಮೊಟ್ಟೆಯು ದನಿಗೂಡಿಸಿತು.<br />
&#8220;ಸಾರು ಗುರುವಿನ ಬಳಿಗೆ..<br />
ನನ್ನಮ್ಮ ನನಗೆ ಮಾಡಿದಂತೆ ಆತ ನಿನಗೆ ಸೋಲು-ನೋವುಗಳ ಕಾವು ಕೊಡುವ..<br />
ಆಗ ನನ್ನಂತೆ ಒಡೆದು ಚೂರಾಗುವೆ ನೀ..!<br />
ನಿನ್ನ ರಾಜವೈಭವದ ಈ ರಾಜಸ ಸ್ವರೂಪವು ನಿನ್ನ ಭ್ರಮೆಗಳೊಡನೆ ನುಚ್ಚುನೂರಾಗುವುದು..!<br />
ಕೆಡುಕಲ್ಲ,  ನಿನ್ನ ಜೀವದ ಹಿತವದು..!<br />
ಮರುಹುಟ್ಟು ತಾಳುವೆ ನೀ&#8230;<br />
ಆಗ ವಿಶ್ವದ ಮಿತ್ರನಾಗುವೆ..ಅವಿನಾಶಿಯಾಗುವೆ..ಅಜರಾಮರನಾಗುವೆ..!&#8217;<br />
ಅದಾಗ ತಾನೇ ಬಿರಿದು ಅಂಕುರಿಸುತ್ತಿದ್ದ ಬೀಜವು, ಕರಗಿ ನೀರಾಗತೊಡಗಿದ ಮೋಡದೊಡಗೂಡಿ <strong>ಹೌದು ಹೌದೆಂದಿತು</strong>..</p>
<p>ಪ್ರಕೃತಿ ಮಾತೆಯ ಮಮತೆಯ ಮಾತುಗಳನ್ನು ಕೇಳಿಸಿಕೊ೦ಡಿದ್ದು ಕೌಶಿಕನ ಕಿವಿಗಳಲ್ಲ&#8230;.!<br />
ಚಕ್ರವರ್ತಿಯ ಪರಮ ಸಖನೊಬ್ಬ ದ್ವಾರಪಾಲಕರನ್ನೋ, ಮ೦ತ್ರಿ-ಮಾಗಧರನ್ನೋ ಮಾತನಾಡಿಸದೆ ನೇರವಾಗಿ ಅ೦ತಃಪುರವನ್ನೇ ಪ್ರವೇಶಿಸುವ೦ತೆ&#8230;<br />
ಕೌಶಿಕನ ವ್ಯಕ್ತಿತ್ವವೆ೦ಬ ಅರಮನೆಯ ಹೊರಗಿನ ದ್ವಾರಪಾಲಕರಾದ ಇ೦ದ್ರಿಯಗಳನ್ನೋ, ಒಳಗಿರುವ ಮನವೆ೦ಬ ಮ೦ತ್ರಿಯನ್ನೋ ಮುಟ್ಟದೆ, ಮಾತನಾಡದೆ ನೇರವಾಗಿ ಆತನ ಅ೦ತರಾತ್ಮದಲ್ಲಿಳಿದವು ಆತನ ಬದುಕಿನ ಭವ್ಯ ಭವಿಷ್ಯತ್ತನ್ನು ಕಟ್ಟುವ ಅಮರ ಸ೦ದೇಶಗಳು..!<br />
ತಾನು ಮು೦ದೇನಾಗಬೇಕೆ೦ಬುದನ್ನು ಆತನ ಆತ್ಮ ಅರಿಯತೊಡಗಿತ್ತು<br />
ಮನೋ-ಬುದ್ದಿಗಳು ಅರಿಯುವ ಸಮಯ ಸಮೀಪಿಸತೊಡಗಿತ್ತು..<br />
ವಿಧಿಯದರ ಸಿದ್ಧತೆಯನ್ನು ನಡೆಸಿತ್ತು..</p>
<p>ಹೀಗೆ ಪ್ರಕೃತಿದರ್ಶನದ ಮೊದಲ ಮೆಟ್ಟಿಲೇರಿ ಮುಂದುವರೆದ ಕೌಶಿಕನಿಗೆ ಗೋಚರಿಸಿತು ಧರೆಗಿಳಿದ ದೇವತೆಗಳ ಗಡಣ…!</p>
<p>ಮನುಷ್ಯರಲ್ಲಿ ಮೂರು ಬಗೆ..<br />
ತಮ್ಮ ದುಷ್ಕರ್ಮಗಳಿಂದಾಗಿ ಸತ್ತು ನರಕವನ್ನು ಸೇರುವ ಅಧಮರು ಹಲವರು..<br />
ತಮ್ಮ ಸತ್ಕರ್ಮಗಳಿಂದಾಗಿ ಸತ್ತು ಸ್ವರ್ಗವನ್ನು ಸೇರುವ ಮಧ್ಯಮರು ಕೆಲವರು..<br />
ತಮ್ಮ ಸಾನ್ನಿಧ್ಯ ಮಾತ್ರದಿಂದ ಸ್ವರ್ಗವನ್ನೇ ಧರೆಗಿಳಿಸುವ,<br />
ಅಥವಾ ಧರೆಯನ್ನೇ ಸ್ವರ್ಗವನ್ನಾಗಿ ಪರಿವರ್ತಿಸುವ,<br />
ಸ್ವರ್ಗ ಸಪ್ಪೆಯೆನಿಸಿ ದೇವತೆಗಳೂ ಧರೆಗಿಳಿಯುವಂತೆ ಮಾಡುವ,<br />
ದಿವ್ಯತೆಯನ್ನು ಕಾಣುವ, ತೋರುವ, ಉತ್ತಮೋತ್ತಮರು ಮರಳಿನ ನಡುವೆ ಹರಳಿನಂತೆ ಕೆಲವೇ ಕೆಲವರು..!</p>
<p>ಅಂಥಾ ಮಹಾಪುರುಷನೊಬ್ಬನ ಆವಾಸಭೂಮಿಯಾಗಿದ್ದಿತು ಆ ಸ್ಥಳ..<br />
ಹೆಜ್ಜೆ ಹೆಜ್ಜೆಗೆ ದೇವ-ದಾನವರು, ಗಂಧರ್ವಾಪ್ಸರೆಯರು,ಕಿನ್ನರ-ಕಿ೦ಪುರುಷರು, ಸಿದ್ಧ-ಚಾರಣರು, ಯಕ್ಷ-ವಿಧ್ಯಾದರರ ದರ್ಶನ..<br />
ಯಾವ ದಿವ್ಯಶಕ್ತಿಗಳನ್ನು ಕಾಣಲು ಜನ್ಮಜನ್ಮಗಳ ಕಠಿಣ ತಪಶ್ಚರ್ಯೆಯೂ ಪರ್ಯಾಪ್ತವಲ್ಲವೋ-<br />
ಅವುಗಳೆಲ್ಲವೂ ದರ್ಶನ ಮಾರ್ಗದರ್ಶನಗಳಿಗಾಗಿ ಮಹಾಗುರುವಿನ ದ್ವಾರದಲ್ಲಿ ಕಾತರಿಸಿ ಕಾಯುತ್ತಿದ್ದವು..<br />
ಸಕಲ ದೇವತೆಗಳ ನಿತ್ಯೋತ್ಸವಸ್ಥಾನವಾಗಿದ್ದಿತು ಅದು..!</p>
<p>ದಿವ್ಯಶಕ್ತಿಗಳ ದರ್ಶನವೆಂಬ ಮತ್ತೊಂದು ಮೆಟ್ಟಿಲೇರಿದ ಕೌಶಿಕನಿಗೆ ಕಂಡುಬಂದಿತು ಸಾಧಕಸಾಗರ&#8230;</p>
<p>ಜೀವಗಳಲ್ಲಿ ಮೂರು ಬಗೆಯನ್ನು ಬಲ್ಲವರು ಮತ್ತೊ೦ದು ವಿಧದಲ್ಲಿ ಹೇಳುವರು..<br />
ದಾಟುವ ದಾರಿ ಕಾಣದೆಯೇ ಸ೦ಸಾರ ಸಾಗರದಲ್ಲಿ ಮುಳುಗುವವರು ಹಲವರು..<br />
ಗುರು ಕರುಣೆಯಿ೦ದ ದಾರಿ ಲಭಿಸಿ ಹಾಗೂ ಹೀಗೂ ಸ೦ಸಾರ ಸಾಗರವನ್ನು ದಾಟುವವರು ಕೆಲವರು..<br />
ತಾನೊಬ್ಬ ಹೇಗೋ ದಾಟಿದರೂ ಬೇರೆಯವರನ್ನು ದಾಟಿಸುವ ಶಕ್ತಿಯಿಲ್ಲದವರಿವರು..<br />
ಮೂರನೆಯ ಬಗೆಯವರು ತಾವೂ ದಾಟುವುದಲ್ಲದೇ ತಮ್ಮೊಡನೆ ಅಸ೦ಖ್ಯ ಜೀವಿಗಳನ್ನೂ ದಾಟಿಸುವವರು.. ಇವರು ಅ೦ತ್ಯ೦ತ ವಿರಳ..<br />
ಮಹಾಗುರುವೆ೦ದು ಕರೆಯಬೇಕಾದದ್ದು ಇವರನ್ನೇ..!</p>
<p><strong>ಕಲ್ಲು </strong>ನೀರಿನಲ್ಲಿ ಮುಳುಗಿ ಹೋಗುತ್ತದೆ..<br />
<strong>ಎಲೆ </strong>ನೀರಿನಲ್ಲಿ ತೇಲಿದರೂ ಇನ್ನೊ೦ದು ವಸ್ತುವನ್ನು ಮುಳುಗದ೦ತೆ ಕಾಪಾಡುವ ಶಕ್ತಿ ಅದಕ್ಕಿಲ್ಲ..<br />
ಆದರೆ <strong>ನೌಕೆ </strong>ಹಾಗಲ್ಲ..<br />
ಅದು ತಾನೂ ತೇಲುವುದಲ್ಲದೇ ತನ್ನೊಳಗೆ ಅದೆಷ್ಟೋ ಜನರನ್ನು ಕುಳ್ಳಿರಿಸಿಕೊ೦ಡು ದಡಸೇರಿಸಬಲ್ಲದು..!</p>
<p>ಆ ಮಹಾಪುರುಷನ ದಿವ್ಯಾಶ್ರಮದ ದಿವ್ಯಾಶ್ರಯದಲ್ಲಿ ಸಾವಿರಾರು ಸಾಧಕರು ಸ೦ತತ ಸಾಧನೆಯಲ್ಲಿ -ನಿರತರಾಗಿರುವುದನ್ನು ಕೌತುಕದ ಕಣ್ಣುಗಳಿ೦ದ ಕ೦ಡನು ಕೌಶಿಕ..<br />
ಮಹಾಶಿಲ್ಪಿಯೊಬ್ಬನ ಶಿಲ್ಪ ಶಾಲೆಯಲ್ಲಿ  ಕೆತ್ತನೆಯ ಬೇರೆ ಬೇರೆ ಹ೦ತದಲ್ಲಿರುವ ಮೂರ್ತಿಗಳ ದರ್ಶನವಾಗುವ೦ತೆ,<br />
ಸಾಧನೆಯ ಬೇರೆ ಬೇರೆ ಮೆಟ್ಟಿಲುಗಳಲ್ಲಿರುವ ಸಾಧಕಸ್ತೋಮದ ದರ್ಶನವಾಯಿತು ಆತನಿಗೆ..<br />
ಅಲ್ಲಿ ಗೆಡ್ಡೆ-ಗೆಣಸು, ಹಣ್ಣು-ಹ೦ಪಲುಗಳನ್ನು ಮಾತ್ರವೇ ಸೇವಿಸುವ <strong>ಕ೦ದಮೂಲಫಲಾಶನ</strong>ರಿದ್ದರು..<br />
ಒಣಗಿದ ತರಗೆಲೆಗಳೇ ಆಹಾರವಾಗಿರುವ <strong>ಪರ್ಣಾಶನ</strong>ರಿದ್ದರು..<br />
ತರೆಗೆಲೆಗಳನ್ನೂ ತ್ಯಜಿಸಿ ಕೇವಲ ಜಲಮಾತ್ರವನ್ನೇ ಸೇವಿಸುವ <strong>ಜಲಾಶನ</strong>ರಿದ್ದರು..<br />
ಇವೆಲ್ಲವನ್ನೂ ಪರಿತ್ಯಜಿಸಿ ಕೇವಲ ವಾಯುಮಾತ್ರವನ್ನೇ ಸೇವಿಸುತ್ತಾ ತಪಗೈಯುವ <strong>ವಾಯುಭಕ್ಷ</strong>ರಿದ್ದರು..</p>
<p>ಅಲ್ಲಿ ಸಾಧಕರಿದ್ದರು..<br />
ಸಿದ್ಧರಿದ್ದರು..<br />
ಋಷಿಗಳಿದ್ದರು..<br />
ಮಹರ್ಷಿಗಳಿದ್ದರು..<br />
ದೇವರ್ಷಿಗಳಿದ್ದರು..<br />
ಬ್ರಹ್ಮರ್ಷಿಗಳಿದ್ದರು..</p>
<p>ಅವರೆಲ್ಲರೊಳಗೆ ಸಾಧನೆಯ ಬೇರೆ ಬೇರೆ ಅವಸ್ಥೆಯಲ್ಲಿರುವ <strong>ತನ್ನನ್ನೇ ನೋಡಿದ೦ತೆನಿಸಿತು </strong>ಕೌಶಿಕನಿಗೆ..!</p>
<p>ಸಾಧಕರಸ೦ಗಮವೆಂಬ ಮೂರನೆಯ ಮೆಟ್ಟಿಲನ್ನೇರಿದನು ಕೌಶಿಕ..</p>
<p>ದಾರಿಯೆಲ್ಲವನ್ನೂ ಕ್ರಮಿಸಿದ ಮೇಲಲ್ಲವೆ ಗುರಿ ತಲುಪುವುದು..?<br />
ವಿಶ್ವದರ್ಶನವಾದ ಮೇಲಲ್ಲವೇ ವಿಶ್ವ೦ಭರನ ದರ್ಶನವಾಗುವುದು..?<br />
ಮೋಡದಿ೦ದ ಮಳೆಯಾಗಿ ಹೊಳೆಗಿಳಿಯುವ ಬಿ೦ದುವೊ೦ದು ನದಿಗಳನ್ನೂ,ಮಹಾನದಿಗಳನ್ನೂ ಕ೦ಡ ಮೇಲಲ್ಲವೇ ಸಾಗರವನ್ನು ಸೇರುವುದು..?<br />
ಮೂರು ಮೆಟ್ಟಿಲುಗಳನ್ನೆರಿ ಮೂರ್ತಿಯನ್ನು ಕಾಣುವ೦ತೆ..ಪ್ರಕೃತಿ ಮ೦ಡಲವನ್ನೂ, ದೇವಮ೦ಡಲವನ್ನೂ, ಮುನಿಮ೦ಡಲವನ್ನೂ ದಾಟಿ ಮು೦ದುವರೆದು ಬ೦ದ ಕೌಶಿಕನಿಗಾಯಿತು ಅದುವರೆಗೆ ಕ೦ಡ ಬಗೆಬಗೆಯ ದಿವ್ಯತೆಗಳ ಮೂಲಪುರುಷನ ದಿವ್ಯದರ್ಶನ ..!</p>
<p>ಹೌದು..! ಅದು ವಸಿಷ್ಠಾಶ್ರಮ..<br />
ಅದೋ..!<br />
ಅವರೇ ಬ್ರಹ್ಮಮಾನಸಪುತ್ರರಾದ ಭಗವಾನ್ ವಸಿಷ್ಠರು..!!</p>
<p style="text-align: center;"><strong>|| ಹರೇರಾಮ ||</strong></p>
]]></content:encoded>
			<wfw:commentRss>http://hareraama.in/blog/mooru-mettilugala-meeri-merevanao/feed/</wfw:commentRss>
		<slash:comments>23</slash:comments>
		</item>
		<item>
		<title>ರಾಜ್ಯದಿಂದ ರಾಮನವರೆಗೆ&#8230;&#8230;&#8230;.</title>
		<link>http://hareraama.in/blog/rajyadinda-ramanavarege/</link>
		<comments>http://hareraama.in/blog/rajyadinda-ramanavarege/#comments</comments>
		<pubDate>Sun, 18 Jul 2010 02:18:24 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[bharati]]></category>
		<category><![CDATA[raama]]></category>
		<category><![CDATA[raghaveshwara]]></category>
		<category><![CDATA[sri]]></category>

		<guid isPermaLink="false">http://hareraama.in/?p=5713</guid>
		<description><![CDATA[ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!
ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ...
ಉಂಡ ಮನೆಗೆ ಎರಡೆಣಿಸಬಹುದು..!
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Frajyadinda-ramanavarege%252F&title=%E0%B2%B0%E0%B2%BE%E0%B2%9C%E0%B3%8D%E0%B2%AF%E0%B2%A6%E0%B2%BF%E0%B2%82%E0%B2%A6+%E0%B2%B0%E0%B2%BE%E0%B2%AE%E0%B2%A8%E0%B2%B5%E0%B2%B0%E0%B3%86%E0%B2%97%E0%B3%86..........&desc=%0D%0A%E0%A5%A5%C2%A0%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE%E0%A5%A5%0D%0A%E0%B2%85%E0%B2%AC%E0%B3%8D%E0%B2%AC%E0%B2%BE..%21%0D%0A%E0%B2%86%E0%B2%B8%E0%B3%86%E0%B2%AF+%E0%B2%86%E0%B2%B3%E0%B2%B5%E0%B3%87%E0%B2%A8%E0%B3%81..%E0%B2%85%E0%B2%97%E0%B2%B2%E0%B2%B5%E0%B3%87%E0%B2%A8%E0%B3%81..%3F%0D%0A%E0%B2%85%E0%B2%A6%E0%B3%81+%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF%E0%B2%B8%E0%B3%81%E0%B2%B5+%E0%B2%86%E0%B2%B6%E0%B3%8D%E0%B2%9A%E0%B2%B0%E0%B3%8D%E0%B2%AF%E0%B2%97%E0%B2%B3%E0%B3%87%E0%B2%A8%E0%B3%81..%3F%0D%0A%E0%B2%85%E0%B2%A7%E0%B2%83%E0%B2%AA&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;">
<p style="text-align: center;"><strong>॥ ಹರೇರಾಮ॥</strong></p>
<p>ಅಬ್ಬಾ..!<br />
ಆಸೆಯ ಆಳವೇನು..ಅಗಲವೇನು..?<br />
ಅದು ಸೃಷ್ಟಿಸುವ ಆಶ್ಚರ್ಯಗಳೇನು..?<br />
ಅಧಃಪತನವೇನು..?ಆನಂದವೇನು..?<br />
ಪರಿತಾಪವೇನು..? ಪರಿಪಾಕವೇನು..? ಪರಿವರ್ತನೆಯೇನು..?</p>
<p><strong>ಸಲ್ಲದ ಆಸೆಯೊಂದು ಏನೆಲ್ಲ ಅನಾಹುತಗಳನ್ನು ಮಾಡಿಬಿಡಬಹುದು..!<br />
</strong>ಸಲ್ಲದ ಆಸೆಯೊಂದು ಮನದಲ್ಲಿ ಮೂಡಿದರೆ, ಆ ವ್ಯಕ್ತಿ&#8230;<br />
ಉಂಡ ಮನೆಗೆ ಎರಡೆಣಿಸಬಹುದು..!<br />
ಮಮತೆಯ ಮಾತೆಯ ಮೇಲೆಯೇ ದುಂಡಾವೃತ್ತಿಗೆ ಮುಂದಾಗಬಹುದು..!<br />
ಗೌರವದ ಗುರುವನ್ನೇ ಕೊಲ್ಲಲೆಳೆಸಬಹುದು..!<br />
ರಕ್ಷಿಸಬೇಕಾದ ರಾಜನಾಗಿದ್ದರೂ ಚೋರನಂತೆ, ದರೋಡೆಕೋರನಂತೆ ವರ್ತಿಸಬಹುದು…!<br />
ತಪೋಭೂಮಿಯನ್ನು ರಣಭೂಮಿಯನ್ನಾಗಿಸಬಹುದು..!<br />
ಪ್ರೇಮದ ಗಂಗಾಧಾರೆ ಹರಿಯುವಲ್ಲಿ ದ್ವೇಷದ ವಿಷಜ್ವಾಲೆಯಾಗಿ ಉರಿಯಬಹುದು..!<br />
ತನ್ನವರನ್ನೆಲ್ಲಾ ಸಾಲಾಗಿ ನಿಲ್ಲಿಸಿ ಬಲಿ ಕೊಡಬಹುದು.!!</p>
<div id="attachment_5741" class="wp-caption alignright" style="width: 211px"><a class="highslide img_2" href="http://hareraama.in/wp-content/uploads/2010/07/Kireeta-Gold.jpg" onclick="return hs.expand(this)"><img class="size-medium wp-image-5741" title="Kireeta-Gold" src="http://hareraama.in/wp-content/uploads/2010/07/Kireeta-Gold-201x300.jpg" alt="ಮುಕುಟವೋ ? ಮಾಯೆಯೋ ?" width="201" height="300" /></a><p class="wp-caption-text">ಮುಕುಟವೋ ? ಮಾಯೆಯೋ ?</p></div>
<p>ಇನ್ನೊಬ್ಬರನ್ನು ಹಾಳು ಮಾಡಲು ತಪಸ್ಸು ಮಾಡಬಹುದು..!<br />
ಕೊನೆಗೆ ಸಮಸ್ತ ಬಲ-ದರ್ಪಗಳನ್ನು ಕಳೆದುಕೊಂಡು ಸೊನ್ನೆಯಾಗಿ ಬಿಡಬಹುದು..!</p>
<p><strong><br />
ಸಾತ್ವಿಕ ಆಸೆಯೊಂದು ಏನೆಲ್ಲವನ್ನೂ ಸಾಧಿಸಿಕೊಡಬಹುದು..!</strong><br />
ಸಾತ್ವಿಕ ಅಸೆಯೊಂದು ಮನದಲ್ಲಿ ಮೂಡಿದರೆ..ಆ ವ್ಯಕ್ತಿ..<br />
ಪ್ರತಿದ್ವಂದ್ವಿಯನ್ನು ಧ್ವಂಸಗೊಳಿಸುವ ದುರ್ಬುದ್ಧಿಯನ್ನು ತೊರೆದು, ಆತನೆತ್ತರಕ್ಕೆ ತಾನೂ ಬೆಳೆಯುವ ಮಹಾಪ್ರಯತ್ನಕ್ಕೆಳೆಸಬಹುದು..!<br />
ಸಾಮ್ರಾಜ್ಯಪತಿಯಾಗಿದ್ದವನು ಸನ್ಯಸ್ತಮುನಿಯಾಗಬಹುದು..!<br />
ರಕ್ತಪಿಪಾಸೆಯ ಕ್ಷಾತ್ರವನ್ನು ತೊರೆದು ಅತಿಕಠಿಣತಪಸ್ಸಿನ ದ್ವಾರಾ ಜ್ಞಾನಪಿಪಾಸೆಯ ಬ್ರಾಹ್ಮದ ತುತ್ತತುದಿಯ ಬ್ರಹ್ಮರ್ಷಿ ಪದವಿಗೇರಬಹುದು..!<br />
ಅನಂತಕಾಲ ಅಪರಿಮಿತ ಜೀವಿಗಳನ್ನುದ್ಧರಿಸುವ ಗಾಯತ್ರಿಯಂತಹ ಮಹಾಮಂತ್ರವೊಂದನ್ನು ಸಾಕ್ಷಾತ್ಕರಿಸಿಕೊಂಡು ಸಕಲ ಜಗತ್ತಿಗೆ ನೀಡಬಹುದು..!<br />
ಬದ್ಧವೈರಿಯೊಡನೆ ಶುದ್ಧಮೈತ್ರಿಯನ್ನು ಬೆಳೆಸಬಹುದು..!<br />
ಒಮ್ಮೆ ಆಸೆಯ ರಾಜಸ -ತಾಮಸ ರೂಪ..<br />
ಮತ್ತೊಮ್ಮೆ ಆಸೆಯ ಸಾತ್ವಿಕ ತಾತ್ವಿಕ ರೂಪ..<br />
ಇವೆರಡೂ ಒಬ್ಬನೇ ಮಹಾವ್ಯಕ್ತಿಯ ಬದುಕಿನಲ್ಲಿಒಂದಾದ ಮೇಲೊಂದರಂತೆ ತಾಂಡವ- ಲಾಸ್ಯಗಳನ್ನಾಡಿದ್ದುಂಟು..<br />
ಇವೆಲ್ಲವೂ ಒಬ್ಬನೇ ಮಹಾವ್ಯಕ್ತಿಯ ಬದುಕಿನಲ್ಲಿ ಘಟಿಸಿದ್ದುಂಟು ಎಂದರೆ ನಂಬುತ್ತೀರಾ..?<br />
ರಾಜಾಧಿರಾಜ ಪದವಿಯಲ್ಲಿದ್ದುಕೊಂಡು, ಆಸೆಯ ರಾಜಸ-ರೌದ್ರ ರೂಪದ ದಾಳಿಗೆ ತನ್ನದೆಲ್ಲವನ್ನೂ ತೆತ್ತು ಸೊನ್ನೆಯಾಗಿ,<br />
ಮತ್ತದೇ ಆಸೆ ತನ್ನ ಸಾತ್ವಿಕ -ತಾತ್ವಿಕ ರೂಪದಲ್ಲಿ ಮೈದೋರಿದಾಗ ಮರುಹುಟ್ಟು ಪಡೆದು.. ಭುವಿಯಗಲ ಹರಡಿದ, ಬಾನೆತ್ತರ ಬೆಳೆದ ಮಹಾಪುರುಷನ ಕುರಿತು ಮಾತನಾಡುವ ಮನವಾಗುತಿದೆಯಿಂದು&#8230;<br />
ಅವನೇ&#8230;! ಅಲ್ಲಲ್ಲ..ಅವರೇ.. ರಾಜರ್ಷಿ ಪದ ತೊರೆದು ಬ್ರಹ್ಮರ್ಷಿ ಪದಕೇರಿದ ಮಹಾಚೇತನ <strong>&#8220;ವಿಶ್ವಾಮಿತ್ರ&#8221;</strong></p>
<p>ಭವ್ಯ ಭವನಕ್ಕೆ ಭದ್ರವಾದ ಅಡಿಪಾಯವೇ ಬೇಕಲ್ಲವೇ..!?<br />
ಸಾಕ್ಷಾತ್ ಸೃಷ್ಟಿಕರ್ತನಿಂದಲೇ ಆರಂಭವಾದ ಕುಶಿಕವಂಶದಲ್ಲಿ ವಿಶ್ವಾಮಿತ್ರನ ಆವಿರ್ಭಾವವಾಯಿತು..<br />
ಕುಶಿಕ ವಂಶಕ್ಕೆ ಆ ಹೆಸರು ಬರಲು ಮೂಲ ಕಾರಣನಾದವನು ಆ ವಂಶದ ಮೂಲ ಪುರುಷನಾದ, ಬ್ರಹ್ಮಮಾನಸ ಪುತ್ರನಾದ ಕುಶ..<strong><br />
&#8216;ಕು&#8217;</strong> ಎಂದರೆ ಭೂಮಿ..ಅಲ್ಲಿ ನೆಲೆಸಿದುದರಿಂದಲೇ ಆತ <strong>ಕುಶ</strong>..</p>
<p>ಭುವಿಯ ಜೀವಿಗಳು ಪಡುವ ಬವಣೆಯನ್ನು ಕಂಡು ಕನಿಕರಿಸಿದವನವನು..<br />
ಇಳೆಗೊಳಿತು ಮಾಡಲೆಂದು ಬ್ರಹ್ಮಲೋಕವನ್ನೇ ಪರಿತ್ಯಜಿಸಿ ಇಳಿದುಬಂದವನವನು..<br />
ಅನುರೂಪಳಾದ ವೈದರ್ಭಿಯೆಂಬ ವನಿತೆಯನ್ನು ವರಿಸಿ ಪಡೆದ ನಾಲ್ಕು ಮಕ್ಕಳಿೆಗೆ ಧರ್ಮಸಾಮ್ರಾಜ್ಯ ಕಟ್ಟಿರೆಂದು ಆದೇಶವಿತ್ತವನವನು..<br />
ಹೀಗೆ ಭುವಿಯ ಮೇಲಣ  ದಿವಿಯ ಕರುಣೆಯ ಫಲವಾಗಿಯೇ ಕುಶಿಕ ವಂಶವು ಆರಂಭವಾಯಿತು..<br />
ತಂದೆಯ ಆಣತಿಯಂತೆ ಮಹೋದಯವೆಂಬ ನಗರಿಯಯನ್ನು ನಿರ್ಮಿಸಿ, ಪಾಲಿಸುತ್ತಿದ್ದ ಕುಶಪುತ್ರನಾದ ಕುಶನಾಭನು ಪುತ್ರಕಾಮೇಷ್ಟಿಯ ಫಲವಾಗಿ ಪಡೆದುಕೊಂಡ ಸುಪುತ್ರನೇ ಗಾಧಿ ..<br />
ಪ್ರತಿಸೃಷ್ಟಿಕರ್ತನ ಸೃಷ್ಟಿಯಾದದ್ದು ಸೃಷ್ಟಿಕರ್ತನ ಐದನೆಯ ತಲೆಮಾರಿನಲ್ಲಿ, ಗಾಧಿಯ ಮಗನಾಗಿ..ವಿಶ್ವಾಮಿತ್ರನೆಂಬ ಅಭಿಧಾನದಲ್ಲಿ..<br />
ಭೃಗು ವಂಶದ ಸೊಸೆಯಾಗಿ , ಜಮದಗ್ನಿಗೆ ಜನ್ಮವಿತ್ತು, ವಿಶ್ವಮಂಗಲಕ್ಕಾಗಿ ನದಿಯಾಗಿ ಹರಿದ ಕೌಶಿಕೀ ವಿಶ್ವಾಮಿತ್ರನ ಸೋದರಿ..<br />
ಗಾಧಿಯ ಕಾಲ ಮುಗಿಯಿತು..ವಿಶ್ವಾಮಿತ್ರನ ಕಾಲ ಆರಂಭವಾಯಿತು..<br />
ಮುತ್ತಾತನಾದ ಕುಶನು ಯಾವ ಆಶಯವನ್ನು ಹೊತ್ತು ಬ್ರಹ್ಮಲೋಕದಿಂದ ಭುವಿಗಿಳಿದು ಧರ್ಮರಾಜ್ಯವನ್ನು ಸಂಸ್ಥಾಪಿಸಿದ್ದನೋ..<br />
ಅದಕ್ಕನುಗುಣವಾಗಿ ಪ್ರಜಾರಂಜಕನಾಗಿ ರಾಜ್ಯಭಾರ ಮಾಡತೊಡಗಿದನಾತ&#8230;!<br />
ಬಾಹುಬಲ-ಬುದ್ದಿಬಲಗಳು ವಿಶ್ವಾಮಿತ್ರನಲ್ಲಿ ನೈಸರ್ಗಿಕವಾಗಿಯೇ ಇದ್ದವು..<br />
ಅಸ್ತ್ರಬಲ-ಶಸ್ತ್ರಬಲಗಳು ಶಿಕ್ಷಣ -ಸಾಧನೆಗಳಿಂದ ಪ್ರಾಪ್ತವಾಗಿದ್ದವು..<br />
ಜನ-ಧನ-ಸೇನಾಬಲಗಳು ತಂದೆಯಿಂದ ಮುಂದುವರಿದು ಬಂದಿದ್ದವು..<br />
ಹೀಗೆ ಸರ್ವಬಲ ಸಂಪನ್ನನಾದ ರಾಜಾ ವಿಶ್ವಾಮಿತ್ರನು ಸೇನೆಯನ್ನು ಕೂಡಿಕೊಂಡು ದಿಗ್ವಿಜಯಾಕಾಂಕ್ಷಿಯಾಗಿ ಭೂಮಂಡಲ ಯಾತ್ರೆ ಹೊರಟನು..<br />
ಬಾನಂಗಳದಲ್ಲಿ ಸೂರ್ಯನುದಯಿಸಿ ಮೇಲೇರುತ್ತಿದ್ದಂತೆಯೇ ತಾರೆಗಳು ಮರೆಯಾಗುವಂತೆ, ಮೇಲೇರಿ ಬರುವ ವಿಶ್ವವಿಜಯಿ ವಿಶ್ವಾಮಿತ್ರನೆದುರು ವಿಶ್ವದ ಭೂಪತಿಗಳೆಲ್ಲರೂ ಮುದುರಿದರು..!</p>
<p>ವಿಜಯದ ಮೇಲೆ ವಿಜಯಗಳನ್ನು ಸಾಧಿಸುತ್ತಾ..<br />
ನಗರ-ರಾಷ್ಟ್ರಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸುತ್ತಾ..<br />
ನದೀ-ಸರೋವರಗಳಲ್ಲಿ ಮೀಯುತ್ತಾ..<br />
ಗಿರಿವನಗಳ ಸೊಬಗನ್ನು ಸವಿಯುತ್ತಾ..<br />
ಮುಂದೊತ್ತಿ ಬರುವ ವಿಶ್ವಾಮಿತ್ರನ ಜೈತ್ರಯಾತ್ರೆ,  ಭುವಿಗಿಳಿದ ಬ್ರಹ್ಮಲೋಕದಂತಿದ್ದ ಅದೊಂದು ದಿವ್ಯಸ್ಥಳವನ್ನು ಪ್ರವೇಶಿಸುತ್ತಿರಲು..</p>
<p>ಹಿಮಾಲಯದ ಬಳಿಸಾರುವಾಗ ತಾನಾಗಿ ಉಂಟಾಗುವ ಶೈತ್ಯಾನುಭೂತಿಯಂತೆ ಆತನಿಗುಂಟಾಯಿತೊಂದು ಶಬ್ದಗಳಿಗೆ ನಿಲುಕದ ದಿವ್ಯಾನುಭೂತಿ..!</p>
<p><span style="color: #0000ff;">(ಮುಂದಿನ ಭಾಗಕ್ಕಾಗಿ ಮುಂದಿನ ಭಾನುವಾರ ಬನ್ನಿ..)</span></p>
<p style="text-align: center;"><strong>॥ ಹರೇರಾಮ॥</strong></p>
]]></content:encoded>
			<wfw:commentRss>http://hareraama.in/blog/rajyadinda-ramanavarege/feed/</wfw:commentRss>
		<slash:comments>19</slash:comments>
		</item>
		<item>
		<title>ಈ ಪರಿ ನೋಡುವುದೇ&#8230;ಪರಿವಾರವ..?</title>
		<link>http://hareraama.in/blog/ee-pari-noduvude-parivarava/</link>
		<comments>http://hareraama.in/blog/ee-pari-noduvude-parivarava/#comments</comments>
		<pubDate>Sun, 11 Jul 2010 16:58:42 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>
		<category><![CDATA[Bharathi]]></category>
		<category><![CDATA[bhava sangama]]></category>
		<category><![CDATA[flood]]></category>
		<category><![CDATA[Hare Raama]]></category>
		<category><![CDATA[oberoy]]></category>
		<category><![CDATA[program]]></category>
		<category><![CDATA[raghaveshwara bharati]]></category>
		<category><![CDATA[ramachandrapura]]></category>
		<category><![CDATA[samsthana]]></category>

		<guid isPermaLink="false">http://hareraama.in/?p=5343</guid>
		<description><![CDATA[ಬೇಕೇ ಈ ಕೆಲಸ ?

ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?....
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ..ನಾಳೆ ಮೈಯೆಲ್ಲ ಬೆವರ ಹೊಳೆ..

ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..

ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..
ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ..ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252Fee-pari-noduvude-parivarava%252F&title=%E0%B2%88+%E0%B2%AA%E0%B2%B0%E0%B2%BF+%E0%B2%A8%E0%B3%8B%E0%B2%A1%E0%B3%81%E0%B2%B5%E0%B3%81%E0%B2%A6%E0%B3%87...%E0%B2%AA%E0%B2%B0%E0%B2%BF%E0%B2%B5%E0%B2%BE%E0%B2%B0%E0%B2%B5..%3F&desc=%0D%0A%0D%0A%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%0D%0A%E0%B2%AC%E0%B3%87%E0%B2%95%E0%B3%87+%E0%B2%88+%E0%B2%95%E0%B3%86%E0%B2%B2%E0%B2%B8+%3F%0D%0A%E0%B2%A8%E0%B2%BF%E0%B2%B0%E0%B2%82%E0%B2%A4%E0%B2%B0+%E0%B2%AA%E0%B2%B0%E0%B2%BF%E0%B2%AD%E0%B3%8D%E0%B2%B0%E0%B2%AE%E0%B2%A3..%0D%0A%E0%B2%A6%E0%B2%BF%E0%B2%A8%E0%B2%95%E0%B3%8D%E0%B2%95%E0%B3%8A%E0%B2%82%E0%B2%A6%E0%B3%81+%E0%B2%8A%E0%B2%B0%E0%B3%81..%0D%0A%E0%B2%B9%E0%B3%8A%E0%B2%A4%E0%B3%8D%E0%B2%A4%E0%B2%BF%E0%B2%97%E0%B3%8A%E0%B2%82%E0%B2%A6%E0%B3%81+%E0%B2%B8%E0%B3%82%E0%B2%B0%E0&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;"><span style="color: #000000;"><br />
</span></p>
<p><span style="color: #000000;">|| ಹರೇರಾಮ ||</span></p>
<p style="text-align: justify;">
<p style="text-align: justify;"><span style="color: #000000;">ಬೇಕೇ ಈ ಕೆಲಸ ?</span></p>
<p><span style="color: #000000;">ನಿರಂತರ ಪರಿಭ್ರಮಣ..<br />
ದಿನಕ್ಕೊಂದು ಊರು..<br />
ಹೊತ್ತಿಗೊಂದು ಸೂರು..<br />
ಹತ್ತಾರು ಬಗೆಯ ನೀರು..!<br />
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?&#8230;.<br />
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.<br />
ಇಂದು ಆಗಸ ಹರಿದು ಬೀಳುವಂತೆ ಮಳೆ.. ನಾಳೆ ಮೈಯೆಲ್ಲ ಬೆವರ ಹೊಳೆ..</span></p>
<p><span style="color: #000000;">ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..<br />
ಇವರ ಪಾಲಿಗೆ ಊಟವೋ ಅದೃಷ್ಟದಾಟ..!<br />
ಒಮ್ಮೊಮ್ಮೆ ಇಲ್ಲವೇ ಇಲ್ಲ..<br />
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..<br />
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..<br />
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..<br />
ಇಂದು ಸೊಗಸಿಲ್ಲದ ಸಪ್ಪೆ.. ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!</span></p>
<p><span style="color: #000000;">ಇನ್ನು ನಿದ್ರೆಯ ಕಥೆ ಇದಕ್ಕಿಂತ ಭಿನ್ನವೇನಲ್ಲ..<br />
ಪ್ರಯಾಣ ತರುವ ಬಳಲಿಕೆ..<br />
ಕಾಲು ಚಾಚಿ ಕೆಲಹೊತ್ತು ಮಲಗುವಂತಿಲ್ಲ..<br />
ಒಂದೆಡೆ ಕರ್ತವ್ಯದ ಕರೆ..<br />
ಇನ್ನೊಂದೆಡೆ, ಸಂತೆಯಂತಿರುವಲ್ಲಿ ಮಲಗಲು ಎಡೆಯೆಲ್ಲಿ..?<br />
ರಾತ್ರಿ&#8230;<br />
ಒಮ್ಮೊಮ್ಮೆ ಹಾಸಲು ಹಾಸಿಗೆ.. ಹೊದೆಯಲು ಹೊದಿಕೆ&#8230;ವ್ಯವಸ್ಥಿತವಾಗಿ ಸಿಗುವ ಭರವಸೆಯಿಲ್ಲ&#8230;<br />
ನಿದ್ರೆಗೆ ಸಮಯವೂ ಇಲ್ಲ &#8211; ಸ್ಥಳವೂ ಇಲ್ಲ!<br />
ಯಾವುದೋ ಹೊತ್ತಿಗೆ ಇನ್ಯಾವುದೋ ಮೂಲೆಯನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ..!</span></p>
<p><span style="color: #000000;">ಅನಾರೋಗ್ಯ ಕಾಡಿದರೆ?&#8230;<br />
ನೋಡಿಕೊಳ್ಳಲು ಅಮ್ಮ- ಅಕ್ಕರಿಲ್ಲ..ಔಷಧಿ ತರಲು ಅಪ್ಪ- ಅಣ್ಣರಿಲ್ಲ..<br />
ಹಣೆಯ ಮೇಲೆ ಸಾಂತ್ವನದ ಕೈಯಿಡುವ ತಮ್ಮ-ತಂಗಿಯರಿಲ್ಲ..<br />
ನೋಡುವ ಮನವಿದ್ದರೂ ಒಡೆಯರಿಗೆ ನೋಡಲು ಸಮಯವಿಲ್ಲ..!</span></p>
<p><span style="color: #000000;">ಹೇಳಿ ಕೇಳಿ ಹದಿಹರೆಯದ ಸಮಯ..ಆದರೆ, ಓರಗೆಯ ಪೋರರಿಗೆ ಸಿಗುವ ಸುಖ-ಸಾಧನಗಳು ಇವರಿಗೆ ಕನಸು ಮಾತ್ರ..!<br />
ಗರಿ ಬಿಚ್ಚಿ ಹಾರುವ ವಯಸ್ಸು.. ಸ್ವತಂತ್ರವಲ್ಲದ ಮನಸ್ಸು..ನವನವೀನ ಉಡುಗೆ ತೊಡುಗೆಗಳಿಲ್ಲ..ವಾರಾಂತ್ಯಕ್ಕೊಂದು ರಜೆಯೂ ಇಲ್ಲ..!<br />
ಸಿನೆಮಾ-ಹೋಟೆಲ್ ಇಲ್ಲವೇ ಇಲ್ಲ..!</span></p>
<p><span style="color: #000000;">ಹಬ್ಬ ಬಂದಿತೇ?<br />
ಆತ್ಮೀಯರೊಂದಿಗಿನ ಸಂಭ್ರಮವಿಲ್ಲ..<br />
ಗೆಳೆಯರೊಂದಿಗಿನ ಒಡನಾಟ ಸಿಗದು..<br />
ಮನೆಯವರ ಒಡನಾಟ ಎಲ್ಲೋ ವರ್ಷದಲ್ಲೊಮ್ಮೆ..!<br />
ಈಡೇರದ ಅಪೇಕ್ಷೆಗಳು..ಬಗೆಬಗೆಯ ಉಪೇಕ್ಷೆಗಳು..</span></p>
<p><span style="color: #000000;">ಇದು ಮುನಿಜೀವನವೇ..!<br />
ಹಾಗೆಂದು ಇಂದಿನ ಜಗತ್ತಿನಲ್ಲಿ ಮುನಿಯಂತೆ ಬದುಕುವ ವಾತಾರವಣವಿಲ್ಲ..<br />
ಎತ್ತಲೋ ಸೆಳೆಯುವ ವಯಸ್ಸು ಬೇರೆ ..<br />
ಮುನಿಜೀವನವನ್ನೇ ನಡೆಸಬೇಕು; ಆದರೆ ಮುನಿಜೀವನಕ್ಕೆ ಸಲ್ಲಬೇಕಾದ ಗೌರವ ಮಾತ್ರ ಸಲ್ಲುವುದಿಲ್ಲ..!</span></p>
<p><span style="color: #000000;">ಹೊಟ್ಟೆ ಪಾಡಿಗಾಗಿ ಹೀಗೆ ದುಡಿಯುವವರುಂಟು..<br />
ಆದರೆ ಇವರೊಂದು ವಿಚಿತ್ರ ..!<br />
ಏಕೆಂದರೆ ಇವರಲ್ಲಿ ಅನೇಕರಿಗೆ ಸಂಪತ್ತಿನ ಕೊರತೆಯೇನಿಲ್ಲ..ಕೊರತೆ ಇರುವವರಿಗೂ ಹೊಟ್ಟೆ ಪಾಡಿನ ನಿರ್ವಹಣೆಗೆ ಬೇರೆ ಪ್ರಶಸ್ತ ಆಯ್ಕೆಗಳುಂಟು..</span></p>
<p><span style="color: #000000;">ಹೊಟ್ಟೆ ಪಾಡಿನ ನಂತರವೂ ಹೆಚ್ಚು ಹಣ ಸಂಪಾದನೆಗಾಗಿ ಹೀಗೆ ದುಡಿಯುವವರುಂಟು..ಆದರಿಲ್ಲಿ ವೇತನದ ಮಾತುಕತೆಯೇ ನಡೆಯದು !</span></p>
<p><span style="color: #000000;">ಹಲವರು ಹೆಸರ ಹಪಹಪಿಯಲ್ಲಿ ದುಡಿಯುವುದಿದೆ..<br />
ಇವರೋ ಎಲೆಮರೆಯ ಕಾಯಿಗಳು..</span></p>
<p><span style="color: #000000;">ಜೀವನ ಸಂಗಾತಿಗಳ ಮೆಚ್ಚಿಸಲೋ.. ಪಡೆಯಲೋ.. ರಕ್ಷಿಸಲೋ ಹೀಗೆ ಮಾಡುವರು..<br />
ಇಲ್ಲಿಯೋ ವೈರಾಗ್ಯದ ವಾತಾವರಣ!</span></p>
<p><span style="color: #000000;">ಕೆಲಸ ಬಹು ಸಂಕೀರ್ಣ..ದೊಡ್ಡದೊಡ್ಡವರನ್ನು ನಿಭಾಯಿಸಬೇಕು; ಸಾಮಾನ್ಯರನ್ನೂ ಸುಧಾರಿಸಬೇಕು..!<br />
ಎಲ್ಲವೂ ಸರಿಯಾಗಿ ಒಂದು ತಪ್ಪಾದರೂ ಸಾಕು..ಸರ್ವರ ಕೆಂಗಣ್ಣು ನಿಶ್ಚಿತ..</span></p>
<p><span style="color: #000000;">ಸಾಮರ್ಥ್ಯ- ವಯಸ್ಸುಗಳಿಗೆ ಮೀರಿದ ಕೆಲಸ..<br />
ಸಮಯ ಸೀಮಿತ&#8230;<br />
ಅನುಭವ ಪರಿಣತಿಗಳು ಅಲ್ಪ..<br />
ತರಬೇತಿ ತಾನಾಗಿಯೇ ಆಗಬೇಕು..<br />
ಫಲಿತಾಂಶ ಮಾತ್ರ ನೂರಕ್ಕೆ ನೂರು ಬರಲೇ ಬೇಕು..!</span></p>
<p><strong><span style="color: #000000;">ಇದು ನಮ್ಮ ನಿಮ್ಮ ನಡುವೆ ಸೇತುವೆ ಕಟ್ಟುವ ಪರಿವಾರದ ಬದುಕಿನ ಪರಿ!!!</span></strong></p>
<p><span style="color: #000000;">ಇ</span><span style="color: #000000;">ವೆಲ್ಲವೂ ಮನಸ್ಸಿನಲ್ಲಿ ಸುಳಿದಿದ್ದು ಮೊನ್ನೆ ಮೊನ್ನೆ </span><strong><span style="color: #000000;">ಪರಿವಾರದ ಹಿರಿಯ, ಚಿಪ್ಳಿ ರಮೇಶ &#8216;ಐವತ್ತಾಯಿತು&#8217;</span></strong><span style="color: #0000ff;"><span style="color: #000000;"> ಎಂದು ಆಶೀರ್ವಾದ ಬೇಡಿದಾಗ..<br />
ಆ ಜೀವನ.. ಅದು ರಾಮಾರ್ಪಣ..<br />
ಆತ ಪರಿವಾರವನ್ನು ಪ್ರವೇಶಿಸಿದ್ದು ಹದಿನಾಲ್ಕರ ಹರಯದಲ್ಲಿ..<br />
ಅಂದಿನಿಂದ ಇಂದಿಗೆ ಮೂವತ್ತಾರು ಸುದೀರ್ಘ ಸಂವತ್ಸರಗಳೇ ಸಂದಿವೆ..<br />
ಬದುಕಿನ ಬಹುಮುಖ್ಯ ಭಾಗವೇ ಮಠದಲ್ಲಿ ಕಳೆದಿದೆ..<br />
ಮಠದಲ್ಲಿ ಇಂದು ಎಲ್ಲವೂ ಬದಲಾವಣೆಯಾಗಿದೆ, ಆದರೆ ಬದಲಾಗದಿರುವುದು ರಮೇಶ ಮಾತ್ರ..<br />
ಅಂದಿನ ನಾಯಕರು ಇಂದಿಲ್ಲ, ಅಂದಿನ ಸೇವಕರೂ ಇಂದಿಲ್ಲ..</span><a class="highslide img_3" href="http://hareraama.in/wp-content/uploads/2010/07/Parivaara-11.jpg" onclick="return hs.expand(this)"><img class="alignright size-medium wp-image-5435" title="ಶ್ರೀಪರಿವಾರ" src="http://hareraama.in/wp-content/uploads/2010/07/Parivaara-11-300x199.jpg" alt="" width="300" height="199" /></a><span style="color: #000000;"><br />
</span><span style="color: #000000;"> </span></span></p>
<p><span style="color: #000000;">ಅಷ್ಟೇ ಏಕೆ, ಪೀಠ ಪರಂಪರೆಯಲ್ಲಿಯೇ ಮೂವತ್ತೈದು ತಲೆಮಾರು ಕಳೆದು ಮೂವತ್ತಾರನೆಯ ತಲೆಮಾರು ನಡೆಯುತ್ತಿದೆ..<br />
ಶಕ ಪರಿವರ್ತನೆಯೆಂಬುದು ಸಣ್ಣ ಪ್ರಳಯವಿದ್ದಂತೆ, ಅದನ್ನು ದಾಟಿ ಮುಂದುವರಿಯುವುದು ಸಾಮಾನ್ಯ ಸಂಗತಿಯಲ್ಲ..<br />
ಆದರೆ ಅಂದು ಯಾವ ಮಹತ್ವ ರಮೇಶನಿಗಿದ್ದಿತೋ, ಯಾವ ವಿಶ್ವಾಸ ಪೀಠಕ್ಕೆ ಆತನಲ್ಲಿದ್ದಿತೋ ಅದು ಇಂದಿಗೂ ಹಾಗೆಯೇ ಇದೆ,</span><span style="color: #000000;">ಇನ್ನಷ್ಟು ದೃಢವಾಗಿದೆ..</span><span style="color: #000000;"> </span></p>
<p><span style="color: #000000;">ರಮೇಶನೆಂದರೆ ನಮಗೆ ನೆನಪಾಗುವುದು ಆ ದಿನ.. ಆ ಸಮಯ&#8230;ಆ ಅಮೃತಘಳಿಗೆ&#8230;<br />
ಭಾವ ಸಂ||ದ ಚೈತ್ರ ಶುದ್ಧ ಚತುರ್ಥಿ, ೧೯೯೪ರ ಏಪ್ರಿಲ್ ೧೫..<br />
ಬದುಕೇ ಬದಲಾದ ದಿನವದು..ವ್ಯಷ್ಟಿ ಬದುಕಿನಿಂದ ಸಮಷ್ಟಿ  ಬದುಕಿಗೆ..<br />
ಭೋಗದ  ಬದುಕಿನಿಂದ ತ್ಯಾಗದ ಬದುಕಿಗೆ..<br />
ಸುಖದ ಬದುಕಿನಿಂದ ಸೇವೆಯ ಬದುಕಿಗೆ..<br />
ಪ್ರಥಮ ಆಶ್ರಮದಿಂದ ತುರೀಯ ಆಶ್ರಮಕ್ಕೆ  ನಾವು ಕಾಲಿರಿಸಿದ</span></p>
<div id="attachment_5434" class="wp-caption alignright" style="width: 215px"><span style="color: #000000;"><img class="size-medium wp-image-5434 " title="ದಂಡ ಕಮಂಡಲುಗಳ ನೀಡಿದವ" src="http://hareraama.in/wp-content/uploads/2010/07/87-11-205x300.jpg" alt="" width="205" height="300" /></span><p class="wp-caption-text">ದಂಡ ಕಮಂಡಲುಗಳ ನೀಡಿದವ</p></div>
<p><span style="color: #000000;">ಮಂಗಲ ಮಹಾ ಮುಹೂರ್ತವದು..</span></p>
<p><span style="color: #000000;"> ಹಳೆಯದೆಲ್ಲವು ಕಳೆಯಬೇಕು..<br />
ಹುಟ್ಟು ಹೆಸರು, ಹಿಂದೆ ಸಂಪಾದಿಸಿದ ಹಣ, ಸಿಹಿ ಕಹಿ ಸಂಬಂಧಗಳು, ಹೆಚ್ಚೇಕೆ ಉಟ್ಟಬಟ್ಟೆಯನ್ನೂ ಪರಿತ್ಯಜಿಸಬೇಕು..<br />
ಧರಿಸಿದ ಯಜ್ಞಸೂತ್ರವನ್ನೂ, ಶಿಖೆಯನ್ನೂ ಕಿತ್ತೆಸೆಯಬೇಕು..<br />
ಪಾತ್ರೆಯನ್ನೊಮ್ಮೆ ಸಂಪೂರ್ಣ ಬರಿದು ಮಾಡಿ ತೊಳೆದಿರಿಸಿದ ಮೇಲಲ್ಲವೇ ಅದರಲ್ಲಿ ಹೊಸತನ್ನು ತುಂಬುವುದು ..<br />
ಹಾಗೆಯೇ ಒಳಗಿನ ಹಳತೆಲ್ಲವೂ ಕಳೆದು ಶೂನ್ಯವಾದ ಮೇಲೆ, ಗುರು ಅಲ್ಲಿ ನಿತ್ಯ ನೂತನ ಪೂರ್ಣವನ್ನು ತುಂಬತೊಡಗುವುದು..<br />
ಹೊಸ ಬದುಕಿನ ನಿತ್ಯ ಸತ್ಯ ಸಂಗತಿಗಳಾದ ಕಾಷಾಯ ವಸ್ತ್ರ, ದಂಡ-ಕಮಂಡಲುಗಳು ಗುರುವಿನಿಂದ ಪ್ರಾಪ್ತವಾಗಬೇಕು..</span></p>
<p><span style="color: #000000;"> ಸಲಿಲ ಸನಿಹದಲ್ಲಿ ಸಂನ್ಯಾಸ ವಿಧಿಗಳು&#8230;<br />
ಆ ಸಮಯದಲ್ಲಿ ಗುರುಗಳಿರುವುದು ಮಠದಲ್ಲಿ.. ಉಪದೇಶ ನಡೆಯುವುದು ಅಲ್ಲಿಯೇ&#8230;<br />
ಗುರುವಿನ ಪ್ರತಿನಿಧಿಯೊಬ್ಬ ಗುರುಕರಗಳಿಂದ ಕಾಷಾಯ ವಸ್ತ್ರ, ದಂಡ-ಕಮಂಡಲುಗಳನ್ನು ತೆಗೆದುಕೊಂಡು ಸಂನ್ಯಾಸ ಸ್ಥಳಕ್ಕೆ ಆಗಮಿಸಿ ಗುರುಗಳ ಪರವಾಗಿ ಅವುಗಳನ್ನು  ನೂತನ ಪೀಠಾಧಿಪತಿಗಳಿಗೆ ನೀಡಬೇಕು, ಇದು ಸಂಪ್ರದಾಯ..<br />
ಇಲ್ಲೊಂದು ತಾದಾತ್ಮ್ಯವಿದೆ..<br />
ಚಿಂತನೆಯೊಂದು ಕಾರ್ಯರೂಪಕ್ಕೆ ಬರುವಾಗ ಮೆದುಳಿಗೂ ಮತ್ತು ಕಾರ್ಯವೆಸಗುವ ಕರಗಳಿಗೂ ಒಂದು ಬಗೆಯ ತಾದಾತ್ಮ್ಯವಿರುವುದಲ್ಲವೇ..?<br />
ಹಾಗೆಯೇ ಗುರುವಿನ ಮನದಲ್ಲಿ ಮನವನ್ನು ಬೆರೆಸಿ ಗುರುವಿನ ಕರಕಮಲವೇ ತಾನಾಗಿ ನಡೆಸಬೇಕಾದ ಮಹತ್ಕಾರ್ಯವದು..<br />
ತಲೆಮಾರಿಗೊಂದು ಬಾರಿ ಒಬ್ಬರಿಗೆ ಮಾತ್ರವೇ ಸಿಗುವ ಈ ಯೋಗ ಯಾರದಾಗಬಹುದೆಂದು ಎಲ್ಲರೂ ಕುತೂಹಲದಿಂದ ಕಾಯುತ್ತಿರುವಾಗಲೇ&#8230;&#8230;&#8230;ಅದು ರಮೇಶನನ್ನರಸಿ ಬಂತು..!</span></p>
<p><span style="color: #000000;">&#8220;</span><strong><span style="color: #000000;">ಯುಗ ಪರಿವರ್ತನೆಯ ಈ ಮಹತ್ಕಾರ್ಯವನ್ನು ನೀನೇ ಮಾಡಬೇಕು</span></strong><span style="color: #000000;">&#8221; ಎಂದು ರಮೇಶನಿಗೆ &#8216;ದೊಡ್ಡ ಗುರುಗಳ&#8217; ಅಪ್ಪಣೆಯಾಗಿತ್ತು..<br />
ಪರಿವಾರಕ್ಕೆ ಸಂದ ಪರಮೋಚ್ಚ ಗೌರವವಿದು!<br />
ಆದರೆ ಇತ್ತ ಸಂನ್ಯಾಸದ ಕ್ಷಣಗಣನೆಗಳು ಆರಂಭವಾಗುತ್ತಿದ್ದಂತೆಯೇ ಅತ್ತ ರುಗ್ಣಶಯ್ಯೆಯಲ್ಲಿದ್ದ ರಮೇಶನ ತಂದೆಯ ಮರಣದ ಕ್ಷಣಗಣನೆಯೂ ಆರಂಭವಾಗಿತ್ತು.<br />
ಆಶೌಚ ಬಂದರೆ ಅವಕಾಶವಿರದು&#8230;<br />
&#8220;ಹೇ ಭಗವಂತ&#8230;! ಕೃತಕೃತ್ಯತೆಯ ಆ ಅಮೃತ ಕ್ಷಣಗಳು ಕೈ ಜಾರದಿರಲಿ&#8221; ಎಂದು ನೆರೆನಂಬಿದ ರಾಮನಲ್ಲಿ ಮೊರೆಯಿಟ್ಟನಾತ..<br />
ಆ ದಿನ ಬಂದೇ ಬಂದಿತು..<br />
ಮೃತ್ಯುವಿನ ಮುಹೂರ್ತವನ್ನು ಬದಲಿಸಲು ಸಾಧ್ಯವೇ?<br />
ಕತ್ತಲೆ-ಬೆಳಕುಗಳು ರಮೇಶನ ಬಾಳಿನಲ್ಲಿ ಆ ದಿನ ಕೂಡಿ ಆಡಿದವು..<br />
ಅದೇನು ರಾಮನ ದಯೆಯೋ, ಸೇವೆಯ ಫಲವೋ, ತಂದೆಯ ಮೃತ್ಯುವಾರ್ತೆ ತಲುಪುವ ಮೊದಲೇ ಅಮೃತತ್ವದ ಸಂನ್ಯಾಸ ವಿಧಿಗಳು ಪೂರೈಸಿದ್ದವು..<br />
ಗುರುಪೀಠದ ಎರಡು ತಲೆಮಾರುಗಳನ್ನು ಬೆಸೆಯುವ ಬೆಸುಗೆಯಾಗಿ ರಮೇಶನ ಜೀವನ ಸಾರ್ಥಕಗೊಂಡಿತ್ತು..<br />
ವಿಪರ್ಯಾಸವೆಂದರೆ ಸಂನ್ಯಾಸ ದೀಕ್ಷೆಯಲ್ಲಿ ಅತ್ಯಂತ ಮುಖ್ಯಪಾತ್ರ ವಹಿಸಿದ ರಮೇಶನಿಗೆ, ಅದರ ವಾರ್ಷಿಕೋತ್ಸವದಲ್ಲೆಂದೂ ಭಾಗವಹಿಸಲು ಸಾಧ್ಯವಿಲ್ಲ, ಕಾರಣ ವಾರ್ಷಿಕವಾಗಿ ತಂದೆ ಬರುವ ದಿನವದು&#8230;</span></p>
<p><strong><span style="color: #000000;">ಅಹೋ..!<br />
ಧನ್ಯಸೇವಕ ರಮೇಶ..!</span></strong></p>
<p><span style="color: #000000;">ರಮೇಶನದು ಉದಾಹರಣೆ ಮಾತ್ರ. ಪರಿವಾರದಲ್ಲಿ ಸೇವೆ ಸಲ್ಲಿಸಿದ ಒಬ್ಬೊಬ್ಬರ ಬಗ್ಗೆ ಹೇಳಹೊರಟರೆ ಅದು ತುದಿಮೊದಲಿಲ್ಲದ ಸೇವಾಕಾವ್ಯವೇ ಆದೀತು..</span></p>
<p><span style="color: #000000;">ನಮ್ಮ ಪರಂಪರೆಯ ಸಂಪ್ರದಾಯವೆಂದರೆ, ಗುರುಸ್ಥಾನವನ್ನಲಂಕರಿಸಿರುವವರು ತಾವಾಗಿ ಏನನ್ನೂ ಮಾಡುವಂತಿಲ್ಲ..<br />
ಲೋಕದ ಕಾರ್ಯವನ್ನು ಗುರು ಮಾಡಿದರೆ ಗುರು ಕಾರ್ಯವೆಲ್ಲವೂ ಇವರದೇ..<br />
ಅಕ್ಷರಶಃ ಗುರುವಿನ ಅಂಗ-ಪ್ರತ್ಯಂಗಗಳಂತೆ ಪರಿವಾರದವರು..</span></p>
<p><span style="color: #000000;">ಸ್ನಾನ, ಭೋಜನ, ಶಯನಗಳಲ್ಲಿ ಅವರು ತಾಯಿ ಪಾತ್ರ ವಹಿಸಿದರೆ ನಾವು ವಹಿಸುವುದು ಮಗುವಿನ ಪಾತ್ರ..<br />
ಸಲಹೆ ನೀಡುವಾಗ ಇವರು ಮಂತ್ರಿಗಳು..<br />
ಚರಣಸೇವೆಯಲ್ಲಿ ದಾಸರು..<br />
ಬದುಕಿಗೆ ಮಾರ್ಗದರ್ಶನ ಕೇಳುವಾಗ ಮಕ್ಕಳು..<br />
ಮಂತ್ರಾಕ್ಷತೆಯ ಪಡೆಯುವಾಗ ಶಿಷ್ಯರು..<br />
ಗುರು-ಶಿಷ್ಯರನ್ನು ಬೆಸೆಯುವಲ್ಲಿ ಬೆಸುಗೆಗಳು&#8230;<br />
ಸಂಕಟಗಳು ಬರುವಾಗ ಸೇನಾನಿಗಳು..</span></p>
<p><span style="color: #000000;">ಒಮ್ಮೊಮ್ಮೆ ಪರಿವಾರದಲ್ಲಿ ನಮಗೆ ಲಕ್ಷ್ಮಣ ಕಾಣಿಸುತ್ತಾನೆ..<br />
ಅಯೋಧ್ಯೆಯಲ್ಲಿ ಸೀತಾರಾಮರಿಗೆ ಸಾವಿರ ಸೇವಕರು ಮಾಡುತ್ತಿದ್ದ ಸೇವೆಯನ್ನು ಅಡವಿಯಲ್ಲಿ ಆತನೊಬ್ಬನೇ ಗೈದನಲ್ಲವೇ!</span></p>
<p><span style="color: #000000;">ಒಮ್ಮೊಮ್ಮೆ ಪರಿವಾರದವರಲ್ಲಿ ನಮಗೆ ಭರತ ತೋರುತ್ತಾನೆ..<br />
ಮಠದಲ್ಲಿರಬಹುದಾದ ಸಕಲ ಸಂಪತ್ತುಗಳನ್ನೂ ಸಂರಕ್ಷಿಸುವ, ಸಧ್ವಿನಿಯೋಗ ಮಾಡುವ ಭಾರ ಅವರದ್ದೇ..</span></p>
<p><span style="color: #000000;">ಆದರೆ ಅದ್ಯಾವುದೂ ಅವರದಲ್ಲ&#8230;</span></p>
<p><strong><span style="color: #000000;">ಒಡರಿಸುವನೆಲ್ಲವನ್ ಅದಾವುದುಂ ತನದಲ್ಲ,<br />
ಬಿಡನೊಂದನುಂ ರಾಜ್ಯ ತನದಲ್ಲವೆಂದು|<br />
ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ,<br />
ಕಡುಯೋಗಿ ಭರತನಲ &#8211; ಮಂಕುತಿಮ್ಮ||</span></strong></p>
<p><span style="color: #993366;"><span style="color: #000000;">ಶಿಲೆಯನ್ನು ಶಿಲ್ಪವನ್ನಾಗಿಸುವಾಗ ಶಿಲ್ಪಿ ತನ್ನ ಚಾಣದ ಅದೆಷ್ಟು ಪೆಟ್ಟುಗಳನ್ನು ನೀಡುವುದಿಲ್ಲ?<br />
ಹಾಗೆಂದು ಶಿಲ್ಪಿಗೆ ಶಿಲೆಯ ಮೇಲೆ ಮಮತೆಯಿಲ್ಲವೆಂದೇನಲ್ಲ..<br />
ಹೆಜ್ಜೆ-ಹೆಜ್ಜೆಗೆ ಪರಿವಾರದವರನ್ನು ದಂಡಿಸುವಾಗ ನಾವೆದುರಿಸುವ ಸಂದಿಗ್ಧವಿ</span><span style="color: #000000;">ದು..</span></span></p>
<p><span style="color: #000000;">ಒಂದೆಡೆ ಸಮಾಜವೆಂಬ ಬೆಂಕಿ&#8230; ಇನ್ನೊಂದೆಡೆ ಗುರುವೆಂಬ ಅಗ್ನಿ-<br />
ಎರಡು ಮಹಾಶಕ್ತಿಗಳ ನಡುವೆ ಪರಿವಾರದವರ ಪರಿ &#8216;ಅತ್ತ ಪುಲಿ ಇತ್ತ ದರಿ&#8217;..</span></p>
<p><span style="color: #000000;">ಇದು ಇದೇನು ಮೊದಲಲ್ಲ..<br />
ಹಿಂದಿನವರ ಅನುಭವವನ್ನು ಈ ಶ್ಲೋಕದಲ್ಲಿ ಗಮನಿಸಿ..</span></p>
<p><span style="color: #993300;"><strong><span style="color: #000000;">ಮೌನಾನ್ಮೂಕಃ ಪ್ರವಚನಪಟುಃ ಚಾಟುಲೋ ಜಲ್ಪಕೋ ವಾ<br />
ದ್ಷ್ಧಷ್ಟಃ ಪಾರ್ಶ್ವೇ ಭವತಿ ಚ ವಸನ್ ದೂರತೋಪಿ ಪ್ರಗಲ್ಬಃ |<br />
ಶಾಂತ್ಯಾ ಭೀರುಃ ಯದಿ ನ ಸಹತೇ ಪ್ರಾಯಶೋ ನಾಭಿಜಾತಃ<br />
ಸೇವಾಧರ್ಮಃ ಪರಮಗಹನೋ ಯೋಗಿನಾಮಪ್ಯಗಮ್ಯಃ ||</span></strong></span></p>
<p><span style="color: #000000;">ಮಿತಿಯಲ್ಲಿ ಮಾತನಾಡಿದರೆ  &#8220;</span><strong><span style="color: #000000;">ಮೂಕ</span></strong><span style="color: #000000;">&#8221;<br />
ಧಾರಾಳ ಮಾತನಾಡಿದರೆ    &#8220;</span><strong><span style="color: #000000;">&#8216;ಪ್ರವಚನ ಪಟು ಅಥವಾ ಹಲುಬುವವನು</span></strong><span style="color: #000000;">&#8221;<br />
ಪಕ್ಕದಲ್ಲೇ ನಿಂತರೆ               &#8220;</span><strong><span style="color: #000000;">ಎಲ್ಲವೂ ಇವನದ್ದೇ ಆಯಿತು</span></strong><span style="color: #000000;">&#8221;<br />
ಎಲ್ಲೋ ಮರೆಯಲ್ಲಿದ್ದರೆ         &#8220;</span><strong><span style="color: #000000;">ಊಟಕ್ಕೆ ಮಾತ್ರ ಬರುವವನು</span></strong><span style="color: #000000;">&#8221;<br />
ವಿನೀತನಾಗಿದ್ದರೆ                 &#8220;</span><strong><span style="color: #000000;">ಪುಕ್ಕಲ</span></strong><span style="color: #000000;">&#8221;<br />
ಗಟ್ಟಿ ನಿಂತರೆ                       &#8220;</span><strong><span style="color: #000000;">ಅಧಿಕ ಪ್ರಸಂಗಿ</span></strong><span style="color: #000000;">&#8220;</span><strong><span style="color: #000000;"><br />
</span><span style="color: #000000;"> </span></strong><span style="color: #000000;">ಸೇವಾಧರ್ಮವದೆಷ್ಟು ಗಹನವೆಂದರೆ ಯೋಗಿಗಳಿಗೂ ದುಸ್ಸಾಧ್ಯವಾದುದು (</span><span style="text-decoration: underline;"><strong><span style="color: #000000;">ನಮಗೂ ಹೀಗೆಯೇ ಅನಿಸಿದೆ.</span></strong></span><span style="color: #000000;">)</span></p>
<p><span style="color: #000000;">ಗುರುವೆಂದರೆ ರಾಮಕಿಂಕರ..<br />
ಪರಿವಾರದವರು ಗುರುಕಿಂಕರರು..<br />
ಅಂತವರ ಕುರಿತು ಸಮಾಜದ ಭಾವವೇನಿರಬೇಕೆಂಬುದನ್ನು ರಾಜಾ ಕುಲಶೇಖರನ ಮಾತುಗಳಲ್ಲಿ ಗಮನಿಸಿ..</span></p>
<p><strong><span style="color: #000000;">ತ್ವದ್ಭೃತ್ಯ- ಭೃತ್ಯ- ಪರಿಚಾರಕ- ಭೃತ್ಯ-  ಭೃತ್ಯ-  ಭೃತ್ಯಸ್ಯ-  ಭೃತ್ಯ ಇತಿ ಮಾಂ ಸ್ಮರ ಲೋಕನಾಥ ||</span></strong></p>
<p><span style="color: #000000;">&#8221; ಹೇ ಭಗವಂತ.. ನಿನ್ನ ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕ ನಾನು ಎಂದೊಮ್ಮೆ ನೆನೆಸಿಕೊಂಡರೂ ಬದುಕು ಸಫಲ..&#8221;</span></p>
<p><span style="color: #000000;">ಹಿಂದೆಲ್ಲ ಹಿರಿಯರು ಮಠದಲ್ಲಿ ಓಡಿಯಾಡುವ ನಾಯಿಗಳನ್ನು ತೋರಿಸಿ &#8220;ಮಠದ ಹಳೆಯ ಸೇವಕರು&#8221; ಎಂದು ಪರಿಚಯಿಸುತ್ತಿದ್ದುದುಂಟು.<br />
&#8220;ಹಾಗೆಂದರೆ&#8221; ಎಂಬ ಪ್ರಶ್ನೆಗೆ &#8221; ಹಿಂದಿನ ಜನ್ಮದಲ್ಲಿ ಮಠದಲ್ಲಿ ಪರಿವಾರದವರೋ ಅಧಿಕಾರಿಗಳೋ ಆಗಿದ್ದು ಮಾಡಿದ ತಪ್ಪುಗಳ-<br />
ಭಾರವನ್ನಿಳಿಸಲು ಈ ಜನ್ಮದಲ್ಲಿ ನಾಯಿಗಳಾಗಿ ಇಲ್ಲಿಗೆ ಬಂದಿರುವವರು&#8221; ಎಂದು ಉತ್ತರಿಸಿದುದುಂಟು..!</span></p>
<p><span style="color: #000000;">ಪರಿವಾರದಲ್ಲಿ ತಪ್ಪುಗಳೇ ನಡೆಯುವುದಿಲ್ಲವೆಂದಲ್ಲ,<br />
ಅವರೂ ಮನುಷ್ಯರೇ ಅಲ್ಲವೆ?<br />
ತಪ್ಪುಗಳೇ ಇಲ್ಲದುದೆಲ್ಲಿ?<br />
ಸಂತರು ತಪ್ಪು ಮಾಡುವುದಿಲ್ಲವೇ?<br />
ರಾಜರು ತಪ್ಪು ಮಾಡುವುದಿಲ್ಲವೇ?<br />
ಸಾಮಾಜಿಕರು ತಪ್ಪು ಮಾಡುವುದಿಲ್ಲವೇ?<br />
ನಮ್ಮ ಶರೀರದಲ್ಲಿಯೇ ಎಲ್ಲೋ ಒಂದೆಡೆ ರೋಗ  ಉಂಟಾದರೆ ಹೀಗಳೆಯುವುದುಂಟೇ&#8230; ಬಿಟ್ಟುಬಿಡುವುದಂಟೇ&#8230;?</span></p>
<p><span style="color: #000000;">ಬಾಹ್ಯ ಜಗತ್ತಿನ ಸಕಲ ಸುಖಸಾಧನಗಳ ಸೆಳೆತಗಳನ್ನು ಮೀರಿ, ಭೋಗಪರರಿಗೆ ಹೇಗೆ ನೋಡಿದರೂ ಶುಷ್ಕವೆನಿಸುವ ಮಠದ ವಾತಾವರಣದಲ್ಲಿ-<br />
ಸೇವೆಗೈಯ್ಯಲು ಧಾವಿಸಿ ಬರುವ ಈ ಜೀವಿಗಳನ್ನು ಅದಾವುದು ಸೆಳೆಯಿತು..!?</span></p>
<p><span style="color: #000000;">ನಾಲ್ಕು ದಿನಕ್ಕೆಂದು ಬಂದು ಜೀವನವಿಡೀ ನಿಂತವರುಂಟು..<br />
ಭೇಟಿ ಮಾಡಲು ಬಂದು ಭೇಟಿ ಮಾಡಿಸಲು ನಿಂದವರುಂಟು..<br />
ಅದ್ಯಾವ ಬಗೆಯ ಸೆಳೆತವೋ!!</span></p>
<p><strong><span style="color: #000000;"> </span></strong></p>
<p><strong><span style="color: #000000;">ಯಾವ ವೃಂದಾವನವು ಸೆಳೆಯಿತೊ ನಿನ್ನ ಮಣ್ಣಿನ ಕಣ್ಣನು..<br />
ಯಾವ ವೃಂದಾವನವು ಚಾಚಿತೊ ತನ್ನ ಮಿಂಚಿನ ಕೈಯ್ಯನು</span></strong><span style="color: #000000;">..</span><strong><span style="color: #000000;"><br />
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ..</span></strong></p>
<p><span style="color: #000000;">ಪರಿವಾರವೆ೦ದರೆ ಗುರುದ್ವಾರ..<br />
ಮುಚ್ಚಿದ್ದು ಮರೆಯದು&#8230;ತೆರದದ್ದು ನೆನಪೇ ಇರದು&#8230;</span></p>
<p><span style="color: #000000;">ಪರಿವಾರವೆ೦ದರೆ ಗುರುವಿನ ದಾರಿ..<br />
ಗುರಿ ತಲುಪಿದ ಮೇಲೆ ದಾರಿಯ ಪರಿವೆ ಇಲ್ಲ..</span></p>
<p><span style="color: #800080;"><span style="color: #000000;">ಪರಿವಾರವೆಂದರೆ ಗುರುವಿನ ಮೆಟ್ಟಿಲು..<br />
ಮೆಟ್ಟಿಲು ಇರುವುದು ಮೂರ್ತಿಯ ಮುಟ್ಟಲು..<br />
ಆದರೆ ಹಲವರ ಭಾವನೆ&#8230; ಮೆಟ್ಟಿಲು ಇರುವುದೇ </span><strong><span style="color: #000000;">ಮೆಟ್ಟಲು..!</span></strong></span></p>
<p><strong><span style="color: #000000;">ಶಿವಾಜಿ ಹುಟ್ಟಿ ಬರಲೇ ಬೇಕು, ಆದರೆ ನಮ್ಮ ಮನೆಯಲ್ಲಲ್ಲವೆಂದರೆ ಹೇಗೆ?<br />
ಆದಿಶಂಕರರು ಅವತಾರ ತಾಳಲೇ ಬೇಕು, ಆದರೆ ಪಕ್ಕದ ಮನೆಯಲ್ಲಿ ಎಂದರೆ ಸರಿಯೇ?<br />
ನಮಗೆ ಮಠ ಬೇಕು, ಗುರು ಬೇಕು ಎಂದ ಮೇಲೆ ಪರಿವಾರವೂ ಬೇಕೇ ಬೇಕು..<br />
ಒಮ್ಮೆ ಯೋಚಿಸಿ, ನಿಂತಲ್ಲಿ ಕುಳಿತಲ್ಲಿ ಪರಿವಾರವನ್ನು ವಿಮರ್ಶಿಸುವ ನಾವು ಆ ಕಾರ್ಯಕ್ಕೆ ನಮ್ಮ ಮಕ್ಕಳನ್ನು ಕಳುಹಿಸಿಕೊಡಲು ಸಿದ್ಧರಿದ್ದೇವೆಯೇ?</span></strong></p>
<p><strong><span style="color: #000000;">ರಾಮಬಾಣ:<br />
ನಿ</span></strong><span style="color: #000000;">ಮ್ಮ ಮುಂದೆ ಎರಡು ಆಯ್ಕೆಗಳು.<br />
ನಿಮ್ಮ ಮಕ್ಕಳನ್ನು ಪರಿವಾರಕ್ಕೆ ಕಳುಹಿಸಿಕೊಡಿ.<br />
ಅದು ಸಾಧ್ಯವಾಗದಿದ್ದರೆ..<br />
ಪರಿವಾರದವರನ್ನು ನಿಮ್ಮ ಮಕ್ಕಳಂತೆ ನೋಡಿ..!</span></p>
<p style="text-align: center;"><span style="color: #0000ff;"><span style="color: #000000;">|| ಹರೇರಾಮ ||</span></span></p>
]]></content:encoded>
			<wfw:commentRss>http://hareraama.in/blog/ee-pari-noduvude-parivarava/feed/</wfw:commentRss>
		<slash:comments>122</slash:comments>
		</item>
		<item>
		<title>ಮಡಿಲ ಮಮತೆಗೆ ಮುಡಿ ಸಮರ್ಪಿತ&#8230;</title>
		<link>http://hareraama.in/blog/%e0%b2%ae%e0%b2%a1%e0%b2%bf%e0%b2%b2-%e0%b2%ae%e0%b2%ae%e0%b2%a4%e0%b3%86%e0%b2%97%e0%b3%86-%e0%b2%ae%e0%b3%81%e0%b2%a1%e0%b2%bf-%e0%b2%b8%e0%b2%ae%e0%b2%b0%e0%b3%8d%e0%b2%aa%e0%b2%bf%e0%b2%a4/</link>
		<comments>http://hareraama.in/blog/%e0%b2%ae%e0%b2%a1%e0%b2%bf%e0%b2%b2-%e0%b2%ae%e0%b2%ae%e0%b2%a4%e0%b3%86%e0%b2%97%e0%b3%86-%e0%b2%ae%e0%b3%81%e0%b2%a1%e0%b2%bf-%e0%b2%b8%e0%b2%ae%e0%b2%b0%e0%b3%8d%e0%b2%aa%e0%b2%bf%e0%b2%a4/#comments</comments>
		<pubDate>Sun, 04 Jul 2010 16:19:02 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=5036</guid>
		<description><![CDATA[ವಿಶ್ವಕುಟುಂಬಿಯ ಕುಟುಂಬದಲ್ಲಿಯೇ ಏರ್ಪಟ್ಟಿತು ಕೋಲಾಹಲ..
ಒಂದೇ ಚಕ್ರದ ರಥ ಚಲಿಸುವದಾದರೂ ಹೇಗೆ...?
ಒಂದೇ ರೆಕ್ಕೆಯ ಹಕ್ಕಿ ಹಾರುವದಾದರೂ ಹೇಗೆ..?
ಹಂಚಿಕೊಂಡಾಗ ದು:ಖ ಅರ್ಧವಾಗುವದು.. ಸುಖ ಇಮ್ಮಡಿಸುವದು..
ಸುಖ- ದು:ಖ ಸಮಭಾಗಿನಿಯೇ ದೂರಸರಿದರೆ ಬದುಕಿನಲ್ಲಿ ರಸವೆಲ್ಲಿ..?
ಲಕ್ಷ್ಮೀಯಿಲ್ಲದ ವೈಕುಂಠ ಲಕ್ಷ್ಮೀರಮಣನಿಗೆ ಸಪ್ಪೆ ಯೆನಿಸಿತು.. ಶೂನ್ಯವೆನಿಸಿತು...!!
ಲಕ್ಷ್ಮಿಯಿರುವ ಭೂಮಿಯೇ ಆಪ್ಯಾಯಮಾನವೆನಿಸಿತು…!
]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252F%25E0%25B2%25AE%25E0%25B2%25A1%25E0%25B2%25BF%25E0%25B2%25B2-%25E0%25B2%25AE%25E0%25B2%25AE%25E0%25B2%25A4%25E0%25B3%2586%25E0%25B2%2597%25E0%25B3%2586-%25E0%25B2%25AE%25E0%25B3%2581%25E0%25B2%25A1%25E0%25B2%25BF-%25E0%25B2%25B8%25E0%25B2%25AE%25E0%25B2%25B0%25E0%25B3%258D%25E0%25B2%25AA%25E0%25B2%25BF%25E0%25B2%25A4%252F&title=%E0%B2%AE%E0%B2%A1%E0%B2%BF%E0%B2%B2+%E0%B2%AE%E0%B2%AE%E0%B2%A4%E0%B3%86%E0%B2%97%E0%B3%86+%E0%B2%AE%E0%B3%81%E0%B2%A1%E0%B2%BF+%E0%B2%B8%E0%B2%AE%E0%B2%B0%E0%B3%8D%E0%B2%AA%E0%B2%BF%E0%B2%A4...&desc=%7C%7C+%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C+%0D%0A%0D%0A%0D%0A+%0D%0A%0D%0A%0D%0A+%0D%0A%0D%0A%0D%0A%E0%B2%95%E0%B3%8D%E0%B2%B7%E0%B3%80%E0%B2%B0+%E0%B2%B8%E0%B2%BE%E0%B2%97%E0%B2%B0+%E0%B2%A4%E0%B2%B0%E0%B2%82%E0%B2%97+%E0%B2%B6%E0%B3%80%E0%B2%95%E0%B2%B0%E0%B2%BE%E0%B2%B8%E0%B2%BE%E0%B2%B0+%E0%B2%A4%E0%B2%BE%E0%B2%B0%E0%B2%95%E0%B2%BF%E0%B2%A4+%E0%B2%9A%E0%B2%BE%E0%B2%B0%E0%B3%81%E0%B2%AE%E0%B3%82%E0%B2%B0%E0%B3%8D%E0%B2%A4%E0%B2%AF%E0%B3%87+%7C%0D%0A%E0%B2%AD%E0%B3%8B%E0%B2%97%E0%B2%BF+%E0%B2%AD%E0%B3%8B%E0%B2%97+%E0%B2%B6%E0%B2%AF%E0%B2%A8&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;"><strong>|| ಹರೇರಾಮ ||</strong><strong> </strong></p>
<div>
<h4 style="text-align: center;"><span style="color: #993366;"> </span></h4>
</div>
<div>
<h4 style="text-align: left;"><span style="color: #993366;"> </span></h4>
</div>
<h4 style="text-align: left;"><span style="color: #993366;"></p>
<p style="text-align: center;"><span style="text-decoration: underline;"><span style="color: #0000ff;">ಕ್ಷೀರ ಸಾಗರ ತರಂಗ ಶೀಕರಾಸಾರ ತಾರಕಿತ ಚಾರುಮೂರ್ತಯೇ |<br />
ಭೋಗಿ ಭೋಗ ಶಯನೀಯ ಶಾಯಿನೇ ಮಾಧವಾಯ ಮಧುವಿದ್ವಿಷೇ ನಮಃ ||</span></span></p>
<p style="text-align: center;">
<div id="attachment_5051" class="wp-caption aligncenter" style="width: 310px"><a class="highslide img_4" href="http://hareraama.in/wp-content/uploads/2010/07/Narayana-sg2.jpg" onclick="return hs.expand(this)"><img class="size-thumbnail wp-image-5051   " title="ಕಮಲೆ ತನ್ನ ಕರಕಮಲಗಳಿಂದ ಕಮಲನೇತ್ರನ ಪದಕಮಲಗಳನ್ನು ಸೇವಿಸುತ್ತಿದ್ದ ಸಮಯವದು…! " src="http://hareraama.in/wp-content/uploads/2010/07/Narayana-sg2-150x150.jpg" alt="" width="150" height="150" /></a><p class="wp-caption-text">ಅಮೃತಸಾಗರದಲ್ಲಿ ಅದ್ವೈತದಂಪತಿಗಳು..!</p></div>
<p style="text-align: left;">ಹಾಲು&#8230;..ಹಾಲು&#8230;&#8230;ಹಾಲು&#8230;!<br />
ಎಲ್ಲೆಲ್ಲೂ ಹಾಲು..!<br />
ಎಷ್ಟು ದೂರ ನೋಡಿದರೂ ಹಾಲು..!<br />
ಎಷ್ಟು ಆಳಕ್ಕಿಳಿದರೂ ಹಾಲು…!<br />
ಹಾಲೇ ಹಾಲು&#8230;!</p>
<p style="text-align: left;">ಕಣ್ದಣಿಯುವಷ್ಟು ವಿಶಾಲ..<br />
ಕಣ್ತಣಿಯುವಂತೆ ಶೀತಲ&#8230;!</p>
<p style="text-align: left;">ಅದುವೇ ಕ್ಷೀರಸಾಗರ..!</p>
<p style="text-align: left;">ಅಗಾಧ ಅನಂತ ಅಮೃತ ಸಾಗರದ ಮಧ್ಯದಲ್ಲಿ ..ಆಶ್ಚರ್ಯ&#8230;ಆಶ್ಚರ್ಯ&#8230;!<br />
ಆದಿಶೇಷ&#8230;ವಿಷಸರ್ಪಗಳ ರಾಜ&#8230;</p>
<p style="text-align: left;">ಅದೋ ಅಲ್ಲಿ&#8230;!<br />
ಅಮೃತಸಾಗರದ ಶಯನಮಂದಿರದಲ್ಲಿ&#8230;<br />
ವಿಷವಿಭೂಷಿತನಾದ ಆದಿಶೇಷನ ಪರ್ಯಂಕದಲ್ಲಿ ..<br />
<strong>ಅಮೃತ- ವಿಷ</strong>ಗಳನ್ನು ಮೀರಿ ನಿಂತ ಮಹಾಪ್ರಭು…<strong>ಮಧುಮರ್ದನ..ಮಾಧವ…ಮಾರಮಣ..!</strong></p>
<p style="text-align: left;">ಕರುಣಾಸಾಗರನನ್ನು ಸೇರುವ ಅಮೃತಸಾಗರದ ತವಕವೇ ತರಂಗಗಳಾಗಿ -<br />
ಮತ್ತೆ ಮತ್ತೆ ಮೇಲೆದ್ದು ಮುಂದೊತ್ತಿ ಶೇಷಶರೀರವನ್ನು ಮುತ್ತಿಟ್ಟರೆ..<br />
ಅಲ್ಲಿಂದ ಚಿಮ್ಮಿದ ದುಗ್ಧ ಬಿಂದುಗಳು ತುಂತುರು ಮಳೆಯಾಗಿ ಮಾರಮಣನ ಮಂಗಳ ಶರೀರವನ್ನಲಂಕರಿಸುತ್ತಿದ್ದವು&#8230;!<br />
ನೀಲಶರೀರದಲ್ಲಿ ಪಡಿಮೂಡಿದ ಸ್ವರ್ಣವರ್ಣದ ಹಾಲಹನಿಗಳು<br />
ನೀಲಾಕಾಶದಲ್ಲಿ ಮೂಡಿ ಮಿನುಗುವ ಕೋಟಿತಾರೆಗಳಂತೆ ಅತಿಶಯವಾಗಿ ಶೋಭಿಸುತ್ತಿದ್ದವು&#8230;</p>
<p style="text-align: left;">ಸುಧಾಸಿಂಧುವಿನಲ್ಲಿ ಸಂಭವಿಸಿದವಳು&#8230;<br />
ದಯಾಸಿಂಧುವಿನ ಕೈ ಹಿಡಿದವಳು..<br />
ನಂಬಿದವರಿಗೆ,<br />
ಭವಸಿಂಧುವನ್ನು ದಾಟಿಸುವವಳು..<br />
ಸಂಪತ್ಸಿಂಧುವನ್ನೇ ನೀಡುವವಳು&#8230;<br />
ಮಂಗಳ ದೇವತೆ ಮಹಾಲಕ್ಷ್ಮಿ..!!</p>
<p style="text-align: left;">ಕಮಲೆ ತನ್ನ ಕರಕಮಲಗಳಿಂದ ಕಮಲನೇತ್ರನ ಪದಕಮಲಗಳನ್ನು ಸೇವಿಸುತ್ತಿದ್ದ ಸಮಯವದು…!<br />
ಶಾಂತಸಾಗರದಲ್ಲಿ ಒಮ್ಮಿಂದೊಮ್ಮೆಲೇ ಬೀಸುವ ಚಂಡಮಾರುತದಂತೆ ಭೃಗುಮುನಿಗಳ ಪ್ರವೇಶವಾಯಿತಲ್ಲಿ..</p>
<p style="text-align: left;"><strong>ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ,<br />
ಚಿನ್ನದಾತುರಕಿಂತ ಹೆಣ್ಣು- ಗಂಡೊಲವು |<br />
ಮನ್ನಣೆಯ ದಾಹವೀಯೆಲ್ಲಕುಂ ತೀಕ್ಷ್ಣತಮ,<br />
ತಿನ್ನುವುದದಾತ್ಮವನೆ &#8211; ಮಂಕುತಿಮ್ಮ |</strong>|</p>
<p style="text-align: left;">ತನ್ನನ್ನು ಗಮನಿಸಬೇಕು, ಗುರುತಿಸಬೇಕು, ಗೌರವಿಸಬೇಕು ಎನ್ನುವ ಚಪಲವಿಲ್ಲದೇ ಹೋಗಿದ್ದರೆ..<br />
ಈ ಜಗತ್ತಿನಲ್ಲಿ ಕ್ಲೇಶ- ಕಲಹಗಳೇ ಇರುತ್ತಿರಲಿಲ್ಲವೇನೋ…!!</p>
<p style="text-align: left;">ಭಾವದುಂಬಿ ಚಿನ್ಮಯನ ಚರಣದಲ್ಲಿ ತನ್ಮಯರಾದ ವೈಕುಂಠವಾಸಿಗಳು&#8230;<br />
ಜಗದಗಲ ತೆರೆದ ತನ್ನ ಕಮಲ ನೇತ್ರಗಳಿಂದ ಅನುಗ್ರಹದ ಅಮೃತ ವರ್ಷವನ್ನೇ ಅವರೆಲ್ಲರ ಮೇಲೆ ಸುರಿಸುವ ವೈಕುಂಠದೊಡೆಯ&#8230;!<br />
ಯಾರೂ .. ಮತ್ಯಾರನ್ನೂ ಗಮನಿಸುವ ವಾತಾವರಣವೇ ಅಲ್ಲವದು..!</p>
<p style="text-align: left;">ವೈಕುಂಠದ ಸವಿಯನ್ನು ಸವಿಯಬೇಕಾದರೆ ಭಕ್ತನಾಗಬೇಕು.. ಅಥವಾ ಭಗವಂತನಾಗಬೇಕು.<br />
ಎರಡೂ ಭಾವಗಳಿಂದ ಭಿನ್ನನಾಗಿ ನಿಂತ ಭೃಗುವಿಗೆ ತಾನೇ ಬೇರೆಯೆಂದೆನಿಸಿತು.<br />
ಮಹಾವಿಷ್ಣುವೇ ತನ್ನನ್ನು ಉಪೇಕ್ಷಿಸಿದಂತೆನಿಸಿತು.</p>
<p style="text-align: left;">ವಿವೇಕದ ಕಣ್ಮುಚ್ಚಿ ಅಹಂಕಾರದ ಕಣ್ಣು ತೆರೆದಾಗ ಆಗುವದೇ ಹೀಗೆ..<br />
ಮಸ್ತಕವೆಂಬ ಉತ್ತಮಾಂಗದಲ್ಲಿರಬೇಕಾದ ದೃಷ್ಟಿ ಪತನಗೊಂಡು ಪಾದಕ್ಕಿಳಿದರೆ ಮತ್ತೇನಾಗಬೇಕು..?</p>
<p style="text-align: left;">ಮನೆಯವರು ಮಾತನಾಡಿಸಲಿಲ್ಲವೆಂದು ಮನೆಯ ಯಜಮಾನನ ಎದೆಗೊದೆಯುವ ಅತಿಥಿ..<br />
ಎದೆಗೊದೆಯುವ ಪಾದಗಳನ್ನೇ ಒತ್ತುವ, ಕಣ್ಣಿಗೊತ್ತಿಕೊಳ್ಳುವ ಯಜಮಾನ..</p>
<p style="text-align: left;">ವೈಕುಂಠದಲ್ಲಿ ನಡೆದಿದ್ದು ಹಾಗೆ&#8230;!!<br />
ಶ್ರೀ ವತ್ಸ &#8211; ಕೌಸ್ತುಭಗಳಿಂದ ವಿಭೂಷಿತವಾದ &#8216;ಶ್ರೀ&#8217;-ನಿವಾಸವಾದ ವಿಷ್ಣುವಿನ ವಕ್ಷಸ್ಠಲವು ಭೃಗುವಿನ ಪಾದಗಳಿಂದ ಆಕ್ರಾಂತವಾಯಿತು.<br />
ಭಗವತ್ಕರಕಮಲಗಳು ಸ್ಪರ್ಶಮಾತ್ರದಿಂದಲೇ ಭೃಗುವಿನ ಅಹಂಕಾರವನ್ನೇನೋ ಕೊನೆಗಾಣಿಸಿದವು..ಆದರೆ,<br />
ಮಳೆಮುಗಿದರೂ ನೆರೆ ಇಳಿಯದಂತೆ ಭೃಗುವಿನ ಅವಿನಯದ ಪರಿಣಾಮಗಳು ಮುಂದುವರೆದವು..!<br />
ಕ್ಷಣಮಾತ್ರದ ಆವೇಶದಲ್ಲಿ ನಡೆಯುವ ಘಟನೆಗಳ ಪರಿಣಾಮ ಯುಗ ಯುಗಗಳ ಕಾಲ ನಿಂತುಬಿಡಬಹುದಲ್ಲವೇ?</p>
<p style="text-align: left;">ತನ್ನ ಪರಮ ಪ್ರೇಮದ ನೆಲೆಯಾದ ಪ್ರಭುವಿನ ವಕ್ಷಸ್ಥಲವು ಭೃಗುವಿನ ಪಾದಾಘಾತಕ್ಕೊಳಗಾದುದನ್ನು ಕಂಡು ಖತಿಗೊಂಡ ಮಹಾಲಕ್ಷ್ಮೀ<br />
ಪತಿಗೃಹವನ್ನೂ..ಪಿತೃಗೃಹವನ್ನೂ ತ್ಯಜಿಸಿ ಧರೆಯಲ್ಲಿ ಮರೆಯಾಗಿ ಹೋದಳು…!</p>
<p style="text-align: left;"><strong><span style="color: #0000ff;">ಗೃಹಿಣೀ ಗೃಹಮುಚ್ಯತೇ…|</span></strong></p>
<p style="text-align: left;"><strong>ಗೃಹವು ಗೃಹವಲ್ಲ.. ಗೃಹಿಣಿಯೇ ನಿಜವಾದ ಗೃಹ..!!</strong></p>
<p style="text-align: left;">ವಿಶ್ವಕುಟುಂಬಿಯ ಕುಟುಂಬದಲ್ಲಿಯೇ ಏರ್ಪಟ್ಟಿತು ಕೋಲಾಹಲ..<br />
ಒಂದೇ ಚಕ್ರದ ರಥ ಚಲಿಸುವದಾದರೂ ಹೇಗೆ&#8230;?<br />
ಒಂದೇ ರೆಕ್ಕೆಯ ಹಕ್ಕಿ ಹಾರುವದಾದರೂ ಹೇಗೆ..?<br />
ಹಂಚಿಕೊಂಡಾಗ ದು:ಖವು ಅರ್ಧವಾಗುವದು.. ಸುಖವು ಇಮ್ಮಡಿಸುವದು..<br />
ಸುಖ- ದು:ಖ ಸಮಭಾಗಿನಿಯೇ ದೂರಸರಿದರೆ ಬದುಕಿನಲ್ಲಿ ರಸವೆಲ್ಲಿ..?ಸರಸವೆಲ್ಲಿ..?<br />
ಲಕ್ಷ್ಮಿಯಿಲ್ಲದ ವೈಕುಂಠ ಲಕ್ಷ್ಮೀರಮಣನಿಗೆ ಸಪ್ಪೆ ಯೆನಿಸಿತು.. ಶೂನ್ಯವೆನಿಸಿತು&#8230;!!<br />
ಅರಸಿಯನ್ನರಸುತ್ತಾ, ಸ್ಮರಿಸುತ್ತಾ, ಪರವೈಕುಂಠವನ್ನೇ ಪರಿತ್ಯಜಿಸಿ ಧರೆಗಿಳಿದನು ಸಿರಿಯರಸ..!</p>
<p style="text-align: left;">ಅಮೃತಸಾಗರದ ಜೊತೆಗೆ ಆಹಾರವನ್ನೂ, ಶೇಷಶಯನನ ಜೊತೆಗೆ ನಿದ್ರೆಯನ್ನೂ ಪರಿತ್ಯಜಿಸಿ,<br />
ವೆಂಕಟಾದ್ರಿಯ ಹುತ್ತವೊಂದರಲ್ಲಿ ಹುದುಗಿ ತೀವ್ರತರ ತಪ:ಶ್ಚರ್ಯೆಯಲ್ಲಿ ಮಗ್ನನಾದನಾತ!<br />
ಅಂತರ್ಭೂಮಿಯಲ್ಲಿ ಅಂತರ್ಮುಖನಾಗಿ ಕುಳಿತಿದ್ದ ಶ್ರೀನಿವಾಸನಿಗೆ ಜಗದ ಪರಿವೆಯೇ ಇರದಾಯಿತು.<br />
ಅತ್ತ ಜಗತ್ತಿಗೂ ಜಗನ್ನಿಯಾಮಕನ ಇರವೇ ತಿಳಿಯದಂತಾಯಿತು.<br />
ಅದೆಷ್ಟೋ ಕಾಲ ನಿರ್ನಿದ್ರನಾಗಿ, ನಿರಾಹಾರನಾಗಿ ಕುಳಿತಿದ್ದ ಹರಿಯ ಹಸಿವು -<br />
ಭೂಲೋಕವಾಸಿಗಳ್ಯಾರಿಗೂ ಅರಿವಿಲ್ಲದಾಯಿತು..</p>
<p style="text-align: left;">ಹ್ಞಾ..! ಯಾರಿಗೂ ಅರಿವಾಗಲಿಲ್ಲವೆನ್ನುವಂತಿಲ್ಲ..!<br />
ಕಣ್ಣರಿಯದಿದ್ದರೂ ಕರುಳರಿಯುವುದೆನ್ನುವರಲ್ಲವೇ..?<br />
ವೆಂಕಟಾದ್ರಿಯ ವಲ್ಮೀಕಗರ್ಭದಲ್ಲಿ ಅಂತರ್ಹಿತನಾಗಿ ಕುಳಿತುಕೊಂಡಿದ್ದ -<br />
ಶ್ರೀನಿವಾಸನ ಹಸಿವು ಚೋಳರಾಜನ ಅರಮನೆಯ ಒಡಲೊಂದರಲ್ಲಿ ಪ್ರತಿಧ್ವನಿಸತೊಡಗಿತ್ತು..!</p>
<p style="text-align: left;"><span style="color: #ff00ff;"><strong>ಅದು ಎನ್ನೋಣವೇ.?<br />
ಅವಳು ಎನ್ನೋಣವೇ.?<br />
ಅವರು ಎನ್ನೋಣವೇ..?<br />
ಪಶು ಎನ್ನೋಣವೇ..?<br />
ಮಾತೆ ಎನ್ನೋಣವೇ..?<br />
ಜೀವ ಎನ್ನೋಣವೇ..<br />
ದೇವನೆನ್ನೋಣವೇ..?<br />
ಚಲಿಸುವ ದೇವಾಲಯ ಎನ್ನೋಣವೇ..?</strong></span></p>
<p style="text-align: left;"><strong>ಮತ್ತೊಬ್ಬರ ಹಸಿವು ಅರ್ಥವಾಗುವುದು ಮಾತೃಹೃದಯಕ್ಕೆ ಮಾತ್ರ..!</strong></p>
<p style="text-align: left;"><strong><br />
</strong>ಚೋಳರಾಜನ ಗೋಶಾಲೆಯನ್ನಲಂಕರಿಸಿದ್ದ ಆ ಗೋಮಾತೆ ತನ್ನ ಕರುಳ ಕಣ್ಣಿನಿಂದಲೇ ಕಂಡಳು-<br />
ಅನ್ನ-ಪಾನಗಳಿಂದ ವಿರಹಿತನಾಗಿದ್ದ ವಿಶ್ವಾಧಾರ ಮೂರ್ತಿಯನ್ನು..!</p>
<p style="text-align: left;">ಹಟ್ಟಿಯಲ್ಲಿ ಅಂಬೆಗರೆಯುವ ತನ್ನ ಎಳೆಗರುವನ್ನೇ ಮರೆತು ವೆಂಕಟಾದ್ರಿಯ ಹುತ್ತದೆಡೆಗೆ ಲಗುಬಗೆಯಿಂದ ಧಾವಿಸಿದಳಾಕೆ..!<br />
ವಿಶ್ವಜನಕನನ್ನೇ ತನ್ನ ಕರುವಾಗಿಸಿಕೊಂಡು ವಿಶ್ವದ ವಾತ್ಸಲ್ಯವನ್ನೆಲ್ಲಾ ತನ್ನ ಜೀವರಸವಾದ ಹಾಲಿನಲ್ಲಿ ತುಂಬಿ ಹರಿಸಿದಳು ವಿಶ್ವಂಭರನಿಗಾಗಿ.<br />
ಹಸುವಿದ್ದಲ್ಲಿ ಹಸಿವಿಲ್ಲ..<br />
ಅಸುವುಳಿಸುವಳು..<br />
ಕಸು ತುಂಬುವಳು..<br />
ಹಸಿವಿಂಗಿಸುವಳು&#8230;<br />
ಆ ವಿಶ್ವಜನನಿ&#8230;!</p>
<p style="text-align: left;">ಸಮಯ ಸರಿಯಿತು&#8230;</p>
<p style="text-align: left;"><strong><span style="color: #0000ff;">&#8220;ಅಹಂ ವೈಶ್ವಾನರೋಭೂತ್ವಾ ಪ್ರಾಣಿನಾಂ ದೇಹಮಾಶ್ರಿತ: ।</span></strong><strong><span style="color: #0000ff;"><br />
</span></strong><strong><span style="color: #0000ff;">ಪ್ರಾಣಾಪಾನ ಸಮಾಯುಕ್ತ: ಪಚಾಮ್ಯನ್ನಂ ಚತುರ್ವಿಧಂ ||&#8221; - ಭಗವದ್ಗೀತೆ</span></strong></p>
<p style="text-align: left;"><strong>&#8220;ಅಗ್ನಿಸ್ವರೂಪವನ್ನು ತಾಳಿ ನಾನು ಜೀವಿಗಳ ದೇಹವನ್ನಾಶ್ರಯಿಸುವೆನು.<br />
ಪ್ರಾಣಾಪಾನಗಳ ಜೊತೆಗೂಡಿ ನಾಲ್ಕು ಬಗೆಯ ಆಹಾರಗಳನ್ನು ನಾನೇ ಜೀರ್ಣಗೊಳಿಸುವೆನು&#8221; </strong><br />
ಎನ್ನುವ ಸ್ವಾಮಿಯ ಒಡಲನ್ನು ತಂಪಾಗಿಡಲು ಪ್ರತಿನಿತ್ಯವೂ ವೆಂಕಟಾದ್ರಿಗೆ ಹೋಗಿ ಹಾಲಿಳಿಸತೊಡಗಿದಳಾ ಗೋಮಾತೆ!</p>
<p style="text-align: left;">ಅಸಾಮಾನ್ಯ ಸಂಗತಿಗಳು ಸಾಮಾನ್ಯರಿಗೆ ಹೇಗೆ ತಾನೆ ಅರ್ಥವಾಗಬೇಕು?<br />
ಅರಮನೆಯಲ್ಲಿ ದೊಡ್ಡ ಪ್ರಶ್ನಾರ್ಥಕ ಚಿಹ್ನೆ..<br />
ಯಾವಾಗಲೂ ಸಮೃದ್ದವಾಗಿ ಹಾಲುಗರೆಯುತ್ತಿದ್ದ ಹಸುವೇಕೆ ಇದ್ದಕ್ಕಿದ್ದಂತೆ ಬರಿದಾಯಿತು..!?<br />
ಕಾರಣ ತಿಳಿಯಲು ಗೋಪಾಲಕನಿಗೆ ರಾಜಾಜ್ಞೆಯಾಯಿತು.<br />
ಮರುದಿನ ಹಸುವನ್ನು ಹಿಂಬಾಲಿಸಿದನಾತ..<br />
ವೆಂಕಟಗಿರಿಯ ಹುತ್ತವೊಂದರ ಮೇಲೆ ಹಸುವು ಹಾಲಿಳಿಸುವುದನ್ನು ಪೊದೆಯ ಮರೆಯಲ್ಲಿ ನಿಂತು ಕಂಡ<br />
ಗೋಪಾಲಕನ ಕೋಪ ನೆತ್ತಿಗೇರಿತು.. ಪ್ರಜ್ಞೆ ಪಾತಾಳಕ್ಕಿಳಿಯಿತು…!<br />
ಕಣ್ಣು ಕೆಂಪಾಯಿತು ..ಮನಸ್ಸು ಕಪ್ಪಾಯಿತು..!</p>
<p style="text-align: left;"><strong><span style="color: #0000ff;">ಕ್ರೋಧಾತ್ ಭವತಿ ಸಂಮೋಹ: ಸಂಮೋಹಾತ್ ಸ್ಮೃತಿ ವಿಭ್ರಮಃ |<br />
ಸ್ಮೃತಿಭ್ರಂಶಾತ್ ಬುದ್ಢಿನಾಶ: ಬುದ್ಡಿನಾಶಾತ್ ಪ್ರಣಶ್ಯತಿ || - ಭಗವದ್ಗೀತೆ</span></strong></p>
<p style="text-align: left;"><strong>ಕ್ರೋಧದಿಂದ ಸಂಮೋಹ;<br />
ಸಂಮೋಹದಿಂದ ಸ್ಮೃತಿ ಭ್ರಂಶ ;<br />
ಸ್ಮೃತಿಭ್ರಂಶದಿಂದ ಬುದ್ಢಿ ನಾಶ;<br />
ಬುದ್ಢಿನಾಶದಿಂದ ಸರ್ವ ನಾಶ..</strong></p>
<p style="text-align: left;">ಪ್ರತ್ಯಕ್ಷ ರಾಕ್ಷಸನಂತೆ ಕೈಯಲ್ಲಿ ಕೊಡಲಿ ಹಿಡಿದು ಆ ಗೋವಿನೆಡೆಗೆ ಧಾವಿಸಿದನಾತ..!<br />
ಆದರೆ ವಾತ್ಸಲ್ಯ &#8211; ತನ್ಮಯತೆಗಳ ಪ್ರತಿಮೂರ್ತಿಯಾಗಿದ್ದ ಗೋವು ಶ್ರೀನಿವಾಸನಲ್ಲಿಟ್ಟ ತನ್ನ ಚಿತ್ತವನ್ನು ಕದಲಿಸಲಿಲ್ಲ..<br />
ಆ ಸ್ಠಳವನ್ನು ಬಿಟ್ಟೋಡಲಿಲ್ಲ.. ಹಾಲ್ಗರೆಯುವುದನ್ನು ನಿಲ್ಲಿಸಲಿಲ್ಲ.!!!</p>
<p style="text-align: left;">ಅದೇನು ದುರ್ಬುದ್ಢಿಯೋ, ದುರ್ದೈವವೋ&#8230;<br />
ಆ ಗೋವಳನು ಕೊಳಲು ಹಿಡಿಯಬೇಕಾದ ಕೈಯಲ್ಲಿ ಕೊಡಲಿ ಹಿಡಿದು ತನ್ನ ನೆತ್ತಿಯೆತ್ತರಕ್ಕೆತ್ತಿ ಸರ್ವಶಕ್ತಿಯಿಂದ ಗೋವಿನ ಕೊರಳ ಮೇಲೆ ಪ್ರಯೋಗಿಸಿದನು.. ಧರ್ಮ ದಯೆಗಳನ್ನು ಮರೆತು..<br />
<strong>ಆ ಕ್ಷಣದಲ್ಲಿಯೂ ಬಾರದಿದ್ದರೆ ದೇವರು ದೇವರೆನಿಸುವುದಾದರೂ ಹೇಗೆ..?</strong></p>
<p style="text-align: left;">ಪ್ರಹ್ಲಾದನ ಕಷ್ಟಕ್ಕೆ ಕರಗಿ ಕಂಬವನ್ನೊಡೆದು ಬಂದ ನರಸಿಂಹನಂತೆ&#8230;<br />
ಘೋರ ಗೋಹತ್ಯೆಯನ್ನು ಸಹಿಸಲಾರದೆ ಹುತ್ತವನ್ನೊಡೆದು ಮೇಲೆದ್ದನಾ ಗೋವಿಂದ..!!</p>
<p style="text-align: left;">ಬ್ರಹ್ಮಾಂಡವೇ ಬೆಚ್ಚಿ ಬೆರಗಾಗಿ ನೋಡ ನೋಡುತ್ತಿದ್ದಂತೆ, ಗೋವಿನ ಕೊರಳ ಮೇಲೆ ಸಿಡಿಲಿನಂತೆರಗಿದ<br />
ಕೊಡಲಿಯ ಹೊಡೆತವನ್ನು ತನ್ನ ಸಿರಿಮುಡಿಯಿಂದ ಪರಿಗ್ರಹಿಸಿದನು ಶ್ರೀನಿವಾಸ..</p>
<p style="text-align: left;">ಒಮ್ಮೊಮ್ಮೆ ನವಿಲುಗರಿಗಳಿಂದ,<br />
ಒಮ್ಮೊಮ್ಮೆ ರತ್ನಮುಕುಟದಿಂದ,<br />
ಒಮ್ಮೊಮ್ಮೆ ಸುಕೋಮಲ ಸುಮಗಳಿಂದ ವಿಭೂಷಿತವಾಗುವ ಆ ವರಶಿರದ ಮೇಲಾಯಿತು ಕುಠಾರ ಪ್ರಹಾರ!!</p>
<p style="text-align: left;">ಕ್ಷೀರಸಾಗರದೊಡೆಯನ ಶಿರವೊಡೆದು,ಚಿಲುಮೆಯಂತೆ ಚಿಮ್ಮಿದ ರಕ್ತಧಾರೆಯಿಂದ ಗೋಮಾತೆಗಾಯಿತು ಅಭಿಷೇಕ..<br />
ಹಾಲಿತ್ತವಳಿಗೆ ರಕ್ತವಿತ್ತು ದೇವತ್ವವನ್ನು ಮೆರೆದನು ದೇವ ದೇವ..</p>
<p style="text-align: left;">ಆದರೆ ಗೋಪಾಲಕ..?<br />
ಸೂರ್ಯೋದಯವಾದ ಮೇಲೆ ಕತ್ತಲೆ ಬದುಕುವುದುಂಟೆ..?<br />
ಮಮತೆಯ ಮಾತೆಯ ಕೊರಳು ಕೊಯ್ಯುವ ಕ್ರೂರ ಕೃತ್ಯ ಕಂಡು ಖತಿಗೊಂಡು ನಿಂತ ಶ್ರೀನಿವಾಸನೆಂಬ ಪ್ರಳಯಾಗ್ನಿಯಲ್ಲಿ ಆ ಗೋವಳನು ಮಿಡತೆಯಾಗಿ ಹೋದ&#8230;!<br />
ಯಾವ ಅಶುಭವನ್ನು ಗೋವಿಗೆ ಮಾಡಹೊರಟನೋ ಅದು ಆತನಿಗೇ ಆಯಿತು.</p>
<p style="text-align: left;"><strong><span style="color: #0000ff;">&#8216;ರಾಜಾ ರಾಷ್ಟ್ರಗತಂ ಪಾಪಂ..&#8217;</span></strong></p>
<p style="text-align: left;">ತನ್ನ ಪ್ರಜೆಗಳಾಗಲಿ, ಸೇವಕರಾಗಲಿ ಮಾಡಿದ ಪಾಪಕ್ಕೆ ರಾಜನೂ ಹೊಣೆಗಾರನಾಗಬೇಕಾಗುತ್ತದೆ.<br />
ಗೋಹತ್ಯೆಗೆಳಸಿದ ಗೋಪಾಲಕನ ಪಾಪದ ಬಿಸಿ, ಚೋಳ ರಾಜನಿಗೂ ತಟ್ಟಿತು.<br />
&#8220;ರಾಕ್ಷಸ ಸದೃಶನಾದ ಗೋಪಾಲಕನ ಸ್ವಾಮಿಯಾದ ನೀನು ರಾಕ್ಷಸನೇ ಆಗು&#8221; ಎಂದು ಶ್ರೀನಿವಾಸನು ರಾಜನನ್ನು ಶಪಿಸಿದನು..</p>
<p style="text-align: left;">ಆದರೆ ಈ ಘಟನಾವಳಿಗಳಿಂದ ಭೂಲೋಕಕ್ಕೆ ಒಳಿತೇ ಆಯಿತು.<br />
ವೈಕುಂಠವೇ ಧರೆಗಿಳಿದು ತಿರುಪತಿ-ತಿರುಮಲವಾಯಿತು..<br />
ಶೇಷನು ಶೇಷಾಚಲವಾದ..<br />
ಕ್ಷೀರಸಾಗರವು ಭಕ್ತಸಾಗರವಾಯಿತು..</p>
<p style="text-align: left;">ಆದರೆ..ಲಕ್ಷ್ಮಿ&#8230;?</p>
<div id="_mcePaste" style="text-align: left;">
<div id="_mcePaste" style="text-align: left;">ಸೂರ್ಯಪ್ರಭೆ ಸೂರ್ಯನನ್ನು ಬಿಟ್ಟಿರಲು ಸಾಧ್ಯವೇ ?</div>
</div>
<div id="_mcePaste" style="text-align: left;">ಬೆಳದಿಂಗಳು ಚಂದ್ರನಿಂದ ದೂರವಿರಲು ಸಾಧ್ಯವೇ ?</div>
<div id="_mcePaste" style="text-align: left;">ನಾರಾಯಣ ರಾಮನಾದಾಗ ಸೀತೆಯಾಗಿ ಜೊತೆಯಾದವಳು&#8230;</div>
<div id="_mcePaste" style="text-align: left;">ಕೃಷ್ಣನಾದಾಗ ರುಕ್ಮಿಣಿಯಾಗಿ ಆತನನ್ನೇ ವರಿಸಿದವಳು&#8230;</div>
<div id="_mcePaste" style="text-align: left;">ವಿಷ್ಣುವಿಗೆ ಅನಪಾಯಿನಿಯವಳು..</div>
<div id="_mcePaste" style="text-align: left;"><span style="color: #0000ff;">&#8216;ವಿಷ್ಣೋ: ಏಷಾ ಅನಪಾಯಿನೀ&#8217;<span style="color: #993366;"><br />
ತಿರುಪತಿಯಲ್ಲಿ ಶ್ರೀನಿವಸನೊಡನೆ ಆಕೆ ಪ್ರಕಟಗೊಳ್ಳುವ ಬಗೆಯೇ ಅನ್ಯಾದೃಶವಾದುದು&#8230;</span> </span></div>
<div style="text-align: left;"><span style="color: #0000ff;"><span style="color: #993366;">&#8216;ಶ್ರೀ&#8217; <span style="font-weight: normal;">ಇಲ್ಲದೆ</span> ಶ್ರೀನಿವಾಸ<span style="font-weight: normal;">ನೆನಿಸುವುದೆಂತು..?</span></span><br />
</span></div>
<div id="_mcePaste" style="text-align: left;">ಜಗತ್ತಿನ ಎಲ್ಲೆಡೆಯಿಂದ ಧನ ಕನಕಗಳ ರಾಶಿಯ ರೂಪದಲ್ಲಿ ಬಂದು ಕ್ಷಣ ಕ್ಷಣವೂ ಶ್ರೀನಿವಾಸನ್ನನ್ನಾವರಿಸುವಳವಳು, ಆಲಂಗಿಸುವಳವಳು&#8230;</div>
<div id="_mcePaste" style="text-align: left;">ಆದುದರಿಂದಲೇ ತಿರುಪತಿಗೆ ಹರಿದುಬರುವಷ್ಟು ಸಂಪತ್ತು ಜಗತ್ತಿನ ಬೇರಾವ ದೇವಸ್ಠಾನಗಳಿಗೂ ಬಾರದು..!</div>
<div id="_mcePaste" style="text-align: left;">ತಿರುಪತಿಯ ವೈಭವವಿನ್ನೆಲ್ಲಿಯೂ ಕಾಣದು.<br />
ತಿರುಪತಿಯೆಂದಾಕ್ಷಣವೇ ಮನಸ್ಸ್ಸಿಗೆ ಬರುವದು ಅಲ್ಲಿಯ ವೈಭವ.</div>
<div id="_mcePaste" style="text-align: left;">ಅದು&#8230;ಲಕ್ಷ್ಮಿ..!</div>
<div style="text-align: left;">ವಿರಹದ ನಂತರ ಬರುವ ಸಂಗಮ ಮತ್ತಷ್ಟು ಗಾಢವಾಗಿರುವದಲ್ಲವೇ?</div>
<div id="_mcePaste" style="text-align: left;">ಒಮ್ಮೆ ಬಿಟ್ಟು ಹೋದ ಪಶ್ಚಾತ್ತಾಪವಿರಬೇಕು,<br />
ಆಕೆ ನೂರಾರು ಸಾವಿರಾರು ರೂಪದಲ್ಲಿ ಹೆಚ್ಚೇಕೆ ವಿಶ್ವರೂಪಿಣಿಯಾಗಿ ವಿಶ್ವಂಭರನನ್ನು ಸೇರಿದಳು..!</div>
<div style="text-align: left;">ಆದರೆ ಈ ಎಲ್ಲಾ ವೈಭವಗಳ ಮಧ್ಯದಲ್ಲಿಯೂ ಒಂದು ಕೊರತೆ..<br />
ಸಮಯ ಸರಿದಂತೆ ಶ್ರೀನಿವಾಸನ ಶಿರದ ಗಾಯ ಮಾಯವಾದರೂ ಕುಠಾರ ಪ್ರಹಾರವಾದ ಸ್ಠಾನದಲ್ಲಿ ಕೂದಲು ಬಾರದಿದ್ದುದರಿಂದ..<br />
ಚೆಲ್ವಿಕೆಯ ಚಂದ್ರಮನಲ್ಲಿ ಚುಕ್ಕಿಯೊಂದು ಉಳಿದುಬಿಟ್ಟಿತ್ತು.!</div>
<div id="_mcePaste" style="text-align: left;">ಕಲಂಕವಲ್ಲ.. ಆತನ ಗೋ ಪ್ರೇಮದ ಪ್ರತೀಕವದು&#8230;!</div>
<div style="text-align: left;">ಶ್ರೀ ವೆಂಕಟೇಶ್ವರನ ಸನ್ನಿಧಿಯಲ್ಲಿ ಮುಡಿಕೊಡುವ ಪದ್ಢತಿ ಇಂದಿಗೂ ಚಾಲ್ತಿಯಲ್ಲಿರುವದು ಈ ಹಿನ್ನೆಲೆಯಲ್ಲಿ..!</div>
<div id="_mcePaste" style="text-align: left;">ಅಂದು ನಮ್ಮವನೊಬ್ಬನೆಸಗಿದ ಅಪರಾಧದಿಂದಾಗಿ ಶ್ರೀನಿವಾಸನ ಕಳೆದ ಕೂದಲಿನ ಸಾಲವನ್ನು ತೀರಿಸಲು -<br />
ಮನುಜ ಕೋಟಿ ಇಂದಿನವರೆಗೂ ಮುಡಿ ನೀಡುತ್ತಾ ಬಂದಿದೆ.</div>
<div id="_mcePaste" style="text-align: left;">ಎಂದೆಂದೂ ತೀರದ ಸಾಲವದು..!</div>
<div style="text-align: left;">
<div style="text-align: left;"><span style="color: #0000ff;">ಗೋವು..</span>.</div>
<div style="text-align: left;">ತಿರುಪತಿಯ ಕಥೆಯಲ್ಲಿ ಬರುವ ಗೋವು ಒಂದು ಸೋಜಿಗವೇ ಸರಿ.!</div>
<div style="text-align: left;">ಸುದೂರದಲ್ಲಿದ್ದ ಶ್ರೀನಿವಾಸನ ಹಸಿವಿನ ಕರೆಯನ್ನು ಕೇಳಿಸಿಕೊಂಡ ಕಿವಿಗಳೆಂತಹವು..?</div>
<div style="text-align: left;">ಬೆಟ್ಟದ ದಟ್ಟ ಕಾಡಿನಲ್ಲಿ ಯಾರೂ ಅರಿಯದಂತೆ ಹುತ್ತದಲ್ಲಿ ಹುದುಗಿ ಕುಳಿತಿದ್ದ ಶ್ರೀನಿವಾಸನನ್ನು ಕಂಡ ಕಣ್ಣುಗಳೆಂತಹವು..?</div>
<div style="text-align: left;">ಶ್ರೀನಿವಾಸನ ಕರೆಗೆ ಕರಗಿ ತನ್ನ ಕರುವನ್ನೇ ಬಿಟ್ಟೋಡಿದ ಕರುಳದೆಂತಹದು..?</div>
<div style="text-align: left;">ಕಟುಕನ ಕ್ರೂರ ಕೊಡಲಿಗೂ ನಡುಗದ, ಹಾಲ್ಗರೆಯುವದನ್ನು ಬಿಡದ ಆ ಧೀರ ಹೃದಯವೆಂತಹದು..!</div>
<div style="text-align: left;"><span style="color: #0000ff;">&#8216;ಋಷಿಶ್ಚ ಕಿಲ ದರ್ಶನಾತ್ &#8217;</span></div>
<div style="text-align: left;">ಬರಿಗಣ್ಣಿಗೆ ಕಾಣದ ದೇವರನ್ನು ಕಾಣುವ ಕಣ್ಣುಳ್ಳವನೇ ಋಷಿ..</div>
<div style="text-align: left;">ಎಂದಮೇಲೆ ಯಾರೂ ಕಾಣದ ಶ್ರೀನಿವಾಸನನ್ನು ಕಂಡ ಆ ಗೋವು ಯಾವ ಋಷಿಗೇನು ಕಡಿಮೆ..?</div>
<div style="text-align: left;">ದೇವರಿಗಾಗಿ ದ್ರವಿಸುವ ಹೃದಯವುಳ್ಳವನೇ ಭಕ್ತ..</div>
<div style="text-align: left;">ಶ್ರೀನಿವಾಸನನ್ನು ಕರುಳ ಕಣ್ಣಿಂದಲೇ ಕಂಡು ಕರಗಿ ಹಾಲ್ಗರೆದ ಗೋವು ಯಾವ ಭಕ್ತನಿಗೇನು ಕಡಿಮೆ..?</div>
<div style="text-align: left;">ಕಾಣದ ದೇವರನ್ನು ಜಗತ್ತಿಗೆ ಕಾಣಿಸುವವನೇ ಗುರು..</div>
<div style="text-align: left;">ಶ್ರೀನಿವಾಸನನ್ನು ಮೊದಲಾಗಿ ಕಂಡು ಲೋಕಮುಖಕ್ಕೆ ಉದ್ಘಾಟಿಸಿದ ಗೋವು ಯಾವ ಗುರುವಿಗೇನು ಕಡಿಮೆ..?</div>
<div style="text-align: left;">ಜಗತ್ಪಿತನನ್ನೇ ಶಿಶುವಾಗಿಸಿಕೊಂಡು ಸಂತೃಪ್ತಿಯಾಗುವಷ್ಟು ಹಾಲುಣಿಸಿದ ಆ ಗೋಮಾತೆ ಯಾವ ಮಾತೆಗೇನು ಕಡಿಮೆ..?<br />
ವಿಶ್ವಂಭರನನ್ನೇ ಸಂತರ್ಪಿಸಿದ ಆಕೆಯ ಹಾಲು ಕ್ಷೀರಸಾಗರಕ್ಕೇನು ಕಡಿಮೆ..?</div>
<div style="text-align: left;"><span style="font-weight: normal;">[ತಿರುಪತಿಯನ್ನು ತ್ವರಿತವಾಗಿ ಹೇಳಿದರೆ ತೃಪ್ತಿ ಎಂದಾಗುವದು.. ವಿಶ್ವಂಭರೆನ ತೃಪ್ತಿ ಕ್ಷೇತ್ರವದು..!]</span></div>
<div style="text-align: left;"><span style="font-weight: normal;"><br />
</span></div>
<div style="text-align: left;">ಈ ಕಥಾನಕದಲ್ಲಿ ನಾವು ಕಂಡ ಶ್ರೀನಿವಾಸನ ಮೂರು ಸತ್ಯ ಸಂದೇಶಗಳು:</div>
<div style="text-align: left;"><span style="color: #ff0000;">ಸಕಲ ಗೋ ಘಾತಕರಿಗೆ -</span></div>
<div style="text-align: left;">ಗೋವಿನ ಮೇಲೆ ಎತ್ತಿದ ಕತ್ತಿ ನಿಮ್ಮ ಕುತ್ತಿಗೆಗೇ ಬಂದೀತು..</div>
<div style="text-align: left;">ಗೋವಂಶ ನಾಶದಿಂದ ನಿಮ್ಮ ಸರ್ವ ನಾಶವೇ ಆದೀತು..!!</div>
<div style="text-align: left;"><span style="color: #ff6600;">ಸಕಲ ರಾಜರಿಗೆ (ಸಕಲ ಸರ್ಕಾರಗಳಿಗೆ) -</span></div>
<div style="text-align: left;">ತನ್ನ ಸೇವಕ, ಒಂದು ಗೋಹತ್ಯೆ ಮಾಡಲೆಳಸಿದ ಮಾತ್ರಕ್ಕೇ ರಾಕ್ಷಸತ್ವದ ಶಾಪ ತಟ್ಟಿತು.</div>
<div style="text-align: left;">ಅವ್ಯಾಹತವಾಗಿ ಕೋಟಿ ಕೋಟಿ ಗೋವುಗಳ ಹತ್ಯೆಯನ್ನು ಮುಂದೆ ನಿಂತು ಮಾಡಿಸಿದರೆ ನಿಮ್ಮ ಕತೆಯೇನಾದೀತು..!?</div>
<div style="text-align: left;">ನಿಮ್ಮ ಊಹೆಗೇ ಬಿಟ್ಟಿದ್ದು..!</div>
<div style="text-align: left;">ಅಂತಿಮವಾಗಿ,</div>
<div style="text-align: left;"><span style="color: #339966;">ಸಕಲ ಪ್ರಜೆಗಳಿಗೆ (ನಮಗೆಲ್ಲರಿಗೆ) -</span></div>
<div style="text-align: left;">ಗೋಮಾತೆಯ ಕೊರಳ ಮೇಲೆರಗುವ ಕೊಡಲಿಗೆ ನಿಮ್ಮ ಮುಡಿಯನ್ನಾದರೂ ಕೊಡಿ..</div>
<div style="text-align: left;">ಗೋಹತ್ಯೆಯಾಗಲು ಬಿಡಬೇಡಿ.</div>
<div style="text-align: left;">ಚಿಮ್ಮುವುದಿದ್ದರೆ ಚಿಮ್ಮಲಿ ಗಗನಕ್ಕೆ ಗೋಭಕ್ತರ ರಕ್ತ&#8230;!</div>
<div style="text-align: left;">ಆದರೆ&#8230;</div>
<div style="text-align: left;">ಭಾರತದ ಪುಣ್ಯಧರೆಯೆಂದಿಗೂ ಆಗದಿರಲಿ ಗೋರಕ್ತಸಿಕ್ತ..!!</div>
</div>
<p style="text-align: center;">|| ಹರೇರಾಮ ||</p>
<p style="text-align: left;">
<p style="text-align: left;">
<p style="text-align: left;">
<p></span></h4>
]]></content:encoded>
			<wfw:commentRss>http://hareraama.in/blog/%e0%b2%ae%e0%b2%a1%e0%b2%bf%e0%b2%b2-%e0%b2%ae%e0%b2%ae%e0%b2%a4%e0%b3%86%e0%b2%97%e0%b3%86-%e0%b2%ae%e0%b3%81%e0%b2%a1%e0%b2%bf-%e0%b2%b8%e0%b2%ae%e0%b2%b0%e0%b3%8d%e0%b2%aa%e0%b2%bf%e0%b2%a4/feed/</wfw:commentRss>
		<slash:comments>49</slash:comments>
		</item>
		<item>
		<title>ನೆಗಡಿಯೆನಿಸಿದರೆ ಮೂಗು ಕೊಯ್ದುಕೊಳ್ಳಬೇಕೆ&#8230;!?</title>
		<link>http://hareraama.in/blog/%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b3%86%e0%b2%a8%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86-%e0%b2%ae%e0%b3%82%e0%b2%97%e0%b3%81-%e0%b2%95%e0%b3%8a%e0%b2%af%e0%b3%8d/</link>
		<comments>http://hareraama.in/blog/%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b3%86%e0%b2%a8%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86-%e0%b2%ae%e0%b3%82%e0%b2%97%e0%b3%81-%e0%b2%95%e0%b3%8a%e0%b2%af%e0%b3%8d/#comments</comments>
		<pubDate>Sat, 26 Jun 2010 19:57:50 +0000</pubDate>
		<dc:creator>Sri Samsthana</dc:creator>
				<category><![CDATA[ಬ್ಲಾಗ್]]></category>
		<category><![CDATA[ರಾಜ್ಯ]]></category>

		<guid isPermaLink="false">http://hareraama.in/?p=4924</guid>
		<description><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252F%25E0%25B2%25A8%25E0%25B3%2586%25E0%25B2%2597%25E0%25B2%25A1%25E0%25B2%25BF%25E0%25B2%25AF%25E0%25B3%2586%25E0%25B2%25A8%25E0%25B2%25BF%25E0%25B2%25B8%25E0%25B2%25BF%25E0%25B2%25A6%25E0%25B2%25B0%25E0%25B3%2586-%25E0%25B2%25AE%25E0%25B3%2582%25E0%25B2%2597%25E0%25B3%2581-%25E0%25B2%2595%25E0%25B3%258A%25E0%25B2%25AF%25E0%25B3%258D%252F&title=%E0%B2%A8%E0%B3%86%E0%B2%97%E0%B2%A1%E0%B2%BF%E0%B2%AF%E0%B3%86%E0%B2%A8%E0%B2%BF%E0%B2%B8%E0%B2%BF%E0%B2%A6%E0%B2%B0%E0%B3%86+%E0%B2%AE%E0%B3%82%E0%B2%97%E0%B3%81+%E0%B2%95%E0%B3%8A%E0%B2%AF%E0%B3%8D%E0%B2%A6%E0%B3%81%E0%B2%95%E0%B3%8A%E0%B2%B3%E0%B3%8D%E0%B2%B3%E0%B2%AC%E0%B3%87%E0%B2%95%E0%B3%86...%21%3F&desc=%7C%7C%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%97%E0%B2%BF%E0%B2%A1%E0%B2%B5+%E0%B2%A4%E0%B2%BF%E0%B2%A6%E0%B3%8D%E0%B2%A6%E0%B2%B2%E0%B2%BF%E0%B2%95%E0%B3%86%E0%B2%82%E0%B2%A6%E0%B3%81+%E0%B2%AC%E0%B3%81%E0%B2%A1%E0%B2%B5+%E0%B2%95%E0%B3%80%E0%B2%B3%E0%B3%8D%E0%B2%B5%E0%B3%81%E0%B2%A6%E0%B3%81+%E0%B2%B8%E0%B2%B0%E0%B2%BF%E0%B2%AF%E0%B3%86....%3F%0D%0A%0D%0A%E0%B2%85%E0%B2%B8%E0%B2%82%E0%B2%96%E0%B3%8D%E0%B2%AF%E0%B2%BE%E0%B2%A4+%E0%B2%B8%E0%B2%AE%E0%B2%AF%E0%B2%A6%E0%B2%BF%E0%B2%82%E0%B2%A6+%E0%B2%A8%E0%B2%A1%E0%B3%86%E0%B2%A6%E0%B3%81%E0&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div>&#124;&#124;ಹರೇರಾಮ &#124;&#124;
ಗಿಡವ ತಿದ್ದಲಿಕೆಂದು ಬುಡವ ಕೀಳ್ವುದು ಸರಿಯೆ&#8230;.?
ಅಸಂಖ್ಯಾತ ಸಮಯದಿಂದ ನಡೆದುಬಂದ ಸನಾತನ ವ್ಯವಸ್ಥೆಯಲ್ಲಿ ವ್ಯಕ್ತಿಗಳ ದೋಷದಿಂದಲೋ,
ವ್ಯವಸ್ಠೆಯ ದೋಷದಿಂದಲೋ, ಅಥವಾ ನಮ್ಮ ದೃಷ್ಟಿದೋಷದಿಂದಲೋ, ಏರುಪೇರುಗಳಿವೆಯೆಂದೆನಿಸಿದರೆ..
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಪರಕೀಯ ವ್ಯವಸ್ಥೆ ಸೊಬಗೆನಿಸಿದರೆ..
ಆಗ ಮಾಡಬೇಕಾದುದೇನು&#8230;?
ಎಂದೆಂದೂ ತನ್ನದಾದುದನ್ನು ತನ್ನದಲ್ಲವೆಂದು ಹೇಳಿ, ಇಂದಿನವರೆಗೆ ತನ್ನದಲ್ಲದುದನ್ನು ತನ್ನದೆನ್ನುವುದೆ..!?
ಇಂದಿನಿಂದ ಮತಾಂತರದ ಬಗ್ಗೆ ಚರ್ಚಿಸೋಣ..
ಭಾವಸಂವಾದದ ನಿರೀಕ್ಷೆಯಲ್ಲಿ&#8230;
]]></description>
			<content:encoded><![CDATA[<div style="padding-top:5px;padding-right:0px;padding-bottom:5px;padding-left:0px;;">
							<iframe
								style="height:25px !important; border:none !important; overflow:hidden !important; width:360px !important;" frameborder="0" scrolling="no" allowTransparency="true"
								src="http://www.linksalpha.com/social?link=http%253A%252F%252Fhareraama.in%252Fblog%252F%25E0%25B2%25A8%25E0%25B3%2586%25E0%25B2%2597%25E0%25B2%25A1%25E0%25B2%25BF%25E0%25B2%25AF%25E0%25B3%2586%25E0%25B2%25A8%25E0%25B2%25BF%25E0%25B2%25B8%25E0%25B2%25BF%25E0%25B2%25A6%25E0%25B2%25B0%25E0%25B3%2586-%25E0%25B2%25AE%25E0%25B3%2582%25E0%25B2%2597%25E0%25B3%2581-%25E0%25B2%2595%25E0%25B3%258A%25E0%25B2%25AF%25E0%25B3%258D%252F&title=%E0%B2%A8%E0%B3%86%E0%B2%97%E0%B2%A1%E0%B2%BF%E0%B2%AF%E0%B3%86%E0%B2%A8%E0%B2%BF%E0%B2%B8%E0%B2%BF%E0%B2%A6%E0%B2%B0%E0%B3%86+%E0%B2%AE%E0%B3%82%E0%B2%97%E0%B3%81+%E0%B2%95%E0%B3%8A%E0%B2%AF%E0%B3%8D%E0%B2%A6%E0%B3%81%E0%B2%95%E0%B3%8A%E0%B2%B3%E0%B3%8D%E0%B2%B3%E0%B2%AC%E0%B3%87%E0%B2%95%E0%B3%86...%21%3F&desc=%7C%7C%E0%B2%B9%E0%B2%B0%E0%B3%87%E0%B2%B0%E0%B2%BE%E0%B2%AE+%7C%7C%0D%0A%E0%B2%97%E0%B2%BF%E0%B2%A1%E0%B2%B5+%E0%B2%A4%E0%B2%BF%E0%B2%A6%E0%B3%8D%E0%B2%A6%E0%B2%B2%E0%B2%BF%E0%B2%95%E0%B3%86%E0%B2%82%E0%B2%A6%E0%B3%81+%E0%B2%AC%E0%B3%81%E0%B2%A1%E0%B2%B5+%E0%B2%95%E0%B3%80%E0%B2%B3%E0%B3%8D%E0%B2%B5%E0%B3%81%E0%B2%A6%E0%B3%81+%E0%B2%B8%E0%B2%B0%E0%B2%BF%E0%B2%AF%E0%B3%86....%3F%0D%0A%0D%0A%E0%B2%85%E0%B2%B8%E0%B2%82%E0%B2%96%E0%B3%8D%E0%B2%AF%E0%B2%BE%E0%B2%A4+%E0%B2%B8%E0%B2%AE%E0%B2%AF%E0%B2%A6%E0%B2%BF%E0%B2%82%E0%B2%A6+%E0%B2%A8%E0%B2%A1%E0%B3%86%E0%B2%A6%E0%B3%81%E0&fc=333333&fs=arial&fblname=like&fblref=facebook&fbllang=en_US&twitterlang=en&twittermention=en&twitterrelated1=en&twitterrelated2=en&linkedinbutton=noshow">
							</iframe>
						</div><p style="text-align: center;">||ಹರೇರಾಮ ||</p>
<p><strong>ಗಿಡವ ತಿದ್ದಲಿಕೆಂದು ಬುಡವ ಕೀಳ್ವುದು ಸರಿಯೆ&#8230;.?</strong></p>
<p>ಅಸಂಖ್ಯಾತ ಸಮಯದಿಂದ ನಡೆದುಬಂದ ಸನಾತನ ವ್ಯವಸ್ಥೆಯಲ್ಲಿ ವ್ಯಕ್ತಿಗಳ ದೋಷದಿಂದಲೋ,<br />
ವ್ಯವಸ್ಠೆಯ ದೋಷದಿಂದಲೋ, ಅಥವಾ ನಮ್ಮ ದೃಷ್ಟಿದೋಷದಿಂದಲೋ, ಏರುಪೇರುಗಳಿವೆಯೆಂದೆನಿಸಿದರೆ..<br />
ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬಂತೆ ಪರಕೀಯ ವ್ಯವಸ್ಥೆ ಸೊಬಗೆನಿಸಿದರೆ..<br />
ಆಗ ಮಾಡಬೇಕಾದುದೇನು&#8230;?</p>
<p>ಎಂದೆಂದೂ ತನ್ನದಾದುದನ್ನು ತನ್ನದಲ್ಲವೆಂದು ಹೇಳಿ, ಇಂದಿನವರೆಗೆ ತನ್ನದಲ್ಲದುದನ್ನು ತನ್ನದೆನ್ನುವುದೆ..!?</p>
<p>ಇಂದಿನಿಂದ ಮತಾಂತರದ ಬಗ್ಗೆ ಚರ್ಚಿಸೋಣ..</p>
<p>ಭಾವಸಂವಾದದ ನಿರೀಕ್ಷೆಯಲ್ಲಿ&#8230;</p>
]]></content:encoded>
			<wfw:commentRss>http://hareraama.in/blog/%e0%b2%a8%e0%b3%86%e0%b2%97%e0%b2%a1%e0%b2%bf%e0%b2%af%e0%b3%86%e0%b2%a8%e0%b2%bf%e0%b2%b8%e0%b2%bf%e0%b2%a6%e0%b2%b0%e0%b3%86-%e0%b2%ae%e0%b3%82%e0%b2%97%e0%b3%81-%e0%b2%95%e0%b3%8a%e0%b2%af%e0%b3%8d/feed/</wfw:commentRss>
		<slash:comments>16</slash:comments>
		</item>
	</channel>
</rss>

